ಸೌಹಾರ್ದದ ಸಂಕೇತ: ಕಟ್ಟತ್ತಿಲ ದರ್ಗಾ–ಕಟ್ಟತ್ತಿಲ ಮಠ ಸಂಪರ್ಕ ರಸ್ತೆ ಡಾಮರೀಕರಣಕ್ಕೆ ನಾಗರಿಕರ ಮೆಚ್ಚುಗೆ

ಕೊಳ್ನಾಡು: ಇತಿಹಾಸ ಪ್ರಸಿದ್ದ ಮುಸ್ಲಿಂ ದಾರ್ಮಿಕ ಕೇಂದ್ರವಾದ ಕಟ್ಟತ್ತಿಲ ದರ್ಗಾ ಹಾಗೂ ಹಿಂದೂ ದಾರ್ಮಿಕ ಕೇಂದ್ರ ಕಟ್ಟತ್ತಿಲ ಮಠವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಡಾಮರೀಕರಣ ಕಾರ್ಯ ಪೂರ್ಣಗೊಂಡಿದ್ದು, ವಿಶೇಷವಾಗಿ ಕಟ್ಟತ್ತಿಲ ಊರೂಸು ಸಮಾರಂಭದ ಸಂಧರ್ಭದಲ್ಲಿ ನಾಗರಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಎರಡು ಸಮುದಾಯಗಳ ಸೌಹಾರ್ದತೆಯ ಸಂಕೇತವಾಗಿ ಗುರುತಿಸಿಕೊಂಡಿರುವ ಈ ರಸ್ತೆ ಇದೀಗ ಸುಧಾರಿತ ರೂಪ ಪಡೆದುಕೊಂಡಿರುವುದು ಸ್ಥಳೀಯರಿಗೆ ಸಂತೋಷ ತಂದಿದೆ. ಈ ರಸ್ತೆಯ ಇತಿಹಾಸವನ್ನು ನೆನಪಿಸಿಕೊಂಡರೆ, ಹಲವಾರು ವರ್ಷಗಳ ಹಿಂದೆ ಕೊಳ್ನಾಡು ಗ್ರಾಮ ಪಂಚಾಯತ್‌ನ ಸುದೀರ್ಘ ಅವಧಿಯ…

Read More

ದ್ವಿತೀಯ ಪಿಯುಸಿ ಫಲಿತಾಂಶ: ಫಾತಿಮಾ ಶಝಗೆ 553 ಅಂಕಗಳೊಂದಿಗೆ ಡಿಸ್ಟಿಂಕ್ಷನ್

ಪುತ್ತೂರು: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರಿನ ವಿದ್ಯಾರ್ಥಿನಿ ಫಾತಿಮಾ ಶಝ ಗಮನಾರ್ಹ ಸಾಧನೆ ಮಾಡಿದ್ದಾರೆ. ಸಂತ ಫಿಲೋಮಿನ ಕಾಲೇಜು (St Philomena College) ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅವರು ವಾಣಿಜ್ಯ ವಿಭಾಗದಲ್ಲಿ 553 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಮುಹ್ಯಿದ್ದೀನ್ ಜುಮಾ ಮಸೀದಿ ಸಂಪ್ಯ ಜಮಾತ್‌ಗೆ ಒಳಪಟ್ಟ ಬಶೀರ್ ಪರ್ಲಡ್ಕ ಹಾಗೂ ತಾಹಿರ ದಂಪತಿಗಳ ಪುತ್ರಿಯಾಗಿರುವ ಫಾತಿಮಾ ಶಝ ಅವರ ಈ ಸಾಧನೆಗೆ ಕುಟುಂಬದವರು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ….

Read More

ಏಪ್ರಿಲ್ 12ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಇದೇ ಏಪ್ರಿಲ್ 12, ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಪುರಭವನದಲ್ಲಿ (ಟೌನ್ ಹಾಲ್) ಬಹಿರಂಗ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ತಿಳಿಸಿದರು. ನಗರದ ಬಂಟ್ಸ್ ಹಾಸ್ಟೇಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಐಕ್ಯತೆ…

