ಮಂಗಳೂರಿನಲ್ಲಿ ಮೇ 28-29ರಂದು ‘ಅಮೃತಸಂಗಮ 2026’: ಸಪ್ತ ಸಂವತ್ಸರದ ಬಳಿಕ ಕರಾವಳಿ ಜಿಲ್ಲೆಗೆ ಅಮ್ಮ
ಮಂಗಳೂರು ಮಾತಾ ಅಮೃತಾನಂದಮಯಿ ದೇವಿ ಅವರು ಮೇ 28 ಮತ್ತು 29ರಂದು ಮಂಗಳೂರಿನಲ್ಲಿ ನಡೆಯಲಿರುವ ‘ಅಮೃತಸಂಗಮ 2026’ ಹಾಗೂ ಬ್ರಹ್ಮಸ್ಥಾನಂ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಏಳು ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸುತ್ತಿರುವ ಅಮ್ಮನವರ ಸ್ವಾಗತಕ್ಕೆ ಭಕ್ತರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಕೇರಳದ ಹೊರಗೆ ಕರ್ನಾಟಕದಲ್ಲಿ ಆಯ್ಕೆಯಾದ ಏಕೈಕ ಸ್ಥಳ ಮಂಗಳೂರು ಎನ್ನುವುದು ವಿಶೇಷವಾಗಿದ್ದು, ಅಮ್ಮನವರಿಗೆ ಮಂಗಳೂರಿನ ಭಕ್ತರ ಮೇಲೆ ಇರುವ ಅಪಾರ ಮಮತೆಯ ಪ್ರತಿಫಲವೆಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ…