ಸಿಪಿಐ ನಾಯಕಿ ಹಿಂದೂ ಸಮಾವೇಶದಲ್ಲಿ ಭಾಗಿ: ಪಕ್ಷದಿಂದ ಸುಂದರಿ ಶೆಟ್ಟಿಗೆ ಕಾರಣ ಕೇಳಿ ನೋಟಿಸ್ ಜ್ಯಾರಿ

​ಮಂಜೇಶ್ವರ: ಮೀಂಜ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯೆ ಸುಂದರಿ ಶೆಟ್ಟಿ ಅವರು ಆರ್‌ಎಸ್‌ಎಸ್ ನೇತೃತ್ವದ ‘ಹಿಂದೂ ಸಮಾಜೋತ್ಸವ’ದಲ್ಲಿ ಪಾಲ್ಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೈದ್ಧಾಂತಿಕವಾಗಿ ಸಂಘ ಪರಿವಾರವನ್ನು ವಿರೋಧಿಸುವ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕಿಯೇ ಇಂತಹ ಸಮಾವೇಶದಲ್ಲಿ ಕಾಣಿಸಿಕೊಂಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ​ಮೀಂಜದಲ್ಲಿ ನಡೆದ ಏಕತಾ ಸಮ್ಮೇಳನದಲ್ಲಿ ಸುಂದರಿ ಶೆಟ್ಟಿ ಅವರು ಭಾರತಾಂಬೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಲ್ಲದೆ, ವೇದಿಕೆಯಲ್ಲಿ ಭಾಷಣವನ್ನೂ ಮಾಡಿದ್ದರು. ಸಂಘದ ಶತಮಾನೋತ್ಸವದ ಅಂಗವಾಗಿ…

Read More

ಬಂದ್ಯೋಡ್ ಅಡ್ಕದಲ್ಲಿ ಸಿಎನ್‌ಜಿ–ಇಲೆಕ್ಟ್ರಿಕ್ ಆಟೋ ಡಿಕ್ಕಿ; ಇಬ್ಬರಿಗೆ ಗಾಯ

ಬಂದ್ಯೋಡು ಅಡ್ಕದಲ್ಲಿ ಸಿಎನ್‌ಜಿ ಆಟೋರಿಕ್ಷಾ ಮತ್ತು ಎಲೆಕ್ಟ್ರಿಕಲ್ ಆಟೋರಿಕ್ಷಾ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.ಸಿಎನ್‌ಜಿ ಆಟೋರಿಕ್ಷಾ ಚಾಲಕ ಹಕೀಮ್ ಮದ್ಯಪಾನ ಮಾಡಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಬಂದ ಕುಂಬಳೆ ಎಸ್‌ಐ ಜಿಜೀಶ್ ಆಟೋ ಚಾಲಕ ಹಕೀಮ್ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ವಶಕ್ಕೆ ಪಡೆದು ಕರೆದೊಯಿದಿದ್ದಾರೆಇವರು ಪ್ರತಿದಿನವೂ ಮದ್ಯಪಾನ ಮಾಡುತ್ತಾರೆ ಎಂಬುದಾಗಿ ಇತರ ಆಟೋ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ.

Read More

ಕಾಸರಗೋಡು ಡಿವೈಎಸ್ಪಿ ಸಿಬಿ ಥಾಮಸ್ ಹಾಗೂ ಎಎಸ್ಐ ಮೋಹನನ್‌ಗೆ ರಾಜ್ಯ ಇಂಟೆಲಿಜೆನ್ಸ್ ಅತ್ಯುತ್ತಮ ಸೇವಾ ಪ್ರಶಸ್ತಿ.ಸೂಕ್ಷ್ಮ ಪ್ರಕರಣಗಳ ತನಿಖೆಯಲ್ಲಿ ಕರ್ತವ್ಯನಿಷ್ಠೆಗೆ ರಾಜ್ಯ ಮಟ್ಟದಲ್ಲಿ ಗೌರವ

