Avatar

NAMMA MEDIA 24X7

ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ರಸ್ತೆ ದುರಸ್ಥಿ ಇಲ್ಲದೆ ಸಾರ್ವಜನಿಕರ ಸಂಕಷ್ಟ

ರಾಜ್ಯ ಹೆದ್ದಾರಿಯಿಂದ ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ಸುಮಾರು ನೂರು ಮೀಟರ್ ರಸ್ತೆ ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ.ತೀವ್ರ ಏರಿಳಿತ ಇರುವ ಈ ರಸ್ತೆ ಸಂಪೂರ್ಣವಾಗಿ ಕುಸಿದು ಹೋಗಿರುವುದರಿಂದ ಪೊಲೀಸ್ ಠಾಣೆಗೆ ಆಗಮಿಸುವ ಸಾರ್ವಜನಿಕರ ವಾಹನಗಳು ಹಾಗೂ ಪೊಲೀಸ್ ವಾಹನಗಳು ಕಷ್ಟಪಟ್ಟು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು, ಸಾರ್ವಜನಿಕ ಕಾರ್ಯಕರ್ತರು ಹಾಗೂ ರಾಜಕೀಯ ನಾಯಕರು ನಿರಂತರವಾಗಿ ಈ ಮಾರ್ಗವನ್ನು ಬಳಸುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.ದಶಕಗಳ ಹಿಂದೆ ಡಾಮರ್…

Read More

ಮಾರ್ಚ್ 15ರಂದು ಕುಂಬಳೆಯಲ್ಲಿ ಟೀಮ್ ಜೋಶ್ ವಿಶ್ವಕರ್ಮ ಕ್ರಿಕೆಟ್ ಪ್ರೀಮಿಯರ್ ಲೀಗ್

ಕುಂಬಳೆ: ಟೀಮ್ ಜೋಶ್ ಕಾಸರಗೋಡುವಿನ ನೇತೃತ್ವದಲ್ಲಿ ಮಾರ್ಚ್ 15 ಆದಿತ್ಯವಾರದಂದು ಕುಂಬಳೆ ಶಾಲಾ ಮೈದಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ನಡೆಯಲಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 25,000 ನಗದು ಹಾಗೂ ಫಲಕ, ದ್ವಿತೀಯ ಬಹುಮಾನ 15,000 ಹಾಗೂ ಫಲಕ ದೊರೆಯಲಿದೆ. ಕ್ರೀಡೆಯ ಪೂರ್ವಭಾವಿಯಾಗಿ ಸ್ಪರ್ಧಿಸುವ ತಂಡಗಳ ಹರಾಜು ಪ್ರಕ್ರಿಯೆಯು ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸುವ ಫೈರ್ ಬ್ಲ್ಯಾಸ್ಟರ್ ಮಧೂರು, ಟೀಮ್ ಶ್ಲಾಘ, ಯಂಗ್ ಸ್ಟಾರ್ಸ್ ಕಾಸರಗೋಡು,…

Read More

ಮಂಜೇಶ್ವರ ಗ್ರಾಮ ಪಂಚಾಯತ್ 2026-27 ವಾರ್ಷಿಕ ಯೋಜನೆಗೆ ಅಭಿವೃದ್ಧಿ ಸೆಮಿನಾರ್

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ವಾರ್ಷಿಕ ಯೋಜನೆ ಹಾಗೂ 14ನೇ ಹಣಕಾಸು ಆಯೋಗದ ಅನುದಾನದ ಯೋಜನಾ ತಯಾರಿಯ ಭಾಗವಾಗಿ ಹಮ್ಮಿಕೊಳ್ಳಲಾದ ‘ಅಭಿವೃದ್ಧಿ ಸೆಮಿನಾರ್’ ಮಂಜೇಶ್ವರದ ಎ ಕೆ ಗಾರ್ಡನ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು.ಮುಂಬರುವ ಹಣಕಾಸು ವರ್ಷದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮತ್ತು ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಸೆಮಿನಾರ್ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ, ಕಳೆದ ಫೆಬ್ರವರಿ 9 ರಿಂದ ಫೆಬ್ರವರಿ 17ರ ವರೆಗೆ ಪಂಚಾಯತ್‌ನ ವಿವಿಧ ವಾರ್ಡ್‌ಗಳಲ್ಲಿ ಗ್ರಾಮ ಸಭೆಗಳನ್ನು ಹಾಗೂ ವರ್ಕಿಂಗ್ ಗ್ರೂಪ್…

