Avatar

NAMMA MEDIA 24X7

ಪೊಸೋಟ್ ಸೇತುವೆ ಕೆಳಗೆ ಶೌಚಾಲಯ ಮಲಿನ ನೀರು – ಸ್ಥಳೀಯರಲ್ಲಿ ಆತಂಕ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೊಸೋಟ್ ಸೇತುವೆ ಕೆಳಭಾಗದಲ್ಲಿ ರಾತ್ರಿ ವೇಳೆ ಟ್ಯಾಂಕರ್ ಲಾರಿಗಳ ಮೂಲಕ ಶೌಚಾಲಯ ಮಲಿನ ನೀರನ್ನು ನದಿಗೆ ಬಿಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರ ಪ್ರಕಾರ, ಮಲಿನ ನೀರು ನದಿಗೆ ಹರಿಯುವುದರಿಂದ ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಮನೆಗಳ ಬಾವಿಗಳಿಗೂ ಈ ಮಲಿನ ನೀರು ಸೇರಿಕೊಂಡಿರುವುದಾಗಿ ಆರೋಪಿಸಲಾಗಿದೆ. ಇದೇ ಪ್ರದೇಶದಲ್ಲಿ…

Read More

ಕುಂಜತ್ತೂರಿನಲ್ಲಿ ಅಪರೂಪದ ಹಣ್ಣುಗಳ ತೋಟ – ಪ್ರವಾಸಿ ಸನ ಸಲೀಂ ಅವರ ಹಸಿರು ಸಾಧನೆ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಜತ್ತೂರಿನಲ್ಲಿ ಅಪರೂಪದ ಹಣ್ಣುಗಳ ತೋಟವು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಶಿಷ್ಟ ತೋಟವು ಸ್ಥಳೀಯ ಉದ್ಯಮಿ ಹಾಗೂ ಪ್ರವಾಸಿ ಸನಾ ಸಲೀಂ ಅವರ ಮನೆಯ ಆವರಣದಲ್ಲಿ ಬೆಳೆದು ನಿಂತಿದೆ. ಇಲ್ಲಿ ಕಣ್ಣಿಗೆ ಹಬ್ಬದಂತೆ ಕಾಣುವ ಈಂತಪ್ಪಳ (ಖರ್ಜೂರ) ಮರಗಳು ತುಂಬು ಫಲಗಳಿಂದ ಕಂಗೊಳಿಸುತ್ತಿವೆ. ಈ ತೋಟದಲ್ಲಿ ಬದಾಮ್ ಮಾವು, ಮಲ್ಲಿಕಾ ಮಾವು, ಕಾಲಪ್ಪಾಡಿ ಮಾವು, ಕೆನಿಯನ್ ಮಾವು ಸೇರಿದಂತೆ ವಿವಿಧ ಮಾವಿನ ತಳಿಗಳು ಬೆಳೆಸಲಾಗಿದೆ. ಜೊತೆಗೆ ಚಾಂಪೆ, ಮಲ್ಬೆರಿ, ಮಿರಾಕಲ್ ಫ್ರೂಟ್…

Read More

ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : 1,2ನೇ ಆರೋಪಿಯ ಜಾಮೀನು ತಿರಸ್ಕೃತ.

ಪುತ್ತೂರು: ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 1ನೇ ಮತ್ತು 2ನೇ ಆರೋಪಿಯ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕೃತಗೊಳಿಸಿ ಆದೇಶಿಸಿದೆ. 2023 ನ.6ರಂದು ನೆಹರುನಗರದಲ್ಲಿ ರಾತ್ರಿ ವೇಳೆ ಅಕ್ಷಯ್ ಕಲ್ಲೇಗ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಪಡೀಲು ನಿವಾಸಿ ಮನೀಶ್, ಕೃಷ್ಣನಗರದ ಚೇತನ್, ಬನ್ನೂರಿನ ಮಂಜುನಾಥ್ ಯಾನೆ ಹರಿ ಹಾಗೂ ಕೇಶವ ಪಡೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಜಾಮೀನು…

Read More

ಮಂಗಳೂರಿನಲ್ಲಿ ‘ಕಾರ್ಪೊರೇಟ್ ಜಿಹಾದ್’ ಮತ್ತು ‘ಲವ್ ಜಿಹಾದ್ ವಿರುದ್ಧ ವಿಹಿಂಪ ಮತ್ತು ಬಜರಂಗ ದಳ ಪ್ರತಿಭಟನೆ

ಮಂಗಳೂರು: ನಾಸಿಕ್‌ನ ಕಾರ್ಪೊರೇಟ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ‘ಕಾರ್ಪೊರೇಟ್ ಜಿಹಾದ್’ ಹಾಗೂ ಮತಾಂತರ ಪ್ರಕರಣಗಳು ಮತ್ತು ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಿರುವ ‘ಲವ್ ಜಿಹಾದ್’ ಘಟನೆಗಳನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಮಂಗಳೂರು ಘಟಕದ ವತಿಯಿಂದ ಶುಕ್ರವಾರ ಹಂಪನಕಟ್ಟೆಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರಮುಖ ಭಾಷಣ ಮಾಡಿದ ವಕೀಲ ಪೃಥ್ವೀಶ್ ಧರ್ಮಸ್ಥಳ ಮಾತನಾಡಿ, ದೇಶದಲ್ಲಿ ಮೊಘಲರ ಆಕ್ರಮಣ ಕಾಲದಲ್ಲಿ ನಡೆದಿದ್ದ ಮತಾಂತರ ಪ್ರಕ್ರಿಯೆ ಇದೀಗ ಬೇರೆಯ…

Read More

ಕೇರಳ ಸರಕಾರದ ನೂತನ ಮುಖ್ಯಮಂತ್ರಿಗಳಿಗೆ ಮಲಯಾಳ ಭಾಷಾ ಬಿಲ್ಸ್ – 2025 ಮರು ಪರಿಶೀಲಿಸಲು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮನವಿಗೆ ನಿರ್ಧಾರ

ಕೇರಳ ಸರಕಾರವು (ಮಲಯಾಳ ಭಾಷಾ ಬಿಲ್ಸ್- 2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡಲು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸುತ್ತಿದೆ. ಭಾಷಾ ಅಲ್ಪಸಂಖ್ಯಾಕರ ರಕ್ಷಣೆಗೆ ಸಂವಿಧಾನವುಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ ಹಕ್ಕುಗಳನ್ನು ವ್ಯವಸ್ಥಿತಗೊಳಿಸಿದೆ. ಭಾಷಾ ಅಲ್ಪಸಂಖ್ಯಾಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ – ಕಾನೂನುಗಳನ್ನು ರೂಪಿಸಬೇಕಾಗುತ್ತದೆ. ಭಾಷಾ ಅಲ್ಪ ಸಂಖ್ಯಾಕರ ಮಕ್ಕಳಿಗೆ…

Read More

ಅಡ್ಯಾರ್‌ನಲ್ಲಿ ಮೇ 30ರಂದು ‘ಪಟ್ಲ ಸಂಭ್ರಮ 2026’

ಯಕ್ಷಗಾನ ಕಲೆಯ ಅಭಿವೃದ್ದಿಗೆ ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು ಇದರ ವತಿಯಿಂದ 11ನೇ ವರ್ಷದ ‘ಪಟ್ಲ ಸಂಭ್ರಮ 2026’ ಕಾರ್ಯಕ್ರಮವು ಮೇ 30ರಂದು ಶನಿವಾರ ಅಡ್ಯಾರ್ ಸಮೀಪದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿ ಡಾ. ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಚೌಕಿ ಪೂಜೆ…

Read More

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಮಂಜುನಾಥ ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅದರಲ್ಲೂ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ತಮ ಅಂಕಗಳನ್ನು ಗಳಿಸಿ ತೋರಿದ ಅಪ್ರತಿಮ ಸಾಧನೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಕೋರಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಎಸ್‌ಎಸ್‌ಎಲ್‌ಸಿ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಇಲ್ಲಿನ ಸಾಧನೆಯು ಅವರ ಮುಂದಿನ ಉನ್ನತ…

Read More

​ಬೆಳಿಂಜ ಗುತ್ತು: ಪರಂಪರೆಯ ಪುನರುತ್ಥಾನ ಹಾಗೂ ಧರ್ಮ ನೇಮೋತ್ಸವದ ಭಕ್ತಿ ಸಂಭ್ರಮ

​ತುಳುನಾಡಿನ ದೈವಿಕ ಶಕ್ತಿ ಮತ್ತು ಸಾಂಸ್ಕೃತಿಕ ಹಿರಿಮೆಯ ಪ್ರತೀಕಗಳಾದ ‘ಗುತ್ತು’ ಮನೆತನಗಳು, ನಂಬಿಕೆ ಮತ್ತು ಪರಂಪರೆಯ ಜೀವಂತ ನೆಲೆಗಳು. ಅಂತಹ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಕಾಸರಗೋಡಿನ ಪುಣ್ಯಭೂಮಿಯ ‘ ಬೆಳಿಂಜ ಗುತ್ತು’ ಇಂದು ನವಚೇತನದೊಂದಿಗೆ ಕಂಗೊಳಿಸುತ್ತಿದೆ.​ಹಸಿರು ಸಿರಿಯ ಮಡಿಲಲ್ಲಿರುವ ಈ ಪವಿತ್ರ ತರವಾಡು ಮನೆತನವು ದೈವಿಕ ಸಂಕಲ್ಪದಂತೆ ನವವೈಭವದೊಂದಿಗೆ ಮರುಜನ್ಮ ಪಡೆಯುತ್ತಿದೆ. ವಿದ್ವಾನ್ ಶ್ರೀ ಕೆ. ಬಾಬು ರೈ ಅವರ ಆಶೀರ್ವಚನ ಹಾಗೂ ದೈವಜ್ಞ ಶ್ರೀ ಶಶಿಧರ ಮಾಂಗಾಡ್ ಅವರ ಮಾರ್ಗದರ್ಶನದಂತೆ, ಶ್ರೀ ಬಾಲಕೃಷ್ಣ ಆಳ್ವ ಅವರ…

Read More

ಶಿರಿಯ ಹೊಳೆಯಲ್ಲಿ ಅನಧಿಕೃತ ಮರಳು ಸಂಗ್ರಹ: ಪರಾರಿಯಾಗಿದ್ದ ಲಾರಿ ಮಾಲೀಕ ಬಂಧನ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ವ್ಯಾಪ್ತಿಯ ಶಿರಿಯ ಹೊಳೆಯ ಹೇರೂರು ಪೈಯಾರ್‌ಕಡವಿನಲ್ಲಿ ಅನಧಿಕೃತವಾಗಿ ಮರಳು (ಹೊಯ್ಗೆ) ಸಂಗ್ರಹಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಇದೀಗ ತಲೆಮರೆಸಿಕೊಂಡಿದ್ದ ಲಾರಿ ಮಾಲೀಕ ಎಂ. ಅಶ್ರಫ್‌ನನ್ನು ಬಂಧಿಸಿದ್ದಾರೆ. ಕಳೆದ ಮಾರ್ಚ್ 30ರಂದು ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ ವೇಳೆ, ಲಾರಿಯಲ್ಲಿದ್ದ ಅಶ್ರಫ್ ಹಾಗೂ ಮರಳು ತುಂಬಿಸುತ್ತಿದ್ದ ಐವರು ಕಾರ್ಮಿಕರು ವಾಹನ ಮತ್ತು ಉಪಕರಣಗಳನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಪೊಲೀಸರು ಸ್ಥಳದಲ್ಲಿದ್ದ ಮರಳು ತುಂಬಿದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಈ…

Read More

ಕಾರ್ಕಳದಲ್ಲಿ ಬೃಹತ್ ಹಲಸು ಮೇಳಕ್ಕೆ ಚಾಲನೆ: ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟನೆ

ದಿನಾಂಕ 24-04-2026 ರಂದು ಕಾರ್ಕಳದ ಬಿಲ್ಲವ ಸಮಾಜ ಪೆರ್ವಾಜೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ಯುವವಾಹಿನಿ (ರಿ.) ಕಾರ್ಕಳ ಘಟಕ, ಎನ್. ಪಿ ಗ್ರೂಪ್ಸ್, ವಂಶಿ ಇವೆಂಟ್ಸ್ ಮತ್ತು ಬೆನಕ ಇವೆಂಟ್ಸ್ ಇವರ ಸಹಯೋಗದಲ್ಲಿ ಕಾರ್ಕಳದಲ್ಲಿ ನಡೆದ ತಾಲೂಕು ಮಟ್ಟದ ಬೃಹತ್ ಹಲಸಿನ ಮೇಳವನ್ನು ಮಾನ್ಯ ಶಾಸಕರಾದ ವಿ.ಸುನಿಲ್ ಕುಮಾರ್ ಅವರು ಉದ್ಘಾಟನೆ ಮಾಡಿದರು. ದೀಪ ಬೆಳಗಿಸಿ ಹಲಸಿನಹಣ್ಣನ್ನು ಕತ್ತರಿಸುವ ಮೂಲಕ ಸಂಪ್ರದಾಯಕವಾಗಿ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಸ್ವ ಉದ್ಯೋಗಕ್ಕೆ…

Read More
error: Content is protected !!