ಗುರುಪುರ ಹೋಬಳಿಯಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಿ ಸಿಪಿಐಎಂ ನಿಂದ ಪಾದಯಾತ್ರೆ

ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರ ಬಲಪಡಿಸಲು ಆಗ್ರಹ ಗಂಜಿಮಠ ಆರೋಗ್ಯ ಕೇಂದ್ರವನ್ನು ಗುರುಪುರ ಹೋಬಳಿಯ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಹೋಬಳಿಯ ಕುಪ್ಪೆಪದವು, ಕೊಂಪದವು, ವಾಮಂಜೂರು ಆರೋಗ್ಯ ಕೇಂದ್ರಗಳಿಗೆ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಜಿಲ್ಲೆಯಲ್ಲಿ‌ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ಗುರುಪುರ ವಲಯ ಸಮಿತಿ ನೇತೃತ್ವದಲ್ಲಿ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದವರಗೆ ಹಕ್ಕೊತ್ತಾಯ ಪಾದಯಾತ್ರೆ ನಡೆಯಿತು….

Read More

ಕಾಸರಗೋಡು ಗೋ-ಕುಟೀರಕ್ಕೆ ಲಾಂಛನ: ಹಿರಿಯ ಕಲಾವಿದ ಜಿ.ಎಂ. ಹೆಗಡೆ ತಾರಗೋಡ ರಚನೆ

ಕಾಸರಗೋಡು:- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ. ),ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ- ಕುಟೀರ”ವನ್ನು ಸದಾ ನೆನಪಿಸುವ ಲಾಂಛನ (ಲೋಗೋ )ವನ್ನು ಖ್ಯಾತ ಹಿರಿಯ ಚಿತ್ರ ಕಲಾವಿದ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿ.ಎಂ.ಹೆಗಡೆ ತಾರಗೋಡ ಅವರು ರಚಿಸಿದ್ದಾರೆ. ಕರ್ನಾಟಕ ಕಲಾ ವಲಯದಲ್ಲಿ ಜಿ.ಎಂ. ಹೆಗಡೆ ತಾರಗೋಡ ಶಿರಸಿ ತಮ್ಮ ಕಲಾ ಪ್ರಕಾರಗಳ ಸಾಂಪ್ರದಾಯಿಕವಲ್ಲದೇ, ಆಧುನಿಕ ಶೈಲಿ, ನವ್ಯ ಹಾಗೂ ಸಂಪ್ರದಾಯಗಳ ಮಿಶ್ರಣದ ಶೈಲಿ ಇವರದೇ ಶೈಲಿಯಲ್ಲಿ…

Read More

ಮಲಯಾಳ ಭಾಷಾ ಬಿಲ್ಸ್ – 2025 ಕೇಂದ್ರ ಸರಕಾರದ ಭಾಷಾ ಅಲ್ಪ ಸಂಖ್ಯಾಕ ಸಹಾಯಕ ಆಯುಕ್ತರಿಂದ ಕೇರಳ ಸರಕಾರಕ್ಕೆ ಮರು ಪರಿಶೀಲಿಸಲು ಆದೇಶ ಪತ್ರ

ಕೇರಳ ಸರಕಾರವು (ಮಲಯಾಳ ಭಾಷಾ ಬಿಲ್ಸ್- 2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡಲು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸುತ್ತಿದೆ. ಭಾಷಾ ಅಲ್ಪಸಂಖ್ಯಾಕರ ರಕ್ಷಣೆಗೆ ಸಂವಿಧಾನವು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ ಹಕ್ಕುಗಳನ್ನು ವ್ಯವಸ್ಥಿತಗೊಳಿಸಿದೆ.ಭಾಷಾ ಅಲ್ಪಸಂಖ್ಯಾಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ – ಕಾನೂನುಗಳನ್ನು ರೂಪಿಸಬೇಕಾಗುತ್ತದೆ. ಭಾಷಾ ಅಲ್ಪ ಸಂಖ್ಯಾಕರ ಮಕ್ಕಳಿಗೆ…

Read More

ಸಾಮಾಜಿಕ ಜಾಲತಾಣಗಳಲ್ಲಿ ಭಯ ಹರಡುವ ಸಂದೇಶದ ವಿರುದ್ಧ ಕಠಿಣ ಕ್ರಮಕ್ಕೆ ಸ್ವೀಕರ್ ಯು.ಟಿ.ಖಾದರ್ ಸೂಚನೆ

