ಮಂಜೇಶ್ವರ: ಒಂಟಿ ವೃದ್ಧೆಯ ಕೊಲೆ ಪ್ರಕರಣ—ಕರಿಮಣಿ ದೋಚಾಟಕ್ಕೆ ಹತ್ಯೆ, ಆರೋಪಿ ಬಂಧನ

ಮಂಜೇಶ್ವರ: ಬದಿಯಡ್ಕ ಸಮೀಪದ ಕುಂದ್ಲಾಜೆ ಪಂಚಾಯತಿನ ಮವ್ವಾರು ಆಜಿಲ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆಯ ಸಾವು ಕೊಲೆಯಾಗಿದೆಂಬ ಮರಣೋತ್ತರ ಪರೀಕ್ಷಾ ವರದಿ ಬಂದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಜಿಲ ನಿವಾಸಿ ಪುಷ್ಪಲತಾ ವಿ. ಶೆಟ್ಟಿ (65) ಗುರುವಾರ ಸಾವನ್ನಪ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವರ ಮುಖದಲ್ಲಿ ಉಗುರಿನಿಂದ ಪರಚಿದ ಗಾಯಗಳಿತ್ತು. ಅಲ್ಲದೇ ಮಹಿಳೆಯನ್ನು ಕತ್ತು ಹಿಡಿದು ಉಸಿರುಗಟ್ಟಿಸಿ ಕೊಲೆ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಸೂಚಿಸಿತ್ತು. ಈ ಸಂಬಂಧ ಬದಿಯಡ್ಕ ಪೊಲೀಸರು…

Read More

ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ SPC ಕ್ಯಾಡೆಟ್‌ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ತರಗತಿ ಮತ್ತು ಜಾಗೃತಿ

ಮಂಜೇಶ್ವರ: ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ SPC ಕ್ಯಾಡೆಟ್‌ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ತರಗತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹೊಸಂಗಡಿಯಲ್ಲಿ ನಡೆಯಿತು . ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ವಾಹನ ಅಪಘಾತಗಳು ಈ ನಡುವೆ ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ .ವಾಹನ ಚಾಲಕರು ಮತ್ತು ಸಂಚಾರಿಗಳು ಕೆಲವೊದು ನಿಯಮವನ್ನು ಪಾಲಿಸಬೇಕಾಗುವುದು,ನಿಯಮ ಮತ್ತು ಕರ್ಥವ್ಯಗಳನ್ನು ತಿಳಿಸುವ ಉದ್ದೇಶದಿಂದ“ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು” ಎಂಬ ವಿಷಯದಡಿ ಹೊಸಂಗಡಿಯಲ್ಲಿ ಆಟೋ ರಿಕ್ಷಾ ಚಾಲಕರು ಹಾಗೂ…

Read More

ಕಳೆದ ದಿನ ಟ್ರೋಲ್‌ಗೆ ಸಂಬಂಧಿಸಿದ ಹೋರಾಟದಲ್ಲಿ ಬಂಧಿತರಿಗೆ ಜಾಮೀನು

ಕಳೆದ ದಿನ ಟ್ರೋಲ್‌ಗೆ ಸಂಬಂಧಿಸಿದಂತೆ ಹೋರಾಟದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸ್‌ರು ಬಂಧಿಸಿದ್ದರು. ಆದರೆ ಸಮರನಾಯಕ ಎಂಎಲ್ ಎ ಸೇರಿದಂತೆ ಸುಬೈರ್, ಎ.ಕೆ. ಆರಿಫ್, ಅಶ್ರಫ್ ಕರ್ಳ್ಳ ಮುಂತಾದವರು ವಕೀಲರೊಂದಿಗೆ ಬೆಳಗ್ಗೆಯಿಂದ ನಡೆಸಿದ ಕಾನೂನು ಹೋರಾಟದ ಫಲವಾಗಿ, ಆ ಇಬ್ಬರಿಗೆ ಜಾಮೀನು ಮಂಜೂರಾಗಿದೆ. ಟ್ರೋಲ್ ಸಮರವು ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲಿ, ಸಮರವನ್ನು ಭಂಗಪಡಿಸಲು ಮಧ್ಯದಲ್ಲಿ ಯಾರು ನುಗ್ಗಿದ್ದಾರೆ? ಕ್ಷೇತ್ರದ ಎಂಎಲ್‌ಎ ಎ.ಕೆ.ಎಂ. ಅಶ್ರಫ್ ಅವರು ಜನರಿಗೆ ನಿಷೇಧಾಜ್ಞೆ ಇದೆ ಕಾರ್ಯಕರ್ತರಿಗೆ ಚದುರಿಹೋಗಲು ಹೇಳಿದರೂ ಅದನ್ನು ಕೇಳದೆ ಮುಂದುವರಿದ್ದಾರೆ ,…

