ಕಡಂಬಾರು ದೇವಸ್ಥಾನ ವಾರ್ಷಿಕೋತ್ಸವ ಸಮಾಪ್ತಿ: ಭಕ್ತರ ಸಂಭ್ರಮದಲ್ಲಿ ಅಂತಿಮ ದಿನ ಕಾರ್ಯಕ್ರಮಗಳು ನೆರವೇರಿಕೆ

ಕಡಂಬಾರು,: ಕಡಂಬಾರು ದೇವಸ್ಥಾನದ ವರ್ಷಾವಧಿ ಉತ್ಸವದ ಅಂತಿಮ ದಿನ ಭಕ್ತರ ಭಾರೀ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನೆರವೇರಿದವು. ಅಂತಿಮ ದಿನದ ಪ್ರಮುಖ ಕಾರ್ಯಕ್ರಮವಾಗಿ ಹಗಲು ದರ್ಶನಬಲಿ ಹಾಗೂ ರಾಜಾಂಗಣ ಪ್ರಸಾದ ನಡೆಯಿತು. ಈ ವೇಳೆ ಶ್ರೀ ದೇವರ ದರ್ಶನ ಬಲಿಗೆ ವಿಶೇಷವಾಗಿ ಆಯೋಜಿಸಿದ್ದ ಚೆಂಡೆ ಸುತ್ತು ಭಕ್ತರ ಗಮನ ಸೆಳೆಯಿತು. ಸುಮಾರು 20ರಿಂದ 25 ಕಲಾವಿದರ ತಂಡದಿಂದ ಚೆಂಡೆ, ಡೋಲು ಹಾಗೂ ಚಕ್ರತಾಳಗಳ ಮೇಳೈಸಿದ ವಾದ್ಯಗೋಷ್ಠಿ ಸಂಭ್ರಮವನ್ನು ಹೆಚ್ಚಿಸಿತು. ಇದರ…

Read More

ಅರಿಕ್ಕಾಡಿಯಲ್ಲಿ ಶ್ರೀ ಆಲಿಚಾಮುಂಡಿ ಭಗವತಿ ದೇವಸ್ಥಾನದಲ್ಲಿ ಸಂಸ್ಕೃತಿ ಕಾರ್ಯಕ್ರಮ

ಕುಂಬಳೆ: ಕುಂಬಳೆ ಅರಿಕ್ಕಾಡಿ ಪಾರೆ ಸ್ಥಾನದಲ್ಲಿರುವ ಶ್ರೀ ಆಲಿಚಾಮುಂಡಿ ಶ್ರೀ ಭಗವತಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಕಳಿಯಾಟ ಪ್ರಯುಕ್ತ ಶ್ರೀ ನಾರಾಯಣ ಗುರು ವನಿತಾ ಸ್ವಸಹಾಯ ಸಂಘದ ವತಿಯಿಂದ 10ನೇ ವರ್ಷದ ಸಂಸ್ಕೃತಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ದೇವಸ್ಥಾನದ ಅಧ್ಯಕ್ಷ ಸಂತೋಷ್ ಕುಂಬಳೆ ಅಧ್ಯಕ್ಷತೆ ವಹಿಸಿದರು. ತೀಯಾ ಮಹಾಸಭಾ ಅಧ್ಯಕ್ಷ ಗಣೇಶ್ ಮಂಗಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು, ಕಾರ್ಯದರ್ಶಿ ನಾಗೇಶ್ ಬಳ್ಳಂಬಾಡಿ, ಸದಾಶಿವ ಕಳತೋರು, ನವೀನ್ ಕುಮಾರ್ ಅರಿಕ್ಕಾಡಿ,…

