ಮಂಜೇಶ್ವರದಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್: ಮತ್ತೊಬ್ಬ ಮರಳು ಮಾಫಿಯಾ ಬಂಧನ, ಟಿಪ್ಪರ್ ಲಾರಿ ವಶ
ಮಂಜೇಶ್ವರ: ನದಿ ಪಾತ್ರಗಳಲ್ಲಿ ಪರಿಸರ ನಾಶ ಮಾಡುತ್ತಿದ್ದ ಅನಧಿಕೃತ ಮರಳು ಮಾಫಿಯಾದ ಮತ್ತೊಬ್ಬ ಕಿರಾತಕ ಕುಂಬಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೀಂಜ ಜೋಡುಕಲ್ಲು ನಿವಾಸಿ ಗಿರೀಶ್ ಎ. (40) ಎಂಬಾತನನ್ನು ಕೇರಳ ನದಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ, ಸಾಗಾಟಕ್ಕೆ ಬಳಸಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೇರೂರು ಗ್ರಾಮದ ಚಿನ್ನಮೊಗರು ಮಾರ್ಗವಾಗಿ ಪಾಚ್ಚಾನಿ ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕುಂಬಳೆ ಪೋಲೀಸರ ತಂಡ ಅಡ್ಡಗಟ್ಟಿ ದಾಳಿ ನಡೆಸಿ ಸೆರೆ ಹಿಡಿದಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಕುಮ್ಮಕ್ಕಿನಿಂದ ಈ…
