ಕೇರಳದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತ- ಕಾಂಗ್ರೆಸ್ ಆರೋಪ

ಕೇರಳದ ಎಡರಂಗ ಸರಕಾರದ ಜನದ್ರೋಹಿ ಆಡಳಿತದಿಂದ ಆರೋಗ್ಯ ಇಲಾಖೆಯು ಐಸಿಯುವಿನಲ್ಲಿ ಚಡಪಡಿಸುತ್ತಿರುವಂತೆ ಭಾಸವಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳಿಲ್ಲ, ವೈದ್ಯರಿದ್ದರೆ ಸಹಾಯಕ ಸಿಬ್ಬಂದಿಗಳಿಲ್ಲ, ಎಲ್ಲವೂ ಇದ್ದರೆ ಔಷಧಿಯಿಲ್ಲ. ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳಿಲ್ಲ, ರೇಬೀಸ್ ರೋಗಕ್ಕೆ ಬೇಕಾದ ಕನಿಷ್ಠ ಮಟ್ಟದ ಔಷಧಿಗಳ ಕೊರತೆಯ ಕಾರಣ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ, ಆಸ್ಪತ್ರೆಗಳಲ್ಲಿ ಡಾಕ್ಟರ್ ಗಳು ಹತ್ಯೆಗೀಡಾದ ದಾರುಣ ಘಟನೆಯೂ ನಡೆದಿವೆ. ವಿದ್ಯುತ್ ಸಂಪರ್ಕ ಕಡಿತವಾದಾಗ ಜನರೇಟರ್ ಇಲ್ಲದೆ ಕಷ್ಟ ಪಡುತ್ತಿರುವ ನಾಚಿಕೆಗೇಡಿನ ಪರಿಸ್ಥಿತಿ ಇದೆ. ಇವೆಲ್ಲಾ ಕೊರತೆಗಳ ನಡುವೆಯೂ ಎಡರಂಗ…

Read More

ನಮ್ಮ ಮೀಡಿಯಾ 24X7 ನ ಸಂಗೀತ ರಿಯಾಲಿಟಿ ಶೋ ಗೆ ಅದ್ಧೂರಿ ಚಾಲನೆ .ಗೆಲುವಿನ ಪ್ರಯತ್ನ ಸಹಜ , ಆದರೆ ವೇದಿಕೆ ಲಭಿಸುವುದೇ ವಿಜಯದ ಮೆಟ್ಟಿಲು – ಕೊಂಡೆವೂರು ಶ್ರೀ .

ಮಂಜೇಶ್ವರ : ಕರಾವಳಿಯ ನಾಡಿಮಿಡಿತ ಜನತೆಯ ಧ್ವನಿಯಾಗಿರುವ ನಮ್ಮ ಮೀಡಿಯಾ 24X7 ನ ಬಹು ನಿರೀಕ್ಷೆಯ ಸಂಗೀತ ರಿಯಾಲಿಟಿ ಶೋ ವಾಯ್ಸ್ ಒಫ್ ನಮ್ಮ ಮೀಡಿಯಾ 2025 ಕ್ಕೆ ಅದ್ಧೂರಿ ಚಾಲನೆ ದೊರೆಯಿತು.ಕೊಂಡೆವೂರು ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆದ ಪ್ರಥಮ ಹಂತದ ಆಡಿಷನ್ ಕಾರ್ಯಕ್ರಮವನ್ನು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಗಳು ಗೆಲುವಿಗೋಸ್ಕರ ನಾವು ಪ್ರಯತ್ನ ಪಡುತ್ತಿರುವುದು ಸಹಜವಾದುದು…

Read More

ತಲಪಾಡಿ ಷಟ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟ,ವಾಹನ ಸವಾರರು ಅಪಾಯದ ಭೀತಿಯಲ್ಲಿ

ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ ತಲಪಾಡಿ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುಲಭ ಹಾಗೂ ವೇಗದ ಸಾರಿಗೆಗಾಗಿ ನಿರ್ಮಿತವಾಗಿದ್ದರೂ, ಇತ್ತೀಚಿನ ರಸ್ತೆಯ ಮೇಲೆ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟದಿಂದಾಗಿ ವಾಹನ ಸವಾರರು ಅಪಾಯದ ಭೀತಿಯನ್ನು ಎದುರಿಸುವಂತಾಗಿದೆ. ಪ್ರತಿ ದಿನವೂ ಹಲವು ಸಮೀಪ ಪ್ರದೇಶದಿಂದ ಹತ್ತಾರು ದನಗಳು ರಸ್ತೆಗೆ ಪ್ರವೇಶಿಸುತ್ತಿದ್ದು, ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಈ ಘಟನೆಗಳು ಹೆಚ್ಚಾಗಿ ಕಾಣಿಸುತ್ತಿವೆ. ದನ ಸಾಕುವವರು ಸೂಕ್ತವಾದ ಸ್ಥಳಗಳಲ್ಲಿ ದನಗಳನ್ನು ಮೇಯಲು ಬಿಡದೆ ಬೇಕಾಬಿಟ್ಟಿಯಾಗಿ ಬಿಡುತ್ತಿರುವ ಹಿನ್ನೆಲೆಯಲ್ಲಿಈ ದನಗಳು…

Read More

ತುಳುವೆರೆ ಉಡಲ್ ಜೋಡುಕಲ್ಲು ತಂಡದ ‘ಡೆನ್ನ ಡೆನ್ನಾನ’ ಹೊಚ್ಚ ಹೊಸ ನಾಟಕಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮುಹೂರ್ತ

ತುಳುವೆರೆ ಉಡಲ್ ಜೋಡುಕಲ್ಲು ಇದರ ಕಲಾವಿದರಿಂದ ಗಡಿನಾಡ ಕೇಸರಿ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ಮಾಣ ಮತ್ತು ನಿರ್ವಹಣೆಯ , ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ ನಿರ್ದೇಶಿಸಿದ ಹೊಚ್ಚ ಹೊಸ ನಾಟಕ ಡೆನ್ನ ಡೆನ್ನಾನ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶುಭ ಮುಹೂರ್ತಗೊಂಡಿತು. ವಿವೇಕ್ ಭಂಡಾರಿ ಸಣ್ಣತಡ್ಕ ಸಲಹೆ ಮತ್ತು ಸಹಕಾರ ನೀಡಿದ ಈ ನಾಟಕವು ತುಳು ರಂಗ ಭೂಮಿಯಲ್ಲಿ ವಿಶಿಷ್ಟಕಥೆಯಿಂದ ಎಲ್ಲರ ಮನಸೂರೆಗೊಂಡ ಯಶಸ್ವಿ ತುಳು ನಾಟಕ ಇದೀಗ ಹಲವು ಬದಲಾವಣೆಗಳೊಂದಿಗೆ ಹೊಸ ಶೈಲಿಯಲ್ಲಿ ಮೂಡಿ ಬರಲಿದೆ….

Read More

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ ಕುಂಜತ್ತೂರು – ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲಾ ಸಂಸತ್ ಚುನಾವಣೆ

ಮಂಜೇಶ್ವರ : ಶಾಲಾ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಹಾಗೂ ಶಾಲೆಯ ಪ್ರಜಾಪ್ರಭುತ್ವಾತ್ಮಕ ಪರಂಪರೆಯನ್ನು ಗೌರವಿಸುವ ಉದ್ದೇಶದೊಂದಿಗೆ ಗಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಗಳಲ್ಲಿ ಎರಡು ದಿನಗಳಲ್ಲಾಗಿ ಹಮ್ಮಿ ಕೊಂಡ ಶಾಲಾ ಸಂಸತ್ ಚುನಾವಣೆ 2025-26 ಬಹಳ ಅದ್ದೂರಿಯಾಗಿ ನೆರವೇರಿತು.ವಿದ್ಯಾರ್ಥಿ ದೆಸೆಯಲ್ಲಿಯೇ ಸಾರ್ವತ್ರಿಕ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮಾದರಿಯಲ್ಲಿ ಚುನಾವಣೆ ನಡೆಯಿತು. ಪ್ರಜಾಪ್ರಭುತ್ವವನ್ನು ಅಲಿಂಗಿಸಿ – ನಿಮ್ಮ ಆಯ್ಕೆ, ನಿಮ್ಮ ಹಕ್ಕು, ನಿಮ್ಮ ಧ್ವನಿ…

Read More

ಉದಯೋನ್ಮುಖ ಪುಟಾಣಿ ಗಾಯಕರ ಗಾಯನಕ್ಕೆ ವೇದಿಕೆ ‘ವಾಯ್ಸ್ ಒಫ್ ನಮ್ಮ ಮೀಡಿಯಾ’ 2025 ರ ಆಡಿಷನ್ ಜುಲೈ 6 ರಂದು.

