ಗೂಡುದೀಪ ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಮೃತ ಪಟ್ಟ ಕುಂಬಳೆಯ ಯುವಕ

ಕುಂಬಳೆ: ದೀಪಾವಳಿ ಅಂಗವಾಗಿ ಮನೆಯ ಚಾವಡಿಯಲ್ಲಿ ಗೂಡು ದೀಪ ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ, ಯುವಕನೋರ್ವ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾದ ಘಟನೆ ನಿನ್ನೆ ರಾತ್ರಿ ಕುಂಬಳೆ ಬಳಿಯ ಪುತ್ತಿಗೆಯಲ್ಲಿ ನಡೆದಿದೆ. ಪುತ್ತಿಗೆ ನಿವಾಸಿ ಬಡಗಿ ವೃತ್ತಿ ಮಾಡುತ್ತಿರುವ ನಾಗೇಶ್ ಆಚಾರ್ಯ – ಹೇಮಲತಾ ದಂಪತಿ ಪುತ್ರ ರಾಜೇಶ್ ಆಚಾರ್ಯ (37) ಮೃತಪಟ್ಟ ಯುವಕನಾಗಿದ್ದಾನೆ. ಮರದ ಕೆತ್ತನೆ ಕೆಲಸ ಮಾಡುತ್ತಿರುವ ರಾಜೇಶ್ ಆಚಾರ್ಯರು ದೀಪಾವಳಿ ಅಂಗವಾಗಿ ಕೆಲಸ ಮುಗಿಸಿ ಮನೆಗೆ…

Read More

ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ “ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ”

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರಾಗಿರುವ ಹೊಸಂಗಡಿಯ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪೋಷಕರ ಪಾತ್ರವನ್ನು ಒತ್ತಿ ಹಿಡಿಯುವ ಉದ್ದೇಶದಿಂದ “ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದಲ್ಲಿ ಶಾಲೆಯು “ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ”ವನ್ನು ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಶಾಲೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಂಜತ್ತೂರು ದಾರುಸ್ಸಲಾಂ ಮಸೀದಿಯ ಖತೀಬ್ ಮೊಹಮ್ಮದಲಿ ಸಲಫಿ ಅವರು ಮುಖ್ಯ ಉಪನ್ಯಾಸಕವಾಗಿ…

Read More

ದೋಹಾ ಖತಾರಿನಲ್ಲಿ ರಸ್ತೆ ಅಪಘಾತ . ತೂಮಿನಾಡು ನಿವಾಸಿ ಮೃತ್ಯು.

ಮಂಜೇಶ್ವರ : ದೋಹಾ ಖತಾರಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ತೂಮಿನಾಡು ನಿವಾಸಿಯಾಗಿರುವ ಯುವಕನೊಬ್ಬ ಬಾನುವಾರ ಖತಾರ್ ಸಮಯ 12.30 ಕ್ಕೆ ದಾರುಣವಾಗಿ ಸಾವನ್ನಪ್ಪಿದ್ದಾನೆ. ತೂಮಿನಾಡು ಹಿಲ್ ಟಾಪ್ ನಗರ ನಿವಾಸಿ ಅಬೂಬಕ್ಕರ್ (ಅಬ್ಬುಚ್ಚ) ಎಂಬವರ ಪುತ್ರ ಹಾರಿಸ್ (39) ಸಾವನ್ನಪ್ಪಿದ ದುರ್ದೈವಿ. ದೋಹಾ ಖತಾರಿನಲ್ಲಿ ಟ್ಯಾಕ್ಸಿ ಚಲಾಯಿಸಿ ಜೀವನ ಸಾಗಿಸುತಿದ್ದ ಹಾರಿಸ್ ಕೆಲವು ದಿನಗಳ ಹಿಂದೆ ಊರಿಗೆ ಬಂದು ಮರಳಿದ್ದಾನೆ. ಬಾನುವಾರದಂದು ಟ್ಯಾಕ್ಸಿ ಚಕ್ರ ಪಂಕ್ಚರ್ ಆಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಂಗಾಳಿ ಪ್ರಜೆಯೊಬ್ಬನ ಸಹಾಯದಿಂದ ಪಂಕ್ಚರ್ ಸರಿ…

Read More

ವಿಷ ಜಂತುಗಳಿಗೆ ತಾಣವಾದ ಮಂಜೇಶ್ವರ ಪಂಚಾಯತ್ ರಸ್ತೆ ಗಳ ಬದಿಯಲ್ಲಿ ಬೆಳೆದು ನಿಂತ ಪೊದೆಗಳು .

