ಬಡವರನ್ನು ಮರೆತು ಬಂಡವಾಳಶಾಹಿಗಳ ಸೇವೆಯಲ್ಲಿ ನಿರತವಾದ ಎಡರಂಗ ಸರಕಾರ -ಕಾಂಗ್ರೆಸ್
ಕೇರಳದ ಎಡರಂಗ ಸರಕಾರವು ಬಡಜನರ ಹಿತಾಸಕ್ತಿ ಕಾಯುವ ತನ್ನ ಘೋಷಿತ ನೀತಿಯಿಂದ ಹಿನ್ನಡೆದು ಅದಾನಿ, ಸ್ಯಾಂಟಿಯಾಗೋ ಮಾರ್ಟಿನ್ ಮುಂತಾದ ಬಹುಕೋಟಿ ವ್ಯವಹಾರಗಳ ಶ್ರೀಮಂತ ಕುಳಗಳ ಸೇವೆಯಲ್ಲಿ ನಿರತವಾಗಿದೆಯೆಂದು ಕಾಂಗ್ರೆಸ್ ಆರೋಪಿಸಿದೆ. ಆಡಳಿತದ ಸಕಲ ವಲಯಗಳಲ್ಲೂ ಸಂಪೂರ್ಣ ವಿಫಲವಾದ ಎಡರಂಗ ಸರಕಾರವು ಪೊಳ್ಳು ಭರವಸೆ ಮತ್ತು ಅತಿರಂಜಿತ ಪ್ರಚಾರಗಳನ್ನು ನಡೆಸುತ್ತಾ ಕಾಲ ಕಳೆಯುತ್ತಿದೆ. ಹೇಳತಕ್ಕ ಯಾವ ಒಳಿತಿನ ಕಾರ್ಯ ನಡೆಸದಿದ್ದರೂ, ತೆರಿಗೆ ಭಯೋತ್ಪಾದನೆ ಹಾಗೂ ದಂಡ ವಸೂಲಿ ಮಾತ್ರ ನಿರಂತರ ನಡೆಸುತ್ತಿದೆ. ಜನರಿಗೆ ಜನರಿಗೆ ಹೊರೆಯಾಗಿ ಮಾರ್ಪಟ್ಟ ಈ…
