ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಭಜನಾ ಸಂಘದ ಅಮೃತ ಮಹೋತ್ಸವಕ್ಕೆ ಸಿದ್ಧತೆ

ಕಾಸರಗೋಡು, : ಶತಮಾನಗಳ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಕಾಸರಗೋಡು ಸೀಮೆಯ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ರಾಮದಾಸನಗರ ಪೆರ್ನಡ್ಕದ ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೆ. ಮೋಹನ ಕುಂಬಳೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಲೀಲಾಧರ ಕೂಡ್ಲು, ಅರ್ಚಕ ಶ್ರೀಪತಿ ಅಡಿಗ ಕೂಡ್ಲು, ಉದಯಕುಮಾರ್ ಅಂಬಿಕಾ ರೋಡ್, ಕೆ. ಮನ್ಮಥ ಕೂಡ್ಲು ಹಾಗೂ ಧಾರ್ಮಿಕ ಮುಂದಾಳು ಕೆ. ಜಗದೀಶ ಕೂಡ್ಲು ಉಪಸ್ಥಿತರಿದ್ದು…

Read More

ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಹಿಫ್‌ಝ್ ಸಾಧನೆಗೆ ಗೌರವ, ಶೈಕ್ಷಣಿಕ ವರ್ಷಕ್ಕೆ ಭಕ್ತಿಪೂರ್ಣ ಚಾಲನೆ

ಮಂಜೇಶ್ವರ, ಜೂನ್ 3: ರಾಷ್ಟ್ರವನ್ನು ಸರಿಯಾದ ಶಿಕ್ಷಣದ ಮೂಲಕ ಸಬಲಗೊಳಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಆರಂಭವು ಅರ್ಥಪೂರ್ಣ ಮತ್ತು ಭಕ್ತಿಪೂರ್ಣ ಕಾರ್ಯಕ್ರಮದೊಂದಿಗೆ ನೆರವೇರಿತು. ಶಾಲೆಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಜೊತೆಗೆ, ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಂಠಪಾಠ (ಹಿಫ್‌ಝ್) ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಗುಣಮಟ್ಟದ ಶಿಕ್ಷಣದೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಮರುಆರಂಭದ ಸಂಭ್ರಮದಲ್ಲಿ ಈ ಸಾಧನೆ ವಿಶೇಷ ಮೆರಗು ನೀಡಿತು. ಸಾಹುಲ್ ಹಮೀದ್–ರಜಿಯಾ ದಂಪತಿಗಳ ಪುತ್ರ ಹಾಫಿಲ್…

Read More

​ಮಂಜೇಶ್ವರ: ಉದ್ಯಾವರದಲ್ಲಿ ಕೋಳಿ ಅಂಗಡಿಗೆ ಕಳ್ಳರ ಲಗ್ಗೆ; 20 ಸಾವಿರ ರೂಪಾಯಿ ನಗದು ಕಳವು

​ಮಂಜೇಶ್ವರ: ಉದ್ಯಾವರ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ನಗದನ್ನು ದೋಚಿರುವ ಘಟನೆ ನಡೆದಿದೆ. ​ಉದ್ಯಾವರದ ರಫೀಕ್ ಎಂಬುವರಿಗೆ ಸೇರಿದ ಕೋಳಿ ಅಂಗಡಿಯನ್ನು ಗುರಿಯಾಗಿಸಿ ಈ ಕೃತ್ಯ ನಡೆದಿದೆ. ಅಂಗಡಿಯ ಡ್ರಾಯರ್‌ನಲ್ಲಿ ಇರಿಸಿದ್ದ ಸುಮಾರು 20,000 ರೂಪಾಯಿ ನಗದನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.​ಬುಧವಾರ ಬೆಳಿಗ್ಗೆ ಅಂಗಡಿಯ ಮಾಲಕರು ಬಂದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ…

Read More

ದುರ್ಗಾ ಶಕ್ತಿ ಕುಣಿತ ಭಜನಾ ತಂಡದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಇತ್ತೀಚೆಗೆ ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗದರ್ಶಕಿ ಶ್ರೀಮತಿ ರಮ್ಯಾ ಯನ್ ಧರ್ಬೆತಡ್ಕ ವಹಿಸಿದರು .ಸಭೆಯನ್ನು ಶ್ರೀ ಪ್ರಜಿತ್ ಅಭಕಾರಿ ಅಧಿಕಾರಿ ಕುಂಬಳೆ ಇವರು ಉದ್ಘಾಟಿಸಿದರು . ಮುಖ್ಯ ಅತಿಥಿಗಾಳಗಿ ವಸುದೈವ ಭಜನಾ ಕುಟುಂಬ…

