ಹಾಡಹಗಲೇ ಯುವಕನ ಅಪಹರಣ, 18 ಲಕ್ಷ ರೂ.ಗೂ ಹೆಚ್ಚು ಮೊತ್ತದ ಹಣ ದರೋಡೆಆರೋಪಿ ಬಂಧನ
ಮಂಜೇಶ್ವರಂ: ಕುಂಬಳೆ ನಗರದಲ್ಲಿ ಹಾಡಹಗಲೇ ಯುವಕನನ್ನು ಅಪಹರಿಸಿ 18 ಲಕ್ಷ ರೂ.ಗೂ ಹೆಚ್ಚು ಮೊತ್ತದ ಹಣ ದರೋಡೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಧರ್ಮದಡ್ಕ ಬಳಿಯ ಚಲ್ಲಂಗೈ ನಿವಾಸಿ ಯೂಸುಫ್ ಇರ್ಷಾದ್ (24) ಅವರನ್ನು ಬಂಧಿತ ಆರೋಪಿ. ಇಚ್ಲಂಗೋಡಿನಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯೂಸುಫ್ ಇರ್ಷಾದ್ ರಾಜ್ಯದ ವಿವಿಧ ಭಾಗಗಳಿಂದ ಇದೇ ರೀತಿ ಸುಮಾರು 80 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಮೇ 6 ರಂದು ಮಧ್ಯಾಹ್ನ ಕುಂಬಳೆಯಲ್ಲಿ…