ಕಾಸರಗೋಡಿನಲ್ಲಿ ಕೇರಳ ರಾಜ್ಯ ವಿಧಾನಸಭಾ ಚುನಾವಣೆ: ಇವಿಎಂ–ವಿವಿಪ್ಯಾಟ್ ಯಂತ್ರಗಳ ಮೊದಲ ಹಂತದ ಪರಿಶೀಲನೆಗೆ ಚಾಲನೆ

ಕಾಸರಗೋಡು: ಈ ವರ್ಷ ನಡೆಯಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬಳಸಲಾಗುವ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಮೊದಲ ಹಂತದ ಪರಿಶೀಲನೆಗೆ ಶನಿವಾರ ಬೆಳಿಗ್ಗೆ ಚಾಲನೆ ದೊರಕಿತು. ಕಾಸರಗೋಡು ಜಿಲ್ಲಾಧಿಕಾರಿ ವೇರ್‌ಹೌಸ್‌ನಲ್ಲಿ ಸಿದ್ಧಪಡಿಸಿದ ವಿಶೇಷ ಹಾಲ್‌ನಲ್ಲಿ ಈ ಪರಿಶೀಲನೆ ನಡೆಯುತ್ತಿದ್ದು, ಜನವರಿ 25ರವರೆಗೆ ಮುಂದುವರಿಯಲಿದೆ. ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಐದು ಮಂದಿ ಮಾನ್ಯ ಇಂಜಿನಿಯರ್‌ಗಳ ತಂಡವು ಜಿಲ್ಲಾ ಚುನಾವಣಾಧಿಕಾರಿಯ ನೇರ ಮೇಲ್ವಿಚಾರಣೆಯಲ್ಲಿ ಪರಿಶೀಲನೆ ನಡೆಸುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇಂಭಶೇಖರ್ ಅವರ…

Read More

ಚಿತ್ರ ಕಲಾ ಮಾಂತ್ರಿಕ ಆಶೀಶ್ ಎಂ ರಾವ್ ವಾಮಂಜೂರ್ ಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ 2026.ಗೆ ಆಯ್ಕೆ.

ಚಿತ್ರ ಕಲಾ ಮಾಂತ್ರಿಕ ಆಶೀಶ್ ಎಂ ರಾವ್ ವಾಮಂಜೂರ್ ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಮಾಧ್ಯಮ ಶ್ರೇಷ್ಠ,ಕೃತಿಕರ್ತೃ, ಸಮಾಜ ಸೇವಕ ರಂಗನಾಥ್ ಮೈಸೂರ್ ರೀಗೆ ಕನ್ನಡ ಭವನದ ಪ್ರತಿಷ್ಠಿತ ” ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆ.

ಕಾಸರಗೋಡು:ಮಾಧ್ಯಮ ಶ್ರೇಷ್ಠ,ಕೃತಿಕರ್ತೃ, ಸಮಾಜ ಸೇವಕ ರಂಗನಾಥ್ ಮೈಸೂರ್ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಸಂಘಟಕ, ಮಾಧ್ಯಮ ಕ್ಷೇತ್ರ ಶ್ರೇಷ್ಠ ಶ್ರೀ ಅಚ್ಚುತ ಚೇವಾರ್ ರೀಗೆ ಕನ್ನಡ ಭವನದ ಪ್ರತಿಷ್ಠಿತ, ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.

ಕಾಸರಗೋಡು:ರಾಜಕೀಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪತ್ರಕರ್ತರಾಗಿ ಸಂಘಟಕರಾಗಿ ಕನ್ನಡವನ್ನೇ ಉಸಿರಾಗಿಸಿಕೊಂಡ ಅಚ್ಚುತ ಚೇವಾರ್ ರೀಗೆ ಕನ್ನಡ ಭವನದ ರಜತ ಸಂಭ್ರಮ 18.01.2026ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಸಂಕೀರ್ಣದಲ್ಲಿ ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮದಲ್ಲಿ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ

