ಕೈಯ ತುತ್ತು ಯಾರ ಬಾಯಿಗೆ?

ರಾತ್ರಿ ಸುಮಾರು ಎಂಟು ಗಂಟೆ ಆಗಿರಬಹುದು, ವಿಜಯ್ ನ ಮನೆಯಲ್ಲಿ ಊಟಕ್ಕೆ ತಯಾರಿ ನಡೆಯುತ್ತಿತ್ತು. ಮಡದಿ ಪೂಜಾ ಊಟಕ್ಕೆ ಬನ್ನಿ ಎಂದು ಕರೆದಾಗ, ವಿಜಯ್. “ ಆ, ಸ್ವಲ್ಪವೇ ಅಡಿಕೆ ಇದೆ ಅದನ್ನು ಸುಲಿದು ಮುಗಿಸಿ ಬರುತ್ತೇನೆ. ಮಗನನ್ನು ಕರೆ” ಎಂದ. ವಿಜಯನ ಅಮ್ಮ ಆಗಷ್ಟೇ ದೇವರ ನಾಮ ಹೇಳಿ ಮುಗಿಸಿ, ಓದುತ್ತಿದ್ದ ಮೊಮ್ಮಗನನ್ನು ಕರೆದು ಬಂದರು. ತಾನು ಬೆಳೆದ ಅಡಿಕೆ, ಸುಲಿಯಲು ಹಾಕಿದ್ದಷ್ಟನ್ನು ಮುಗಿಸಿ, ಕೈಕಾಲು ತೊಳೆದು ಇನ್ನೇನು ಒಳಗೆ ಬರುವಷ್ಟರಲ್ಲಿ, ಅವನ ಗೆಳೆಯ ಗುರು,…

Read More

ರಸಗೊಬ್ಬರ ದರ ಏರಿಕೆ ವಿರುದ್ಧ ರೈತಸಂಘದ ಪ್ರತಿಭಟನೆ:“ಕೇಂದ್ರ ಸರ್ಕಾರದ ರೈತದ್ರೋಹಿ ನೀತಿ ಖಂಡನೀಯ” – ಕೆ.ಆರ್. ಜಯಾನಂದ

ಬಾಯಾರು : ರಸಗೊಬ್ಬರದ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ರೈತಸಂಘದ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಬಾಯಾರು ಪದವಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆಯನ್ನು ರೈತಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿ, ರಸಗೊಬ್ಬರ ದರ ಏರಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಚಂದ್ರಹಾಸ ಶೆಟ್ಟಿ ಮಾಸ್ಟರ್ ವಹಿಸಿದ್ದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ…

Read More

ಪತ್ತನಾಜೆ

ತುಳುನಾಡಿನ ಸಂಸ್ಕೃತಿ ಮತ್ತು ಪ್ರಕೃತಿಯ ನಡುವಿನ ಪವಿತ್ರ ಕೊಂಡಿ​ತುಳುನಾಡಿನ ಮಣ್ಣಿನ ವಾಸನೆ ಮತ್ತು ದೈವಾರಾಧನೆಯ ದೈವಿಕ ಸ್ಪರ್ಶವನ್ನು ಹತ್ತಿರದಿಂದ ಅನುಭವಿಸಿದವರಿಗೆ, ‘ಪತ್ತನಾಜೆ’ ಎನ್ನುವುದು ಕೇವಲ ಕ್ಯಾಲೆಂಡರಿನ ಒಂದು ದಿನಾಂಕವಲ್ಲ; ಬದಲಾಗಿ, ಅದು ಪ್ರಕೃತಿಯ ಲಯದೊಂದಿಗೆ ಮನುಷ್ಯನ ಬದುಕು ಬೆರೆತು ಮಿಡಿಯುವ ಒಂದು ಪವಿತ್ರ ಪರಿವರ್ತನಾ ಕಾಲ. ಮಳೆಗಾಲದ ಮುನ್ಸೂಚನೆಯನ್ನು ಹೊತ್ತು ಬರುವ ಈ ದಿನ, ಸೌರಮಾನ ಪಂಚಾಂಗದ ಅನ್ವಯ ತುಳುವರ ಪಾಲಿಗೆ ಒಂದು ಯುಗದ ಮುಕ್ತಾಯ ಮತ್ತು ನವಚೈತನ್ಯದ ಹೊಸ ಆರಂಭದ ಸಂಕೇತವಾಗಿದೆ. ​ನಮ್ಮ ಹಿರಿಯರು ರೂಪಿಸಿದ…

