ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಶೈಕ್ಷಣಿಕ ಕ್ರಾಂತಿ: ಹೊಸ ಸೌಲಭ್ಯಗಳಿಗೆ ಚಾಲನೆ

ಮಂಜೇಶ್ವರ : ಗಡಿನಾಡಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಪೀಸ್ ಕ್ರಿಯೇಟಿವ್ ಶಾಲೆ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿರುವ ಶಾಲಾ ಆಡಳಿತ ಮಂಡಳಿಯು, ಲೌಕಿಕ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಂಸ್ಕಾರಯುತ ಶಿಕ್ಷಣಕ್ಕೆ ಭರ್ಜರಿ ತಯಾರಿಗೆ ಚಾಲನೆ ನೀಡಿದೆ. ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಕ್ರೀಡಾಸಕ್ತಿಗೆ ರೆಕ್ಕೆ ನೀಡುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಅತ್ಯುತ್ತಮ ಮಟ್ಟದ ಫುಟ್ಬಾಲ್ ಟರ್ಫ್, ಬಾಸ್ಕೆಟ್ ಬಾಲ್, ವಾಲಿಬಾಲ್ ಸೇರಿದಂತೆ…

Read More

ಹೊಸಂಗಡಿ ಬಸ್ ನಿಲ್ದಾಣ ನಿರ್ಲಕ್ಷ್ಯ: ಹೆದ್ದಾರಿಯಲ್ಲೇ ಬಸ್ ನಿಲುಗಡೆ, ಅಪಘಾತ ಭೀತಿ ಹೆಚ್ಚಳ

​ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ಹೃದಯಭಾಗವಾದ ಹೊಸಂಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದರೂ, ಅದರ ಸರಿಯಾದ ಬಳಕೆ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ನಿಲ್ದಾಣವಿದ್ದರೂ, ಬಸ್ಸುಗಳು ನಿಲ್ದಾಣದಲ್ಲಿ ನಿಲ್ಲಿಸದೆ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿ-ಇಳಿಸುತ್ತಿರುವುದು ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ​​ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ (ಕರ್ನಾಟಕ ಮತ್ತು ಕೇರಳ) ಹಾಗೂ ಖಾಸಗಿ ಬಸ್ಸುಗಳು ನಿಗದಿತ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸುವ ಬದಲು, ಹೆದ್ದಾರಿಯ ತಿರುವುಗಳಲ್ಲೇ…

Read More

ಪಜಿಂಗಾರ್ ಸಾಲಿಯಾನ್ ಕುಟುಂಬದಲ್ಲಿ ಧಾರ್ಮಿಕ ವೈಭವ: ಗ್ರಹಪ್ರವೇಶ, ಕೋಲ ಸೇವೆ ಸಂಪನ್ನ

ಮೂಡಂಬೈಲ್ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ, ಬ್ರಹ್ಮಕಲಶ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಏಪ್ರಿಲ್ 12ರಂದು ಭಕ್ತಿಶ್ರದ್ದೆಯಿಂದ ನೆರವೇರಿದವು. ಕಾರ್ಯಕ್ರಮದ ಪೂರ್ವಭಾವಿಯಾಗಿ ಏಪ್ರಿಲ್ 11ರಂದು ತಂತ್ರಿಗಳ ಉಪಸ್ಥಿತಿಯಲ್ಲಿ ಸ್ಥಳ ಶುದ್ಧಿ, ಪುಣ್ಯಹ ವಚನ, ಕಲಶ ಶುದ್ಧಿ, ವಾಸ್ತು ಹೋಮ ಹಾಗೂ ವಾಸ್ತು ಬಲಿ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು. ಏಪ್ರಿಲ್ 12ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲ ಕೃಷ್ಣ ತಂತ್ರಿಯವರ ಸಾನ್ನಿಧ್ಯದಲ್ಲಿ ಬೆಳಗ್ಗೆ 8:45ಕ್ಕೆ ಗ್ರಹಪ್ರವೇಶ ಮತ್ತು ಮಹಾ ಪೂಜೆ ನೆರವೇರಿತು. ಮಧ್ಯಾಹ್ನ ಮಲರಾಯ ದೈವದ ನೇಮ,…

Read More

ಮಕ್ಕಳಿಗೆ ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರ: ಏಪ್ರಿಲ್ 29ರಿಂದ ತುಮಕೂರಿನಲ್ಲಿ: ದಿನಾಂಕ 20-4-2026 ಪ್ರತಿನಿಧಿಗಳ ಹೆಸರು ನೋಂದಣಿಗೆ ಕೊನೆಯ ದಿನ

