ಕರಾವಳಿಗೆ ಮುಂಗಾರು ಶಾಕ್..! ದಕ್ಷಿಣ ಕನ್ನಡದಲ್ಲಿ ಜೂನ್ನಲ್ಲೇ 50%ಕ್ಕೂ ಅಧಿಕ ಮಳೆ ಕೊರತೆ
ಮಂಗಳೂರು: ರಾಜ್ಯದಲ್ಲೇ ಅತ್ಯಧಿಕ ಮಳೆಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಜೂನ್ ತಿಂಗಳಲ್ಲೇ ಶೇ.50ಕ್ಕೂ ಅಧಿಕ ಮಳೆ ಕೊರತೆ ದಾಖಲಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗದಿರುವುದು, ಕೃಷಿ ಚಟುವಟಿಕೆಗಳು ಕುಂಠಿತವಾಗಿರುವುದು ಹಾಗೂ ಮೀನುಗಾರಿಕೆ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ. ಜೂನ್ 28ರವರೆಗೆ ಕಳೆದ ವರ್ಷ 1,080.5 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಕೇವಲ 494.8 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಬಂಟ್ವಾಳದಲ್ಲಿ ನದಿಯ ನೀರಿನ ಮಟ್ಟ 4.47 ಮೀಟರ್ ಇದ್ದು, ಇದು…