Read More

ಮುಕ್ಕದಲ್ಲಿ ಭೀಕರ ರಸ್ತೆ ಅಪಘಾತ:ಲಾರಿ ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು; ಇಬ್ಬರಿಗೆ ಗಾಯ

ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಮುಕ್ಕ ಚೆಕ್‌ಪೋಸ್ಟ್ ಸಮೀಪದ ಖಂಡಿಗೆ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಬಾಗಲಕೋಟೆ ಮೂಲದ, ಸದ್ಯ ಕಾವೂರು ಪಂಜಿಮೊಗರುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಭೀಮಾ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅವರ ಸಹೋದ್ಯೋಗಿಗಳಾದ ಸಂಗಮೇಶ ಮತ್ತು ಮಂಜುನಾಥ ಎಂದು ತಿಳಿದುಬಂದಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಮಾ ಹಾಗೂ ಇಬ್ಬರು ಸಹೋದ್ಯೋಗಿಗಳು ಕೆಲಸ ಮುಗಿಸಿಕೊಂಡು ಒಂದೇ ಬೈಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ…

Read More

ಪರಿಸರವನ್ನು ಸಂರಕ್ಷಿಸಲು ಪರಿಸರದ ಪರಿಚಯ ಅಗತ್ಯ – ಪ್ರೊ.ಎಂ ದೇವಿಪ್ರಸಾದ್

ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿ ಶಾಸ್ತ್ರ ವಿಭಾಗ ಹಾಗೂ ನ್ಯಾಚುರಲ್ ಹಿಸ್ಟರಿ ಅಸೋಸಿಯೇಷನ್ ವತಿಯಿಂದ ಜೀವ ವೈವಿಧ್ಯತಾ ದಿನದ ಅಂಗವಾಗಿ ಮೇ 22 ಮತ್ತು 23ರಂದು “ವೈವಿಧ್ಯ-2026” ಹೆಸರಿನ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಡೀನ್ ಪ್ರೊ. ಮಂಜಯ್ಯ ವಹಿಸಿದ್ದರು. ಶಿಕ್ಷಣ ತಜ್ಞ ಹಾಗೂ ಪರಿಸರ ಸಂರಕ್ಷಣಾವಾದಿ ದೇವಿ ಪ್ರಸಾದ್ ಕೆ.ಎನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಜೀವ ವೈವಿಧ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳ…

Read More

ಕಪ್ಪೆಚಿಪ್ಪು ದುರಂತದಲ್ಲಿ ಒಂದೇ ಕುಟುಂಬದ 10 ಮಂದಿ ಬಲಿ: ಬದುಕುಳಿದ ಇಬ್ಬರು

ಉಡುಪಿ: ಭಟ್ಕಳದಲ್ಲಿ ಸಂಭವಿಸಿದ ಕಪ್ಪೆಚಿಪ್ಪು ದುರಂತದಿಂದ ಪಾರಾದ ಮಹಾದೇವಿ ನಾಯ್ಕ್ ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಾಯಿಯ ಆರೈಕೆಯಲ್ಲಿ ತೊಡಗಿರುವ ಪುತ್ರಿ ಶೋಭ, ದುರಂತದ ಕುರಿತು ಭಾವುಕರಾಗಿ ಮಾತನಾಡಿ, “ಕಪ್ಪೆಚಿಪ್ಪು ಆರಿಸಲು ಹೋಗ್ತೇನೆ, ನೀನು ಮನೆಗೆ ಬಾ ಎಂದು ಅಮ್ಮ ಕರೆದಿದ್ದರು. ಆದರೆ ನಾನು ಮನೆಗೆ ಬರುವಷ್ಟರಲ್ಲಿ ದುರಂತ ಸಂಭವಿಸಿತ್ತು” ಎಂದು ಕಣ್ಣೀರಿಟ್ಟರು. “ನಮ್ಮ ಕುಟುಂಬದವರನ್ನು ಕಳೆದುಕೊಂಡ ನೋವನ್ನು ಸಹಿಸಲು ಆಗುತ್ತಿಲ್ಲ. ನನ್ನ…

