ಅವ್ಯಸ್ಧೆಯಿಂದ ಸಾವು, ಕೂಡಲೇ ಪರಿಹಾರ ಘೋಷಿಸಿ-ಭೋವಿ ಮುಖಂಡ ಪವನ್ ಕುಮಾರ್ ಶಿರ್ವ

ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿರುವ ತಮಿಳುನಾಡು ಕಾರ್ಮಿಕನ ಸಾವಿಗೆ ಸರ್ಕಾರದ ಅವ್ಯವಸ್ಥೆಯೇ ನೇರ ಕಾರಣ… ಈ ಘಟನೆ ನಡೆದು ಎರಡು ದಿನಗಳಾದರೂ ಯಾವುದೇ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಪರಿಹಾರದ ಭರವಸೆ ನೀಡಿಲ್ಲ… ಇಂಥ ನಿರ್ಲಕ್ಷ ಸಲ್ಲದು.. ಅಲ್ಲಿರುವ ಅವ್ಯವಸ್ಥೆಯನ್ನು ಸರ್ಕಾರ ಮತ್ತು ಮೀನುಗಾರಿಕೆ ಇಲಾಖೆ ಕೂಡಲೇ ಸರಿಪಡಿಸಬೇಕು.. ಅಲ್ಲಿ ಎಲ್ಲಾ ಬಡ ಜನಾಂಗದವರೇ ನಾ ಹೊಟ್ಟೆಪಾಡಿಗೆ ದುಡಿದುಕೊಂಡಿದ್ದು ಸರ್ಕಾರದ ಅಭಿವೃದ್ಧಿಯ ವೈಫಲ್ಯದಿಂದ ಜನರು ಸಾವಿಗೀಡಾಗಬೇಕಾಗಿದೆ.. ಈ ಸಮಸ್ಯೆಯಿಂದ ಇನ್ನಷ್ಟು ಜೀವ ಬಳಿ ಪಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಮೃತ…

Read More

ಬೇಕೂರು ಬ್ರಹ್ಮಶ್ರೀ ಮೊಗೇರ ದೈವಸ್ಥಾನದಲ್ಲಿ ಫೆ.28-ಮಾ.1ರಂದು ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ

ಉಪ್ಪಳ : ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಬೇಕೂರು ಇದರ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವವು ಫೆಬ್ರವರಿ 28 ಮತ್ತು ಮಾರ್ಚ್ 1, 2026ರಂದು ಭಕ್ತಿ ಭಾವಪೂರ್ಣವಾಗಿ ಜರುಗಲಿದೆ. ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪಚ್ಲಂಪಾರೆ ಇದರ ಗೌರವಾಧ್ಯಕ್ಷರು,ಚೌಡಿ ಚಾಮುಂಡೇಶ್ವರಿ ಆರಾಧಕರು ಹಾಗು ಶ್ರೀ ದೈವದ ಮಧ್ಯಸ್ಥರಾದ ಶ್ರೀ ಬಾಬು ಯು. ಪಚ್ಲಂಪಾರೆ ಅವರ ಕಾರ್ಮಿಕತ್ವದಲ್ಲಿ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ ನಡೆಯಲಿದ್ದು. ಫೆಬ್ರವರಿ 28ರಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ ,…

Read More

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡ್ ನಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ: ಕಟ್ಟುನಿಟ್ಟಿನ ಕ್ರಮಕ್ಕೆ ಸ್ಥಳೀಯರ ಆಗ್ರಹ

ಬಂದ್ಯೋಡ್: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡ್ ಪ್ರದೇಶದಲ್ಲಿ ಕಟ್ಟಡ ಮಾಲೀಕರು ಮತ್ತು ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿರುವ ಪರಿಣಾಮ ಸಾರ್ವಜನಿಕರಿಗೆ ನಡೆದು ಹೋಗಲು ತೀವ್ರ ತೊಂದರೆ ಉಂಟಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಜನರು ರಸ್ತೆ ಮೇಲೆ ಇಳಿದು ನಡೆದು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಅಂಗಡಿ ಮಾಲೀಕರು ಅಂಗಡಿಗಳ ಒಳಗೆ ಇರಬೇಕಾದ ವಸ್ತುಗಳನ್ನು ಹೊರಗೆ ಇಟ್ಟು ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಪಾದಚಾರಿ ಮಾರ್ಗ ಬಳಕೆ ಅಸಾಧ್ಯವಾಗಿದ್ದು, ಅಪಘಾತದ ಭೀತಿ ಹೆಚ್ಚಾಗಿದೆ…

