ಫಲ್ಗುಣಿ ನದಿ ಕಲುಷಿತಕ್ಕೆ ಕೈಗಾರಿಕೆ ಕಾರಣವಲ್ಲ: ಕೆನರಾ ಕೈಗಾರಿಕ ಸಂಘ ಸ್ಪಷ್ಟನೆ
ಮಂಗಳೂರು:ಫಲ್ಗುಣಿ ನದಿ ನೀರು ಕಲುಷಿತಗೊಳ್ಳಲು ಕೈಗಾರಿಕೆಗಳು ಕಾರಣ ಎನ್ನುವ ಆರೋಪವನ್ನು ಕೆನರಾ ಕೈಗಾರಿಕ ಸಂಘ ತಳ್ಳಿ ಹಾಕಿದ್ದು, ಕೈಗಾರಿಕ ಪ್ರದೇಶದ ಹಾಗೂ ಪಕ್ಕದ ಪುನರ್ವಸತಿ ಪ್ರದೇಶದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನದಿ ಸೇರುತ್ತಿದೆ ಹೊರತು ಕೈಗಾರಿಕೆಗಳ ಸಂಸ್ಕರಿಸದ ತ್ಯಾಜ್ಯ ನೀರು ಅಲ್ಲ ಎಂದು ಕೈಗಾರಿಕ ಪ್ರತಿನಿಧಿಗಳು ತಿಳಿಸಿದ್ದಾರೆ. ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆನರಾ ಕೈಗಾರಿಕ ಸಂಘದ ಉಪಾಧ್ಯಕ್ಷ ಬಿ.ಎ. ಇಕ್ಬಾಲ್ ಅವರು, ಕೈಗಾರಿಕ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿದೆ. ಆದರೆ ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿ…