Headlines

ಸೋಲಾರ್ ಡ್ರೈಯರ್‌ನಲ್ಲಿದ್ದ ಬರೋಬ್ಬರಿ 215 ಕೆಜಿ ಅಡಿಕೆ ದರೋಡೆ; ಮೂವರು ಖದೀಮ ಕಳ್ಳರ ಬಂಧನ

ಕಾಸರಗೋಡು: ಬದಿಯಡ್ಕ ಸಮೀಪದ ಏತಡ್ಕದಲ್ಲಿ ಸೋಲಾರ್ ಡ್ರೈಯರ್‌ನ ಟರ್ಪಾಲ್ ಹರಿದು, ಅದರೊಳಗೆ ಭದ್ರವಾಗಿ ದಾಸ್ತಾನು ಇರಿಸಲಾಗಿದ್ದ ಲಕ್ಷಾಂತರ ಮೌಲ್ಯದ ಅಡಿಕೆಯನ್ನು ಕಳವುಗೈದಿದ್ದ ಆರೋಪಿಗಳನ್ನು ಬದಿಯಡ್ಕ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ. ​ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಾದ ಕೆ. ಗಣೇಶ (29), ಶಿಶಿರ್ ಕುಮಾರ್ (19) ಮತ್ತು ಸತೀಶ (31) ಬಂಧಿತ ಆರೋಪಿಗಳಾಗಿದ್ದಾರೆ. ​ಜುಲೈ 2ರ ರಾತ್ರಿ, ಏತಡ್ಕದ ನಿವಾಸಿ ಇಬ್ರಾಹಿಂ ಎಂಬುವವರ ಮನೆಯ ಸಮೀಪವಿರುವ ಸೋಲಾರ್ ಡ್ರೈಯರ್ ಅನ್ನು ಗುರಿಯಾಗಿಸಿಕೊಂಡ ಕಳ್ಳರು, ಟರ್ಪಾಲ್…

Read More

ಕನ್ನಡ ಪಯಸ್ವಿನಿ ಮಾಧ್ಯಮ ರತ್ನ–ಅಚೀವ್ಮೆಂಟ್ ಪ್ರಶಸ್ತಿ 2026ಕ್ಕೆ ಗಿರೀಶ್ ಪಿಎಂ ಚಿತ್ತಾರಿ ಆಯ್ಕೆ

ಕಾಸರಗೋಡು, ಜು. 11: ಗಡಿನಾಡು ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಸಂಸ್ಥೆಗಳಾದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 26, 2026ರಂದು ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದಲ್ಲಿ ಕಾಸರಗೋಡು ಜಿಲ್ಲೆಯ ಚಿತ್ತಾರಿ ನಿವಾಸಿ ಗಿರೀಶ್ ಪಿಎಂ ಚಿತ್ತಾರಿ ಅವರಿಗೆ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಮಾಧ್ಯಮ ರತ್ನ – ಅಚೀವ್ಮೆಂಟ್ ಪ್ರಶಸ್ತಿ 2026” ಪ್ರದಾನ ಮಾಡಲಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ,…

Read More

ಶಿಕ್ಷಣ ತಜ್ಞ, ಜನಪ್ರಿಯ ಕವಿ, ಸಾಹಿತಿ, ಶ್ರಿ ವಿ. ಬಿ. ಕುಳಮರ್ವ ನಾರಾಯಣಮಂಗಳ ರೀಗೆ ರಾಷ್ಟ್ರೀಯ ಪ್ರಶಸ್ತಿ 2026

ಕಾಸರಗೋಡು : ಗಡಿನಾಡು ಕಾಸರಗೋಡಿನ ಖ್ಯಾತ ಕನ್ನಡ ಸಂಸ್ಥೆ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ, 26.7.2026 ರಂದು ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ “ದಲ್ಲಿ ಶ್ರೀ ವಿ. ಬಿ. ಕುಲಮರ್ವ ಇವರೀಗೆ ಇವರ ಕನ್ನಡ, ಭಾಷೆ, ಸಾಹಿತ್ಯ, ಸಂಸ್ಕೃತಿಯ ಸರ್ವತೋಮುಖ ಸಾಧನೆ ಪರಿಗಣಿಸಿ, ಕನ್ನಡ ಭವನ ಕೊಡಮಾಡುವ ಗೌರವಾನ್ವಿತ ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026….