Read More

ಮಂಜೇಶ್ವರದಲ್ಲಿ ಯೂತ್ ಕಾನ್ಫರೆನ್ಸ್‌ಗೆ ಪಿ.ಟಿ. ಉಷಾ ಚಾಲನೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳ ಯುವ ಸಮ್ಮೇಳನವನ್ನು ರಾಜ್ಯಸಭಾ ಸಂಸದೆ ಹಾಗೂ ರಾಷ್ಟ್ರೀಯ ಒಲಿಂಪಿಕ್ ಫೆಡರೇಶನ್ ಅಧ್ಯಕ್ಷೆ ಪಿ.ಟಿ. ಉಷಾ ಉದ್ಘಾಟಿಸಿದರು. ಸಮಾರಂಭದಲ್ಲಿ ಮಂಜೇಶ್ವರ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಭಾಗವಹಿಸಿದ್ದರು. ಕ್ಷೇತ್ರದ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು ಪಾಲ್ಗೊಂಡ ಸಭೆಯಲ್ಲಿ ಪಿ.ಟಿ. ಉಷಾ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಮಂಜೇಶ್ವರದ ಮಕ್ಕಳಿಗೆ ಪಿ.ಟಿ. ಉಷಾ ಸ್ಮರಣಿಕೆಗಳನ್ನು ವಿತರಿಸಿದರು. ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಕ್ರೀಡಾ ಭಾರತಿ ಕಾಸರಗೋಡು…

Read More

ಮಂಜೇಶ್ವರದಲ್ಲಿ 2006ರ ಇತಿಹಾಸ ಮರುಕಳಿಸುವ ಸೂಚನೆ? ತ್ರಿಕೋನ ಸ್ಪರ್ಧೆಯಲ್ಲಿ ಎಡರಂಗಕ್ಕೆ ಮೇಲುಗೈ ಸಂಕೇತ

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ, ಗಡಿ ನಾಡು ಮಂಜೇಶ್ವರದಲ್ಲಿ ಈ ಬಾರಿ ರಾಜಕೀಯ ಚಿತ್ರಣ ಕುತೂಹಲದ ಘಟ್ಟ ತಲುಪಿದೆ. ಇಲ್ಲಿನ ಸಾಂಪ್ರದಾಯಿಕ ತ್ರಿಕೋನ ಸ್ಪರ್ಧೆಯು ಹೊಸ ತಿರುವು ಪಡೆದುಕೊಂಡಿದ್ದು, 2006ರ ಚುನಾವಣಾ ಫಲಿತಾಂಶ ಮರುಕಳಿಸುವ ಮುನ್ಸೂಚನೆಗಳು ದಟ್ಟವಾಗುತ್ತಿದೆ. ​ಸ್ಥಳೀಯ ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೋಟಿ ಈ ಬಾರಿಯ ವಿಶೇಷವೆಂದರೆ ಯುಡಿಎಫ್ ಮತ್ತು ಎಲ್‌ಡಿಎಫ್ ಎರಡೂ ರಂಗಗಳು ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿರುವುದು. ಇದು ಮತದಾರರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು…

Read More

ಮಾದಕ ದ್ರವ್ಯ ಪ್ರಕರಣಗಳಲ್ಲಿ ಆರೋಪಿಗೆ ಪಿಟ್ ಎನ್‌ಡಿಪಿಎಸ್ ಕಾಯ್ದೆ: ಬಂಧನ

ಕಾಸರಗೋಡು, ಏಪ್ರಿಲ್ 3: ಹಲವು ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೋಯಿಪ್ಪಾಡಿ ಮೂಲದ ವ್ಯಕ್ತಿಯನ್ನು ಪಿಟ್ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ. ಕುಂಬಳೆ ಪೊಲೀಸರು ಕೋಯಿಪ್ಪಾಡಿ ಕಡಪ್ಪುರದ ಶಫೀರಾ ಮನ್ಸಿಲ್ ನಿವಾಸಿ ಕೆ.ಕೆ. ಸಾಧಿಕ್ (33) ಅವರನ್ನು ಬಂಧಿಸಿದ್ದು, ಇನ್‌ಸ್ಪೆಕ್ಟರ್ ಬೈಜು ಕೆ. ಥೋಮಸ್ ಹಾಗೂ ಎಸ್‌ಐಗಳಾದ ಸನಿತ್ ಮತ್ತು ಅನಂತಕೃಷ್ಣನ್ ಆರ್. ಮೆನನ್ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಂಧಿತನನ್ನು ಪೂಜಪ್ಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದ್ದು, ಮುಂದಿನ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ….