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ರಸ್ತೆಗಳ ಬದಿಗಳಲ್ಲಿ ಕಾಡು ಪೊದರುಗಳು ನಿಕ್ಕಿಲವಾಗಿ ಬೆಳೆದು ನಿಂತಿದ್ದು, ಇದು ಈಗ ವಿಷಜಂತುಗಳ ತಾಣವಾಗಿ ಮಾರ್ಪಟ್ಟಿದೆ. ಸರ್ಪಗಳು, ವಿಷಪೂರಿತ ಕೀಟಗಳು ಹಾಗೂ ಇತರೆ ಹಾನಿಕರ ಜಂತುಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈ ಮಾರ್ಗಗಳಿಂದ ನಿತ್ಯವೂ ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ನಡೆದು ಹೋಗುತ್ತಿದ್ದು, ಅವರ ಜೀವದ ಸಲಾಮತಿ ಇದೀಗ ಪ್ರಶ್ನೆಗೆ ಒಳಪಟ್ಟಿದೆ. ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿಶೇಷವಾಗಿ…

Read More

ಮಂಜೇಶ್ವರ ಗ್ರಾಮ ಪಂಚಾಯತ್‌ನಲ್ಲಿ ನೂತನ ಡಿಜಿಟಲ್ ಬೋರ್ಡ್ ಉದ್ಘಾಟನೆ .

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆಯಾಗಿ ನೂತನ ಡಿಜಿಟಲ್ ಬೋರ್ಡ್‌ನ್ನು ಸ್ಥಾಪಿಸಲಾಗಿದೆ. ಈ ಡಿಜಿಟಲ್ ಬೋರ್ಡ್‌ನ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮಾಂತೇರೋ ಲೋಕಾರ್ಪಣೆ ಗೈದರು.ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ಅಧ್ಯಕ್ಷತೆ ವಹಿಸಿದರು. ಗ್ರಾಮದ ನಾಗರಿಕರಿಗೆ ನವೀನ ಮಾಹಿತಿ ತಕ್ಷಣ ಲಭ್ಯವಾಗುವಂತಾಗಿಸಲು ಹಾಗೂ ಪಾರದರ್ಶಕ ಆಡಳಿತಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ ಈ ಬೋರ್ಡ್‌ನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ದಿನನಿತ್ಯದ ಪಠ್ಯಗಳು, ಯೋಜನೆಗಳು, ಪ್ರಕಟಣೆಗಳು ಹಾಗೂ ಸರ್ಕಾರಿ ಸೂಚನೆಗಳ ಬಗ್ಗೆ ಈ ಮೂಲಕ…

Read More

ಜಪಾನಿನ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ಮಹಿಳೆ ನೇಮಕ .

ಕಾಸರಗೋಡು: ಕಾಸರಗೋಡಿನ ಮಹಿಳೆ ನಗ್ಮಾ ಮೊಹಮ್ಮದ್ ಮಾಲೀಕ್‌ರನ್ನು ಕೇಂದ್ರ ಸರಕಾರ ಜಪಾನಿನ ಭಾರತೀಯ ರಾಯಭಾರಿಯಾಗಿ ನೇಮಿಸಿದೆ. ಈಕೆ ಕಾಸರಗೋಡು ಕೋಟೆ ರಸ್ತೆಯ ಮೊಹಮ್ಮದ್ ಹಬೀಬುಲ್ಲಾ-ಸುಲುಭಾನು ದಂಪತಿ ಪುತ್ರಿಯಾಗಿದ್ದಾರೆ. ತಂದೆ ಮೊಹಮ್ಮದ್ ಹಬೀಬುಲ್ಲಾರಿಗೆ ಕೇಂದ್ರ ಸರಕಾರದ ಓವರ್‌ಸ್‌ ಕಮ್ಯೂನಿಕೇಶನ್ ಇಲಾಖೆಯಲ್ಲಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಅವರು ವರ್ಷಗಳ ಹಿಂದೆ ತಮ್ಮ ಕುಟುಂಬದ ಸಹಿತ ದಿಲ್ಲಿಯಲ್ಲಿ ವಾಸವಾಗಿದ್ದರು. ದಿಲ್ಲಿಯಲ್ಲೇ ಜನಿಸಿದ ನಗ್ಮಾ ಮೊಹಮ್ಮದ್ ಮಾಲೀಕ್ ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜು ಮತ್ತು ಡೆಲ್ಲಿ ಸ್ಕೂಲ್ ಆಫ್‌ ಇಕಾನೋಮಿಕ್ಸ್‌ನಲ್ಲಿ ಶಿಕ್ಷಣ ಪಡೆದರು….

Read More

ಅಂಬಿತ್ತಾಡಿಯಲ್ಲಿ ಹೈಟೆಕ್ ಅಂಗನವಾಡಿ ಶಿಲಾನ್ಯಾಸ: ಜನರ ಹೋರಾಟಕ್ಕೆ ಸಾರ್ಥಕ ಅಂತ್ಯ .