Read More

ಮಂಡ್ಯದ ಕವಯತ್ರಿ ಸುಮನ ರಾವ್‌ಗೆ ಕಾಸರಗೋಡಿನ ಪ್ರತಿಷ್ಠಿತ ಸಾಹಿತ್ಯ ರತ್ನ ಪ್ರಶಸ್ತಿ

ಕಾಸರಗೋಡು : ಮಂಡ್ಯ ಜಿಲ್ಲೆಯ ಜನಪ್ರಿಯ ಕವಯತ್ರಿ, ಆದರ್ಶ ಶಿಕ್ಷಕಿ ಹಾಗೂ ಗುರುಕುಲ ಪ್ರತಿಷ್ಠಾನದ ಮಂಡ್ಯ ಜಿಲ್ಲಾಧ್ಯಕ್ಷೆ ಶ್ರೀಮತಿ ಸುಮನ ರಾವ್ ಅವರಿಗೆ ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಸಂಸ್ಥೆಯಾದ ಕನ್ನಡ ಭವನ ಮತ್ತು ಗ್ರಂಥಾಲಯ ನೀಡುವ ‘ಕನ್ನಡ ಪಯಸ್ವಿನಿ ಸಾಹಿತ್ಯ ರತ್ನ – ಅಚೀವ್‌ಮೆಂಟ್ ಅವಾರ್ಡ್–2026’ ಅಂತರ್ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.ಜುಲೈ 26ರಂದು…

Read More

ಅರಿವಳಿಕೆ ನೀಡಿದ ಬೆನ್ನಲ್ಲೇ ಸ್ಥಿತಿ ಗಂಭೀರಗೊಂಡಿದ್ದ ಒಂದೂವರೆ ವರ್ಷದ ಮಗು ಸಾವು

ಕಾಸರಗೋಡು/​ಕಣ್ಣೂರು: ಅರಿವಳಿಕೆ ನೀಡಿದ ಬಳಿಕ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿದೆ.ಪಯ್ಯನ್ನೂರಿನ ನಿವಾಸಿ ಸೂರಜ್ ಅವರ ಪುತ್ರ ದೇವಾಂಶ್ ಶೌರ್ಯ ಮೃತಪಟ್ಟ ಮಗು. ​ಪಯ್ಯನ್ನೂರಿನ ಬೇಬಿ ಮೆಮೊರಿಯಲ್ ಆಸ್ಪತ್ರೆಯಲ್ಲಿ ಮಗುವಿಗೆ ಅರಿವಳಿಕೆ ನೀಡಿದ ನಂತರ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಬಳಿಕ ಕಣ್ಣೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಕೊನೆಯುಸಿರೆಳೆದಿದೆ. ​ಕೆಲವು ದಿನಗಳ ಹಿಂದೆ ಆಟವಾಡುವಾಗ ಮಗುವಿನ ತುಟಿ ಮತ್ತು ಗಲ್ಲಕ್ಕೆ ಗಾಯವಾಗಿತ್ತು. ಹೊಲಿಗೆ ಹಾಕುವ ಸಲುವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ…