ಕಾಸರಗೋಡು: ಕೇರಳ ರಾಜ್ಯ ಇಂಟೆಲಿಜೆನ್ಸ್ ವಿಭಾಗದ ಅತ್ಯುತ್ತಮ ನೌಕರ ಸೇವಾ ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯ ಡಿವೈಎಸ್ಪಿ ಸಿಬಿ ಥಾಮಸ್ ಹಾಗೂ ಎಎಸ್ಐ ಮೋಹನನ್ ಅರ್ಹರಾಗಿದ್ದಾರೆ. ಪ್ರಸ್ತುತ ಇವರೀರ್ವರೂ ಕಾಸರಗೋಡು ಜಿಲ್ಲೆಯ ಒಂದೇ ಕಚೇರಿಯಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸುವುದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ನಡೆದಿದೆ. ಅಪರಾಧ ತನಿಖಾ ಕರ್ತವ್ಯದಲ್ಲಿ ಬದ್ಧತೆ ಮೆರೆದು, ವಿವಾದಿತವಾದ ಅನೇಕ ಸೂಕ್ಷ್ಮ ಪ್ರಕರಣಗಳನ್ನು ಬಯಲಿಗೆಳೆದು ಅಪರಾಧಿಗಳಿಗೆ ಶಿಕ್ಷೆ ದೊರಕಿಸಿಕೊಡುವಲ್ಲಿ ಕರ್ತವ್ಯ ಬದ್ಧತೆ ಮೆರೆದಿರುವುದನ್ನು ಪ್ರಶಸ್ತಿ ಪ್ರದಾನ ಸಂದರ್ಭ ಉಲ್ಲೇಖಿಸಲಾಗಿದೆ.ತಿರುವನಂತಪುರ ತೖಕಾಡ್ ಪೋಲೀಸ್ ಟ್ರೖನಿಂಗ್ ಕಾಲೇಜಿನಲ್ಲಿ…

Read More

ಮಂಜೇಶ್ವರ ಪಂಚಾಯತ್ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮೀನು ಮಾರುಕಟ್ಟೆ ನಿರ್ಜೀವ – ರಸ್ತೆ ಬದಿಯಲ್ಲೇ ಮೀನು ಮಾರಾಟ

ಮಂಜೇಶ್ವರ: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಂಜೇಶ್ವರ ಪಂಚಾಯತ್ ನಿರ್ಮಿಸಿದ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮೀನು ಮಾರುಕಟ್ಟೆ ನಿರ್ಲಕ್ಷ್ಯಕ್ಕೆ ಗುರಿಯಾಗಿ ನಿರ್ಜೀವವಾಗಿ ಪರಿಣಮಿಸಿದೆ. ಇಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವುದು ಕೇವಲ ಒಂದು ಗುಜರಿ ಅಂಗಡಿ ಮತ್ತು ಒಂದು ಸೈಕಲ್ ರಿಪೇರಿ ಅಂಗಡಿ ಮಾತ್ರ. ಶಾಪಿಂಗ್ ಕಾಂಪ್ಲೆಕ್ಸ್‌ನ ಐದಕ್ಕಿಂತ ಹೆಚ್ಚು ಕೊಠಡಿಗಳು ಹಲವು ವರ್ಷಗಳಿಂದ ಖಾಲಿಯಾಗಿಯೇ ಇವೆ. ಮೀನು ಮಾರಾಟಕ್ಕಾಗಿ ಕಟ್ಟಡದ ನೆಲಮಹಡಿಯನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು. ಆದರೆ ಪ್ರಸ್ತುತ ಅಲ್ಲಿ ಗುಜರಿ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಮೀನು ಮಾರಾಟ ಸಂಪೂರ್ಣವಾಗಿ ರಸ್ತೆ…

