ಜೀವನದಲ್ಲಿ ವ್ಯಾಯಾಮದ ಮಹತ್ವ

ಇಂದಿನ ಆಧುನಿಕ ಯುಗದಲ್ಲಿ ಮಾನವ ಜೀವನ ಬಹಳಷ್ಟು ಸುಲಭವಾಗಿರುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಯಂತ್ರಾಧಾರಿತ ಜೀವನಶೈಲಿ, ಕಚೇರಿ ಕೆಲಸ, ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆ ಹೆಚ್ಚಾದ ಕಾರಣ ಬಹುತೇಕ ಜನರು ಕುಳಿತಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಿಂದೆ ಜನರು ತಮ್ಮ ದಿನನಿತ್ಯದ ಕೆಲಸಗಳ ಮೂಲಕವೇ ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ಹೊಂದಿದ್ದರೆ, ಇಂದಿನ ಕಾಲದಲ್ಲಿ ಅದನ್ನು ಬದಲಿಸಲು ವ್ಯಾಯಾಮ ಅನಿವಾರ್ಯವಾಗಿದೆ. ಆರೋಗ್ಯಕರ ಜೀವನ ನಡೆಸಲು ಆಹಾರ ಮತ್ತು ವಿಶ್ರಾಂತಿ…

Read More

ಯುದ್ಧದ ಬೆಂಕಿ

ಕೆಟ್ಟು ಪಟ್ಟಣ ಸೇರು ಎಂಬ ಗಾದೆ ಮಾತಿದೆ, ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ನಾನು ಪಟ್ಟಣ ಸೇರಿ ಕೆಟ್ಟೆನೇನೋ ಎಂದು ಅನಿಸುತ್ತಿದೆ. ಒಂದು ವರ್ಷದ ಹಿಂದೆ ಕೆಲಸಕ್ಕೆ ಎಂದು ಬೆಂಗಳೂರು ಸೇರಿದೆ.ಸಿಟಿಗೆ ಬಂದ ನನಗೆ ಮೊದ-ಮೊದಲು ಪಿಜಿಯು ಆಶ್ರವನ್ನೇನೋ ಕೊಟ್ಟಿತ್ತು, ಅಲ್ಲಿಯ ಕಾಲಮಿತಿ, ಆಹಾರ ಪದ್ಧತಿ ಸರಿಹೋಗದೆ ಹೇಗೋ ಕಷ್ಟಪಟ್ಟು ಚಿಕ್ಕದಾದಂತಹ ಒಂದು ಮನೆ ನೋಡಿಕೊಂಡೆ. ಮನೆಯಾದರೆ ಸಾಕೆ ಅಡುಗೆ ಮಾಡಬೇಕು,ಪಾತ್ರೆ, ಬಟ್ಟೆ ತೊಳೆಯಬೇಕು……ಇಂತಹ ಹಲವಾರು ಕೆಲಸಗಳನ್ನು ಖುದ್ದು ಮಾಡಬೇಕು.ನಾನು 5 ಕೆಜಿಯ ಚಿಕ್ಕ lpg ಸಿಲಿಂಡರ್…

Read More

ಬದುಕಿನ ಶಿಲ್ಪಕ್ಕೆ ಅವಮಾನವೇ ಉಳಿ, ಅನುಭವವೇ ಹದ

ಅವಮಾನ ಮತ್ತು ಅನುಭವ ಬದುಕಿನ ಎರಡು ಧ್ರುವಗಳು ​ಜೀವನವು ಕೇವಲ ಉಸಿರಾಟದ ಕ್ರಿಯೆಯಲ್ಲ, ಅದೊಂದು ನಿರಂತರ ಕಲಿಕೆಯ ಪಾಠಶಾಲೆ. ಇಲ್ಲಿ ಶಿಕ್ಷಕರಿಗಿಂತ ಹೆಚ್ಚಾಗಿ ಸನ್ನಿವೇಶಗಳೇ ನಮಗೆ ಪಾಠ ಕಲಿಸುತ್ತವೆ. “ಅವಮಾನಗಳು ಬದುಕಬೇಕೆಂಬ ಧೈರ್ಯ ಕೊಟ್ಟರೆ, ಅನುಭವಗಳು ಹೇಗೆ ಬದುಕಬೇಕೆಂಬ ಮಾರ್ಗ ತೋರಿಸುತ್ತವೆ” ಎನ್ನುವ ಸಾಲುಗಳು ಬದುಕಿನ ಕಟು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ. ಸಾಮಾನ್ಯವಾಗಿ ಅವಮಾನವಾದಾಗ ಮನುಷ್ಯ ಕುಗ್ಗಿ ಹೋಗುತ್ತಾನೆ. ಆದರೆ ಸತ್ಪಥದಲ್ಲಿ ಸಾಗುವವನಿಗೆ ಅವಮಾನವೇ ಎತ್ತರಕ್ಕೆ ಜಿಗಿಯಲು ಬಳಸುವ ಸಾಧನವಿದ್ದಂತೆ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆಯಂತೆ,…

