ಮಂಜೇಶ್ವರ ರೈಲ್ವೆ ನಿಲ್ದಾಣವನ್ನು ಪಾಲಕ್ಕಾಡು ಡಿವಿಶನ್ ಟರ್ಮಿನಲ್ ಬೇಸ್ ಸ್ಥಾಪನೆಗೆ ಬಿಜೆಪಿ ಅಗ್ರಹ

ಹೊಸಂಗಡಿ : ಪಾಲಕ್ಕಾಡು ಡಿವಿಶನ್ ನಿಂದ ಮಂಗಳೂರು ವಿಭಾಗ ಮೈಸೂರು ಡಿವಿಶನ್ ಗೆ ಸೇರ್ಪಡೆ ಆಗುವ ಕಾರಣ ಪಾಲಕ್ಕಾಡು ಡಿವಿಶನ್ ನ ಕೊನೆಯ ರೈಲು ನಿಲ್ದಾಣ ಹಾಗೂ ಕೇರಳದ ಆರಂಭ ದ ರೈಲು ನಿಲ್ದಾಣ ವನ್ನು ಟೇರ್ಮಿನಲ್ ಬೇಸ್ ನಿಲ್ದಾಣ ವಾಗಿ ಅಭಿವೃದ್ಧಿ ಪಡಿಸಿ ಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ರೈಲ್ವೆ ಇಲಾಖೆ ಯನ್ನು ಅಗ್ರಹಿಸದ್ದಾರೆ ಹಾಗೂ ಕೂಡಲೇ ರೈಲ್ವೆ ಸಚಿವರನ್ನು ಬಿಜೆಪಿ ನೇತೃತ್ವದಲ್ಲಿ ಭೇಟಿ ಆಗಲು ತೀರ್ಮಾನಿಸಲಾಗಿದೆ ಎಂದು ಹೇಳಿದರು….

Read More

ಮಂಜೇಶ್ವರ: ನಿರಂತರ ವಿದ್ಯುತ್ ಕಡಿತ ಖಂಡಿಸಿ ಹೊಸಂಗಡಿಯಲ್ಲಿ ಎಸ್ ಡಿ ಪಿ ಐ ಪಂಜಿನ ಮೆರವಣಿಗೆ

​ಮಂಜೇಶ್ವರ: ರಾಜ್ಯದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಎಸ್‌ಡಿಪಿಐ (SDPI) ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು. ​ತೀವ್ರ ಸೆಖೆಯ ನಡುವೆ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿರುವುದರಿಂದ ಮನೆಗಳು, ವ್ಯಾಪಾರ ಸಂಸ್ಥೆಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳು, ವಿದ್ಯಾರ್ಥಿಗಳು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಾಯಕರು ಆರೋಪಿಸಿದರು. ವಿದ್ಯುತ್ ಸರಬರಾಜು ಜಾಲವನ್ನು ಬಲಪಡಿಸಲು ಮತ್ತು ತಡೆರಹಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲು ಸರ್ಕಾರ…

Read More

ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆ ಕನಿಲದಲ್ಲಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ

ಮಂಜೇಶ್ವರ, ಸೆ. 11: ಕನಿಲದ ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷರಾದ ಶ್ರೀ ಗಣೇಶ್ ಪಾವೂರು ವಹಿಸಿದ್ದರು. ಉಪಾಧ್ಯಕ್ಷರಾದ ಗಂಗಾಧರ ದುರ್ಗಿಪಳ್ಳ, ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಕಡಪ್ಪರ, ಖಜಾಂಚಿ ಶ್ರೀ ಸುರೇಶ್ ಬಿ ಎಂ, ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ ಕುದ್ರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ಶ್ರೀ ಮತಿ ಮಂಜುಳಾ ಪಿ.ವಿ, ಅವರು ನೂತನ ಸಮಿತಿ ಸದಸ್ಯರನ್ನು ಸ್ವಾಗತಿಸಿ, ಶಾಲೆಯ…

Read More

ಹೊಸಂಗಡಿ ಓಂ ಶಾಂತಿಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಮಂಜೇಶ್ವರ :ಹೊಸಂಗಡಿ ಓಂ ಶಾಂತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀಮತಿ ಮೋಹಿನಿ ಟೀಚರ್ ವಂದಿಸಿದರು. ಶ್ರೀಮತಿ ಕೃಷ್ಣವೇಣಿ ಟೀಚರ್ ಅವರು ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಿದರು. ಸಭೆಯಲ್ಲಿ ಶ್ರೀಮತಿ ತನುಜಾ ಟೀಚರ್, ಶ್ರೀ ಗಣೇಶ್ ನಾಯಕ್ ಟೀಚರ್ ಹಾಗೂ ಶ್ರೀ ಚಂದ್ರಹಾಸ ಟೀಚರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅಕ್ಕನವರು, “ಮೌಲ್ಯಗಳೇ ಸುಸಂಸ್ಕೃತ ಜೀವನದ ಅಡಿಪಾಯ. ಜೀವನದಲ್ಲಿ ಉಂಟಾಗುವ ದುಃಖ, ಅಶಾಂತಿ, ಒತ್ತಡ ಹಾಗೂ ರೋಗಗಳಿಗೆ ಆಧ್ಯಾತ್ಮಿಕತೆಯ…