Read More

ಸಿಬ ಮೆಹಂದಿ ಆಯೋಜಿಸಿದ ಮೆಹಂದಿ ಹಾಕುವ ಸ್ಪರ್ಧೆ.ಮಕ್ಕಳ ಕೈಗಳಲ್ಲಿ ಅರಳಿದ ಕಲಾತ್ಮಕ ವಿನ್ಯಾಸಗಳು

ಉಪ್ಪಳ ಬಪ್ಪಾಯತೊಟ್ಟಿಯ ಶೇಖ್ ಅಖ್ತರ್ ಕಳೆದ ನಲವತ್ತು ವರ್ಷಗಳಿಂದ ಮೆಹಂದಿ ವ್ಯಾಪಾರ ನಡೆಸುತ್ತಿದ್ದಾರೆ. ರಮಝಾನ್ ಪ್ರಯುಕ್ತ ಪೆರುನಾಳ್ ಮಾರುಕಟ್ಟೆಗೆ ಮುನ್ನೋಟವಾಗಿ ಸ್ಥಳೀಯ ಮಕ್ಕಳಿಗಾಗಿ ಆಯೋಜಿಸಿದ ಮೈಲಾಂಜಿ ಹಾಕುವ ಸ್ಪರ್ಧೆ ವಿಶೇಷ ಗಮನ ಸೆಳೆಯಿತು.ಕಳೆದ 28 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಸ್ಪರ್ಧೆಯನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ಆರಂಭದಲ್ಲಿ ಹತ್ತು ಮಕ್ಕಳಿಗಿಂತ ಕಡಿಮೆ ಸಂಖ್ಯೆಯಲ್ಲಿ ನಡೆದಿದ್ದ ಈ ಸ್ಪರ್ಧೆಯಲ್ಲಿ ಈ ಬಾರಿ ಐವತ್ತಕ್ಕೂ ಹೆಚ್ಚು ಮಕ್ಕಳು ಸಿಬ ಮೆಹಂದಿಯ ಮೈಲಾಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಭಾನುವಾರ ಬೆಳಗ್ಗೆ 9 ಗಂಟೆಗೆ…

Read More

ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಂಡಿದ್ದರೂ ಉದ್ಘಾಟನೆ ಇಲ್ಲ – ಕುಂಬಳೆ ಮೀನು ಮಾರುಕಟ್ಟೆ ಕಟ್ಟಡ ಬಳಕೆಗೆ ಸಿಗದೆ ವ್ಯಾಪಾರಿಗಳಿಗೆ ಸಂಕಷ್ಟ

ಕುಂಬಳೆ : ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಪೂರ್ಣಗೊಂಡ ಕುಂಬಳೆ ಮೀನು ಮಾರುಕಟ್ಟೆ ಕಟ್ಟಡವನ್ನು ಇನ್ನೂ ಸಾರ್ವಜನಿಕರಿಗೆ ತೆರೆಯಲು ಕ್ರಮ ಕೈಗೊಳ್ಳಲಾಗಿಲ್ಲ.ಹೊಸ ಪಂಚಾಯತ್ ಆಡಳಿತ ಸಮಿತಿ ಅಧಿಕಾರ ಸ್ವೀಕರಿಸಿದ ಬಳಿಕ ಉದ್ಘಾಟನೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮೀನು ಮಾರುಕಟ್ಟೆ, ವಿಧಾನಸಭಾ ಚುನಾವಣೆಯ ಆಚರಣಾ ಸಂಹಿತೆ ಜಾರಿಯಾದರೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಆತಂಕ ಮೀನು ಮಾರಾಟ ಕಾರ್ಮಿಕರಲ್ಲಿ ಮೂಡಿದೆ. ಮೀನು ಮಾರಾಟ ಮಾತ್ರವಲ್ಲದೆ ಮಾಂಸ, ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೂ ಕಟ್ಟಡದಲ್ಲಿ ವ್ಯವಸ್ಥೆ…

Read More

ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ರಸ್ತೆ ದುರಸ್ಥಿ ಇಲ್ಲದೆ ಸಾರ್ವಜನಿಕರ ಸಂಕಷ್ಟ

ರಾಜ್ಯ ಹೆದ್ದಾರಿಯಿಂದ ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ಸುಮಾರು ನೂರು ಮೀಟರ್ ರಸ್ತೆ ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ.ತೀವ್ರ ಏರಿಳಿತ ಇರುವ ಈ ರಸ್ತೆ ಸಂಪೂರ್ಣವಾಗಿ ಕುಸಿದು ಹೋಗಿರುವುದರಿಂದ ಪೊಲೀಸ್ ಠಾಣೆಗೆ ಆಗಮಿಸುವ ಸಾರ್ವಜನಿಕರ ವಾಹನಗಳು ಹಾಗೂ ಪೊಲೀಸ್ ವಾಹನಗಳು ಕಷ್ಟಪಟ್ಟು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು, ಸಾರ್ವಜನಿಕ ಕಾರ್ಯಕರ್ತರು ಹಾಗೂ ರಾಜಕೀಯ ನಾಯಕರು ನಿರಂತರವಾಗಿ ಈ ಮಾರ್ಗವನ್ನು ಬಳಸುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.ದಶಕಗಳ ಹಿಂದೆ ಡಾಮರ್…