ಮಂಜೇಶ್ವರ : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆಯು ಬದಿಯಡ್ಕ ವೀಣಾವಾದಿನಿ ಸಂಗೀತ ಪೀಠಮ್ ನಲ್ಲಿ ಸಂಘಟನೆಯ ಅಧ್ಯಕ್ಷ ರವಿ ನಾಯ್ಕಪ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಿ ವೈ ಎಸ್ಪಿ ಡಾಕ್ಟರ್ ವಿ ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ವೇದಿಕೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಯ್ಕೆಯಾದ ಪತ್ರಕರ್ತರ ಕುಟುಂಬ ಸದಸ್ಯರಾದ ಅಶ್ವಥಿ ಅಶೋಕ್, ವಿದ್ಯಾಕುಮಾರಿ, ಪ್ರಿಯಾಂಕ, ಶ್ಯಾಂ ಪ್ರಸಾದ್ ಸರಳಿ, ಸುನೀನಾ ಹಾಗೂ ಕನ್ನಡಿಗ ರಾಮಪ್ಪ ಮಂಜೇಶ್ವರ ಎಂಬಿವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ…

Read More

ಮರಳು ಮಾಫಿಯಾಗಳ ಅಟ್ಟಹಾಸದ ವಿರುದ್ಧ ಪೊಲೀಸರು ಕಠಿಣ

ಮಂಜೇಶ್ವರ: ಮರಳು ಮಾಫಿಯಾಗಳ ಅಟ್ಟಹಾಸದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಂತೆ ಮತ್ತೊಂದೆಡೆ ಮತ್ತೊಂದೆಡೆ ಮರಳು ಸಾಗಾಟ ದಂಧೆ ತೀವ್ರಗೊಂಡಿದೆ. ಕಳೆದ ಮಧ್ಯ ರಾತ್ರಿಯೂ ಹೊಯ್ದೆ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ಶ್ರೀಜೇಶ್ ನೇತೃತ್ವದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳನ್ನು ವಶಡಿಸಲಾಗಿದೆ. ಒಂದು ಲಾರಿಯನ್ನು ಕುಂಬಳೆ ಅಂಡರ್‌ಪಾಸ್‌ನಿಂದ ಹಾಗೂ ಇನ್ನೊಂದು ಲಾರಿಯನ್ನು ಮೊಗ್ರಾಲ್ ಅಂಡರ್‌ಪಾಸ್‌ನಿಂದ ವಶಪಡಿಸಲಾಗಿದೆ. ಪೊಲೀಸರನ್ನು ಕಂಡೊಡನೆ ಲಾರಿಗಳನ್ನು ಉಪೇಕ್ಷಿಸಿ ಚಾಲಕರು ಪರಾರಿಯಾಗಿದ್ದಾರೆ. ಬಳಿಕ…

Read More

ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನ

ಮಂಜೇಶ್ವರ : ಜಿಲ್ಲೆಯ ಕಾಞಂಗಾಡ್ ಜಿಲ್ಲಾ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನಿಸಿದ್ದಾನೆ.ಬದಿಯಡ್ಕ ಪೊಲೀಸರು ದಾಖಲಿಸಿದ ಕಳವು ಪ್ರಕರಣದ ಆರೋಪಿ ನೆಲ್ಲಿಕಟ್ಟೆ ಆಮೂಸ್ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ ಟಿ.ಎಂ. ಅಬ್ದುಲ್ ಸುಹೈಲ್ ಎಂಬಾತನ ವಿರುದ್ಧ ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೈಲು ಸುಪರಿಂಟೆಂಡೆಂಟ್ ನೀಡಿದ ದೂರಿನಂತೆ, ಶುಕ್ರವಾರ ಸೆಲ್‌ನಿಂದ ಹೊರಬಂದ ಆರೋಪಿ ಮರಳಿ ಜೈಲಿಗೆ ಪ್ರವೇಶಿಸುವ ಸಂದರ್ಭ ಅಡುಗೆ ಕೋಣೆಯ ಮೇಲ್ಭಾಗಕ್ಕೆ ಹತ್ತಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. 10 ಸಾವಿರ ರೂಪಾಯಿ ಕಳವು ಪ್ರಕರಣದಲ್ಲಿ…