Read More

ಕನ್ನಿ( ಪ್ರಥಮ ಮತದಾರರು)ಮತದಾರರನ್ನು ಭೇಟಿ ಮಾಡಲು ‘ಮತದಾರರ ಜಾಗೃತಿ ವಾಹನ’ ಕ್ಯಾಂಪಸ್‌ಗಳಿಗೆ

ಜನಾಧಿಪತ್ಯ ಪ್ರಕ್ರಿಯೆಯಲ್ಲಿ ಚುನಾವಣೆಯ ಮಹತ್ವವನ್ನು ತಿಳಿಸಿ, ಕನ್ನಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ” ಮತದಾರರ ಜಾಗೃತಿ” ವಾಹನಕ್ಯಾಂಪಸ್‌ಗಳತ್ತ ಪ್ರಚಾರ ಯಾತ್ರೆ ನಡೆಸಿತು.ಇಂದಿನ ಕಾರ್ಯಕ್ರಮವು ಮಂಜೇಶ್ವರದ ಗೋವಿಂದ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಕಲಾವಿದರಾಗಿ ಗಾಯಕರು ರಂಷಿ ಪಟ್ಟುವಂ, ಸುದೇಶ್ ಭಾಗವಹಿಸಿ ಜಾಗೃತಿ ಸಂದೇಶವನ್ನು ಸಂಗೀತದ ಮೂಲಕ ಹರಡಿದರು. ಕುಟುಂಬಶ್ರೀ ಬ್ಲಾಕ್ ಕೋಆರ್ಡಿನೇಟರ್ ಸಚಿನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು….

Read More

ಇನ್ನು ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುತ್ತಾರೆ

ರಾತ್ರಿ ಬೇಗ ಮಲಗುವವರು..ಬೆಳಿಗ್ಗೆ ಬೇಗ ಏಳುವವರು…ನಸುಕಿನಲ್ಲಿ ವಾಯುವಿಹಾರಮಾಡುವವರು..ಅಂಗಳ ಹಾಗೂ ಗಿಡಬಳ್ಳಿಗಳಿಗೆನೀರುಣಿಸುವವರು…ಮುಂಜಾನೆ ದೇವರ ಪೂಜೆಗೆಹೂ ಕೊಯ್ಯುವವರು..ಪ್ರತಿದಿನ ದೇವಸ್ಥಾನ, ಮಂದಿರಗಳಿಗೆ ಹೋಗುವವರು..ದಾರಿಯಲ್ಲಿ ಕಂಡಾಗ ಆತ್ಮೀಯವಾಗಿ ಮುಗುಳ್ನಗುವವರು..ಜನರ ಸುಖ ದುಃಖಗಳನ್ನು ವಿಚಾರಿಸುವವರು..ಎರಡೂ ಕೈಗಳಿಂದ ಆತ್ಮೀಯ ವಾಗಿ ನಮಸ್ಕರಿಸುವವರು…. ಹಳೆಯ ಟೆಲಿಫೋನ್ಬಳಸುವವರು….ದಿನಚರಿ ಬರೆಯುವವರು…Wrong ನಂಬರ್ ಕರೆಬಂದರೂ ಸೌಜನ್ಯದಿಂದ ಒಂದೆರಡು ಮಾತುಗಳನ್ನುಆಡುವವರು…ವರ್ತಮಾನ ಪತ್ರಿಕೆಯನ್ನುಓದುವವರು…ವ್ರತ ನಿಯಮ ಪಾಲಿಸುವವರು.ಸಮಾಜಕ್ಕೆ ಹೆದರುವವರು….ಹಳೆಯ ಚೆಡ್ಡಿ, ಪಂಚೆ, ಚಪ್ಪಲಿ,ಬನಿಯನ್ ಧರಿಸುವವರು..ಮನೆಯಲ್ಲಿಯೇ ಅಡಿಗೆ ಮಾಡಿ ಊಟ ಮಾಡುವವರು,ಉಪ್ಪಿನಕಾಯಿ, ಹಪ್ಪಳ, ಸಂಡಿಗೆಮನೆಯಲ್ಲೇ ಮಾಡುವವರು..ಮನೆಯಲ್ಲೇ ಮಸಾಲೆರುಬ್ಬುವವರು….ಕುಂಕುಮದ ನೀರಲ್ಲಿ ದೃಷ್ಟಿ ತೆಗೆಯುವವರು..ಬೀದಿ ಬದಿಯ ವ್ಯಾಪಾರದವರೊಡನೆ ಚೌಕಾಸಿ ಮಾಡುವವರು……

