ಬರಹ ಮತ್ತು ಓದು, ಸಾರ್ವಜನಿಕ ಸೇವೆ ಜೊತೆಗೆ ವ್ಯವಹಾರ – ಇಬ್ರಾಹೀಂ ಮುಂಡ್ಯತ್ತಡ್ಕ ಮಾದರಿ ವ್ಯಕ್ತಿತ್ವ

ಕಾಸರಗೋಡು: ಒಬ್ಬ ಸಾರ್ವಜನಿಕ ಕಾರ್ಯಕರ್ತನು ರಾಜಕೀಯ ಮತ್ತು ವ್ಯವಹಾರವನ್ನು ಸಮನ್ವಯಗೊಳಿಸಿ ಮುಂದುವರಿಯುವುದು ಸಾಮಾನ್ಯ. ಆದರೆ ಸಾರ್ವಜನಿಕ ಸೇವೆ, ವ್ಯವಹಾರ, ಬರವಣಿಗೆ ಮತ್ತು ಓದು – ಈ ಎಲ್ಲವೂ ಒಬ್ಬ ವ್ಯಕ್ತಿಯಲ್ಲಿ ಒಂದೇ ವೇಳೆ ಒಂದಾಗುವುದು ಅಪರೂಪ. ಅಂತಹ ಮಾದರಿ ವ್ಯಕ್ತಿತ್ವವೇ ಮುಸ್ಲಿಂ ಲೀಗ್ ನಾಯಕ ಹಾಗೂ ಸಾರ್ವಜನಿಕ ಕಾರ್ಯಕರ್ತ ಇಬ್ರಾಹೀಂ ಮುಂಡ್ಯತ್ತಡ್ಕ . ವಿದ್ಯಾರ್ಥಿ ದಶೆಯಿಂದಲೇ ಪತ್ರಿಕೆಗಳು, ಮಾಸಪತ್ರಿಕೆಗಳು ಹಾಗೂ ವಿವಿಧ ಆನೂಕಾಲಿಕಗಳಲ್ಲಿ ಬರೆಯಲು ಆರಂಭಿಸಿದ್ದ ಅವರು, ಮಧ್ಯದಲ್ಲಿ ವಿದೇಶ ಪ್ರವಾಸಿಯಾಗಿದ್ದರೂ ನಂತರ ಸ್ವದೇಶಕ್ಕೆ ಮರಳಿ ವ್ಯವಹಾರ…

Read More

​ ಕಾರು-ಬಸ್ಸು ಮುಖಾಮುಖಿ ಡಿಕ್ಕಿ: ಮಾಜಿ ಪ್ರವಾಸಿಯ ದಾರುಣ ಅಂತ್ಯ : ಪುತ್ರ ಗಂಭೀರ

ಮಂಜೇಶ್ವರ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ತಾಳದ ನೆಲ್ಲಿಕಟ್ಟೆ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಪ್ರವಾಸಿಗೆ ದಾರುಣ ಅಂತ್ಯ.ನೆಲ್ಲಿಕಟ್ಟೆ ನಿವಾಸಿ ಶಂಸುದ್ದೀನ್ ಪೈಕ (68) ಸಾವನ್ನಪ್ಪಿದ ದುರ್ದೈವಿ. ಅವರ ಪುತ್ರ ಸಲ್ಮಾನ್ ಫಾರಿಸ್ (22) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ​ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಶಂಸುದ್ದೀನ್ ಅವರು ತಮ್ಮ ಮಗನೊಂದಿಗೆ ಕಾರಿನಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿರುವ ಮಧ್ಯೆ ಕಾಸರಗೋಡು ಡಿಪೋದಿಂದ…

Read More

ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026

ಕಾಸರಗೋಡು: ಸಮಾಜ ಸೇವಕಿ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಮಹಿಳಾ ಸೇವಾ ಟ್ರಸ್ಟ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ನಾಗರತ್ನ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿ 2026ಕ್ಕೆ ಆಯ್ಕೆ ಮಾಡಲಾಗಿದೆ. ಕಾಸರಗೋಡಿನ ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಯಾದ ಈ ಸನ್ಮಾನವನ್ನು Dr. Vaman Rao Bekal ಮತ್ತು ಸಂದ್ಯಾ ರಾಣಿ ಟೀಚರ್ ಅವರ ಸಾರತ್ಯದಲ್ಲಿ ನೀಡಲಾಗುತ್ತಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆಯ ಅಂಗವಾಗಿ 22.02.2026 ರಂದು ಕನ್ನಡ…