Read More

ಕೋಡಿಕಲ್‌ನಲ್ಲಿ ದ್ವಿಚಕ್ರ ವಾಹನ ಸವಾರರ ದುಷ್ಕೃತ್ಯ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳೂರಿನ ಕೋಡಿಕಲ್ ಉರ್ವ ಪ್ರದೇಶದಲ್ಲಿ ನಡೆದಿದೆ. ಉರ್ವ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಹನುಮಂತ ಕಂಟಿ ಹಾಗೂ ಹೋಮ್‌ಗಾರ್ಡ್ ಸಿಬ್ಬಂದಿಯೊಬ್ಬರು ಮೊನ್ನೆ ರಾತ್ರಿ ಸುಮಾರು 2 ಗಂಟೆಗೆ ಕೋಡಿಕಲ್‌ನ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬಳಿ ಗಸ್ತು ತಿರುಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರನ್ನು ತಪಾಸಣೆಗಾಗಿ ವಾಹನ ನಿಲ್ಲಿಸುವಂತೆ ಸೂಚಿಸಲಾಗಿದೆ. ಆದರೆ, ದ್ವಿಚಕ್ರ ವಾಹನದ ಹಿಂಬದಿ…

Read More

ಜೆಪ್ಪು ವಾರ್ಡಿನಲ್ಲಿ ತಡೆಗೋಡೆ ಪುನರ್ ನಿರ್ಮಾಣಕ್ಕೆ ಚಾಲನೆ:₹20 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆಯ 59ನೇ ಜೆಪ್ಪು ವಾರ್ಡಿನ ಸೂಟರ್‌ಪೇಟೆ 4ನೇ ಅಡ್ಡರಸ್ತೆ ಮತ್ತು ಕನಕರಬೆಟ್ಟು ಬಳಿ ತಡೆಗೋಡೆ ಕುಸಿದ ಭಾಗಕ್ಕೆ 20ಲಕ್ಷ ರೂ. ಅನುದಾನದಲ್ಲಿ ಪುನ‌ರ್ ನಿರ್ಮಾಣ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು. ನಂತರ ಮಾತನಾಡಿದ ಶಾಸಕರು, ಕಳೆದ ಮಳೆಗಾಲದಲ್ಲಿ ಈ ಭಾಗದ ಕೆಲವು ರಾಜಕಾಲುವೆಗಳಿಗೆ ಹಾನಿಯಾಗಿದ್ದರೆ, ಉಳಿದ ರಾಜಕಾಲುವೆಗಳು ಕೆಳ ಹಂತದಲ್ಲಿರುವುದು ಸಮಸ್ಯೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸುಮಾರು 300 ರಿಂದ 400 ಕೋಟಿಗೂ…

Read More

ಭಾರತದ ಅತೀ ವೇಗದ ಓಟಗಾರನಾದ ಪಂಜಾಬ್ ಅಥ್ಲೀಟ್: 100 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ

ರಾಂಚಿ: ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ಮೂಲಕ ಪಂಜಾಬ್‌ನ ಓಟಗಾರ ಗುರ್ವಿಂದರ್ ಸಿಂಗ್ ಸಂಚಲನ ಮೂಡಿಸಿದ್ದಾರೆ. 2026ರ ರಾಷ್ಟ್ರೀಯ ಅಥ್ಲೆಟಿಕ್ಸ್ ಸೀಮೆಷನ್ ಕಪ್‌ನ ಪುರುಷರ 100 ಮೀಟರ್ ಓಟದಲ್ಲಿ ಅವರು ಚಿನ್ನದ ಪದಕ ಗೆದ್ದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಶನ್ ಕಪ್ 2026 ಸ್ಪರ್ಧೆಯಲ್ಲಿ ಗುರ್ವಿಂದರ್ ಸಿಂಗ್ ಕೇವಲ 10.09 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿ ಭಾರತದ ಅತೀ ವೇಗದ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಿರ್ಸಾ…

Read More

ಹಿರಿಯ ನಾಟಕಕಾರ, ಸಿನಿಮಾ ನಿರ್ಮಾಪಕ ಡಾ.ಸಂಜೀವ ದಂಡಕೇರಿ ಅವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

ಮಂಗಳೂರು: ಕಳೆದ ಬಾರಿ ಸುವರ್ಣ ಸಂಭ್ರಮವನ್ನಾಚರಿಸಿದ ಅಂತಾರಾಷ್ಟ್ರೀಯ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 51ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2026 ಮೇ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿತ್ತು.ಕಾರ್ಯಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ದೀಪ ಬೆಳಗಿ ಉದ್ಘಾಟಿಸಿದರು. ಸಮಾರಂಭದಲ್ಲಿ ತುಳು ರಂಗಭೂಮಿ, ಸಿನಿಮಾರಂಗ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ “ಬಯ್ಯಮಲ್ಲಿಗೆ” ಖ್ಯಾತಿಯ ಹಿರಿಯ ನಾಟಕಕಾರ ಡಾ.ಸಂಜೀವ ದಂಡೆಕೇರಿ ಅವರಿಗೆ ಈ ಬಾರಿಯ…

Read More
error: Content is protected !!