Read More

ನಕಲಿ ಮತದಾನಕ್ಕೆ ಯತ್ನ ಯುವಕನನ್ನು ತಡೆದ ಬಿ ಜೆ ಪಿ ಕಾರ್ಯಕರ್ತರು

ಮಂಜೇಶ್ವರ: ಮತದಾನ ಪ್ರಕ್ರಿಯೆಯಲ್ಲಿ ನಕಲಿ ಮತದಾನದ ಆರೋಪದ ಹಿನ್ನೆಲೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮಂಜೇಶ್ವರ ಮಂಡಲದಲ್ಲಿ ನಡೆದಿದೆ.ಕಯ್ಯಾರಿನ 128ನೇ ಸಂಖ್ಯೆಯ ಮತಗಟ್ಟೆಯಲ್ಲಿ ನಡೆದ ಘಟನೆ ವ್ಯಾಪಕ ಚರ್ಚೆ ಆಗಿದೆ ಪ್ರಶಾಂತ್ ಎನ್ನುವ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಬಂದಿದ್ದಾನೆ ಎಂದು ಬಿ ಜೆ ಪಿ ಕಾರ್ಯಕರ್ತರು ಆರೋಪಿಸಿದ್ದರುಪೂರ್ವದಲ್ಲಿ ಪ್ರಶಾಂತ್ ಎನ್ನುವ ಯುವಕ ಮುಸ್ಲಿಂ ಮತಕ್ಕೆ ಮತಾಂತರವಾಗಿ ಮೊಹಮ್ಮದ್ ಅಶ್ರಫ್ ಎಂದು ಮರು ನಾಮಕರಣ ಮಾಡಿದಿದ್ದನು ಆದರೆ ಅವನು ತಂದಿದ್ದ ಆಧಾರ್ ಕಾರ್ಡ್ ಮೊಹಮ್ಮದ್ ಅಶ್ರಫ್…

Read More

ಮಂಜೇಶ್ವರದಲ್ಲಿ ಚುರುಕುಗೊಂಡ ಮತದಾನ: ಮಧ್ಯಾಹ್ನದ ಬಳಿಕ ಉತ್ತಮ ಸ್ಪಂದನೆ

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಇಂದು ರಾಜ್ಯಾದ್ಯಂತ ಮತದಾನ ನಡೆಯುತ್ತಿದ್ದು, ಗಡಿ ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಮುಂದುವರಿದಿದೆ. ಮತದಾನದ ಆರಂಭಿಕ ನಾಲ್ಕು ಗಂಟೆಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ನೀರಸ ಸ್ಪಂದನೆ ಕಂಡುಬಂದಿದ್ದರೂ, ನಂತರ ಸಮಯ ಕಳೆದಂತೆ ಮತಗಟ್ಟೆಗಳತ್ತ ಮತದಾರರ ಸಂಖ್ಯೆ ಹೆಚ್ಚಳ ಕಂಡಿದೆ. ಮಧ್ಯಾಹ್ನ ವೇಳೆಗೆ ಉತ್ತಮ ಪ್ರಮಾಣದ ಮತದಾನ ದಾಖಲಾಗಿದ್ದು, ಸಂಜೆಯ ವೇಳೆಗೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ….

Read More

ಪ್ರಜಾಪ್ರಭುತ್ವದ ಮಹಾಹಬ್ಬ ಮತ್ತು ಮತದಾರನ ಅಂತರಂಗ:

ಒಂದು ಆತ್ಮಾವಲೋಕನ​ಚುನಾವಣೆ ಎನ್ನುವುದು ಕೇವಲ ಮತಯಂತ್ರದ ಗುಂಡಿ ಒತ್ತುವ ಯಾಂತ್ರಿಕ ಕ್ರಿಯೆಯಲ್ಲ; ಅದು ನಮ್ಮ ಮೌನಕ್ಕೆ ಸಿಗುವ ಸಂವಿಧಾನದ ಧ್ವನಿ. ಇಂದು ಕೇರಳದ ಹಸಿರು ಮಡಿಲಲ್ಲಿ ಪ್ರಜಾಪ್ರಭುತ್ವದ ಸಂಭ್ರಮ ಮನೆಮಾಡಿದೆ. ಗಡಿಯಂಚಿನ ಕಾಲುದಾರಿಗಳಿಂದ ಹಿಡಿದು ಮಹಾನಗರಗಳ ವರೆಗೆ ಎಲ್ಲೆಡೆ ಮತದಾನದ ಕಲರವ. ಆದರೆ, ಈ ಸಡಗರದ ಬೆನ್ನಲ್ಲೇ ಸಾಮಾನ್ಯ ಮತದಾರನ ಪ್ರಜ್ಞೆಯಲ್ಲಿ ಸಾವಿರಾರು ಪ್ರಶ್ನೆಗಳ ಸುಳಿ ಇದೆ.​ಜನಸಾಮಾನ್ಯರ ಮನದ ಗೊಂದಲಗಳು ಸಹಜವಾದವು. “ನಾನು ನೀಡುವ ಒಂದು ಪುಟ್ಟ ಮತ ಈ ಬೃಹತ್ ಆಡಳಿತ ಯಂತ್ರದ ಜಡತ್ವವನ್ನು ಕಳೆಯಬಲ್ಲದೇ?”…

