ಕೋರ್ಟ್ ತೀರ್ಪು ಪ್ರಕಟಿಸುವ ಮೊದಲು ಆರಿಕ್ಕಾಡಿಯಲ್ಲಿ ಟೋಲ್ ವಸೂಲಿ ಆರಂಭ, ಕುಂಬಳೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಟೋಲ್ ವಸೂಲಿ ಯತ್ನ – ಸಂಘರ್ಷಕ್ಕೆ ತಿರುಗಿದ ಘಟನೆ
ಕುಂಬಳೆ : ಕುಂಬಳೆ ಟೋಲ್ ಬೂತ್ ಪ್ರಕರಣದ ತೀರ್ಪು ಮುಂದೂಡಲ್ಪಟ್ಟ ಹಿನ್ನಲೆಯಲ್ಲಿ, ಬುಧವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ವಸೂಲಿಯನ್ನು ಆರಂಭಿಸಿದೆ. ಪೊಲೀಸ್ ಭದ್ರತೆಯ ಮಧ್ಯೆ ಟೋಲ್ ವಸೂಲಿ ಆರಂಭವಾಗಿದ್ದು, ವಾಹನಗಳನ್ನು ನಿಲ್ಲಿಸಿ ಶುಲ್ಕ ವಸೂಲಿ ಮಾಡಲು ಪ್ರಾರಂಭಿಸಿದ ತಕ್ಷಣ ಸಮರ ಸಮಿತಿಯ ಪದಾಧಿಕಾರಿಗಳು ಟೋಲ್ ಬೂತ್ ಬಳಿ ಆಗಮಿಸಿದ್ದರು. ವಾಹನಗಳನ್ನು ತಡೆದು ಟೋಲ್ ವಸೂಲಿ ಆರಂಭಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳ ದೀರ್ಘ ಸಾಲುಗಳು ಕಂಡುಬಂದವು. ಸಂಜೆವರೆಗೆ…