ಮಂಗಳೂರು:ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಿಡಿಕೇಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭಾಧ್ಯಕ್ಷ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನ‌ರ್ ಜೊತೆ ಮಾತುಕತೆ ನಡೆಸಿರುವ ಸಭಾಧ್ಯಕ್ಷ ಯು.ಟಿ.ಖಾದರ್, ಉಳ್ಳಾಲದಲ್ಲಿ ಸರ್ವ ಧರ್ಮೀಯರು ಸೌಹಾರ್ದಯುತ ಸಹಬಾಳ್ವೆ ನಡೆಸುತ್ತಿದ್ದು ಈ ರೀತಿಯ ಬೆದರಿಕೆ ಪೋಸ್ಟ್ ಗಳ ಮೂಲಕ ಕೋಮು ಸೌಹಾರ್ದವನ್ನು ಕದಡುವ ಹುನ್ನಾರದ ಬಗ್ಗೆ ಪೋಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

Read More

ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಉದ್ಘಾಟನೆ, ಸಾಧಕರಿಗೆ ವಿಶೇಷ ಸನ್ಮಾನ

ಮಂಗಳೂರು: ಯಕ್ಷ ಸ್ನೇಹ ಕಲಾಪ್ರತಿಷ್ಠಾನ (ರಿ) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಲೆ ಅಷ್ಟಾಹ ಸಂಭ್ರಮ ಯಕ್ಷಮಂಜರಿ ಆದಿತ್ಯವಾರ ಮಧ್ಯಾಹ್ನ ಭಾರತ ಮಾತ ಪೂಜನೆಯೊಂದಿಗೆ ಪ್ರಾರಂಭಗೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಜಯಪ್ರಕಾಶ್ ಹೆಗ್ಡೆ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರಸಾದ್ ಕೊಂಚಾಡಿ, ನಾಗಕನ್ನಿಕಾ ದೇವಸ್ಥಾನದ ಭಜನಾ ಮಂಡಳಿಯ ಅಧ್ಯಕ್ಷರಾದ ಸಾವಿತ್ರಿ ಕೋಟ್ಯಾನ್, ಇವರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು….

Read More

ಮಂಗಳೂರಿನ ಅಸ್ಮಿತ ಸ್ವಿಮ್ಮಿಂಗ್ ಲೀಗ್: ಉದ್ಘಾಟಿಸಿದ ದ್ರೋಣಾಚಾರ್ಯ ಪುರಸ್ಕೃತ ತರಬೇತುದಾರ ಶ್ರೀ ಪ್ರದೀಪ್ ಕುಮಾರ್

ಮಹಿಳಾ ಕ್ರೀಡಾಪಟ್ಟುಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಹಾಗೂ ಮಹಿಳೆಯರಿಂದ ಕ್ರೀಡಾ ರಂಗಕ್ಕೆ ಹೆಚ್ಚಿನ ಕೊಡುಗೆ ಸಿಗುವಂತಾಗಬೇಕು ಎಂದು ದ್ರೋಣಾಚಾರ್ಯ ಪುರಸ್ಕೃತ, ಈಜು ಕ್ರೀಡೆಯಲ್ಲಿ ಹಲವಾರು ಒಲಂಪಿಯನ್ ಈಜು ಪಟ್ಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ತರಬೇತುದಾರ ಶ್ರೀ ಪ್ರದೀಪ್ ಕುಮಾರ್ ಹೇಳಿದರು. ಅವರು ಮಾರ್ಚ್ 01ರಂದು ಮಂಗಳೂರಿನ ಎಮ್ಮೆಕೆರೆಯ ಸ್ಮಾರ್ಟ್ ಸಿಟಿ ಈಜುಕೊಳದಲ್ಲಿ ಜರುಗಿದ ಅಸ್ಮಿತ 2026 ಈಜು ಸ್ಪರ್ಧೆಯ ಲೀಗ್ ನ್ನು ಉದ್ಘಾಟಿಸಿದರು. ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಖೇಲೋ ಇಂಡಿಯಾ ಜಂಟಿಯಾಗಿ ಮಹಿಳೆಯರಿಗಾಗಿ ಆಯೋಜಿಸಿರುವ…

