ತುರ್ತಿ ತರವಾಡಿನಲ್ಲಿ ಕೂವಂ ಅಳಕ್ಕಲ್ ಹಾಗೂ ಅಡಯಾಳo ಕಾರ್ಯಕ್ರಮ

ಅಯ್ಯಾಯಿರಂಪಟ್ಟಂ ಸ್ವರೂಪ ನಾಡಿನ ಅತ್ಯಂತ ಪುರಾತನ, ಋಷಿಮುನಿಗಳ ತಪೋ ಭೂಮಿ, ಉಪ್ಪಳ 25 ವಿಲ್ಲು ಶ್ರೀ ಭಗವತಿ ಕ್ಷೇತ್ರದ ಮಹಾಶಕ್ತಿ ಐವರ್ ಭಗವತಿ ಮಾತೆಯ ಪ್ರಧಾನ ತರವಾಡು, ತುರ್ತಿ ಶ್ರೀ ವಿಷ್ಣುಮೂರ್ತಿ, ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ, ತಾರವಡ್ ಉತ್ಸವಸ್ಥಾನದಲ್ಲಿ ಪಡೆoಕುಡಿ ತೀಯಾ (ಕೋಟ್ಯಾನ್‌ ) ತರವಾಡಿನಲ್ಲಿ ಮಹಾ ಉತ್ಸವ ನಡೆಯಲಿದೆ . ಇದರ ಪೂರ್ವ ಭಾವಿಯಾಗಿ ಸೀಮೆಯ ದೈವ ದೇವಾದಿಗಳಿಗೆ ನೈವೇದ್ಯಕ್ಕೆ ಭತ್ತ ಅಳಿಯಿವುದು ಕೂವಂ ಅಳಕ್ಕಲ್ ಹಾಗು ಅಡಯಾಳo ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ಜರಗಿತು…

Read More

ಬಾಲಕಿ ಮುಂದೆ ನಗ್ನತೆ ಪ್ರದರ್ಶನ: ವಿಕೃತ ಕಾಮಿಗೆ ಪೋಕ್ಸೋ ಸಂಕೋಲೆ

ಮಂಜೇಶ್ವರ: ರಸ್ತೆ ಕೇಳುವ ನೆಪದಲ್ಲಿ 12 ವರ್ಷದ ಬಾಲಕಿಯ ಮುಂದೆ ಅಸಭ್ಯವಾಗಿ ವರ್ತಿಸಿ ನಗ್ನತೆ ಪ್ರದರ್ಶಿಸಿದ ಯುವಕನನ್ನು ಕುಂಬಳೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶೇಣಿ ಮಣಿಯಂಪಾರೆಯಲ್ಲಿ ವಾಸವಿರುವ ವಯನಾಡ್ ಮೂಲದ ಅದ್ನುಲ್ ಫಾರಿಸ್ (22) ಬಂಧಿತ ಆರೋಪಿ. ​ಮಂಗಳವಾರ ಸಂಜೆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಯು, ಕುಂಬಳೆಗೆ ಹೋಗುವ ದಾರಿ ಕೇಳಿದ್ದಾನೆ. ಬಾಲಕಿ ದಾರಿ ತೋರಿಸುತ್ತಿದ್ದಂತೆ ಆತ ವಿಕೃತವಾಗಿ ನಗ್ನತೆ ಪ್ರದರ್ಶಿಸಿದ್ದಾನೆ.ಇದರಿಂದ ಬೆದರಿದ ಬಾಲಕಿ ತಕ್ಷಣ ಸಮೀಪದ ಅಂಗಡಿಗೆ ಓಡಿ…

Read More

ಕುಂಬಳೆಯಲ್ಲಿ ಗ್ಯಾಸ್ ಕೊರತೆ ತೀವ್ರ: ಮಲ್ಲಿಕಾ ಏಜೆನ್ಸಿ ವಿರುದ್ಧ ಜನರ ಆಕ್ರೋಶ, ತಕ್ಷಣ ಕ್ರಮಕ್ಕೆ ಒತ್ತಾಯ

ಕುಂಬಳೆ: ಮಲ್ಲಿಕಾ ಇಂಟರ್‌ಪ್ರೈಸಸ್ ಗ್ಯಾಸ್ ಏಜೆನ್ಸಿಯಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 22,000 ಗ್ರಾಹಕರನ್ನು ಹೊಂದಿರುವ ಈ ಏಜೆನ್ಸಿಗೆ ಪ್ರತಿದಿನ ಸಾವಿರಾರು ಜನರು ಆಗಮಿಸುತ್ತಿದ್ದರೂ, ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆ ಕೊರತೆ, ವಿತರಣೆಯಲ್ಲಿ ವಿಳಂಬ ಹಾಗೂ ಸಮರ್ಪಕ ಮಾಹಿತಿ ಅಭಾವದಿಂದ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಗ್ಯಾಸ್ ಸಿಗದೆ ಕೆಲವರು ಖಾಲಿಹಸ್ತದಿಂದ ಮನೆಗೆ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂದ…

Read More

ಮಂಜೇಶ್ವರ ಹೈಡ್ರಾಮಾ:ಕಣದಿಂದ ಎಸ್.ಡಿ.ಪಿ.ಐ ಹಿಂದಕ್ಕೆ ಸರಿಯುವ ಸೂಚನೆ: ಕೇರಳ ರಾಜಕೀಯದ ದಿಕ್ಸೂಚಿ ಬದಲಿಸುವ ಮಾಸ್ಟರ್ ಪ್ಲಾನ್

​ಮಂಜೇಶ್ವರ: ಕೇರಳ ರಾಜಕೀಯದ ಅತ್ಯಂತ ಕುತೂಹಲಕಾರಿ ಕೇಂದ್ರಬಿಂದುವಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೈಡ್ರಾಮಾ ಶುರುವಾಗಿದೆ. ಇಲ್ಲಿಯವರೆಗೆ ಅಬ್ಬರಿಸಿದ್ದ ಎಸ್.ಡಿ.ಪಿ.ಐ, ಈಗ ಅಂತಿಮ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಂಜೇಶ್ವರದಲ್ಲಿ ಬಿಜೆಪಿ ಮತ್ತು ಯುಡಿಎಫ್ ನಡುವೆ ನೇರ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಇದೆ. ಇಂತಹ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಸ್ಪರ್ಧಿಸುವುದರಿಂದ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಕಣ್ಣೂರಿನಲ್ಲಿ ನಡೆದ ತುರ್ತು…

Read More

ಅಶ್ರಫ್ ಪರ ಭಾರೀ ಬೆಂಬಲ: ಯುಡಿಎಫ್ ಸಮಾವೇಶದಲ್ಲಿ ಜನಸಾಗರ

ಮಂಜೇಶ್ವರ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರ ಗೆಲುವಿಗಾಗಿ ಆಯೋಜಿಸಲಾದ ‘ಯುಡಿಎಫ್ ಮಂಡಲ ಕನ್ವೆನ್ಷನ್’ ಮಂಗಳವಾರ ಭರ್ಜರಿಯಾಗಿ ನಡೆಯಿತು. ನಯಾಬಜಾರ್‌ನ ಫೆರೋ ಆಡಿಟೋರಿಯಂನಲ್ಲಿ ನಡೆದ ಈ ಬೃಹತ್ ಸಮಾವೇಶವು ಸಾವಿರಾರು ಕಾರ್ಯಕರ್ತರನ್ನು ಆಕರ್ಷಿಸಿ, ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಿಸಿದೆ. ಸಂಜೆ 3 ಗಂಟೆಗೆ ಆರಂಭವಾದ ಸಮಾವೇಶವನ್ನು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಂಜೇಶ್ವರವು ಸೌಹಾರ್ದತೆಯ ನೆಲೆಬೀಡು. ಎ.ಕೆ.ಎಂ. ಅಶ್ರಫ್ ಅವರ ಗೆಲುವು ಕ್ಷೇತ್ರದ…

Read More

ಕಾಸರಗೋಡು ಗೋ-ಕುಟೀರ ನಿರ್ಮಾಣಕ್ಕೆ ಎರಡನೇ ಹಂತದ ಚಾಲನೆ

ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ “ಕಾಸರಗೋಡು ಗೋ-ಕುಟೀರ” ಯೋಜನೆಯು ಮತ್ತೊಂದು ಮಹತ್ವದ ಹಂತವನ್ನು ತಲುಪಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಈ ಯೋಜನೆಗೆ ವೇಗ ಸಿಕ್ಕಿದ್ದು, ಗೋಸೇವೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡ ಈ ಕೇಂದ್ರವು ಸ್ಥಳೀಯ ಭಕ್ತರ ಗಮನ ಸೆಳೆಯುತ್ತಿದೆ. ಕಳೆದ ನವೆಂಬರ್ 4, 2025ರಂದು ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯನ್ನು ಅಂಗವಾಗಿ, ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಅವರಿಂದ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು….

Read More

ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ಏಪ್ರಿಲ್ 7 ಕ್ಕೆ ಹೊರೆಕಾಣಿಕೆ ಸಮರ್ಪಣೆ

