2050ರ ವೇಳೆಗೆ ಸಮುದ್ರ ಮಟ್ಟ ಏರಿಕೆ: ಕರಾವಳಿ ನಗರಗಳಿಗೆ ಹೆಚ್ಚುತ್ತಿದೆ ಅಪಾಯ, ನಾಸಾ ಅಧ್ಯಯನ ಎಚ್ಚರಿಕೆ

ನ್ಯೂಯಾರ್ಕ್:ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ನಿರಂತರವಾಗಿ ಏರುತ್ತಿದ್ದು, 2050ರ ವೇಳೆಗೆ ವಿಶ್ವದ ಅನೇಕ ಕರಾವಳಿ ನಗರಗಳು ಪ್ರವಾಹ ಮತ್ತು ಕರಾವಳಿ ಸವೆತದ ಗಂಭೀರ ಅಪಾಯವನ್ನು ಎದುರಿಸಬಹುದು ಎಂದು ನಾಸಾ ಹಾಗೂ ಇತರ ವೈಜ್ಞಾನಿಕ ಸಂಸ್ಥೆಗಳ ಅಧ್ಯಯನಗಳು ಎಚ್ಚರಿಸಿವೆ. ನಾಸಾದ ಉಪಗ್ರಹ ದತ್ತಾಂಶದ ಪ್ರಕಾರ, ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳ ಕರಗುವಿಕೆ ಹಾಗೂ ಸಮುದ್ರದ ನೀರಿನ ಉಷ್ಣ ವಿಸ್ತರಣೆಯಿಂದ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ಅಮೆರಿಕದ ಗಲ್ಫ್ ಕರಾವಳಿ ಮತ್ತು ಅಟ್ಲಾಂಟಿಕ್ ಕರಾವಳಿಯ ಹಲವಾರು ನಗರಗಳು ಹೆಚ್ಚು ಅಪಾಯದ…

Read More

ಇರಾನ್‌ಗೆ ಟ್ರಂಪ್ ಮತ್ತೊಮ್ಮೆ ಕಠಿಣ ಎಚ್ಚರಿಕೆ

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಯಾವುದೇ ಗಡುವು ನಿಗದಿಪಡಿಸಲು ಇಷ್ಟವಿಲ್ಲ ಎಂದು ಹೇಳಿದ ಟ್ರಂಪ್, “ಪರಿಸ್ಥಿತಿ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ಎಚ್ಚರಿಕೆಯಿಂದ ವರ್ತಿಸಬೇಕು” ಎಂದರು. ಇರಾನ್ ಮಾತುಕತೆಗೆ ಮುಂದಾಗದಿದ್ದರೆ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿ ಮುಂದುವರಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಸೇನಾ ಕಾರ್ಯಾಚರಣೆ ತಾವು ನಿರ್ಧರಿಸುವವರೆಗೆ ಮುಂದುವರಿಯಲಿದೆ…

Read More

ಭಾರತೀಯ ಮೂಲದ ಅನಿಲ್ ಮೆನನ್‌ರ ಮೊದಲ ಬಾಹ್ಯಾಕಾಶ ಯಾತ್ರೆಗೆ ಯಶಸ್ವಿ ಚಾಲನೆ

ಕಝಾಕಿಸ್ತಾನ್: ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್ ತಮ್ಮ ಮೊದಲ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ರಷ್ಯಾದ ಸೋಯುಜ್ ಎಂಎಸ್-29 ರಾಕೆಟ್ ಮೂಲಕ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದತ್ತ ಅವರು ಪ್ರಯಾಣ ಬೆಳೆಸಿದ್ದಾರೆ. ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಹಾಗೂ ಅನ್ನಾ ಕಿಕಿನಾ ಅವರೊಂದಿಗೆ ಅನಿಲ್ ಮೆನನ್ ಸುಮಾರು ಎಂಟು ತಿಂಗಳು ಐಎಸ್‌ಎಸ್‌ನಲ್ಲಿ ವಾಸ್ತವ್ಯ ಹೂಡಿ ವಿವಿಧ ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾಗವಹಿಸಲಿದ್ದಾರೆ. ಬಾಹ್ಯಾಕಾಶದಲ್ಲಿ ರಕ್ತ ಪರಿಚಲನೆ ಮತ್ತು ಬಯೋಪ್ರಿಂಟಿಂಗ್ ತಂತ್ರಜ್ಞಾನ ಕುರಿತ ಅಧ್ಯಯನ ನಡೆಸಲಿದ್ದಾರೆ….