ಮಂಜೇಶ್ವರಂ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿತ್ತಾಡಿ ಹೈಟೆಕ್ ಅಂಗನವಾಡಿ ಕಟ್ಟಡದ ಶಿಲಾನ್ಯಾಸ ಸಮಾರಂಭವು ಸಾಯಂಕಾಲ 4 ಗಂಟೆಗೆ ಉತ್ಸವದ ವಾತಾವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಹಲವಾರು ವರ್ಷಗಳಿಂದ ಸ್ಥಳೀಯರು ಆತುರದಿಂದ ಕಾಯುತ್ತಿದ್ದ ಈ ಕ್ಷಣವು, ಅಂಬಿತ್ತಾಡಿಯ ಜನರ ದೀರ್ಘಕಾಲದ ಆಶಯಕ್ಕೆ ಸಾರ್ಥಕ ಅಂತ್ಯ ತಂದಿತು. 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ನೂತನ ಹೈಟೆಕ್ ಅಂಗನವಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೈಕೆಯ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್…

Read More

ಕೇರಳದಲ್ಲಿ ರಾಜಕೀಯ ಬದಲಾವಣೆ ಅನಿವಾರ್ಯ: ಎಂ.ಎಲ್. ಅಶ್ವಿನಿ

ಮಂಜೇಶ್ವರ: ಕೇರಳ ಎದುರಿಸುತ್ತಿರುವ ನಿರುದ್ಯೋಗ ಮತ್ತು ಅಭಿವೃದ್ಧಿ ಕುಂಠಿತವನ್ನು ಪರಿಹರಿಸಲು ರಾಜಕೀಯ ಬದಲಾವಣೆ ಅತ್ಯಗತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಬಿಜೆಪಿ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು . ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಅಡ್ವ. ಬಾಲಕೃಷ್ಣ ಶೆಟ್ಟಿ,ಕೆ.ಸತೀಶ್ ಚಂದ್ರ ಭಂಡಾರಿ, ರಾಜ್ಯ ಪರಿಷತ್ ಸದಸ್ಯ ಹರಿಶ್ಚಂದ್ರ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಜಿಲ್ಲಾ ಸಮಿತಿ ಸದಸ್ಯ…

Read More

ಸಾಕಾರಗೊಂಡ ಚಿಣ್ಣರ ಬಹು ಕಾಲದ ನಿರೀಕ್ಷೆ : ಅಂಬಿತ್ತಾಡಿ ಹೈಟೆಕ್ ಅಂಗನವಾಡಿಗೆ ಶಂಕುಸ್ಥಾಪನೆ .

ಮಂಜೇಶ್ವರ : ಚಿಣ್ಣರ ಬಾಳಿನಲ್ಲಿ ಚೆಲ್ಲಾಟವನ್ನು ನಡೆಸುತ್ತಿರುವವರ ವಿರೋಧ ಮಧ್ಯೆಯೂ ಎದೆಗುಂದದೆ ಊರವರು ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಅಂಬಿತ್ತಾಡಿ ಜನತೆಯ ಬಹುಕಾಲದ ನಿರೀಕ್ಷೆಯೊಂದು ಗುರುವಾರದಂದು ಸಾಕಾರಗೊಂಡಿತು. ಕಾಸರಗೋಡು ಜಿಲ್ಲಾ ಪಂಚಾಯತ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂದ್ರ ಸಂಖ್ಯೆ 11 ಅಂಬಿತ್ತಾಡಿ ಹೈಟೆಕ್‌ ಅಂಗನವಾಡಿಗೆ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಕಟ್ಟಡದ ಸಂಕುಸ್ಥಾಪನೆ ಬಹಳ ಅದ್ದೂರಿಯಾಗಿ ನೆರವೇರಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ರವರ…

Read More

ವರ್ಕಾಡಿ ವೋಟ್ ಡಿಲೀಟ್ : ಬಿಜೆಪಿ ವಿರುದ್ಧ ಮತದಾರರ ಆಕ್ರೋಶ.

ಮಂಜೇಶ್ವರ : ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತದಾರ ಪಟ್ಟಿಯಿಂದ ಮತದಾರರನ್ನು ಡಿಲೀಟ್ ಮಾಡುವ ಬಿಜೆಪಿ ಷಡ್ಯಂತರದ ವಿರುದ್ಧ ನಾಗರಿಕರ ಆಕ್ರೋಶ ಬುಗಿಲೆದ್ದಿದೆ. ವರ್ಕಾಡಿ ಪಂಚಾಯತಿನ ವಿವಿಧ ವಾರ್ಡುಗಳಲ್ಲಿ ಸುಮಾರು ರೂ.1000ಕ್ಕೂ ಮಿಕ್ಕಿದ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವಂತೆ ಬಿಜೆಪಿ ಮುಖಂಡರ ಅರ್ಜಿಗೆ ಬುಧವಾರದಂದು ವರ್ಕಾಡಿ ಪಂಚಾಯಿತಿನಲ್ಲಿ ಮತದಾರರ ನೇರ ಸಂದರ್ಶನ ನಡೆಯಿತು. ಈ ಸಂದರ್ಭದಲ್ಲಿ ತಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲು ಮನವಿ ಕೊಟ್ಟ ಬಿಜೆಪಿ ಮುಖಂಡನ ವಿರುದ್ಧ ಮತದಾರರು ತರಾಟೆಗೆ ತೆಗೆದುಕೊಂಡಿದ್ದು, ಉದ್ವಿಗ್ನ…

Read More
error: Content is protected !!