ಹನುಮಗಿರಿ ಬ್ರಹ್ಮಕಲಶಕ್ಕೆ ಪಂದಳ ಮಹಾರಾಜರಿಗೆ ಆಹ್ವಾನ
ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳನ್ನು(ತಿರುವಾಭರಣ) ಹೊಂದಿರುವ ಪಂದಳ ರಾಜ ಮನೆತನದ ಮಹಾರಾಜಾ ಪುಣರ್ತಂ ನಾರಾಯಣ ವರ್ಮಾ ಅವರಿಗೆ ಹನುಮಗಿರಿಯ ಬ್ರಹ್ಮಕಲಶದ ಆಹ್ವಾನವನ್ನು ಕೇರಳದ ಪಂದಳ ಅರಮನೆಯಲ್ಲಿ ಫಲ ತಾಂಬೂಲ ನೀಡಿ ಶಾಲು ಅರ್ಪಿಸಿ ಆಮಂತ್ರಣ ಪತ್ರ ನೀಡಿ ಕ್ಷೇತ್ರದ ಬ್ರಹ್ಮಕಲಶ ಪ್ತಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ ರೆಂಜ ಹಾಗೂ ಸುಬ್ಬಪ್ಪ ಪಾಟಾಳಿ ಪಟ್ಟೆ ಹನುಮಾಗಿರಿಗೆ ಆಹ್ವಾನಿಸಿದರು. ಮಕರವಿಳಕ್ಕು ಉತ್ಸವಕ್ಕೆ 3 ದಿನಗಳ ಮುನ್ನ, ಅಯ್ಯಪ್ಪನ ಆಭರಣಗಳನ್ನು ಇಲ್ಲಿಂದ ಮೆರವಣಿಗೆಯಲ್ಲಿ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ.ಅಂತಹ ಪವಿತ್ರ ಕ್ಷೇತ್ರದ…