Read More

​ಅಪ್ಪನ ನೆನಪಿನ ‘ಎಂ-80’ ಮೋಪೆಡ್‌ಗೆ ಮಗನ ಮದುವೆಯಲ್ಲಿ ರಾಜಮರ್ಯಾದೆ

​ಮಂಜೇಶ್ವರ: ಮದುವೆ ಸಮಾರಂಭಗಳಲ್ಲಿ ದುಬಾರಿ ಕಾರುಗಳು, ಅದ್ದೂರಿ ಅಲಂಕಾರಗಳು ಇರುವುದು ಸಾಮಾನ್ಯ. ಆದರೆ ಪೆರ್ಲದ ಬಜಕೂಡ್ಲು ಪರ್ಪಕರಿಯದಲ್ಲಿ ನಡೆದ ನವೀನ್ ರೈ ಅವರ ವಿವಾಹದ ಸನ್ಮಾನ ಕೂಟದಲ್ಲಿ ಎಲ್ಲರ ಗಮನ ಸೆಳೆದದ್ದು ಒಂದು ಹಳೆಯ ಕಾಲದ ‘ಬಜಾಜ್ ಎಂ-80’ ಮೋಪೆಡ್! ​ಕೇರಳ ತೋಟಗಾರಿಕಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಅಮ್ಮು ರೈ ಅವರ ನೆಚ್ಚಿನ ವಾಹನವಿದು. ಅಪ್ಪನ ಅಗಲಿಕೆಯ ನಂತರವೂ ಅವರ ಸ್ಮರಣಾರ್ಥವಾಗಿ ಮಕ್ಕಳು ಈ ವಾಹನವನ್ನು ಅತ್ಯಂತ ಜತನದಿಂದ ಕಾಯ್ದಿರಿಸಿದ್ದರು. ಅಪ್ಪನ ಮೇಲಿನ ಅಪಾರ ಪ್ರೀತಿ…

Read More

ಉಚಿತ ಕಣ್ಣು ತಪಾಸಣಾ ಶಿಬಿರ ಫೆ.22ರಂದು

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಲ್ಲಿ ಕಾಸರಗೋಡಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಕಾರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಫೆ.22ರಂದು ಬೆಳಗ್ಗೆ 10ರಿಂದ ಕನ್ನಡ ಭವನದಲ್ಲಿ ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಬಿರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರ ಸಭಾ ಕೌನ್ಸಿಲರ್ ಆಗಿರುವ ಶ್ರುತಿ ಅಶೋಕನಗರ, ಶಾರದಾ ಜೆ. ಪಿ. ನಗರ, ಸುಧಾರಾಣಿ ಶರತ್ ಅಣಂಗೂರು, ನೇತಾಜಿ ರೆಸಿಡೆನ್ಸಿ ವಲಯ ಅಧ್ಯಕ್ಷ…

Read More

ಮಂಜೇಶ್ವರದಲ್ಲಿ ತೀಯಾ ಸಮುದಾಯ ಒಗ್ಗಟ್ಟಿಗೆ ಮಹತ್ವದ ಸಭೆ

ಮಂಜೇಶ್ವರ :ಸುಮಾರು ಹದಿನೆಂಟು ಶ್ರೀ ಭಗವತಿ ಕ್ಷೇತ್ರದ ತೀಯಾ ಸಮುದಾಯವನ್ನು ಒಗ್ಗಟ್ಟು ಮಾಡುವ ಅಂಗವಾಗಿ ಬಂದಿಯೋಡು ಅಡ್ಕ ಶ್ರೀ ಭಗವತಿ ಕ್ಷೇತ್ರದ ಕೃಷ್ಣ ಕಾರ್ನೋರ್ ಅವರನ್ನು ತೀಯಾ ವೆಲ್ಫೇರ್ ಸೊಸೈಟಿ ಸದಸ್ಯರು ತೀಯಾ ಸಮುದಾಯಕ್ಕೆ ಕೇರಳ ಸರಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು ಈ ಸಂದರ್ಭದಲ್ಲಿ ತೀಯಾ ಕ್ಷೆಮಾಸಭಾ ಅಧ್ಯಕ್ಷರಾದ ರವಿ ಕುಲ್ನಗರೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ತೀಯಾ ವೆಲ್ಫೇರ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ನಾಗೇಶ್ ಕುಂಬುಳೆ ತೀಯಾ…

Read More

ಸರಕಾರಿ ಆರೋಗ್ಯ ವಲಯದ ಸುಧಾರಿತ ಸೇವಾ ಸೌಲಭ್ಯಗಳ ಪ್ರಚಾರಕ್ಕೆ ಸಾಕ್ಷ್ಯಚಿತ್ರದ ಅಭಿಯಾನ

ಕುಂಬಳೆ: ವೖಬ್ 4 ವೖಲ್ಸ್ ಹೆಲ್ತ್ ಕೇರಳ ಅಭಿಯಾನ ವಾಹನ ಪ್ರಚಾರಕ್ಕೆ ಶುಕ್ರವಾರ ಬೆಳಿಗ್ಗೆ ಕುಂಬಳೆ ಗ್ರಾ. ಪಂ. ನಲ್ಲಿ ಸ್ವಾಗತ ನೀಡಲಾಯಿತು. ಕೇರಳ ಸರಕಾರ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಟಾನಕ್ಕೆ ತಂದ ಆರೋಗ್ಯ ಯೋಜನೆ ಮತ್ತು ಸೌಲಭ್ಯಗಳ ಪ್ರಚಾರದಂಗವಾದ ವಾಹನ ಪ್ರಚಾರ ಕುಂಬಳೆ ಗ್ರಾ. ಪಂ. ಅಂಗಣಕ್ಕೆ ಪ್ರವೇಶಿಸಿದಾಗ ಸ್ವಾಗತ ನೀಡಿ ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದರ್ ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಪಿ. ಖಾಲಿದ್ ಬಂಬ್ರಾಣ ಅಧ್ಯಕ್ಷತೆ…