Read More

ಲಾಭದ ಮೈಕು, ಸ್ವಾರ್ಥದ ಕ್ಯಾಮರಾ: ಸಂಸ್ಕೃತಿಯ ಮುಖವಾಡದಡಿ ಬೆಂಕಿ ಕಾಯುವ ಜಾಯಮಾನ

​ಇತ್ತೀಚಿನ ದಿನಗಳಲ್ಲಿ ಕೊರಳಲ್ಲೊಂದು ಮೈಕು, ಕೈಯಲ್ಲೊಂದು ಕ್ಯಾಮರಾ ತೂಗಾಡಿಸಿಕೊಂಡರೆ ಸಾಕು; ಯಾರೂ ಬೇಕಾದರೂ ‘ಸ್ವಯಂ ಘೋಷಿತ ಪತ್ರಕರ್ತ’ರ ಪಟ್ಟಕ್ಕೇರಬಹುದು ಎಂಬಂತಾಗಿದೆ. ಆದರೆ, ಈ ತಾಂತ್ರಿಕ ಉಪಕರಣಗಳ ಹಿಂದೆ ಅಡಗಿರುವ ‘ಆಯ್ದುಕೊಳ್ಳುವ’ (Selective) ಕುಟಿಲ ಬುದ್ಧಿ ಇದೆಯಲ್ಲ, ಅದು ಸಮಾಜದ ಸ್ವಾಸ್ಥ್ಯಕ್ಕೆ ನಿಜಕ್ಕೂ ಅಪಾಯಕಾರಿ. ಸಾಧಕರನ್ನು ಸಂದರ್ಶಿಸುವ ನೆಪದಲ್ಲಿ ತಮಗೆ ಬೇಕಾದವರನ್ನು ಮಾತ್ರ ವೈಭವೀಕರಿಸುವುದು ಮತ್ತು ಅಕಾಡೆಮಿಗಳ ಪವಿತ್ರ ಆವರಣದಲ್ಲಿ ಕೇವಲ ಲಾಭದ ಆಸೆಯೊಂದಿಗೆ ಮೂಗು ತೂರಿಸುವುದು ಇಂದಿನ ಸಾಂಸ್ಕೃತಿಕ ಲೋಕದ ಅತಿ ದೊಡ್ಡ ವಿಪರ್ಯಾಸ. ​1. ಅಸ್ಮಿತೆಯ…

Read More

ಡಾ. ಬಾಲಕೃಷ್ಣ ಎಸ್. ಮದ್ದೋಡಿಗೆ “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ 2026”

ಭಾರತ ಸರ್ಕಾರದಿಂದ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಸದಸ್ಯ, ಖ್ಯಾತ ಪರಿಸರ ವಿಜ್ಞಾನಿ, ಶಿಕ್ಷಣ ತಜ್ಞ ಮತ್ತು ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಎಸ್ ಮದ್ದೋಡಿ ಅವರಗೆ “ಉಡುಪಿ ಶ್ರೀಮಠದ ಕೃಷ್ಣಾನುಗ್ರಹ ಪ್ರಶಸ್ತಿ 2026” ಪರ್ಯಾಯ ಶಿರೂರು ಮಠ, ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ, ಕಥಾಬಿಂದು ಸಾಹಿತ್ಯ ವೇದಿಕೆ (ರಿ.)ರೂವಾರಿ ಪಿ. ವಿ. ಪ್ರದೀಪ್ ಕುಮಾರ್ ಸಾರತ್ಯದಲ್ಲಿ ಇದೇ ಬರುವ…

Read More

ಎನ್‌ಎಸ್‌ಯುಐ 56ನೇ ಸಂಸ್ಥಾಪನಾ ದಿನ: ಮಲ್ಲಿಕಟ್ಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ

NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ NSUI ನ 56ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ “ಧ್ವಜಾರೋಹಣ” ಕಾರ್ಯಕ್ರಮ ಮಲ್ಲಿಕಟ್ಟೆಯ ಇಂದಿರಾ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ NSUI ವಿದ್ಯಾರ್ಥಿ ಸಂಘಟನೆಯ ಹೋರಾಟ, ಇತಿಹಾಸ, ಸಂಘಟನೆಯ ಕಾರ್ಯಕರ್ತರು ಸಾಮಾಜಿಕ ನ್ಯಾಯ, ಸಮಾನತೆ, ಸತ್ಯದಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡು ದೇಶಕ್ಕೆ ಅನನ್ಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ…

Read More

ಸಹಸ್ರ ಕಣ್ಣುಗಳ ಸಾಕ್ಷಿಯಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ವೈಭವ

ದೈವ ಮರಕಲ ಅಂಗಳವು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಾವಿರಾರು ಭಕ್ತರು ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ಪಡೆದು ಭಕ್ತಿಭಾವದಲ್ಲಿ ತೇಲಿದರು. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಮಂಗಲದಾಯಕ ಮೂರ್ತಿಯ ದಿವ್ಯ ದರ್ಶನ ನಿನ್ನೆಯ ದಿನವಾಯಿತ್ತು . ಸುಮಾರು ನೂರು ವರ್ಷಗಳ ಬಳಿಕ ಕೀಕಾನ ಗ್ರಾಮದಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ನೀಡಿದ್ದು, ಸಾಕ್ಷಾತ್ ಶಿವಾಂಶ ಹೊಂದಿದ ದೈವದ ಅವತಾರ ಭಕ್ತರಲ್ಲಿ ಮೈ ರೋಮಾಂಚನ ಮೂಡಿಸಿತು….

Read More
error: Content is protected !!