ಕಾಸರಗೋಡು: ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರವನ್ನು ಆಯೋಜಿಸಿದೆ. ಚನ್ನರಾಯಪಟ್ಟಣದ ಪರಿಸರ ತಜ್ಞ ಸಿ.ಎನ್. ಅಶೋಕ ಅವರ ನೇತೃತ್ವದಲ್ಲಿ ಕಳೆದ 15 ವರ್ಷಗಳಿಂದ ಮಕ್ಕಳಿಗಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವ ಪರಿಷತ್ತು, ಈ ಬಾರಿ ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪದ ಸಿದ್ದರಬೆಟ್ಟದಲ್ಲಿ ಏಪ್ರಿಲ್ 29ರಿಂದ ಮೇ 2ರವರೆಗೆ ನಾಲ್ಕು ದಿನಗಳ ಶಿಬಿರವನ್ನು ನಡೆಸಲಿದೆ. ಶಿಬಿರದಲ್ಲಿ…

Read More

ಪಾವೂರು ಪೊಯ್ಯೇ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ 57ನೇ ಏಕಹಾ ಭಜನೆ

ಪಾವೂರು ಪೊಯ್ಯೇ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ವತಿಯಿಂದ 57ನೇ ಏಕಹಾ ಭಜನೆ ಕಾರ್ಯಕ್ರಮ ಭಕ್ತಿಭಾವದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರದ ಅಧ್ಯಕ್ಷರಾದ ಮನೋಹರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತ್ಯಾಪಣ್ಣ ಶೆಟ್ಟಿ, ರವಿ ಮುಡಿಮಾರ್, ನಾಗೇಶ್ ಬಲ್ಲೂರ್, ವಿನೋದ್ ಪಾವೂರು, ಶಿವಕುಮಾರ್ ಬಳ್ಳೂರ್, ಶಿವ ಕೊಪ್ಪಳ, ಗಣೇಶ್ ಪಾವೂರು, ಮೋನಪ್ಪ ಶೆಟ್ಟಿ ಮುಟ್ಲ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಹಲವಾರು ಭಕ್ತರು ಭಾಗವಹಿಸಿದರು. ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಬಾಲಗೋಕುಲ…

Read More

28 ವರ್ಷದ ಕೃಷಿ ಸಾಧನೆ — ಪೆರ್ಮುದೆಯ ಸುಬ್ಬಣ್ಣ ನಾಯ್ಕ ಮಾದರಿ ರೈತ

ಉಪ್ಪಳ, ಏಪ್ರಿಲ್:ಮಣ್ಣಿನೊಂದಿಗೆ ಮನಸ್ಸು ಸೇರಿಸಿದರೆ ಯಶಸ್ಸು ಖಚಿತ ಎಂಬುದನ್ನು ಪೆರ್ಮುದದ ರೈತ ಸುಬ್ಬಣ್ಣ ನಾಯ್ಕ ಅವರು ತಮ್ಮ 28 ವರ್ಷದ ಕೃಷಿ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೃಷಿಯನ್ನು ಜೀವನದ ಭಾಗವನ್ನಾಗಿಸಿಕೊಂಡಿರುವ ಅವರು, ವೈವಿಧ್ಯಮಯ ಬೆಳೆಗಳ ಮೂಲಕ ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ. ಒಂದು ಬೆಳೆಗೇ ಸೀಮಿತವಾಗದೆ, ಪೇರಲೆ, ಪಪ್ಪಾಯಿ, ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳು, ಹರಿವೆ ಸೊಪ್ಪು (ಚೀರ), ಬೆಂಡೆಕಾಯಿ , ಮಲ್ಲಿಗೆ ಸೇರಿದಂತೆ ತರಕಾರಿ ಹಾಗೂ ಸುಗಂಧ ದ್ರವ್ಯಗಳನ್ನು ಬೆಳೆಸುತ್ತಿದ್ದಾರೆ. ಇದರ ಜೊತೆಗೆ…

Read More

ಬೇಸಿಗೆ ರಜೆಯಲ್ಲಿ ಕುಂಡು ಕೊಳಕೆ ಕಡಲತೀರಕ್ಕೆ ಜನಸಾಗರ

ಮಂಜೇಶ್ವರ :ಕಾಸರಗೋಡು ಜಿಲ್ಲೆಯ ಗಡಿ ಭಾಗವಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ. ಅರಬ್ಬಿ ಸಮುದ್ರದ ನೀಲಿ ಅಲೆಗಳು ಹಾಗೂ ಹಸಿರು ಪ್ರಕೃತಿಯ ನಡುವೆ ಇರುವ ಈ ಕಡಲತೀರವು ಬೇಸಿಗೆ ರಜೆಯ ಸಂದರ್ಭದಲ್ಲಿಯೇ ಜನರಿಂದ ಕಿಕ್ಕಿರಿದು ತುಂಬುತ್ತಿದೆ. ಈ ತಾಣದ ಪ್ರಮುಖ ಆಕರ್ಷಣೆ ‘ಓಷನ್ ವಾಟರ್ ಪಾರ್ಕ್’ ಆಗಿದ್ದು, ಶಾಲಾ ರಜೆಯ ಸಂಭ್ರಮದಲ್ಲಿರುವ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಮನರಂಜನೆಯ ಕೇಂದ್ರವಾಗಿದೆ. ಮಕ್ಕಳಿಗಾಗಿ ಸುರಕ್ಷಿತ ಸ್ಲೈಡ್‌ಗಳು ಹಾಗೂ ವಿವಿಧ ಜಲ ಕ್ರೀಡೆಗಳ…