Read More

ಶತಮಾನೋತ್ಸವದ ಹೊಸ್ತಿಲಲ್ಲಿಯೂ ಬಾಡಿಗೆ ಕಟ್ಟಡದಲ್ಲಿಯೇ ಪಾಠ: ಉದ್ಯಾವರ ತೋಟ ಜಿ.ಎಂ.ಎಲ್.ಪಿ. ಶಾಲೆಯ ದುಸ್ಥಿತಿ

ಮಂಜೇಶ್ವರ, ಜೂನ್ 2: ಶತಮಾನದ ಇತಿಹಾಸ ಹೊಂದಿರುವ ಉದ್ಯಾವರ ತೊಟ್ಟ ಸರ್ಕಾರಿ ಎಲ್.ಪಿ. ಶಾಲೆ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಶಿಥಿಲಗೊಂಡ ಕಟ್ಟಡದ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1927ರ ಜನವರಿ 1ರಂದು ಆರಂಭಗೊಂಡ ಈ ಶಾಲೆಗೆ ಇಂದಿಗೂ ಸ್ವಂತ ಜಾಗ ಅಥವಾ ಕಟ್ಟಡ ಇಲ್ಲ. ವಕ್ಫ್ ಬೋರ್ಡ್‌ಗೆ ಸೇರಿದ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಶಾಲೆ ನಡೆಯುತ್ತಿದ್ದು, ಕಟ್ಟಡದ ಶೋಚನೀಯ ಸ್ಥಿತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ….

Read More

ಐಲ ಶಾಲೆಯಲ್ಲಿ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಉದ್ಘಾಟನೆ: ಶಾಲಾ ಪ್ರವೇಶೋತ್ಸವದಲ್ಲಿ ಕನ್ನಡ ಶಿಕ್ಷಣದ ಮಹತ್ವ ಒತ್ತಿಹೇಳಿದ ಶಾಸಕ ಎಕೆಎಂ ಅಶ್ರಫ್

ಮಂಜೇಶ್ವರ, ಜೂನ್ 2: ಮಲಯಾಳ ಮಾಧ್ಯಮದಲ್ಲಿ ಕಲಿಯುವ ಅವಕಾಶವಿದ್ದರೂ ಕನ್ನಡ ಮಾಧ್ಯಮವನ್ನೇ ಶೈಕ್ಷಣಿಕ ಭಾಷೆಯಾಗಿ ಆಯ್ಕೆ ಮಾಡಿಕೊಟ್ಟ ನನ್ನ ಹೆತ್ತವರ ನಿರ್ಧಾರ ನನ್ನ ಜೀವನ ಮತ್ತು ಬೆಳವಣಿಗೆಗೆ ಪೂರಕವಾಯಿತು ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ A.K.M. Ashraf ಹೇಳಿದರು. ಅವರು ಐಲದ ಶ್ರೀ ಶಾರದ ಭೋವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕ ಆನಂದ ಕೆ. ಐಲ ದೀಪ ಪ್ರಜ್ವಲನೆ ನೆರವೇರಿಸಿದರು….

Read More

ಖಾಸಗಿ ಫೋಟೋ ದುರ್ಬಳಕೆ; ಪತಿ-ಮಗುವಿಗೆ ಕೊಲೆ ಬೆದರಿಕೆ: ಯುವಕನ ವಿರುದ್ಧ ಪ್ರಕರಣ

ಮಂಜೇಶ್ವರ, ಜೂನ್ 2: ಮಹಿಳೆಯೊಬ್ಬರ ಖಾಸಗಿ ಫೋಟೋವನ್ನು ದುರ್ಬಳಕೆ ಮಾಡಿಕೊಂಡು, ಆಕೆಯ ಪತಿ ಹಾಗೂ ಮಗುವಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಯುವಕನ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಆರೋಪಿಯನ್ನು ಕುಂಜತ್ತೂರಿನ ಇಬ್ರಾಹಿಂ ಖಲೀಲ್ (32) ಎಂದು ಗುರುತಿಸಲಾಗಿದೆ. ಪೊಲೀಸ್ ದೂರಿನ ಪ್ರಕಾರ, ಆರೋಪಿಯು ದೂರುದಾರಳಾದ 37 ವರ್ಷದ ಮಹಿಳೆಯೊಂದಿಗೆ ನಿಂತಿರುವ ಫೋಟೋವನ್ನು ಆಕೆಯ ಪತಿಯ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಿಗೆ ಕಳುಹಿಸಿದ್ದಾನೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನ…