Read More

ಟೈಮಿಂಗ್ ವಿಷಯದಲ್ಲಿ ಬಸ್ ನೌಕರರ ಮಧ್ಯೆ ಮಾರಾಮಾರಿ

ಮಂಜೇಶ್ವರ: ಟೈಮಿಂಗ್ ವಿಷಯದಲ್ಲಿ ಬಸ್ ನೌಕರರ ಮಧ್ಯೆ ಮಾರಾಮಾರಿ ಟಿಕೆಟ್ ಉಪಕರಣ ಹಾಗೂ ಮೊಬೈಲ್ ಫೋನ್ ಕಿತ್ತೆಸೆದು ಬಿಸಾಡಿ ಹಾನಿಗೊಳಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಕುಂಬಳೆ ಬದಿಯಡ್ಕ ರಸ್ತೆಯಲ್ಲಿ ಬಸ್ ಶೆಲ್ಟರ್ ನಲ್ಲಿ ಈ ಘಟನೆ ನಡೆದಿದೆ.ಕಾಸರಗೋಡು ಭಾಗದಿಂದ ಮಂಗಳೂರು ಕಡೆ ಸಂಚರಿಸುತಿದ್ದ ಬಸ್ಸು ಹಾಗೂ ಅದೇ ಭಾಗಕ್ಕೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸು ಕುಂಬಳೆಗೆ ತಲುಪಿದಾಗ ಸಾರಿಗೆ ಬಸ್ಸು ಚಾಲಕ ಖಾಸಗಿ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ್ದಾನೆ. ಈ ಮಧ್ಯೆ ಟೈಮಿಂಗ್ ವಿಷಯಲ್ಲಿ ಎರಡೂ ಬಸ್ಸು ಸಿಬ್ಬಂದಿಗಳ ಮಧ್ಯೆ…

Read More

ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದಲ್ಲಿ ದೀಪೋತ್ಸವ, ರಥೋತ್ಸವ ಹಾಗೂ ದೈವದ ಕೋಲ

ಮಂಜೇಶ್ವರ: ತಾರೀಕು 22 /01 /2026 ಗುರುವಾರದಂದು ಬ್ರಹ್ಮಶ್ರೀ ಬಡಾಜೆ ಗೋಪಾಲ ಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ಶ್ರೀ ಶನೈಶ್ಚರ ದೇವರ ವರ್ಷಾವಧಿ ಬಲಿ ಉತ್ಸವ .ಕಲ್ಲುರ್ಟಿ ದೈವ ಮತ್ತು ರಾಜ ಗುಳಿಗ ಕೋಲ ವು ವಿಜೃಂಭಣೆಯಿಂದ ಜರುಗಲಿರುವುದು. ಅಂದು ಸಾಯಂಕಾಲ ಬೆಂಗಳೂರಿನ ಸೇವಾಕರ್ತರಾದ ಶ್ರೀ ಎನ್. ಕೆ ರಾಜ ಶಂಕರ್ ರವರಿಂದ ಶ್ರೀ ದೇವರಿಗೆ ಸಹಸ್ರ ದೀಪೋತ್ಸವ ನಡೆಯಲಿರುವುದು . ಶ್ರೀ ಆದಿಶಕ್ತಿ ಕುಣಿತಾ ಭಜನಾ ತಂಡ ಶನೈಶ್ಚರ ಮಂಜೇಶ್ವರ ತಂಡದಿಂದ ಕುಣಿತ ಭಜನೆಯು ನಡೆಯಲಿದೆ….

Read More

ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂ.ನಲ್ಲಿ ಯುಡಿಎಫ್‌ನ ಸಯ್ಯದ್ ಸೈಫುಲ್ಲ ತಂಘಳ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಕಮಲಾಕ್ಷಿ ಕೆ. ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಬ್ಲೋಕ್ ಪಂಚಾಯತ್‌ನಲ್ಲಿ ಒಟ್ಟು 14 ವಾರ್ಡ್ ಇದ್ದು, IIರಲ್ಲಿ ಯುಡಿಎಫ್‌, 3ರಲ್ಲಿ ಬಿಜೆಪಿ, 2ರಲ್ಲಿ ಎಡರಂಗ ಜಯಗಳಿಸಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರೈ ಸ್ಪರ್ಧಿಸಿದ್ದರು. ಎಡರಂಗದ ಸದಸ್ಯರ ಮತ ಅಧ್ಯಕ್ಷರ ಚುನಾವಣೆಯಲ್ಲಿ ಅಸಿಂಧುಗೊಂಡಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ಇವರು ಹಾಜರಾಗಿರಲಿಲ್ಲ.

Read More
error: Content is protected !!