Read More

ಕಂಠರರ್ ರಾಜೀವರ್ ವಿರುದ್ಧ ಪುರಾವೆ ಇಲ್ಲ: ತನಿಖೆಯಲ್ಲಿ ಸಂಯಮ ಅಗತ್ಯ –ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

ಕಾಸರಗೋಡು:ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ ಚಿನ್ನ ಹಗರಣ ಪ್ರಕರಣದಲ್ಲಿ ದೇವಾಲಯದ ತಂತ್ರಿಯಾಗಿರುವ ಕಂಠರರ್ ರಾಜೀವರ್ ಅವರಿಗೆ ಮಾನ್ಯ ನ್ಯಾಯಾಲಯ ಜಾಮೀನು ನೀಡಿದ್ದು, ಅವರ ವಿರುದ್ಧ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವುದನ್ನು ಸಚ್ಚಿದಾನಂದ ಭಾರತಿ ಸ್ವಾಮಿಗಳು ಸ್ವಾಗತಿಸಿದ್ದಾರೆ. ಅವರು ಈ ಬಗ್ಗೆ ಶ್ರೀಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹಿಂದೂ ದೇವಾಲಯ ಪರಂಪರೆಯ ರಕ್ಷಕರಾಗಿರುವ ತಂತ್ರಿಗಳು ಕೇವಲ ವ್ಯಕ್ತಿಗಳಷ್ಟೇ ಅಲ್ಲ; ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿಕೊಂಡು ಬಂದ ದೈವಿಕ ಹಾಗೂ ಅಧ್ಯಾತ್ಮಿಕ ಜವಾಬ್ದಾರಿಯ ಪ್ರತೀಕರಾಗಿದ್ದಾರೆ. ಅಂಥ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸಾಕ್ಷ್ಯ…

Read More

ಕಾಸರಗೋಡು ಗೋ-ಕುಟೀರಕ್ಕೆ ಬಿ.ಜೆ.ಪಿ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ. ಬೇಟಿ

ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರಕ್ಕೆ ಭಾರತೀಯ ಜನತಾ ಪಾರ್ಟಿಯ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ.ಬೇಟಿ ನೀಡಿ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಇವರೊಂದಿಗೆ ಕಾಸರಗೋಡು ಗೋ- ಕುಟೀರದ ನಿರ್ಮಾಣ ಕಾಮಗಾರಿಯ ಕುರಿತು ಚರ್ಚಿಸಿದರು. ಕಾಸರಗೋಡು ಗೋ – ಕುಟೀರದ ಆವರಣದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವ ಉದ್ಯೋಗ ಕೇಂದ್ರ ವಿದ್ಯಾರ್ಥಿಗಳು,ಯುವಜನರು, ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ,…

Read More

ಮಂಜೇಶ್ವರ ಶಾಸಕರ ಹೇಳಿಕೆಗಳು ಮುಸ್ಲಿಂ ಮತಗಳ ದ್ರುವೀಕರಣಕ್ಕಾಗಿ -ಬಿಜೆಪಿ.

ಮಂಜೇಶ್ವರ : ಮಂಜೇಶ್ವರ ಶಾಸಕರು ಮುಸ್ಲಿಂ ಸಮುದಾಯ ಮತಗಳ ಕ್ರೂಡಿಕಾರಣಕ್ಕಾಗಿ ಬೇಜವಾಬ್ದಾರಿ ಹಾಗೂ ಅನಗತ್ಯ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ತನ್ನ ಮತ ಬ್ಯಾಂಕ್ ಭದ್ರಪಡಿಸಲು ಕಪಟ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಆರೋಪಿಸಿದರು.. ಇತ್ತೀಚಿಗೆ ದನ ಸಾಗಾಟ ಮಾಡುವ ಕಂಟೈನರ್ ಡ್ರೈವರ್ ಹಾಗೂ ರಿಕ್ಷಾ ಪ್ರಯಾಣಿಕರ ಮದ್ಯೆ ರಾತ್ರಿ ರಸ್ತೆಯಲ್ಲಿ ಉಂಟಾದ ವೈಯಕ್ತಿಕ ವಿಚಾರದಲ್ಲಿ ಉಂಟಾದ ವೈಯಕ್ತಿಕ ಗಲಾಟೆಯನ್ನು ಕೋಮು ಗಲಭೆ ಎಂದು ಹೇಳಿ,…

Read More
error: Content is protected !!