ಎಲ್ಡಿಎಫ್ ಉತ್ತರ ವಲಯ ಜಾಥಾಗೆ ಕುಂಬಳೆಯಿಂದ ಚಾಲನೆ; ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ:
ಕಾಸರಗೋಡು: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ಸಾರಥ್ಯದಲ್ಲಿ ನಡೆಯುವ ಎಲ್ಡಿಎಫ್ ಉತ್ತರ ವಲಯ ಜಾಥೆಗೆ ತುಳುನಾಡಿನ ನೆಲ ಕುಂಬಳೆಯಿಂದ ಆದಿತ್ಯವಾರ ಚಾಲನೆ ದೊರಕಿತು. ಜಾಥಾ ನಾಯಕ ಎಂ.ವಿ. ಗೋವಿಂದನ್ ಅವರಿಗೆ ಕೇರಳಾಭಿವೃದ್ಧಿಯ ಮಿನಿಯೇಚರ್ ನೀಡಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಾಥಾವನ್ನು ಉದ್ಘಾಟಿಸಿದರು. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕಳೆದ ಹತ್ತು ವರ್ಷಗಳ ಎಡರಂಗ ಸರ್ಕಾರದ ಸಾಧನೆಗಳನ್ನು ವಿವರಿಸಿ, ಕೇಂದ್ರ ಸರ್ಕಾರ ಕೇರಳದ ವಿರುದ್ಧ ತೋರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು. ಇತ್ತೀಚಿನ ಕೇಂದ್ರ ಬಜೆಟ್ನಲ್ಲಿ ಕೇರಳವನ್ನು…