ಮಂಜೇಶ್ವರ: ಕರಾವಳಿಯ ನಾಡಿಮಿಡಿತ ಜನತೆಯ ಧ್ವನಿಯಾಗಿರುವ ನಮ್ಮ ಮೀಡಿಯಾ 24*7 ಸಾರಥ್ಯದಲ್ಲಿ ಉದಯೋನ್ಮುಖ ವಿದ್ಯಾರ್ಥಿ ಗಾನ ಪ್ರತಿಭೆಗಳ ಬಹು ನಿರೀಕ್ಷೆಯ ರಿಯಾಲಿಟಿ ಶೋ ವಾಯ್ಸ್ ಆಫ್ ನಮ್ಮ ಮೀಡಿಯಾ 2025.ಇದರ ಪ್ರಥಮ ಹಂತದ ಆಡಿಷನ್ ಜುಲೈ 6 ರಂದು ಭಾನುವಾರ ನಡೆಯಲಿದೆ. ಉಪ್ಪಳ ಕೊಂಡೆಯೂರ್ ಶ್ರೀ ನಿತ್ಯಾನಂದ ಯೋಗಶ್ರಮದಲ್ಲಿ ನಡೆಯುವ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ಆಯ್ಕೆಯಾದ ಗಾನ ಪ್ರತಿಭೆಗಳಿಗೆ ಮುಂದೆ ಮೆಗಾ ಆಡಿಯೋಶನ್ ನಡೆಯಲಿದೆ

Read More

ಮೊಟಕುಗೊಂಡಿರುವ ಕೇರಳ ಸರಕಾರಿ ಯೋಜನೆಗಳು: ಮರು ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ.

ಮಂಜೇಶ್ವರ : ಕೆ ಸ್ಮಾರ್ಟ್ ಅವ್ಯವಸ್ಥೆ ಸರಿಪಡಿಸಬೇಕು,ಬುಡಮೇಲು ಗೊಂಡಿರುವ ಪಿ ಎಂ ಎ ವೈ ಲೈಫ್ ಭವನ ಯೋಜನೆಯನ್ನು ಕೂಡಲೇ ಸರಿ ಪಡಿಸಬೇಕು,ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು, ಪೆನ್ಸನ್ ಅರ್ಜಿಗಳ ಅವಗಣನೆಯನ್ನು ಕೊನೆಗೊಳಿಸಬೇಕು ಸ್ಥಗಿತಗೊಂಡಿರುವ ಅಭಿವೃದ್ದಿ ಯೋಜನೆಗಳನ್ನು ಕೂಡಲೇ ಸರಿ ಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಎಲ್ ಜಿ ಎಂ ಲ್ ಸ್ಥಳೀಯಾಡಳಿತ ಸಂಸ್ಥೆಗಳ ಮುಸ್ಲಿಂ ಲೀಗ್ ಜನಪ್ರತಿನಿಧಿಗಳ ಸಂಘಟನೆ ಯ ನೇತೃತ್ವದಲ್ಲಿ ವರ್ಕಾಡಿ ಗ್ರಾಮ ಪಂಚಾಯತು ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಕೆ ಮೊಹಮ್ಮದ್ ಪಾವೂರು…