Read More

ಮುಳ್ಳೇರಿಯಾ, ಕಾಸರಗೋಡು ಕಸಬಾ ಕಡಪ್ಪುರದಲ್ಲಿ ಸುರೇಶ್ ಗೋಪಿಯ ಭರ್ಜರಿ ಪ್ರಚಾರ

ಕಾಸರಗೋಡು: ಚುನಾವಣಾ ಕಣ ದಿನೇದಿನೇ ಕಾವೇರಿಸುತ್ತಿರುವ ಹಿನ್ನೆಲೆಯಲ್ಲಿ ಸುರೇಶ್ ಗೋಪಿ ಅವರು ಮುಳ್ಳೇರಿಯಾ ಹಾಗೂ ಕಾಸರಗೋಡು ಕಸಬಾ ಕಡಪ್ಪುರ ಪ್ರದೇಶಗಳಲ್ಲಿ ಭರ್ಜರಿ ರಾಜಕೀಯ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ ಅವರು, ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಈ ಬಾರಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮುಳ್ಳೇರಿಯಾ ಮತ್ತು ಕಸಬಾ ಕಡಪ್ಪುರದಲ್ಲಿ ನಡೆದ ಸಭೆಗಳಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ…

Read More

ವರ್ಗೀಯ ರಾಜಕೀಯಕ್ಕೆ ಅಂತ್ಯ: ಮಂಜೇಶ್ವರದಲ್ಲಿ ಪಿ.ಎಂ.ಎ ಸಲಾಂ ಹೇಳಿಕೆ

ಮಂಜೇಶ್ವರಂ. ಕೇರಳದಲ್ಲಿ ವರ್ಗೀಯ ವಿಭಜನೆ ರಾಜಕೀಯಕ್ಕೂ ಹಾಗೂ ಎಡಪಂಥೀಯ ದುರಾಡಳಿತಕ್ಕೂ ಈ ಚುನಾವಣೆಯೊಂದಿಗೆ ಅಂತ್ಯಕಾಲ ಸಮೀಪಿಸಿದೆ ದ್ವೇಷ ಹರಡುವ ಮೂಲಕ ಯಾವಾಗಲೂ ಮತಗಳನ್ನುಗಳಿಸಬಹುದು ಎಂಬ ಬಿಜೆಪಿಯ ಭ್ರಮೆ ಮುಗಿದಿದೆ ಎಂದು ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಪಿ. ಎಂ. ಎ ಸಲಾಂ ಹೇಳಿದರು. ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎ .ಕೆ .ಎಂ . ಅಶ್ರಫ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಮೀಂಜ ಪಂಚಾಯತ್‌ನ ಗಾಂಧಿನಗರದಲ್ಲಿ ನಡೆದ ಕುಟುಂಬ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದ್ವೇಷವನ್ನು ಪ್ರಚೋದಿಸಿ…

Read More

ಗುಡ್ ಫ್ರೈಡೆ ಪ್ರಯುಕ್ತ ಇನ್ಫ್ಯಾಂಟ್ ಜೀಸಸ್ ಚರ್ಚ್ ವತಿಯಿಂದ ಶಿಲುಬೆಯ ಹಾದಿ

ಹೊಸಂಗಡಿ, ಗುಡ್ ಫ್ರೈಡೆ ಪ್ರಯುಕ್ತ ಇನ್ಫ್ಯಾಂಟ್ ಜೀಸಸ್ ಚರ್ಚ್ ವತಿಯಿಂದ ಭಕ್ತಿಭಾವದಿಂದ ಶಿಲುಬೆಯ ಹಾದಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಧಾರ್ಮಿಕ ಆಚರಣೆಯಲ್ಲಿ ಭಕ್ತರು ಯೇಸು ಕ್ರಿಸ್ತನ ಯಾತನೆ ಮತ್ತು ಶಿಲುಬೆಗೆ ಹಾಕಲ್ಪಟ್ಟ ಘಟನೆಗಳನ್ನು ಸ್ಮರಿಸಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಆವರಣದಿಂದ ಹೊಸಂಗಡಿ ದಾರಿಯುದ್ದಕ್ಕೂ ಶಿಲುಬೆಯ ಹಾದಿಯ ಹಂತಗಳನ್ನು ನಿರೂಪಿಸಲಾಗಿದ್ದು, ಭಕ್ತರು ಕ್ರಮವಾಗಿ ನಡೆದು ಪ್ರಾರ್ಥನೆ ನಡೆಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಈ ಮೂಲಕ ಯೇಸು ಕ್ರಿಸ್ತನ ತ್ಯಾಗ ಮತ್ತು ಮಾನವಕುಲಕ್ಕಾಗಿ ಮಾಡಿದ…