Read More

ಗೆಳೆಯನ ಬುದ್ದಿವಂತಿಕೆ

ಒಂದು ಊರಲ್ಲಿ ಒಬ್ಬ ಶ್ರೀಮಂತನಿದ್ದ, ಅವನಿಗೆ, ಹೆಂಡತಿ, ಒಬ್ಬಳು ಮಗಳು ಹಾಗೂ ಒಬ್ಬ ಆಪ್ತ ಗೆಳೆಯನಿದ್ದ, ಶ್ರೀಮಂತನು ಸಾಯುವ ಸಮಯ ಬರುವಾಗ ತನ್ನ ಆಸ್ತಿಯನ್ನು ಹೆಂಡತಿ ಮಗಳ ಹೆಸರಲ್ಲಿ ಬರೆಯುವಾಗ, ಅವನಲ್ಲಿ 19 ಕುದುರೆಗಳು ಇದ್ದವು, ಇದನ್ನುಸಮ ಅರ್ಧ ಹೆಂಡತಿಗೆ, ಅದರ ಒಂದರ್ಧ ಮಗಳಿಗೆ, ಮತ್ತು ಉಳಿದ ಕುದುರೆಯಲ್ಲಿ ಒಂದೊಂದರಂತೆ 4 ಜನ ಕೆಲಸಗಾರರಿಗೂ ಒಂದನ್ನು ನನ್ನ ಆಪ್ತ ಗೆಳೆಯನಿಗೂ ಕೊಡಬೇಕು ಎಂದು ಬರೆಸಿ ಕೊಳ್ಳುತ್ತಾನೆ…..! ಇದು ಪಾಲು ಮಾಡುವಾಗ, 19 ಕುದುರೆಗಳಲ್ಲಿ ಸಮಾ ಅರ್ಧ ಹೇಗೆ…

Read More

ಮುಖವಾಡಗಳ ಹಿಂದೆ ಮರೆಯದ ಸತ್ಯ

ಮಾನವ ಸಮಾಜವು ನಿಜ ಮತ್ತು ನಾಟಕದ ನಡುವೆ ನಡೆಯುವ ಒಂದು ವಿಚಿತ್ರ ನಾಟಕಮಂದಿರದಂತಿದೆ. ಇಲ್ಲಿ ಹಲವರು ತಮ್ಮ ನಿಜವಾದ ವ್ಯಕ್ತಿತ್ವವನ್ನು ಮರೆಮಾಚಿ, ಸಮಾಜದ ಮುಂದೆ ಬೇರೆ ರೀತಿಯ ಮುಖವಾಡಗಳನ್ನು ಧರಿಸಿ ಬದುಕುತ್ತಾರೆ. ಗೌರವ, ಸ್ಥಾನಮಾನ, ಲಾಭ ಅಥವಾ ಜನಪ್ರಿಯತೆ ಪಡೆಯಲು ಕೆಲವರು ತಮ್ಮ ನಿಜವಾದ ಸ್ವಭಾವವನ್ನು ಮರೆಮಾಡಿ ಕಪಟತನದ ಬದುಕನ್ನು ನಡೆಸುತ್ತಾರೆ. ಆದರೆ ಎಷ್ಟೇ ಮುಖವಾಡಗಳನ್ನು ಹಾಕಿಕೊಂಡರೂ ಅದರ ಹಿಂದೆ ಇರುವ ಸತ್ಯವನ್ನು ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ನಾವು ಅನೇಕ ರೀತಿಯ ಮುಖವಾಡಗಳನ್ನು ನೋಡುತ್ತೇವೆ. ಕೆಲವರು…

