ಪುಣಚ ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ: ಮಹಮ್ಮದ್ ಬಡಗನ್ನೂರು ಆರೋಪ
ಪುತ್ತೂರು: ಪುತ್ತೂರಿನಲ್ಲಿ ಶಾಸಕರ ನೇತೃತ್ವದಲ್ಲಿ ದಾಖಲೆ ಸಂಖ್ಯೆಯ ಅಕ್ರಮ-ಸಕ್ರಮ ಮಂಜೂರು, 94ಸಿ, ಸಿಸಿ ಹಕ್ಕುಪತ್ರ ವಿತರಣೆಯ ಕಾರ್ಯ ನಡೆಯುತ್ತಿದ್ದು, ಅದನ್ನು ಸಹಿಸದ ಬಿಜೆಪಿಯು ಪುಣಚದ ಪರಿಶಿಷ್ಟ ಪಂಗಡದ 3 ಕುಟುಂಬಗಳ ಹಕ್ಕುಪತ್ರದ ವಿಚಾರದಲ್ಲಿ ಕೀಳುಮಟ್ಟದ ರಾಜಕೀಯ ಪ್ರದರ್ಶಿಸಿ ಪ್ರತಿಭಟನೆಯ ನಾಟಕ ಮಾಡಿದೆ ಎಂದು ಪುತ್ತೂರು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಆರೋಪಿಸಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪುತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಬಡವರ ಕಣ್ಣೀರು ಒರೆಸುವ ಕಾರ್ಯ…