ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಭಜನಾ ಸಂಘದ ಅಮೃತ ಮಹೋತ್ಸವಕ್ಕೆ ಸಿದ್ಧತೆ
ಕಾಸರಗೋಡು, : ಶತಮಾನಗಳ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಕಾಸರಗೋಡು ಸೀಮೆಯ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ರಾಮದಾಸನಗರ ಪೆರ್ನಡ್ಕದ ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೆ. ಮೋಹನ ಕುಂಬಳೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಲೀಲಾಧರ ಕೂಡ್ಲು, ಅರ್ಚಕ ಶ್ರೀಪತಿ ಅಡಿಗ ಕೂಡ್ಲು, ಉದಯಕುಮಾರ್ ಅಂಬಿಕಾ ರೋಡ್, ಕೆ. ಮನ್ಮಥ ಕೂಡ್ಲು ಹಾಗೂ ಧಾರ್ಮಿಕ ಮುಂದಾಳು ಕೆ. ಜಗದೀಶ ಕೂಡ್ಲು ಉಪಸ್ಥಿತರಿದ್ದು…