Read More

ಭೂಮಿಯ ಉಸಿರಾಟ ಮತ್ತು ತಾಪಮಾನದ ಸಮತೋಲನ

ಬೆಳಗಿನ ಜಾವ ಕಿಟಕಿಯನ್ನು ತೆರೆದಾಗ ನಮ್ಮ ಮುಖವನ್ನು ತಾಕುವ ತಂಪಾದ ಗಾಳಿ, ಮಧ್ಯಾಹ್ನದ ಹೊತ್ತಿಗೆ ಭೂಮಿಯನ್ನು ಉರಿಯುವಂತೆ ಮಾಡುವ ಬಿಸಿಲು, ಸಂಜೆ ವೇಳೆಯ ಮೃದುವಾದ ತಂಪು – ಇವೆಲ್ಲವೂ ಪ್ರಕೃತಿಯ ನಿಶ್ಶಬ್ದ ಸಂಭಾಷಣೆಗಳಂತಿವೆ. ಈ ಎಲ್ಲ ಅನುಭವಗಳ ಹಿಂದೆ ಕಾರ್ಯನಿರ್ವಹಿಸುವ ಅದೃಶ್ಯ ಶಕ್ತಿಯೇ ತಾಪಮಾನ. ಅದು ಕೇವಲ ಬಿಸಿ ಅಥವಾ ತಣ್ಣನೆಯ ಅನುಭವವಲ್ಲ; ಅದು ಭೂಮಿಯ ಜೀವಚಕ್ರವನ್ನು ಚಲಿಸುವ ಒಂದು ಮಹತ್ವದ ವೈಜ್ಞಾನಿಕ ತತ್ವ. ತಾಪಮಾನದ ಅಂತರಂಗದ ವಿಜ್ಞಾನ ಪ್ರಪಂಚದ ಪ್ರತಿಯೊಂದು ಪದಾರ್ಥವೂ ಅಸಂಖ್ಯಾತ ಅತಿ ಸೂಕ್ಷ್ಮ…

Read More

ಕೆಸರುಗದ್ದೆಯ ವೀರಕ್ರೀಡೆಗೆ ಸುಪ್ರೀಂ ಜಯ ಗಡಿ ಮೀರಿ ಮೊಳಗಲಿದೆ ಕಂಬಳದ ಕಹಳೆ!

ಹೊಸ ಚಿಗುರು ಹಳೆ ಬೇರು ಹೊಸತು ಹಳೆಬರ ಕೂಟ | ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ || ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ | ಜಸವು ಜನಜೀವನಕೆ – ಮಂಕುತಿಮ್ಮ ||​ ಡಿ.ವಿ.ಜಿ ಅವರ ಈ ಸಾಲುಗಳಂತೆ, ನಮ್ಮ ಹಳೆಯ ಬೇರಾದ ಸಂಪ್ರದಾಯಕ್ಕೆ ಹೊಸ ಕಾಲದ ನ್ಯಾಯದ ಬಲ ಸಿಕ್ಕಿದೆ. ತುಳುನಾಡಿನ ಮಣ್ಣಿನ ಘಮಲು, ಕಷ್ಟಜೀವಿ ರೈತನ ಬೆವರಿನ ಹನಿ ಹಾಗೂ ಕರುನಾಡಿನ ಕಲಿ ಕೋಣಗಳ ಪರಾಕ್ರಮಕ್ಕೆ ಈಗ ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಮಾನ್ಯತೆ ಲಭಿಸಿದೆ….

Read More

ದೈವಜ್ಞರು ಬದುಕಿನ ದಾರಿದೀಪವೋ ಅಥವಾ ವಿಧಿಯ ವ್ಯಾಪಾರಿಗಳೋ?

​ಭಾರತೀಯ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ‘ವೇದಚಕ್ಷು’ ಎಂದು ಗೌರವಿಸಲಾಗುತ್ತದೆ. ಅಂದರೆ, ಅಜ್ಞಾನದ ಕತ್ತಲೆಯಲ್ಲಿ ದಾರಿ ಕಾಣದೆ ತಡಕಾಡುವ ಮನುಷ್ಯನಿಗೆ ಕಾಲದ ಗತಿಯನ್ನು ತೋರಿಸುವ ದಿವ್ಯ ದೃಷ್ಟಿ ಇದು. ಆದರೆ ಇಂದು ಸ್ವರ್ಣ ಪ್ರಶ್ನೆ, ಪ್ರೇತ ಚಿಂತನೆ ಮತ್ತು ದೋಷ ಪರಿಹಾರಗಳೆಂಬ ಪವಿತ್ರ ಶಬ್ದಗಳು ಭಕ್ತಿಯ ಹಾದಿಗಿಂತ ಹೆಚ್ಚಾಗಿ ಲಾಭದಾಯಕ ವ್ಯಾಪಾರದ ಸಂಕೇತಗಳಾಗಿ ಬದಲಾಗುತ್ತಿರುವುದು ಒಂದು ಸಾಮಾಜಿಕ ದುರಂತವೇ ಸರಿ. ​ಅನಿಶ್ಚಿತತೆಯ ಮೇಲೆ ಕುದುರುವ ವ್ಯಾಪಾರ ​ಒಬ್ಬ ನೈಜ ದೈವಜ್ಞನು ವ್ಯಕ್ತಿಯ ಜಾತಕದಲ್ಲಿರುವ ದೋಷಗಳನ್ನು ಕಂಡು ಅವರನ್ನು ಹೆದರಿಸುವ…