Read More

ಮಂಗಳೂರು ಮಿತ್ರ ಮಂಡಳಿ -2.0 ಜುಲೈ 18 ರಂದು ಉದ್ಘಾಟನೆ

1920 ರ ಕಾಲಘಟ್ಟದಲ್ಲಿ ಕರಾವಳಿ ಕರ್ನಾಟಕವೂ ಸೇರಿದಂತೆ ಇಡೀ ರಾಷ್ಟ್ರವು ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ರಾಷ್ಟ್ರೀಯತೆ ಎನ್ನುವುದು ಸಾಹಿತ್ಯದ ಮುಖ್ಯ ತಿರುಳಾಗಿ ಸಾಹಿತಿಗಳ ಲೇಖನದಿಂದ ಹೊರಹೊಮ್ಮುತ್ತಿದ್ದ ಕಾಲ. ಈ ಹಂತದಲ್ಲಿ ಕನ್ನಡ ಭಾಷೆಯ ಮೂಲಕ ರಾಷ್ಟ್ರೀಯತೆಯ ಭಾವವನ್ನು ಹರಡಿಸಲು ಕರಾವಳಿಯ ಕನ್ನಡ ಪಂಡಿತರು ದೃಢವಾದ ಹೆಜ್ಜೆಯನ್ನು ಇಟ್ಟಿದ್ದರು. ಮಂಗಳೂರಿನ ಕೆನರಾ ಹೈಸ್ಕೂಲಿನ ಮರದಡಿಯಲ್ಲಿ ಸಮಾನ ಮನಸ್ಕ ಸಾಹಿತಿಗಳು ಸೇರಿ ಚಿಂತನೆ ನಡೆಸಿ, ಕನ್ನಡ ಸಾಹಿತ್ಯ ಲೋಕದಲ್ಲಿಯೂ ಅನೇಕ ಪ್ರಯೋಗಗಳನ್ನು ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದರು.. ಅವರಿಗೆಲ್ಲಾ…

Read More

ಕಣ್ಣೂರು: ಕಾರು ಮರಕ್ಕೆ ಡಿಕ್ಕಿ – ನಾಲ್ವರ ದುರ್ಮರಣ

ಕಾಸರಗೋಡು/​ಕಣ್ಣೂರು: ಶುಕ್ರವಾರ ರಾತ್ರಿ ಕಣ್ಣೂರಿನ ಚಾಲೋಡ್ ಬಳಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉತ್ತರ ಪ್ರದೇಶದ ಮೂಲದ ಪರಮ್ ಛೇತ್ರಿ, ಹರ್ಷ್ ಹಾಗೂ ಕೇರಳದ ರಿಜ್ವಾನ್ ಮತ್ತು ಶಾನ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ​ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಗ್ನಿಶಾಮಕ ದಳದವರು ಕಾರನ್ನು ಕತ್ತರಿಸಿ…

Read More

160ಕ್ಕೂ ಹೆಚ್ಚು ಮೀನಿನ ಪೆಟ್ಟಿಗೆ ಕಳವು; ಕೆಲವೇ ಗಂಟೆಗಳಲ್ಲಿ ಆರೋಪಿ ಸೆರೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಬದಿಯ ಮೀನು ಮಾರಾಟ ಮಳಿಗೆಯೊಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಪೆಟ್ಟಿಗೆಗಳನ್ನು ಕಳವುಗೈದ ಪ್ರಕರಣದಲ್ಲಿ ಮೇಲ್ಪರಂಬ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.ಉದುಮ ಬಂಗರಕುನ್ನು ನಿವಾಸಿ ಸಿ.ಎ. ಸಲೀಂ (41) ಬಂಧಿತ ಆರೋಪಿ. ​ಮಳಿಗೆಯ ಮಾಲೀಕ ಟಿ.ಎಸ್. ರಹೀಂ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿಯು ಕಳೆದ ಕೆಲವು ದಿನಗಳಿಂದ ಒಟ್ಟು 160ಕ್ಕೂ ಹೆಚ್ಚು ಮೀನಿನ ಪೆಟ್ಟಿಗೆಗಳನ್ನು ಕಳವು ಮಾಡಿದ್ದು, ಇದರ ಮೌಲ್ಯ ಒಂದೂವರೆ ಲಕ್ಷ ರೂಪಾಯಿಗೂ ಅಧಿಕವಾಗಿದೆ. ಸಿಸಿಟಿವಿ ದೃಶ್ಯಾವಳಿಗಳು…