Read More

ಕಾಸರಗೋಡು ಕನ್ನಡ ಗ್ರಾಮದ ಕಾಸರಗೋಡು ಗೋ-ಕುಟೀರದ 2 ನೇ ಹಂತದ ಕಾಮಗಾರಿ 5 ತಿಂಗಳಲ್ಲಿ ಪೂರ್ಣ

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ. ),ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಸರಗೋಡು ಗೋ-ಕುಟೀರದ ಕಾಮಗಾರಿಯು ಮತ್ತೊಂದು ಮಹತ್ವದ ಹಂತಕ್ಕೆ ತಲುಪಿರುತ್ತದೆ.ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯ ನೆನಪಿಗಾಗಿ ಶಾಶ್ವತವಾದ ಕಾಸರಗೋಡು ಗೋ-ಕುಟೀರದ ನಿರ್ಮಾಣದ ಮೂಲಕ ಸಾರ್ಥಕ ಸೇವೆಯನ್ನು ಗುರುತಿಸಿಕೊಳ್ಳುವುದಕ್ಕಾಗಿ 2025 ನವಂಬರ್ 4 ರಂದು ಕಾಸರಗೋಡು…

Read More

ಇತಿಹಾಸ ಪ್ರಸಿದ್ಧವಾದ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಏಪ್ರಿಲ್ 19ಕ್ಕೆ ಸಿದ್ಧತೆ

ಕಾಸರಗೋಡಿನ ಇತಿಹಾಸ ಪ್ರಸಿದ್ಧವಾದ ಕಾರಣಿಕವುಳ್ಳ ಕೂಡ್ಲು ಮಾರಿಗುಡಿಯೆಂದು ಖ್ಯಾತಿ ಪಡೆದಿರುವ ಕಾಸರಗೋಡು ರಾಮದಾಸನಗರದ ಕೂಡ್ಲು ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದ ವಾರ್ಷಿಕ ಶುದ್ದಿ ಕಲಶ ಪ್ರತಿಷ್ಠಾ ಮಹೋತ್ಸವ ವಿವಿಧ ಧಾರ್ಮಿಕ ಸಂಕೀರ್ತನಾ ಕಾರ್ಯಕ್ರಮಗಳೊಂದಿಗೆ ಇದೇ 2026 ಏಪ್ರಿಲ್ 19 ಆದಿತ್ಯವಾರದಂದು ತಂತ್ರೀವರ್ಯರಾದ ಬ್ರಹ್ಮಶ್ರೀ ವಿಷ್ಣು ಪ್ರಕಾಶ ಪಟ್ಟೇರಿ ಕಾವುಮಠ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವುದು.ಕಾಸರಗೋಡು ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಯ ಭಗವದ್ಭಕ್ತರು ಹಾಗೂ ಕುಟುಂಬಸ್ಥರು ಆಸ್ತಿಕ ಮಹಾಜನರು,ಊರ ಪರವೂರಿನ ಭಕ್ತಾಧಿಗಳು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.ಧಾರ್ಮಿಕ,ತಾಂತ್ರಿಕ ಸoಪ್ರದಾಯದ ಪ್ರಕಾರ ನಡೆಯುವ…

Read More

ಪ್ರಯಾಣಿಕರಿದ್ದಾಗಲೇ ಬಸ್‌ಗೆ ಇಂಧನ ತುಂಬಿಕೆ — ಸುರಕ್ಷತೆ ಬಗ್ಗೆ ಆತಂಕ

ಉಪ್ಪಳ :ಪ್ರಯಾಣಿಕರು ತುಂಬಿರುವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಲಾಗುತ್ತಿರುವುದು ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಆತಂಕ ಉಂಟುಮಾಡಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳು ಕರ್ನಾಟಕದ ತೊಕ್ಕೊಟ್ಟು ಹಾಗೂ ಕೊಟ್ಟೆಕಾರು ಪ್ರದೇಶದ ಪಂಪ್‌ಗಳಲ್ಲಿ ಇಂಧನ ತುಂಬುತ್ತಿರುವುದಾಗಿ ತಿಳಿದುಬಂದಿದೆ. ಈ ವೇಳೆ ಸುಮಾರು 10 ನಿಮಿಷಗಳ ಕಾಲ ಬಸ್ ನಿಲುಗಡೆ ಆಗುತ್ತಿದ್ದು, ಬಳಿಕ ಟೋಲ್ ಪ್ಲಾಜಾಗಳಲ್ಲಿ ಮತ್ತಷ್ಟು ವಿಳಂಬ ಉಂಟಾಗುತ್ತಿರುವುದರಿಂದ ಪ್ರಯಾಣಿಕರಿಗೆ ಸಮಯ ನಷ್ಟವಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ, ಸಂಬಂಧಿಸಿದ…

Read More
error: Content is protected !!