Read More

ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು ಎನಗೆ ಬಹು ಖುಷಿ ಹೆತ್ತವರು ನಗುತಿರಲು ಎಲ್ಲಿಲ್ಲದ ಸಂತೋಷ ಗೆಳೆಯ ಬರುತಿರಲು ಕಾಯುವೆ ಅಮ್ಮ ನಂಗೆ ಏನಾದರೂ ತರಲು ಬೆಲೆ ಕಟ್ಟಲಾಗದು ತಾಯಿಯ ತ್ಯಾಗದಲ್ಲಿ ಋಣ ತೀರಿಸಲಾಗದು ಮಾತೆಯ ಪ್ರೀತಿಯಲ್ಲಿ ಮುಕ್ತಿ ಹೊಂದಬೇಕು ಹಡೆದವರ ಸೇವೆಯಲ್ಲಿ ಮುಕ್ಕೋಟಿ ದೇವರು ತಾಯಿ ಪಾದದಡಿಯಲ್ಲಿ ನವ ಮಾಸ ಹೊಟ್ಟೆಯಲ್ಲಿ ಇಟ್ಕೊಂಡಿರ್ತಾಳೆ ನಾವು ದೊಡ್ಡವರಾಗೋತನಕ ಸಾಕಿರ್ತಾಳೆ ನಮ್ಮ ಹೊಟ್ಟೆಗಾಗಿ ಬೆವರನಿ ಸುರಿಸಿರ್ತಾಳೆ ಸಂಸಾರಕ್ಕಾಗಿ ಜೀವನ ಮೂಡುಪಾಗಿಟ್ಟಿರ್ತಾಳೆ ನಮ್ಮ ಉಸಿರಿರೋತನಕ ಸೇವೆ ಮಾಡೋಣ ಹೆತ್ತವರಿರೋತನಕ ಜೋಪಾನ ಮಾಡೋಣ…

Read More

ಬದುಕಿನಲ್ಲಿ ಬದುಕಿ ನೋಡು….!

ಬದುಕೇ ಭಾರವಾಯಿತು, ಹುಮ್ಮಸೆ ಬರಿದಾಯಿತ್ತು, ಕನಸೇ ಕಗ್ಗತ್ತಲಾಯಿತ್ತು, ಹಗಲಿರುಳೇ ಬೇಡವಾಯಿತೆಂದು ಅದೆಷ್ಟೋ ಮಂದಿ ಬದುಕಿನಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದು ವ್ಯಥೆ ಪಡುತ್ತಾ ಇರುತ್ತಾರೆ. ವ್ಯಥೆ ಪಡುವ ಮನಸಿನ ಜೊತೆ ಆಳವಾದ ಮಾತು ಬೇರೆಯವರ ಜೊತೆ ಮಾತನಾಡದೆ ಮೌನದಿಂದ ಇರಲು ಬಯಸುತ್ತಾರೆ. ಏಕಾಂತ ಜೀವನವನ್ನು ತುಸು ಹೆಚ್ಚೇ ಇಷ್ಟ ಪಡುತ್ತಾ ಇರುತ್ತಾರೆ. ಶರವೇಗದಲ್ಲಿ ಆಲೋಚನೆ ತನ್ನತ್ತ ಸುಳಿದು ಬಾಳಿನ ಪಥದ ಹಾದಿಯನ್ನೇ ಬದಲಾಯಿಸುತ್ತಾ ಇರುತ್ತದೆ. ಋಣಾತ್ಮಕ ಚಿಂತೆಗಳು ಸಂತೆಗಳಂತೆ ಕಂತೆಗಳಂತೆ ಆಗಾಗೇ ಬರುತ್ತಾ ಬಂದು ಆಳವಾಗಿ ಗಾಯಮಾಡುತ್ತಾ…

Read More
error: Content is protected !!