Read More

ಪುತ್ತೂರಿನ ಮೋಕ್ಷಿತಾ ಬಿ ಗೆ ಪವರ್‌ಲಿಫ್ಟಿಂಗ್‌ನಲ್ಲಿ ಡಬಲ್ ಬೆಳ್ಳಿ

ಮಂಗಳೂರು : ಪುತ್ತೂರಿನ ಮೋಕ್ಷಿತಾ ಬಿ ಪವರ್‌ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಮೆಚ್ಚುಗೆಯ ಸಾಧನೆ ತೋರಿದ್ದು, ಡಬಲ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮನೋರಮಾ ಬಿ ಅವರ ಪುತ್ರಿಯಾದ ಮೋಕ್ಷಿತಾ, ಫೆ. 14 ರಲ್ಲಿ ನಡೆದ ಕರ್ನಾಟಕ ಜಿಲ್ಲಾ ಸೀನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಮುಂದೆ ಫೆ. 27 ರಂದು ನಡೆದ ಕರ್ನಾಟಕ ರಾಜ್ಯ ಓಪನ್ ಜೂನಿಯರ್–ಸೀನಿಯರ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ ಶಿಪ್ ನಲ್ಲಿಯೂ ಬೆಳ್ಳಿ ಪದಕ ಪಡೆದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ . ಇವರು ಗರುಡಿ ಎಕ್ಸೆಲ್…

Read More

ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ ದಾಖಲೆ ಸಡಿಲಿಕೆಗೆ ಮನವಿ ಮಾಡಿದ ಭೋವಿ ಮುಖಂಡ ಪವನ್ ಕುಮಾರ್ ಶಿರ್ವ

ಇಂದು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೆ ಗೌಡ ಅವರನ್ನು ಬೆಂಗಳೂರು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಆಗುವ ಸಮಸ್ಯೆಯ ಬಗ್ಗೆ ಅವರಿಗೆ ವಿಸ್ತಾರವಾಗಿ ಪವನ್ ಕುಮಾರ್ ಶಿರ್ವ ಅವರು ವಿವರಿಸಿದರು.. ಈ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿ ಅವರಿಗೆ ಮತ್ತು ಸಚಿವರಿಗೆ ಜಾತಿ ಪ್ರಮಾಣ ಪತ್ರಕ್ಕೆ…

Read More

ನುಡಿದಂತೆ ನಡೆದ ಕೇರಳ ಸರಕಾರ, 178 ಮನೆಗಳಿಗೆ ಆಸರೆಯಾದ ಮುಖ್ಯಮಂತ್ರಿ

ಕಲ್ಪೆಟ್ಟ ಮುಂಡಕ್ಕೈ–ಚೂರಲ್ಮಲಾ ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡ ಕುಟುಂಬಗಳಿಗೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತಾ, ರಾಜ್ಯ ಸರ್ಕಾರವು ವಾಯನಾಡ್ ಮಾದರಿ ಟೌನ್‌ಶಿಪ್ ಯೋಜನೆಯ ಮೊದಲ ಹಂತವನ್ನು ಭಾನುವಾರ ಪೂರ್ಣಗೊಳಿಸಿ 178 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದೆ. ಈ ವಿಪತ್ತು 2024 ಜುಲೈ 30ರಂದು ಸಂಭವಿಸಿ ಸುಮಾರು ಎರಡು ವರ್ಷಗಳು ಕಳೆದಿವೆ.ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಲ್ಪೆಟ್ಟ ಎಲ್ಸ್ಟನ್ ಎಸ್ಟೇಟ್‌ನಲ್ಲಿ 64 ಹೆಕ್ಟೇರ್ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾದ ಟೌನ್‌ಶಿಪ್‌ನಲ್ಲಿ ಪ್ರತಿಯೊಬ್ಬ ಫಲಾನುಭವಿಗೂ ನೀಡಲಾದ ಏಳು ಸೆಂಟ್ ಜಮೀನಿನ ಹಕ್ಕುಪತ್ರಗಳನ್ನು ವಿತರಿಸಿದರು. ಜೊತೆಗೆ ವಿಪತ್ತಿನಿಂದ ಪ್ರಭಾವಿತರಾದ…

Read More

ಮಂಗಳೂರಿನ ಉರ್ವ ಕ್ರಿಕೇಟ್ ಮೈದಾನದಲ್ಲಿ ಮಾರ್ಚ್ 6 ರಿಂದ 8 ರ ವರೆಗೆ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಕ್ರಿಕೆಟ್ ಪಂದ್ಯಾಟ …. !

ಮಂಗಳೂರು:ಎಸ್. ಎಲ್. ಶೇಟ್ ಮತ್ತು ಎಂ. ರಘುನಾಥ ಶೇಟ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮಾರ್ಚ್ 6 ರಿಂದ 8 ನೇ ತಾರೀಕಿನ ತನಕ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಮಂಗಳೂರಿನ ಉರ್ವ ಕ್ರಿಕೇಟ್ ಮೈದಾನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಎಂ ಪ್ರಶಾಂತ್ ಶೇಟ್ ತಿಳಿಸಿದರು . ಅವರು ನಗರದ ಪತ್ರಿಕಾಭವದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ , ಈ ಕ್ರೀಡಾಕೂಟವನ್ನು ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ…..

Read More
error: Content is protected !!