ಮತೀಯ ಶಕ್ತಿಗಳ ಅಟ್ಟಹಾಸ ಕೊನೆಗೊಳಿಸಲು ಸಂಕಲ್ಪ -ಕಾಂಗ್ರೆಸ್
ರಾಜಕೀಯ ಅಧಿಕಾರ ಗಳಿಸುವ ದುರುದ್ದೇಶದಿಂದ ಮತೀಯ ಶಕ್ತಿಗಳು ದೇಶದಲ್ಲಿ ಇನ್ನಿಲ್ಲದ ದ್ವೇಷದ ರಾಜಕಾರಣದಲ್ಲಿ ನಿರತವಾಗಿದ್ದು, ಈ ಶಕ್ತಿಗಳನ್ನು ಹಿಮ್ಮೆಟ್ಟಿಸಿ ದೇಶದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಪಕ್ಷವು ಪ್ರತಿಜ್ಞಾ ಬದ್ಧವಾಗಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಮಂಗಲ್ಪಾಡಿ ಮಂಡಲದ ಹದಿನೈದನೇ ಒಳಯಂ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ ಹಾಗೂ ಮಹಾತ್ಮಾ ಗಾಂಧಿ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಮುಹಮ್ಮದ್ ಮೇರ್ಕಳರ ಅಧ್ಯಕ್ಷತೆಯಲ್ಲಿ ನಡೆದ…