Read More

ಹೊಸಂಗಡಿ ವಾಮಂಜೂರು ಜಿಎಲ್‌ಪಿಎಸ್‌ನಲ್ಲಿ ಪ್ರವೇಶೋತ್ಸವ: ಸಮಾಜಸೇವಕರು, ಹಳೆ ವಿದ್ಯಾರ್ಥಿಗೆ ಸನ್ಮಾನ

ಹೊಸಂಗಡಿ ವಾಮಂಜೂರು: ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (GLPS)ಯಲ್ಲಿ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಿರುವ ವಾರ್ಡಿನ ಮಾಜಿ ಸದಸ್ಯ ಹಾಗೂ ಸಮಾಜಸೇವಕ ಆದರ್ಶ್ ಬಿ.ಎಂ. ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅಖಿಲ್ ಮೆಂತೆರೋ ವಾಮಂಜೂರು ಅವರನ್ನೂ ಗೌರವಿಸಲಾಯಿತು. ಶಾಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆ ಹಾಗೂ ಸಮಾಜಮುಖಿ ಸೇವೆಯನ್ನು ಪರಿಗಣಿಸಿ…

Read More

ಕಟ್ಟೆ ಪ್ರೆಂಡ್ಸ್ (ರಿ) ನೇತೃತ್ವದಲ್ಲಿ ಎಸ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಕಟ್ಟೆ ಪ್ರೆಂಡ್ಸ್ (ರಿ)& ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೆತೃತ್ವದಲ್ಲಿ scವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು ವಿಜಯ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ದೈವದ ಪಾತ್ರಿ ಮಾದವ ಅಡ್ಕ, ರಾಧಾಕೃಷ್ಣ ಕಾರ್ನವರು ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು .ಸಾಮೂಹಿಕ ವಂದೆ ಮಾತರಂ ಆಲಾಪಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ವಿ ಎನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಉತ್ತಮ ಸಂಸ್ಕಾರವಂತ ವಿದ್ಯಾರ್ಥಿಗಳಾಗಿ ಎಲ್ಲಾ ಶಾಲಾ ವಿಷಯದಲ್ಲಿ ಮೂಂಚೂನಿಯಲ್ಲಿ ನಾವಿರ ಬೇಕು ಎಂದು ಕರೆಯಿತ್ತರು…

Read More

ಎಜೆಐ ಎಯುಪಿಎಸ್‌ ಉಪ್ಪಳದಲ್ಲಿ ಅದ್ದೂರಿ ಪ್ರವೇಶೋತ್ಸವ

ಈ ಸಾಲಿನ ಪ್ರವೇಶೋತ್ಸವ ಕಾರ್ಯಕ್ರಮವು ಬಣ್ಣಗಳ ವೈಭವದೊಂದಿಗೆ AJI AUPS ಉಪ್ಪಳದಲ್ಲಿ ಅದ್ದೂರಿಯಾಗಿ ನಡೆಯಿತು. ಶಾಲೆಯ ವ್ಯವಸ್ಥಾಪಕ ಇನ್‌ಚಾರ್ಜ್ ಹಾಗೂ AJI ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮಾಳಿಗಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹ್ಮಾನ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಶ್ರೀವಿದ್ಯಾ ಟೀಚರ್ ಸ್ವಾಗತ ಭಾಷಣ ಮಾಡಿದರು ಹಾಗೂ ಅಬ್ದುಲ್ಲಾ ಮಾದೇರಿ ಮುಖ್ಯ ಭಾಷಣ ಮಾಡಿದರು. ಈ ವರ್ಷ USS ವಿದ್ಯಾರ್ಥಿವೇತನ ಪಡೆದ ಶಜಾ ಹಾಗೂ SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ…

Read More
error: Content is protected !!