Read More

ಇಚ್ಚಿಲಂಗೋಡಿನಲ್ಲಿ ಇಸ್ಲಾಮಿಯ ಎ.ಎಲ್.ಪಿ. ಶಾಲೆಯ 80ನೇ ವಾರ್ಷಿಕೋತ್ಸವ ಏಪ್ರಿಲ್ 4ರಂದು

ಇಚ್ಚಿಲಂಗೋಡು, : ಎಂಟು ದಶಕಗಳ ಶಿಕ್ಷಣ ಪರಂಪರೆಯನ್ನು ಹೊಂದಿರುವ ಇಸ್ಲಾಮಿಯ ಎ.ಎಲ್.ಪಿ. ಶಾಲೆ ಇಚ್ಚಿಲಂಗೋಡಿನಲ್ಲಿ 80ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 4ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಬೀರೋಲಿಕ ಮೈದಾನದಲ್ಲಿ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಶಾಲೆಯ 80 ವರ್ಷಗಳ ಇತಿಹಾಸವನ್ನು ದಾಖಲಿಸಿದ ಸ್ಮರಣಿಕೆ (ಸೋವನೀರ್ ) ಬಿಡುಗಡೆ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ ನೆರವೇರಿದೆ ಎಂದು ಆಯೋಜಕರು ತಿಳಿಸಿದ್ದಾರೆ. ವಾರ್ಷಿಕೋತ್ಸವವನ್ನು ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ಟ ಉದ್ಘಾಟಿಸಲಿದ್ದಾರೆ. ಕುಂಬಳೆ ವಲಯದ ಸಿಐ ಬೈಜು ಕೆ. ಜೋಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ….

Read More

ಸಾಮರಸ್ಯದ ತೂಮಿನಾಡು: ದೈವಸ್ಥಾನದ ಹೊರೆಕಾಣಿಕೆ ಮೆರವಣಿಗೆಗೆ ಮುಸ್ಲಿಂ ಯುವಕರಿಂದ ತಂಪು ಪಾನೀಯ ಸೇವೆ

ಮಂಜೇಶ್ವರ: ಜಾತಿ-ಧರ್ಮಗಳ ಹೆಸರಿನಲ್ಲಿ ದ್ವೇಷದ ಕಿಡಿ ಹರಡುತ್ತಿರುವ ಇಂದಿನ ಕಾಲಘಟ್ಟದಲ್ಲಿ, ತೂಮಿನಾಡಿನ ಮುಸ್ಲಿಂ ಯುವಕರು ಮಾನವೀಯತೆ ಮತ್ತು ಸೌಹಾರ್ದತೆಯ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದ್ದಾರೆ. ತೂಮಿನಾಡು ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಮೊಸರು ವಿತರಿಸುವ ಮೂಲಕ ಈ ಯುವಕರು ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.​ಗುರುವಾರದಿಂದ ಆರಂಭವಾಗಲಿರುವ ಬ್ರಹ್ಮಕಲಶ ಹಾಗೂ ವರ್ಷಾವಧಿ ನೇಮೋತ್ಸವದ ಹಿನ್ನೆಲೆಯಲ್ಲಿ ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ ಆಯೋಜಿಸಲಾಗಿತ್ತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ನೂರಾರು ಭಕ್ತರಿಗೆ, ಸ್ಥಳೀಯ…

Read More
error: Content is protected !!