ಕಾಸರಗೋಡು ಜಿಲ್ಲೆಯ ಚೇಟ್ಟುಕುಂಡು ಪ್ರದೇಶದ ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ನಡೆಯಲಿರುವ ವಯನಾಟು ಕುಲವನ್ ದೈವ ಕಟ್ಟು ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಭಕ್ತರಲ್ಲಿ ಅಪಾರ ಉತ್ಸಾಹ ಕಂಡುಬರುತ್ತಿದೆ. ಅನೇಕ ವರ್ಷಗಳ ನಿರೀಕ್ಷೆಗೆ ತೆರೆ ಬಿದ್ದು, ಮತ್ತೆ ಈ ತರವಾಡಿನಲ್ಲಿ ಗಗ್ಗರ ನಾದ ಮೊಳಗಲಿರುವುದು ವಿಶೇಷವಾಗಿದೆ. ಏಪ್ರಿಲ್ 7ರಿಂದ 9ರವರೆಗೆ ನಡೆಯಲಿರುವ ಈ ಮಹೋತ್ಸವವು ಭಕ್ತಿಭಾವದ ಸಂಗಮವಾಗಲಿದ್ದು, ನೂರಾರು ಭಕ್ತರನ್ನು ಸೆಳೆಯುವ ನಿರೀಕ್ಷೆಯಿದೆ. ಮೊದಲ ದಿನವಾದ ಏಪ್ರಿಲ್ 7ರಂದು ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ನಂತರದ ದಿನಗಳಲ್ಲಿ…

Read More

ಸಂಕಷ್ಟದ ಸಾಥಿಗೆ ಕೃತಜ್ಞತೆಯ ಹರಕೆ: ಕೇರಳದ ಅರ್ಜುನನ ತಾಯಿಯಿಂದ ಮಂಜೇಶ್ವರದ ಅಭ್ಯರ್ಥಿಗೆ ‘ಗೆಲುವಿನ ಇಡುಗಂಟು

ಮಂಜೇಶ್ವರ: ರಾಜಕೀಯದ ಆಚೆಗೂ ಮಾನವೀಯ ಸಂಬಂಧಗಳು ಎಷ್ಟು ಗಾಢವಾಗಿರುತ್ತವೆ ಎಂಬುದಕ್ಕೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಹಾಗೂ ಶಿರೂರು ಭೂಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಕುಟುಂಬದ ನಡುವಿನ ಭೇಟಿ ಸಾಕ್ಷಿಯಾಗಿದೆ. ​ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಲಾರಿ ಸಹಿತ ಗಂಗಾವಳಿ ನದಿ ಪಾಲಾಗಿದ್ದ ಅರ್ಜುನನ ಪತ್ತೆಗಾಗಿ ನಡೆದ ಸುದೀರ್ಘ 70ಕ್ಕೂ ಹೆಚ್ಚು ದಿನಗಳ ಕಾರ್ಯಾಚರಣೆಯ ವೇಳೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸೇತುವೆಯಂತೆ ನಿಂತು ಅಶ್ರಫ್…

Read More

200 ಬಾಕ್ಸ್ ಮೀನುಗಳಿದ್ದ ಲಾರಿ ಕಳವು: ಇಬ್ಬರು ಬಂಧನ

ಕುಂಬಳೆ: ಬಂದಿಯೊಡ್ ಅಡ್ಕ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು 200 ಬಾಕ್ಸ್ ಮೀನುಗಳಿದ್ದ ಲಾರಿಯನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಇಚ್ಚಿಲಂಪಾಡಿ ಕೊಡೀಯಮ್ಮ ನಿವಾಸಿ ಅಬ್ದುಲ್ಲ ಎ.ಪಿ (32) ಹಾಗೂ ಕುಂಬಳೆ ಎಡನಾಡು ಮುಕ್ಕರಿಕ್ಕಂಡದ ಮೊಹಮ್ಮದ್ ರಿಜ್ವಾನ್ (27) ಬಂಧಿತರು. ಅಡ್ಕ ಎಂ. ಸಕ್ಕರಿಯಾ ನೀಡಿದ ದೂರಿನ ಪ್ರಕಾರ, ಸೆಡ್.ಎಂ.ಎಸ್ ಫಿಶ್ ಸರ್ವಿಸ್ ಕಚೇರಿ ಸಮೀಪ ನಿಲ್ಲಿಸಿದ್ದ ಮೀನು ಲಾರಿಯೇ ಕಳುವಾಗಿದೆ. ಶನಿವಾರ ರಾತ್ರಿ 11.30 ಗಂಟೆಯಿಂದ ಮುಂದಿನ ದಿನ ಬೆಳಗ್ಗೆ 8 ಗಂಟೆಯೊಳಗಿನ…

Read More

ಕಾಸರಗೋಡು ಗೋ-ಕುಟೀರ ನಿರ್ಮಾಣಕ್ಕೆ ಎರಡನೇ ಹಂತದ ಚಾಲನೆ

ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋ-ಕುಟೀರದ ಕಾಮಗಾರಿ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದೆ. ಕಳೆದ ನವೆಂಬರ್ 4, 2025ರಂದು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರಿಂದ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರ ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತವಾಗಿ ಮೊದಲ ಅಂತಸ್ತಿನ ಗೋಮೇವು ಸಂಗ್ರಹಾಲಯ ಹಾಗೂ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ ಮಾರ್ಚ್ 24, 2026ರಂದು ಬೆಳಗ್ಗೆ 9.45ಕ್ಕೆ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ…

Read More
error: Content is protected !!