ಹಿಜಾಬ್ ಪ್ರೇಮಿ ರಾಜ್ಯಸರಕಾರದ ವಿರುದ್ಧ ಯುವಶಕ್ತಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ – ವಿಶ್ವ ಹಿಂದೂ ಪರಿಷದ್
ಕರ್ನಾಟಕ ಸರಕಾರದ ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯುವ ಆದೇಶ ಖಂಡನೀಯ, ಶಾಲಾ ಕಾಲೇಜುಗಳು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಮಾನತೆಯ ಕೇಂದ್ರಗಳಾಗಿರಬೇಕು, ಶಾಲಾ ಕಾಲೇಜುಗಳ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಸರಕಾರವೇ ಮತಾಂಧತೆಯನ್ನು ಶಾಲಾ ಕಾಲೇಜುಗಳ ಒಳಗೆ ತರುತ್ತಿರುವುದು ಅಕ್ಷಮ್ಯ ಅಪರಾಧ. ಇದು ಕೇವಲ ಹಿಜಾಬ್ ಗೆ ನೀಡಿದ ಆದೇಶವಲ್ಲ ಬದಲಿಗೆ ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆಯನ್ನು ಅಂತ್ಯಗೊಳಿಸುವುದೇ ಸರಕಾರದ ಉದ್ದೇಶವಾಗಿದೆ. ಇದು ಓಲೈಕೆ ರಾಜಕಾರಣದ ಪರಮಾವಧಿ. ವಿದ್ಯಾರ್ಥಿಗಳ ನಡುವೆ ವಿಷಬೀಜ ಬಿತ್ತುತ್ತಿರುವ ಹಿಜಾಬ್ ಪ್ರೇಮಿ ಕರ್ನಾಟಕ ಸರಕಾರದ ಈ ನಿರ್ಧಾರವನ್ನು ಯುವಜನತೆ…