ಚಟ್ಟಂಚಾಲ್ ಬಳಿ ಬಿಎಂಡಬ್ಲ್ಯು–ಲಾರಿ ಡಿಕ್ಕಿ: ಮಂಗಳೂರು ಮೂಲದ ಇಬ್ಬರು ಮೃತ್ಯು
ಮಂಜೇಶ್ವರ: ರಾ. ಹೆದ್ದಾರಿಯ ಕಾಸರಗೋಡು ಚಟ್ಟಂಚಾಲ್ ನಲ್ಲಿ ಸೋಮವಾರ ರಾತ್ರಿ ಬಿಎಂಡಬ್ಲ್ಯು ಕಾರು ಮತ್ತು ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.ಮಂಗಳೂರು ಸಜಿಪ ಪರಿಸರವಾಸಿಗಳಾದ ಆಸಿಫ್ ಹಾಗೂ ಲತೀಫ್ ಮೃತ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಚಟ್ಟಂಚಾಲ್ ಬಳಿಯ 55ನೇ ಮೃಲ್ ಎಂಬಲ್ಲಿ ಸೋಮವಾರ ರಾತ್ರಿ ಅಪಘಾತ ನಡೆದಿದ್ದು, ಮಂಜೇಶ್ವರ ಗೇರು ಕಟ್ಟೆ ನಿವಾಸಿಗಳಾದ ರಿಯಾಝ್ ಹಾಗೂ ಹಾಶಿಂ ಗಾಯಗೊಂಡಿದ್ದಾರೆ. ವಯನಾಡಿಗೆ ಪ್ರವಾಸ ಹೋಗಿದ್ದ ಗೆಳೆಯರು ಮರಳಿ ಊರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ಮೃತರು…