Read More

ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ನ ನೂತನ ಕಾರ್ಯಾಲಯದ ಉದ್ಘಾಟನೆ

ಮಂಜೇಶ್ವರ: ಕಲೆ ಕ್ರೀಡೆ ಜೀವ ಕಾರುಣ್ಯ ಕಾರ್ಯಾಗಾರದಲ್ಲಿ ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ದಾರುಸ್ಸಲಾಮ್ ಚಾರಿಟೇಬಲ್ ವಿಂಗ್ ಗೆ 32 ನೇ ವರ್ಷ ಕ್ಕೆ ನೂತನ ಕಾರ್ಯಾಲಯವು 16 -01 -2026 ನೇ ಶನಿವಾರದಂದು ಉದ್ಘಾಟನೆಗೊಂಡಿತು. ಮಂಜೇಶ್ವರ ಪೊಯ್ಯಕಂಡದಲ್ಲಿ ನಿರ್ಮಿಸಲಾದ ನೂತನ ಕಾರ್ಯಾಲಯದ ಕಟ್ಟಡವನ್ನು ಮಂಜೇಶ್ವರದ ಶಾಸಕರಾದ ಎ.ಕೆ .ಎಂ ಅಶ್ರಫ್ ರವರು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಿರ್ಮಾಪಕ , ಅಸ್ತ್ರ ಗ್ರೂಪ್ ನ CEO ಲಂಚುಲಾಲ್ ಉಪಸ್ಥಿತರಿದ್ದರು . ಕಾರ್ಯಕ್ರಮ ಉದ್ಘಾಟಿಸಿ…

Read More

ಬೆಳ್ಳಾರು: ಪ್ರಸಿದ್ಧ ವಾಸ್ತು ಶಿಲ್ಪಿ ಧರ್ಮೇದ್ರ ಆಚಾರ್ಯ ನಿಧನ

ಉಪ್ಪಳ: ಬೇಕೂರು ಬಳಿಯ ಬೆಳ್ಳಾರು ನಿವಾಸಿ ವಾಸ್ತು ಶಿಲ್ಪಿ ಧರ್ಮೇಂದ್ರ ಆಚಾರ್ಯ [78] ಅಲ್ಪ ಕಾಲದ ಅಸೌಖ್ಯದಿಂದ  ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ರೋಹಿಣಿ, ಮಕ್ಕಳಾದ ಕಿರಣ್ ಆಚಾರ್ಯ, ಯತೀಶ್ ಆಚಾರ್ಯ, ಪವಿತ್ರ, ಸೊಸೆಯಂದಿರಾದ ಶ್ವೇತ, ದೀಕ್ಷಿತ, ಅಳಿಯ ಪಾಂಡುರoಗ ಆಚಾರ್ಯ, ಸಹೋದರಿ ಸೀತಾ, ಸಹೋದರ ಲಕ್ಷಣ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸoಸ್ಕಾರ  ಸಂಜೆ ಮನೆ ಪರಿಸರದಲ್ಲಿ ನಡೆಯಿತು.

Read More

ಕುಂಬಳೆ ಟೋಲ್ ಪ್ಲಾಸಾ ಹಿಂಸಾಚಾರ ಪ್ರಕರಣ: ಇಬ್ಬರ ಬಂಧನ

ಕಾಸರಗೋಡು:ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಸಾದಲ್ಲಿ ಟೋಲ್ ವಸೂಲಿಗೆ ವಿರೋಧವಾಗಿ ನಡೆದ ಪ್ರತಿಭಟನೆಯ ವೇಳೆ ಅಕ್ರಮಾಚಾರ ನಡೆಸಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೊಡಿಯಮ್ಮ, ಉಜಾರ್‌ನ ಫೈಸಲ್ ಅಬ್ದುಲ್ ರಹ್ಮಾನ್ (28) ಹಾಗೂ ಮಂಜೇಶ್ವರಂ, ವಾಮಂಜೂರು ಚೆಕ್ ಪೋಸ್ಟ್ ಸಮೀಪದ ನಿವಾಸಿ ಟಿ. ಅಬ್ದುಲ್ ನಾಸರ್ (46) ಅವರನ್ನು ಕುಂಬಳ ಪೊಲೀಸರು ಬಂಧಿಸಿದ್ದಾರೆ. ಆಕ್ಷನ್ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭ ಉಂಟಾದ ಸಂಘರ್ಷದ ವೇಳೆ ಟೋಲ್ ಪ್ಲಾಸಾದ ಮೇಲೆ ದಾಳಿ ನಡೆಸಿ ಉಪಕರಣಗಳನ್ನು ಹಾನಿಗೊಳಪಡಿಸಿದ ಆರೋಪದ…

Read More

ಉಪನ್ಯಾಸಕಿ, ಲೇಖಕಿ, ಬಹುಮುಖ ಪ್ರತಿಭೆ ರೇಷ್ಮಾ ಸಿ. ವೈ ಇವರೀಗೆ ಕನ್ನಡ ಭವನದ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.

ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.”ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಮಂಜೇಶ್ವರ : ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಕುರ್ ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ

ಮಂಜೇಶ್ವರ: ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲಾ ಸಭಾಂಗಣದಲ್ಲಿ ಕುರ್‌ಆನ್ ಸಂಪೂರ್ಣವಾಗಿ ಹೃದಯಂಗಮಗೊಳಿಸಿದ ವಿದ್ಯಾರ್ಥಿ ಹಾಫಿಝಾ ಫಾತಿಮಾ ಫಾಝಾ ಅವರನ್ನು ಶಾಲಾ ಆಡಳಿತ ಸಮಿತಿ ವತಿಯಿಂದ ನಿಮ್ಮಲ್ಲಿ ಶ್ರೇಷ್ಠರು ಯಾರು ಎಂದರೆ, ಕುರ್‌ಆನ್ ಕಲಿತು ಅದನ್ನು ಇತರರಿಗೆ ಕಲಿಸುವವರೇ” ಎಂಬ ಪ್ರವಾದಿ ವಚನದ ಸ್ಫೂರ್ತಿಯೊಂದಿಗೆ ಭಕ್ತಿಭಾವದಿಂದ ಆಯೋಜಿಸಲಾದ ಸಮಾರಂಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ತಲಪಾಡಿ ಕೆ ಸಿ ರೋಡ್ ನಿವಾಸಿ ಅಬ್ದುಲ್ ಕಿನಾನ್ ಹಾಗೂ…

Read More

ವಿಶ್ವದಾಖಲೆ ವಯಲಿನ್ ವಾದಕರಿಂದ ಕುಂಬಳೆಯಲ್ಲಿ ಸಂಗೀತ ವೈಭವ

ಕುಂಬಳೆ : ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬೆಡಿ ಮಹೋತ್ಸವದ ಅಂಗವಾಗಿ ಚಿರಂಜೀವಿ ಕುಂಬಳೆ ವತಿಯಿಂದ ಆಯೋಜಿಸಿರುವ ವಯಲಿನ್ ಫ್ಯೂಷನ್, ಮೆಗಾ ಮ್ಯೂಸಿಕಲ್ ನೈಟ್ ಹಾಗೂ ಸನ್ಮಾನ ಸಮಾರಂಭಗಳು 16 ಮತ್ತು 17 ರಂದು ನಡೆಯಲಿವೆ. ವಯಲಿನ್ ವಾದನದ ಮೂಲಕ ವಿಶ್ವ ದಾಖಲೆ ಸಾಧಿಸಿರುವ ಕುಮಾರಿ ಗಾಯತ್ರಿ ಆಚಾರ್ಯ ಹಾಗೂ ಕುಮಾರಿ ಶ್ರಾವಣ್ಯ ಆಚಾರ್ಯ ಅವರ ವಯಲಿನ್ ಕಾರ್ಯಕ್ರಮವು 16ರಂದು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ.ಕಾರ್ಯಕ್ರಮವನ್ನು ಅಡ್ವೊಕೇಟ್ ಸುಬ್ಬಯ್ಯರೈ ಇಚ್ಚಿಲಂಪಾಡಿ ಉದ್ಘಾಟಿಸಲಿದ್ದಾರೆ.ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ,…

Read More

ರಜತ ಸಂಭ್ರಮದಲ್ಲಿ ಕಾಸರಗೋಡಿನ ಕನ್ನಡ ಭವನನಾಡು – ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ ಜ.18ರಂದು

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿ ಹಬ್ಬ, ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಕಾರ್ಯಕ್ರಮವು ಇದೇ ಜ.18ರಂದು ನಡೆಯಲಿದೆ. ಬೆಳಗ್ಗೆ 7.30ರಿಂದ ಕಾಸರಗೋಡಿನ ವಿಶ್ವಕರ್ಮ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಧಾರ್ಮಿಕ ಮುಖಂಡರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವರು. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್…

Read More
error: Content is protected !!