Read More

ಯುಎನ್ ಪ್ರಧಾನ ಕಾರ್ಯದರ್ಶಿ ಗುಟೆರಸ್ ಭೇಟಿ ಮಾಡಿದ ಜೈಶಂಕರ್; ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚೆ

ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡಿ ಮಧ್ಯಪ್ರಾಚ್ಯ ಬಿಕ್ಕಟ್ಟು, ಉಕ್ರೇನ್ ಯುದ್ಧ, ಸುಡಾನ್ ಸೇರಿದಂತೆ ಪ್ರಮುಖ ಜಾಗತಿಕ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದರು. 2028-29ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ತಾತ್ಕಾಲಿಕ ಸದಸ್ಯತ್ವಕ್ಕಾಗಿ ಭಾರತದ ಅಧಿಕೃತ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಮಾತುಕತೆ ವೇಳೆ ವಿಶ್ವಸಂಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಹಾಗೂ ಸಾಂಸ್ಥಿಕ ಸುಧಾರಣೆಗಳ ಅಗತ್ಯವನ್ನು ಜೈಶಂಕರ್ ಒತ್ತಿ ಹೇಳಿದ್ದು, ಭಾರತ–ವಿಶ್ವಸಂಸ್ಥೆ…

Read More

ಹೋರ್ಮುಜ್ ಜಲಸಂಧಿಯಲ್ಲಿ ಯುಎಇ ಹಡಗುಗಳ ಮೇಲೆ ಇರಾನ್ ದಾಳಿ; ಭಾರತೀಯ ನಾವಿಕ ಸಾವು

ಹೋರ್ಮುಜ್ ಜಲಸಂಧಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಸೇರಿದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬ ಭಾರತೀಯ ನಾವಿಕ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಆರು ಮಂದಿ ಭಾರತೀಯರು, ಇಬ್ಬರು ಉಕ್ರೇನ್ ಪ್ರಜೆಗಳೂ ಸೇರಿದ್ದಾರೆ. ಎರಡು ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮೊಂಬಾಸ ಮತ್ತು ಅಲ್ ಬಹಿಯಾ ಎಂಬ ಹಡಗುಗಳು ದಾಳಿಗೆ ಒಳಗಾಗಿವೆ. ಯುಎಇ ರಕ್ಷಣಾ ಸಚಿವಾಲಯ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇದು ಅಂತರರಾಷ್ಟ್ರೀಯ ಕಾನೂನುಗಳ ಗಂಭೀರ…

Read More

ಹಾರ್ಮುಜ್ ಜಲಸಂಧಿ ವಿವಾದ ತಾರಕಕ್ಕೆ; ಅಮೆರಿಕ–ಇರಾನ್ ನಡುವೆ ಮತ್ತೆ ಭಾರೀ ದಾಳಿ

ವಾಷಿಂಗ್ಟನ್/ಟೆಹ್ರಾನ್: ಹಾರ್ಮುಜ್ ಜಲಸಂಧಿಯ ನಿಯಂತ್ರಣ ವಿಚಾರವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಭಾನುವಾರ ಸಂಜೆಯಿಂದ ಇರಾನ್, ಕುವೈತ್ ಹಾಗೂ ಬಹರೇನ್ ಪ್ರದೇಶಗಳಲ್ಲಿ ಹೊಸ ದಾಳಿಗಳು ನಡೆದಿರುವುದಾಗಿ ವರದಿಯಾಗಿದೆ. ಈ ನಡುವೆ ಹಾರ್ಮುಜ್ ಜಲಸಂಧಿ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆಯೇ ಎಂಬ ಪ್ರಶ್ನೆಯಲ್ಲಿ ವಾಷಿಂಗ್ಟನ್ ಮತ್ತು ಟೆಹ್ರಾನ್ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡಿವೆ. ಇರಾನ್ ತನ್ನ ದಕ್ಷಿಣ ಭಾಗದ ಎರಡು ದ್ವೀಪಗಳ ಮೇಲೆ ದಾಳಿ ನಡೆದಿರುವುದಾಗಿ ತಿಳಿಸಿದರೆ, ಕುವೈತ್ ತನ್ನ ಗಡಿ ಠಾಣೆಗಳು ಹಾಗೂ ಕಡಲಾಚೆಯ…

Read More

ಅಮೆರಿಕ–ಇರಾನ್ ಸಂಘರ್ಷ ತೀವ್ರ: ಹಾರ್ಮುಜ್ ಜಲಸಂಧಿ ಸುತ್ತ ಯುದ್ಧದ ಕಾರ್ಮೋಡ

ಟೆಹ್ರಾನ್: ಹಾರ್ಮುಜ್ ಜಲಸಂಧಿ ನಿಯಂತ್ರಣ ವಿಚಾರವಾಗಿ ಅಮೆರಿಕ–ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕ ಇರಾನ್‌ನ ಬಂದರ್ ಅಬ್ಬಾಸ್, ಜಾಸ್ಕ್, ಸಿರಿಕ್ ಹಾಗೂ ಕೇಶ್ಮ್ ದ್ವೀಪದ ಸೇನಾ ಮತ್ತು ನೌಕಾ ತಾಣಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಕಳೆದ ಮೂರು ದಿನಗಳಲ್ಲಿ 300ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆದಿದ್ದು, 140ಕ್ಕೂ ಹೆಚ್ಚು ಪ್ರಮುಖ ಸೇನಾ ತಾಣಗಳು ಹಾನಿಗೊಳಗಾಗಿವೆ ಎಂದು CENTCOM ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಅಮೆರಿಕ ಸೇನಾ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ…

