ಕರಾಡ ಬ್ರಾಹ್ಮಣ ಸಮಾಜಕ್ಕೆ ಬೆಂಗಳೂರಿನಲ್ಲಿ ನಿವೇಶನ; ಶಾಸಕ ಅಶೋಕ್ ರೈ ಮೂಲಕ ಮನವಿ ಸಲ್ಲಿಸಿದ ಬ್ರಾಹ್ಮಣ ಸಮಾಜ
ಪುತ್ತೂರು:ಕರಾವಳಿ ಮೂಲದ ಕರಾಡ ಬ್ರಾಹ್ಮಣ ಸಮಾಜದ ಸಮುದಾಯದ ಜನಾಂಗದವರು ಬೆಂಗಳೂರು ನಗರದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕವಾಗಿ ನಮ್ಮ ಸಮಾಜದವರು ನೆಲೆಸಿರುತ್ತಾರೆ. ಶೃಂಗೇರಿ ಜಗದ್ಗುರುಗಳು ಹಾಗೂ ಶೃಂಗೇರಿ ಮಠದ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಕರಾಡ ಬ್ರಾಹ್ಮಣ ಸಮುದಾಯದವರು ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಸಮುದಾಯದವರು ಯಾವುದೇ ಸಭೆ-ಸಮಾರಂಭಗಳನ್ನು ನಡೆಸಬೇಕೆಂದಲ್ಲಿ ಖಾಸಗಿ ರವರ ಮೊರೆ ಹೋಗುವಂತಹ ಸಂದರ್ಭ ನಿರ್ಮಾಣವಾಗಿರುತ್ತದೆ. ಈ ಸಮಾಜದವರು ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಇನ್ನಿತರೆ ಗೌರವ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ…