ಸುಂದರ್ ರಾಮ್ ಶೆಟ್ಟಿಯವರ ಸಮಾಧಿ ಮರುಸ್ಥಾಪನೆಗೆ ಒತ್ತಾಯ
ಮಂಗಳೂರು, ಜೂ.13: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಮುಲ್ಕಿಯ ಬಪ್ಪನಾಡು ಪ್ರವೇಶ ದ್ವಾರದ ಸಮೀಪವಿದ್ದ ವಿಜಯಾ ಬ್ಯಾಂಕಿನ ಆಧುನಿಕ ಶಿಲ್ಪಿ ದಿವಂಗತ ಸುಂದರ್ ರಾಮ್ ಶೆಟ್ಟಿಯವರ ಸಮಾಧಿಯನ್ನು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ತೆರವುಗೊಳಿಸಿರುವ ಕ್ರಮವನ್ನು ಸುಂದರ್ ರಾಮ್ ಶೆಟ್ಟಿ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸಿದೆ. ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಸ್ಥಳೀಯ ಸಾರ್ವಜನಿಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಸಮಾಧಿಯನ್ನು ಧ್ವಂಸಗೊಳಿಸಿರುವುದು ನೋವುಂಟುಮಾಡಿದೆ ಎಂದು ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಜಯಾ ಬ್ಯಾಂಕನ್ನು…