Read More

ಮಾರ್ಚ್ 15ರಂದು ಕುಂಬಳೆಯಲ್ಲಿ ಟೀಮ್ ಜೋಶ್ ವಿಶ್ವಕರ್ಮ ಕ್ರಿಕೆಟ್ ಪ್ರೀಮಿಯರ್ ಲೀಗ್

ಕುಂಬಳೆ: ಟೀಮ್ ಜೋಶ್ ಕಾಸರಗೋಡುವಿನ ನೇತೃತ್ವದಲ್ಲಿ ಮಾರ್ಚ್ 15 ಆದಿತ್ಯವಾರದಂದು ಕುಂಬಳೆ ಶಾಲಾ ಮೈದಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ನಡೆಯಲಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 25,000 ನಗದು ಹಾಗೂ ಫಲಕ, ದ್ವಿತೀಯ ಬಹುಮಾನ 15,000 ಹಾಗೂ ಫಲಕ ದೊರೆಯಲಿದೆ. ಕ್ರೀಡೆಯ ಪೂರ್ವಭಾವಿಯಾಗಿ ಸ್ಪರ್ಧಿಸುವ ತಂಡಗಳ ಹರಾಜು ಪ್ರಕ್ರಿಯೆಯು ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸುವ ಫೈರ್ ಬ್ಲ್ಯಾಸ್ಟರ್ ಮಧೂರು, ಟೀಮ್ ಶ್ಲಾಘ, ಯಂಗ್ ಸ್ಟಾರ್ಸ್ ಕಾಸರಗೋಡು,…

Read More

ಮಂಜೇಶ್ವರ ಗ್ರಾಮ ಪಂಚಾಯತ್ 2026-27 ವಾರ್ಷಿಕ ಯೋಜನೆಗೆ ಅಭಿವೃದ್ಧಿ ಸೆಮಿನಾರ್

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ವಾರ್ಷಿಕ ಯೋಜನೆ ಹಾಗೂ 14ನೇ ಹಣಕಾಸು ಆಯೋಗದ ಅನುದಾನದ ಯೋಜನಾ ತಯಾರಿಯ ಭಾಗವಾಗಿ ಹಮ್ಮಿಕೊಳ್ಳಲಾದ ‘ಅಭಿವೃದ್ಧಿ ಸೆಮಿನಾರ್’ ಮಂಜೇಶ್ವರದ ಎ ಕೆ ಗಾರ್ಡನ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು.ಮುಂಬರುವ ಹಣಕಾಸು ವರ್ಷದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮತ್ತು ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಸೆಮಿನಾರ್ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ, ಕಳೆದ ಫೆಬ್ರವರಿ 9 ರಿಂದ ಫೆಬ್ರವರಿ 17ರ ವರೆಗೆ ಪಂಚಾಯತ್‌ನ ವಿವಿಧ ವಾರ್ಡ್‌ಗಳಲ್ಲಿ ಗ್ರಾಮ ಸಭೆಗಳನ್ನು ಹಾಗೂ ವರ್ಕಿಂಗ್ ಗ್ರೂಪ್…

Read More

ಕನ್ನಿ( ಪ್ರಥಮ ಮತದಾರರು)ಮತದಾರರನ್ನು ಭೇಟಿ ಮಾಡಲು ‘ಮತದಾರರ ಜಾಗೃತಿ ವಾಹನ’ ಕ್ಯಾಂಪಸ್‌ಗಳಿಗೆ

ಜನಾಧಿಪತ್ಯ ಪ್ರಕ್ರಿಯೆಯಲ್ಲಿ ಚುನಾವಣೆಯ ಮಹತ್ವವನ್ನು ತಿಳಿಸಿ, ಕನ್ನಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ” ಮತದಾರರ ಜಾಗೃತಿ” ವಾಹನಕ್ಯಾಂಪಸ್‌ಗಳತ್ತ ಪ್ರಚಾರ ಯಾತ್ರೆ ನಡೆಸಿತು.ಇಂದಿನ ಕಾರ್ಯಕ್ರಮವು ಮಂಜೇಶ್ವರದ ಗೋವಿಂದ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಕಲಾವಿದರಾಗಿ ಗಾಯಕರು ರಂಷಿ ಪಟ್ಟುವಂ, ಸುದೇಶ್ ಭಾಗವಹಿಸಿ ಜಾಗೃತಿ ಸಂದೇಶವನ್ನು ಸಂಗೀತದ ಮೂಲಕ ಹರಡಿದರು. ಕುಟುಂಬಶ್ರೀ ಬ್ಲಾಕ್ ಕೋಆರ್ಡಿನೇಟರ್ ಸಚಿನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು….

Read More
error: Content is protected !!