ಪೆರ್ಲದಲ್ಲಿ ವಾಚನಾ ದಿನ ಉದ್ಘಾಟನೆ
ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಹಾಗೂ ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯ ಜಂಟಿ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ವಾಚನಾ ಪಕ್ಷಾಚರಣೆ ಉದ್ಘಾಟನೆ ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ ಜರುಗಿತ್ತು. ಎಣ್ಮಕಜೆ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ‘ವಾಚನಾ ಹವ್ಯಾಸ ನಮ್ಮನ್ನು ಕ್ರೀಯಾಶೀಲರನ್ನಾಗಿಸುತ್ತದೆ. ಪ್ರತೀ ಮನೆಯಿಂದಲೇ ಇಂತಹ ಮೌಲ್ಯಯುತ ಪುಸ್ತಕ ಪ್ರೀತಿ ಬೆಳೆಯಬೇಕು. ಕನ್ನಡ ಸಾಹಿತ್ಯ ಪರಂಪರೆಗೆ ದುಡಿದ ಹಿರಿಯ ಸಾಹಿತಿಗಳ ಶ್ರಮವನ್ನು ಗೌರವಿಸಿ ಪುಸ್ತಕ ಓದುವಿಕೆ ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯವಾಗಿದೆ. ವಾಚನಾ ಪಕ್ಷಾಚರಣೆಯನ್ನು ಆಯೋಜಿಸಿದ ಲೈಬ್ರೇರಿ ಕೌನ್ಸಿಲ್ ಕಾರ್ಯಕ್ರಮ…