Read More

ಇರಾನ್ ಮಾತುಕತೆಗೆ ಒಪ್ಪಿದ ಅಮೆರಿಕ;ಕದನ ವಿರಾಮ ಮುಗಿದಿದೆ ಎಂದ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ಮತ್ತಷ್ಟು ಮಾತುಕತೆ ನಡೆಸಲು ಅಮೆರಿಕ ಸಮ್ಮತಿಸಿದೆ ಎಂದು ತಿಳಿಸಿದ್ದಾರೆ. ಆದರೆ, ಎರಡೂ ರಾಷ್ಟ್ರಗಳ ನಡುವಿನ ಕದನ ವಿರಾಮ ಈಗಾಗಲೇ ಅಂತ್ಯಗೊಂಡಿದ್ದು, ಈ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂದು ಅವರು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಳೆದ ತಿಂಗಳಿನಿಂದ ಅಮೆರಿಕ ಮತ್ತು ಇರಾನ್ ನಡುವೆ ನೇರ ಮಾತುಕತೆ ನಡೆದಿಲ್ಲ. ಈ ವಾರ ಎರಡೂ ದೇಶಗಳು ಪರಸ್ಪರ ದಾಳಿಗಳನ್ನು ನಡೆಸಿದ ಬೆನ್ನಲ್ಲೇ ಮಧ್ಯವರ್ತಿಯಾಗಿರುವ ಕತಾರ್‌ನ ನಿಯೋಗ ಟೆಹ್ರಾನ್‌ಗೆ…

Read More

ಬಹಾಮಾಸ್‌ನಲ್ಲಿ ಸಣ್ಣ ವಿಮಾನ ಪತನ:10 ಮಂದಿ ದುರ್ಮರಣ

ನಸ್ಸೌ (ಬಹಾಮಾಸ್): ಬಹಾಮಾಸ್ ರಾಜಧಾನಿ ನಸ್ಸೌ ನಗರದ ಪಶ್ಚಿಮ ಭಾಗದಲ್ಲಿರುವ ನಾರ್ತ್ ಆಂಡ್ರೋಸ್ ದ್ವೀಪದಲ್ಲಿ ಫ್ಲೆಮಿಂಗೊ ಏರ್ ಸಂಸ್ಥೆಗೆ ಸೇರಿದ ಸಣ್ಣ ವಿಮಾನ ಶುಕ್ರವಾರ ಸಂಜೆ ಪತನಗೊಂಡು, ಅದರಲ್ಲಿದ್ದ ಎಲ್ಲಾ 10 ಮಂದಿ ಮೃತಪಟ್ಟಿದ್ದಾರೆ. ಬಹಾಮಾಸ್ ಪೊಲೀಸ್ ಆಯುಕ್ತೆ ಶಾಂತಾ ನೋಲ್ಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ವಿಮಾನದಲ್ಲಿ ಒಂಬತ್ತು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಪ್ರಯಾಣಿಸುತ್ತಿದ್ದರು. ಅಪಘಾತದ ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ, ಯಾರೂ ಜೀವಂತವಾಗಿ ಉಳಿದಿರಲಿಲ್ಲ ಎಂದು ತಿಳಿಸಿದರು.ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು…

Read More

ಸತತ ಮೂರನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ; ಯಾವ ಕ್ಷಣದಲ್ಲಾದರೂ ದಾಳಿ ನಡೆಸಲು ಸಿದ್ಧ ಎಂದು ಇಸ್ರೇಲ್

ಇರಾನ್ ಮೇಲೆ ಸತತ ಮೂರನೇ ದಿನವೂ ವೈಮಾನಿಕ ದಾಳಿಗಳು ಮುಂದುವರಿದಿವೆ. ಕೊನಾರಕ್ ನಗರದ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಲಾಗಿದೆ ಎಂದು ಇರಾನ್ ತಿಳಿಸಿದೆ. ಬುಶೆಹರ್ ಅಣು ಕೇಂದ್ರದ ಸಮೀಪ ಸೇರಿದಂತೆ ದಕ್ಷಿಣ ಇರಾನ್‌ನ ಹಲವು ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ಮೇಲೆ ಯಾವ ಕ್ಷಣದಲ್ಲಾದರೂ ದಾಳಿ ನಡೆಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಇರಾನ್‌ನ ಅಣು ಸ್ಥಾವರಗಳು ಸೇರಿದಂತೆ 170ಕ್ಕೂ…

Read More
error: Content is protected !!