Read More

ಸಾರ್ವಜನಿಕ ಚರಂಡಿಗೆ ವಸತಿ ಸಮುಚ್ಚಯದ ಶೌಚಾಲಯ ತ್ಯಾಜ್ಯ: ಸತ್ಯಾಂಶವನ್ನು ಮುಚ್ಚಿ ಹಾಕಲು ಚರಂಡಿಯ ಮೇಲೆ ರಾತ್ರೋರಾತ್ರಿ ಕಾಂಕ್ರೀಟ್ : ಅಧಿಕಾರಿಗಳಿಗೆ ಕಣ್ಣಿದ್ದೂ ಜಾಣ ಕುರುಡುತನ

​ಮಂಜೇಶ್ವರ: ಮಂಜೇಶ್ವರ ಒಳಪೇಟೆಯ ದಕ್ಷಿಣ ಭಾಗದಲ್ಲಿ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಸ್ಥಳದಲ್ಲಿರುವ ಚರಂಡಿಗೆ ಖಾಸಗಿ ವಸತಿ ಸಮುಚ್ಚಯವೊಂದರ ಶೌಚಾಲಯದ ತ್ಯಾಜ್ಯ ನೀರನ್ನು ನೇರವಾಗಿ ಹರಿಬಿಡಲಾಗುತ್ತಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಆರೋಗ್ಯಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಹಲವು ರೀತಿಯ ಅನುಮಾನಕ್ಕೆ ಕಾರಣವಾಗಿದೆ. ಮಂಜೇಶ್ವರ ಒಳಪೇಟೆಯ ದಕ್ಷಿಣ ಭಾಗದ ಅಂಗಡಿ ಮುಂಭಾಗ…

Read More

ಕೊಂಡೆವೂರು ಮಠದಲ್ಲಿ ಪ್ರತಿಷ್ಠಾ ವರ್ಧಂತಿ ಹಾಗೂ ನವ ಚಂಡಿಕಾ ಯಾಗ ಸಮಾಪ್ತಿ

ಕೊಂಡೆವೂರು ಮಠದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗಾಯತ್ರಿ ದೇವಿ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ, “ನವ ಚಂಡಿಕಾ ಯಾಗ” ಮತ್ತು ಶ್ರೀ ಗಾಯತ್ರಿ ದೇವಿಯ ಗರ್ಭಗುಡಿಯ ಜೀರ್ಣೋದ್ಧಾರಕ್ಕಾಗಿ ನಿಧಿ ಸಮರ್ಪಣಾ ಕಾರ್ಯಕ್ರಮವು 2026 ಫೆಬ್ರವರಿ 22ರಂದು ಭಕ್ತಿಭಾವಪೂರ್ಣವಾಗಿ ಯಶಸ್ವಿಯಾಗಿ ನೆರವೇರಿತು. ಈ ಎಲ್ಲಾ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಕಟೀಲು ಪರಂಪರ ಮುಖ್ಯ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ…

Read More

ಪದಿನಾಜಿ ಅವತಾರದ ದೈವಶ್ರೀ ಕುಪ್ಪೆ ಪಂಜುರ್ಲಿ

ಬಡಕಾಯಿ ರಾಜ್ಯೋ, ಬಳ್ಳಾಲ್ ಗಂಗೆಡ್ , ಗಿರಿಟ್ ಗಿರಿಮುಟ್ಟು ಸ್ವಾಮಿ, ಗದ್ದಿಗೆಡ್ ಗದ್ದಿಗೆದ ಬಂಟೆ, ವರಾಹ ಮೂರ್ತಿ ದೈವ ಕುಪ್ಪೆ ಪಂಜುರ್ಲಿ 🙏 ಈ ದೈವಕ್ಕೆ ಹರಕೆ ಹೇಳಿದರೆ, ಕೋರ್ಟು ಕಚೇರಿ, ನ್ಯಾಯ ಕೂಟದ, ವಿಷಯಗಳು ಇದ್ದರೆ ಪರಿಹಾರ ಆಗುತ್ತದೆ ಎಂಬ ನಂಬಿಕೆ 🙏 ಕಾಡ್ ಕಪ್ಪಾನಗ, ಊರು ಬೊಲ್ಪಾನಗ, ಕಾಡ್ ಸೇರುವೆ ಪಂದ್ ಕಟ್ಟಿ ಕೋಲದಲ್ಲಿ ದೈವ ಮೊಗವನ್ನು ಕಲಚದೇ, ಸೂರ್ಯ ಉದಯಿಸುವ ಮುನ್ನ ದೈವ ನೇಮ ಬಿರಿಯುವುದು ಪದ್ಧತಿ 🙏 ಎಲ್ಲಾ ದೈವಗಳು ಒಂದೇ…