Read More

ಮಂಜೇಶ್ವರ ಬಜಿಲೇರಿಯ ಬಡಾಜೆ ಕಂಚಾರ್ದ್ ನ ಕುಟುಂಬಸ್ತರ ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ನೇಮೋತ್ಸವ

ಮಂಜೇಶ್ವರ: ಬಾಕುಡ ಸಮಾಜದ 18 ದೈವಸ್ಥಾನದಲ್ಲಿ ಒಂದಾದ ಬಡಾಜೆ ಕಂಚಾರ್ದ್ ನ ಕುಟುಂಬಸ್ತರ ಶ್ರೀ ಕೋಮರಾಯ, ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಬಜಿಲೇರಿಯ,ಮಂಜೇಶ್ವರ ಇಲ್ಲಿ ದೈವಗಳ ನೆಮೋತ್ಸವವು 2026 ರ ಮಾರ್ಚ್ 21, 22 ರಂದು ಜರಗಲಿದೆ. ತಾರೀಕು 21 ಶನಿವಾರದಂದು ಬೆಳಗ್ಗೆ ಬಡಾಜೆ ಬೂಡು ಶ್ರೀ ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶುದ್ದಿ ಕಲಶ, ಗಣಹೋಮ ಜರಗಿಸಂಜೆ 4 ರಿಂದ ಸ್ಥಳ ಗುಳಿಗ, ಸುಬ್ಬಿ ಗುಳಿಗ ದೈವಗಳ ನೇಮ.ಸಂಜೆ 6 ಗಂಟೆಗೆ ದೈವಗಳ ಭಂಡಾರ ಏರಿ, ಅನ್ನದಾನ…

Read More

ಮಂಜೇಶ್ವರದ ಪೊಯ್ಯೇ ಜುಮಾಧಿ ಬಂಟ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕೋತ್ಸವ ಸಂಪನ್ನ

ಮಂಜೇಶ್ವರ: ಪೊಯ್ಯೇ ಜುಮಾಧಿ ಬಂಟ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕೋತ್ಸವದ ಸಂಭ್ರಮದಿಂದ ಹಾಗೂ ಭಕ್ತಿಭಾವದಿಂದ ನೆರವೇರಿತು.ಕಾರ್ಯಕ್ರಮದಲ್ಲಿ ದೈವಸ್ಥಾನದ ಗೌರವ ಅಧ್ಯಕ್ಷರಾದ ವಿಶ್ವನಾಥ್ ಉಚ್ಚಿಲ್, ಅಧ್ಯಕ್ಷರಾದ ವಿಜಯ ಕುಮಾರ್ ಉಳ್ಳಾಲ್ ಉಪಸ್ಥಿತರಿದ್ದರು. ಮಾಡ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಲ್ಚಾಡ, ನಾರಾಯಣ ಗುರಿಕಾರ, ಮಾದವ ಮಾಡ, ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ನಿಖಿಲ್ ಗುರಿಕಾರ, ವಸಂತ ಉಚ್ಚಿಲ್, ಗಣೇಶ್ ಪಾವೂರು, ಹರೀಶ್ ಬೆಂಗಳೂರು, ಗಂಗಾಧರ ಮಂಗಳೂರು, ಪದ್ಮನಾಭ ಪೊಯ್ಯೇ, ಸೀತಾರಾಮ ಮಜಿಬೈಲ್, ಯಶವಂತ ಉಚ್ಚಿಲ್, ರಾಘವ ಕಣ್ಣೀರ್ ತೋಟ…