Read More

ಉಚಿತ ಕ್ಷೌರ ಸೇವೆಯಿಂದ ಆಶ್ರಮವಾಸಿಗಳ ಮುಖದಲ್ಲಿ ಮಂದಹಾಸ; ಕೋಟ ಸವಿತ ಸಮಾಜದ ಮಾನವೀಯ ಸೇವೆ

ಉಡುಪಿ: ಸಮಾಜಸೇವೆ ಎಂದರೆ ಕೇವಲ ಆರ್ಥಿಕ ನೆರವು ನೀಡುವುದಲ್ಲ, ತಮ್ಮ ವೃತ್ತಿಯನ್ನೇ ಸೇವೆಯ ಮಾಧ್ಯಮವನ್ನಾಗಿ ಮಾಡಿಕೊಂಡು ಮಾನವೀಯತೆಯನ್ನು ಮೆರೆದರೂ ಅದು ನಿಜವಾದ ಸಮಾಜಸೇವೆಯೇ ಎಂಬುದಕ್ಕೆ ಉಡುಪಿ ಜಿಲ್ಲೆಯ ಕೋಟ ವಲಯ ಸವಿತ ಸಮಾಜ ಮಾದರಿಯಾಗಿದೆ. ಕಳೆದ ಒಂದು ವರ್ಷದಿಂದ ಸಂಘದ ಸದಸ್ಯರು ಸಾಲಿಗ್ರಾಮ ಸಮೀಪದ ತೋಡ್ಕಟ್ಟು ಹೊಸ ಬದುಕು ಆಶ್ರಮಕ್ಕೆ ಪ್ರತಿ ತಿಂಗಳು ಭೇಟಿ ನೀಡಿ ಆಶ್ರಮವಾಸಿಗಳಿಗೆ ಉಚಿತ ಕ್ಷೌರ ಸೇವೆ ಸಲ್ಲಿಸುವ ಮೂಲಕ ಆತ್ಮಗೌರವ ಮತ್ತು ಆತ್ಮವಿಶ್ವಾಸ ತುಂಬುವ ಕಾರ್ಯದಲ್ಲಿ ತೊಡಗಿದ್ದಾರೆ. ತೋಡ್ಕಟ್ಟು ಹೊಸ ಬದುಕು…

Read More

ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಹೊಸದಿಲ್ಲಿಗೆ ಭಾರತದಲ್ಲೇ ಅಗ್ರಸ್ಥಾನ

ಹೊಸದಿಲ್ಲಿ: ಜಾಗತಿಕ ವಾಸಯೋಗ್ಯ ನಗರಗಳ ಸೂಚ್ಯಂಕ-2026ರಲ್ಲಿ ಹೊಸದಿಲ್ಲಿ 120ನೇ ಸ್ಥಾನ ಪಡೆಯುವ ಮೂಲಕ ಭಾರತದ ಅತ್ಯಂತ ವಾಸಯೋಗ್ಯ ನಗರವಾಗಿ ಹೊರಹೊಮ್ಮಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU) ಬಿಡುಗಡೆ ಮಾಡಿರುವ ಗ್ಲೋಬಲ್ ಲಿವೆಬಿಲಿಟಿ ಇಂಡೆಕ್ಸ್-2026 ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಜಗತ್ತಿನ 173 ನಗರಗಳನ್ನು ಮೌಲ್ಯಮಾಪನ ಮಾಡಿರುವ ವರದಿಯಲ್ಲಿ, ಡೆನ್ಮಾರ್ಕ್‌ನ ಕೋಪನ್‌ಹೇಗನ್ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಸ್ಟ್ರಿಯಾದ ವಿಯೆನ್ನಾ ಎರಡನೇ ಹಾಗೂ ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೂರನೇ ಸ್ಥಾನ ಪಡೆದಿವೆ. ಭಾರತದ ನಗರಗಳ ಪೈಕಿ ಹೊಸದಿಲ್ಲಿ…

Read More
error: Content is protected !!