Read More

ಡಾಕ್ಟರೆಟ್ ಪದವಿ ಪಡೆದ ನಿರೀಕ್ಷಾ ಪದ್ಮನಾಭ: ತೀಯಾ ಸಮುದಾಯಕ್ಕೆ ಹೆಮ್ಮೆ

ಮಂಜೇಶ್ವರ: ಹೊಸಂಗಡಿ ನಿವಾಸಿ ಚಂಚಲಾಕ್ಷಿ ಪದ್ಮನಾಭ ಅವರ ಪುತ್ರಿ ನಿರೀಕ್ಷಾ ಪದ್ಮನಾಭ ಅವರು ಡಾಕ್ಟರೆಟ್ ಪದವಿ ಪಡೆದು ತೀಯಾ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ. ನಿರೀಕ್ಷಾ ಪದ್ಮನಾಭ ಅವರ ಈ ಶೈಕ್ಷಣಿಕ ಸಾಧನೆಗೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿ, ನಿರೀಕ್ಷಾ ಅವರ ಸಾಧನೆ ಸಮುದಾಯಕ್ಕೆ ಪ್ರೇರಣೆಯಾಗಿದ್ದು, ಅವರು ಇನ್ನಷ್ಟು ಉನ್ನತ ವಿದ್ಯಾಭ್ಯಾಸ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಳಿ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು. ನಿರೀಕ್ಷಾ ಅವರ…

Read More

ಸುಖಾಂತ್ಯ ಕಂಡ ಐಕಳ ಮತ್ತು ಕನ್ಯಾನರ ಮನಸ್ತಾಪಗಳು

ಮುಂಬೈ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿಯವರು ಮನ ನೊಂದು ಇನ್ನು ಮುಂದೆ ಸಮಾಜ ಸೇವೆಗೆ ತನ್ನ ಯಾವುದೇ ಕೊಡುಗೆ ಇಲ್ಲವೆಂದು ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕವಾಗಿ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಮಾಜಿ ಸಂಸದರಾದ ಗೋಪಾಲ್ ಶೆಟ್ಟಿ, ಬರೋಡ ಶಶಿಧರ ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರ್, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್ , ಪಟ್ಲ ಸತೀಶ್ ಶೆಟ್ಟಿ, ಕೆ. ಕೆ. ಶೆಟ್ಟಿ ಅಹ್ಮದ್ ನಗರ, ಅಶೋಕ್ ಶೆಟ್ಟಿ ಬೆಳ್ಳಾಡಿ,…

Read More

ಮರೋಳಿ ಶಾಂತಿನಗರದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ: ಶಾಸಕ ವೇದವ್ಯಾಸ್ ಕಾಮತ್ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ಸೂರ್ಯ ನಾರಾಯಣ ದೇವಸ್ಥಾನ ಸಮೀಪದ 37ನೇ ವಾರ್ಡಿನ ಶಾಂತಿನಗರ ರುಕ್ಕಯ್ಯ ದೇವಾಡಿಗ ಮನೆ ಪರಿಸರದ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ್ ಕಾಮತ್‌ ರವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಸ್ಥಳೀಯರ ಮನವಿ ಮೇರೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 28 ಲಕ್ಷ ರೂ ವೆಚ್ಚದಲ್ಲಿ ರಸ್ತೆ, ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಯು ನಡೆಯಲಿದೆ. ಇದು ತುರ್ತಾಗಿ ನಡೆಯಬೇಕಿರುವ ಕಾಮಗಾರಿಯಾಗಿದ್ದು ಈ ಹಿಂದೆಯೇ…

Read More

ಮಂಗಳೂರಿನಲ್ಲಿ ಮತ್ತೆ ಬಾಂಬ್ ಆತಂಕ: ಬಿಜೈ ಲೂರ್ಡ್ಸ್ ಸ್ಕೂಲಿಗೆ ಬೆದರಿಕೆ ಇಮೇಲ್

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ಬಾಂಬ್ ಬೆದರಿಕೆ ಬಂದಿದೆ.ಲೂರ್ಡ್ಸ್ ಸ್ಕೂಲಿಗೆ ಬಾಂಬ್‌ ಬೆದರಿಕೆ ಇಮೇಲ್ ಮೂಲಕ ಬಂದಿದ್ದು , ಪೊಲೀಸರು ತಪಾಸಣೆ ನಡೆಸಿದ್ದಾರೆ. ನಗರದ ಪ್ರತಿಷ್ಠಿತ ಬಿಜೈ ಲೂರ್ಡ್ಸ್ ಸ್ಕೂಲಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಶಾಲೆಯ ಇಮೇಲ್ ವಿಳಾಸಕ್ಕೆ ಬೆದರಿಕೆ ಬಂದಿದ್ದು ಪೊಲೀಸರಿಗೆ ದೂರು ನೀಡಲಾಗಿದೆ. ಕದ್ರಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಬಂದಿದ್ದು ಪರಿಶೀಲನೆ ಕೈಗೊಂಡಿದ್ದಾರೆ. ಇತ್ತೀಚೆಗೆ ಮಂಗಳೂರಿನ ಕೋರ್ಟಿನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಇಮೇಲ್ ಬಂದಿತ್ತು. ಪೊಲೀಸರು ಪರಿಶೀಲನೆ ಕೈಗೊಂಡು…

Read More
error: Content is protected !!