Read More

ಕಾಸರಗೋಡು: ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳದಲ್ಲಿ 55ನೇ ಪ್ರತಿಷ್ಠಾ ಮಹೋತ್ಸವಕ್ಕೆ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳದಲ್ಲಿ ಏಪ್ರಿಲ್ 3 ರಿಂದ 5, 2026ರವರೆಗೆ ನಡೆಯಲಿರುವ 55ನೇ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಶ್ರೀ ಲೋಕೇಶ್ ಕೊಪ್ಪಲು, ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ಖಜಾಂಚಿ ಬಾಲಕೃಷ್ಣ ಪರಿಯಾರ, ಜೊತೆ ಕಾರ್ಯದರ್ಶಿ ಸುರೇಶ್ ತೋಟ, ಸತೀಶ್ ಪರಿಯಾರ, ಅರ್ಚಕ ದಯಾನಂದ ಕೊಪ್ಪಲು, ಹಿರಿಯ ಸದಸ್ಯರಾದ ಸತೀಶ್ ಕೆ. ದೇರೆಬೈಲು, ರವೀಂದ್ರ ಸಿ.ಹೆಚ್. ಕೊಪ್ಪಲು, ಜನಾರ್ಧನ ಪರಿಯಾರ, ಉಮೇಶ್…

Read More

ಮಂಗಳೂರು ದಕ್ಕೆಯಲ್ಲಿ ದುರ್ಘಟನೆ: ಲೈಟ್ ಕಂಬ ಮುರಿದು ಬಿದ್ದು ಮೀನು ಕಾರ್ಮಿಕ ಸಾವು

ಮಂಗಳೂರು: ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬವೊಂದು ಏಕಾಏಕಿ ಮುರಿದು ವ್ಯಕ್ತಿಯ ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ.ಮೃತರನ್ನು ತಮಿಳುನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ. ಅವರು ದಕ್ಕೆಯಲ್ಲಿ ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.ಇಂದು ದಕ್ಕೆಯಲ್ಲಿ ಮೀನಿನ ಬಾಕ್ಸ್ ಹೊರುತ್ತಿದ್ದ ವೇಳೆ ಲೈಟ್ ಕಂಬ ಬುಡದಿಂದಲೇ ಮುರಿದು ಬಿದ್ದಿದೆ. ಅಚಾನಕ ಸಂಭವಿಸಿದ ಈ ಘಟನೆದಲ್ಲಿ ಕಂಬ ಮುರುಗನ್ ಅವರ ಮೇಲೆ ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ…

Read More

​ಮಂಜೇಶ್ವರ : ಪಾವೂರು ನಿವಾಸಿಯ ಅಪಹರಣ ಪ್ರಕರಣ – ನಾಲ್ವರು ಆರೋಪಿಗಳ ಬಂಧನ

​ಮಂಜೇಶ್ವರ: ಮಂಜೇಶ್ವರ ಸಮೀಪದ ಪಾವೂರಿನಲ್ಲಿ ವ್ಯಕ್ತಿಯೊಬ್ಬರನ್ನು ಮನೆಯಿಂದ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ​ಪಾವೂರು ಕೊಂಬಂಗುದಿಯ ಅಬ್ದುಲ್ ರಹಮಾನ್ ಎಂಬುವವರನ್ನು ಫೆಬ್ರವರಿ 20ರಂದು ರಾತ್ರಿ 10:30 ಗಂಟೆಗೆ ಕಾರಿನಲ್ಲಿ ಬಂದ ನಾಲ್ವರ ತಂಡ ಬಲವಂತವಾಗಿ ಕರೆದೊಯ್ದಿತ್ತು. ಈ ಕುರಿತು ಅಬ್ದುಲ್ ರಹಮಾನ್ ಅವರ ಪತ್ನಿ ತಾಹಿರಾ ಪೊಲೀಸರಿಗೆ ದೂರು ನೀಡಿದ್ದರು.ಇದರಂತೆ ಮಂಜೇಶ್ವರ ಠಾಣಾಧಿಕಾರಿ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ​…

Read More
error: Content is protected !!