ಅಂಬಲಪಾಡಿ ಮಹಾಕಾಳಿ ಸನ್ನಿಧಿಯಲ್ಲಿ ಪುಷ್ಪ ವೈಭವ: ಭಕ್ತರನ್ನು ಸೆಳೆದ ಚಿಕ್ಕಬಳ್ಳಾಪುರದ ಭಕ್ತರ ಸೇವೆ
ಉಡುಪಿ: ಜಿಲ್ಲೆಯ ಪ್ರಸಿದ್ಧ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪುಷ್ಪಾಲಂಕಾರ ನೆರವೇರಿದ್ದು, ದೇವಾಲಯವು ವರ್ಣರಂಜಿತ ಹೂವಿನ ಅಲಂಕಾರದಿಂದ ಕಂಗೊಳಿಸಿತು. ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳಿಂದ ದೇವಾಲಯದ ಒಳಾಂಗಣ ಹಾಗೂ ಹೊರಾಂಗಣವನ್ನು ಅಲಂಕರಿಸಲಾಗಿದ್ದು, ಸಾವಿರಾರು ಭಕ್ತರ ಗಮನ ಸೆಳೆಯಿತು. ಚಿಕ್ಕಬಳ್ಳಾಪುರದ ಭಕ್ತವೃಂದವು ಹಲವು ವರ್ಷಗಳಿಂದ ಪ್ರತಿವರ್ಷ ಭಕ್ತಿಭಾವದಿಂದ ಈ ವಿಶೇಷ ಪುಷ್ಪಾಲಂಕಾರ ಸೇವೆಯನ್ನು ಸಲ್ಲಿಸುತ್ತಿದ್ದು, ಈ ಬಾರಿಯೂ ತಮ್ಮ ಕೈಯಾರೆ ದೇವಾಲಯವನ್ನು ಅಲಂಕರಿಸಿದರು. ದೇವಿಯ ಅನುಗ್ರಹದಿಂದ ತಮ್ಮ ಬದುಕಿನಲ್ಲಿ ಶುಭ ಬದಲಾವಣೆಗಳಾಗಿವೆ…