Read More

ಲಕುಮಿ ತಂಡದ ‘ಆಂಟಿ & ಅಂಕಲ್’ ಹೊಚ್ಚ ಹೊಸ ನಾಟಕಕ್ಕೆ ಮಂಗಳೂರಿನ ಶರವು ಕ್ಷೇತ್ರದಲ್ಲಿ ಮುಹೂರ್ತ

ಮಂಜೇಶ್ವರ: ಕಿಶೋರ್ ಡಿ ಶೆಟ್ಟಿ ನಿರ್ಮಾಣ ಮತ್ತು ನಿರ್ದೇಶನದ ಅರವಿಂದ ಬೋಳಾರ್ ವಿಭಿನ್ನ ಅಭಿನಯದ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಅಭಿನಯಿಸುವ ಹೊಚ್ಚ ಹೊಸ ತುಳು ಹಾಸ್ಯಮಯ ನಾಟಕ ‘ಆಂಟಿ & ಅಂಕಲ್’ ಇಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶುಭ ಮುಹೂರ್ತಗೊಂಡಿತು. ವಸಂತ ಅಮೀನ್ ಸಾಹಿತ್ಯದ ತುಳಸೀದಾಸ್ ಮಂಜೇಶ್ವರ ರಚಿಸಿದ ಈ ನಾಟಕಕ್ಕೆ ನಾಗಾರ್ಜುನ್ ಮಂಗಲ್ಪಾಡಿ ಸಂಗೀತ ಅಳವಡಿಸಿದ್ದಾರೆ. ನವೀನ ಶೆಟ್ಟಿ ಅಳಕೆ ಸಲಹೆ ನೀಡಿದ ಈ ನಾಟಕವನ್ನು ಗಿರೀಶ್ ಶೆಟ್ಟಿ ನಿರ್ವಹಣೆ ಮಾಡಿದ್ದಾರೆ.

Read More

ಕತ್ತಿಗೆ ಹಗ್ಗ ಸಿಕ್ಕಿಕೊಂಡ ಹಸುವನ್ನು ಪ್ರಾಣ ರಕ್ಷಿಸಿದ -ಅಗ್ನಿಶಾಮಕದಳ ಸಿಬ್ಬಂದಿ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತನ 7ನೇ ವಾರ್ಡ್ ವ್ಯಾಪ್ತಿಯ ಚೌಕಿಯಲ್ಲಿ, ಕಳೆದ ಹತ್ತು ದಿನಗಳಿಂದ ಕತ್ತಿಗೆ ಹಗ್ಗ ಸಿಕ್ಕಿಕೊಂಡು ನೋವನ್ನು ಸಹಿಸಲಾರದೆ ನಾಡಿನ ಜನತೆಯನ್ನು ನಡುಕಿಗೆ ಒಳಪಡಿಸುವಂತಹ ಸ್ಥಿತಿಯಲ್ಲಿ ನರಳುತ್ತಿದ್ದ ಹಸುವನ್ನು, ಸ್ಥಳೀಯರು ಹಾಗೂ ಅಗ್ನಿಶಾಮಕದಳ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಯಿತು. ಕಳೆದ 10 ದಿವಸದಿಂದ ಜೀವನ್ಮರಣದೊಂದಿಗೆ ಹೋರಾಡುತಿದ್ದ ಹಸುವಿನ ಹತ್ತಿರ ಕೂಡಾ ಸುಳಿಯಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು. ನಿರಂತರವಾಗಿ ಸುರಿಯುತಿದ್ದ ಮಳೆಯಲ್ಲಿ ಒದ್ದೆಯಾಗುತ್ತಿರುವುದನ್ನು ನೋಡಿ ಅದನ್ನು ಅಲ್ಲಿಂದ ರಕ್ಷಣೆ ಮಾಡಲು ಮುಂದಾಗುವಾಗ ಹೆದರುತಿದ್ದ ಹಸು…

Read More

ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ಇಬ್ಬರಿಗೆ ಮೂರು ತಿಂಗಳ ಸಜೆ -ತೀರ್ಪು ಪ್ರಕಟಿಸಿದ ನ್ಯಾಯಾಲಯ

ಕಾಸರಗೋಡು : ಡೆಪ್ಯೂಟಿ ತಹಶೀಲ್ದಾರ್ ರನ್ನು ತಡೆದು ಆಕ್ರಮಿಸಿ ಹಲ್ಲೆಗೈದ ಕೇಸಿನಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ನಾಲ್ವರ ವಿರುದ್ಧ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷಾ ತೀರ್ಪಿಗೆ ಜಿಲ್ಲಾ ನ್ಯಾಯಾಲಯ ಅನುಮೋದನೆ ನೀಡಿದೆ. ಮೂರು ತಿಂಗಳ ಸಜೆ ಸಹಿತ 20ಸಾವಿರ ರೂ ದಂಡ ವಿಧಿಸಿ ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ತಿಂಗಳು ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ. ಶಾಸಕ ಎಕೆಎಂ ಅಶ್ರಫ್ ಹೊರತಾಗಿ ಬಶೀರ್ ಅಬ್ದುಲ್ಲ ಕಾಜ, ಕಾಯಿಂಞಿ…

Read More
error: Content is protected !!