Read More

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಅಕ್ಟೋಬರ್ 10 ರಂದು

ಉಪ್ಪಳ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವು ಅಕ್ಟೋಬರ್ 10 ರಂದು ಸರಕಾರಿ ಪ್ರೌಢ ಶಾಲೆ ಕಡಂಬಾರ್ ಲ್ಲಿ ಜರಗಲಿದೆ.ಇದರ ಪೂರ್ವಭಾವಿಯಾಗಿ ಜರಗಿದ ಮಂಜೇಶ್ವರ ಉಪಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಉಪ್ಪಳದ ಕೈಕಂಬ ಪಂಚಮಿ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ್, ಉಪಾಧ್ಯಕ್ಷರಾದ ಉಮೇಶ್ ಬಾಯಾರ್, ಕಾರ್ಯದರ್ಶಿಯಾದ ಜಯಪ್ರಶಾಂತ್ ಪಾಲೆಂಗ್ರಿ , ಸದಸ್ಯರಾದ ಶ್ರೀರಾಮ್ ಕೆದುಕೋಡಿ ,ಚಂದ್ರಿಕಾ…

Read More

ಹೆರಿಗೆಯಾದ ವಲಸೆ ಕಾರ್ಮಿಕ ಮಹಿಳೆ ಹಾಗೂ ಮಗುವಿನ ಜೀವ ರಕ್ಷಿಸಿದವರಿಗೆ ಎಸ್‌ಡಿಪಿಐ ಯಿಂದ ಗೌರವ

​ಮಂಜೇಶ್ವರ: ಮುಂಜಾನೆ 3:45ಕ್ಕೆ ವಾಸ್ತವ್ಯದ ಫ್ಲಾಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ ಹಾಗೂ ನವಜಾತ ಶಿಶುವಿಗೆ ಸಮಯೋಚಿತವಾಗಿ ನೆರವು ನೀಡಿ ಜೀವ ರಕ್ಷಿಸಿದವರನ್ನು ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಹೆರಿಗೆಯ ವಿಚಾರ ತಿಳಿದ ತಕ್ಷಣವೇ ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಶಂಸುದ್ದೀನ್ ಮತ್ತು ಜಕರಿಯ ಉದ್ಯಾವರ ಸ್ಥಳಕ್ಕೆ ತಲುಪಿ ಅಗತ್ಯ ಕ್ರಮಕೈಗೊಂಡರು. ಬಳಿಕ ಆ್ಯಂಬುಲೆನ್ಸ್ ಚಾಲಕ ಅಸ್ಲಂ ಉದ್ಯಾವರ, ಉದ್ಯಾವರದ ‘ರಕ್ಷಾ ಹೈಟೆಕ್ ಲ್ಯಾಬೊರೇಟರಿ-ಕ್ಲಿನಿಕ್’ನ ವೈದ್ಯರು ಮತ್ತು ಶುಶ್ರೂಷಕರನ್ನು (ಸಿಸ್ಟರ್ಸ್) ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯಿದ್ದ…

Read More

ಕ.ಸಾ.ಪ ದಿಂದ ಮೀಯಪದವಿನಲ್ಲಿ ಎಸ್ .ವಿ ಭಟ್ ಸಂಸ್ಮರಣೆ ಮತ್ತು ಕವಿಗೋಷ್ಠಿ. ಎಸ್ .ವಿ ಭಟ್ಟರ ವ್ಯಕ್ತಿತ್ವ ಅನುಸರಣೀಯ: ರಾಜಾರಾಮ ರಾವ್

ಮೀಯಪದವು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಿವೃತ್ತ ಶಿಕ್ಷಣಾ ಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ಎಸ್.ವಿ.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಮತ್ತು ಕವಿಗೋಷ್ಠಿಯು ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ ‘ಕೇಶವಾಮೃತಂ’ ಸಭಾಂಗಣದಲ್ಲಿ ನಡೆಯಿತು. ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್. ಟಿ ಸಂಸ್ಮರಣಾ ಭಾಷಣ ಮಾಡಿದರು. ದಿ. ಎಸ್ .ವಿ ಭಟ್ಟರು ಕ.ಸಾ.ಪ ಅಧ್ಯಕ್ಷರಾಗಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ…

Read More

ಕಾಸರಗೋಡು-ಮಂಗಳೂರು ಬಸ್ ಪ್ರಯಾಣಿಕರ ಪರದಾಟ: ಒಂದೇ ಬಸ್ಸಿನಲ್ಲಿ 140 ಜನರ ಪ್ರಯಾಣ

ಮಂಜೇಶ್ವರ : ​ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಿತಿಮೀರಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಮಾನ್ಯ ಬಸ್‌ನ ಸಾಮರ್ಥ್ಯ ಸುಮಾರು 67 ಪ್ರಯಾಣಿಕರಷ್ಟಿದ್ದರೆ, ಪ್ರಸ್ತುತ ಪೀಕ್ ಅವರ್‌ಗಳಲ್ಲಿ ಬಸ್‌ಗಳಲ್ಲಿ 110 ರಿಂದ 140 ಜನ ಪ್ರಯಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ​ ಕೇರಳ ಸರ್ಕಾರವು ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ‘ಪ್ರಿಯದರ್ಶಿನಿ’ ಯೋಜನೆ ಜಾರಿಗೆ ತಂದ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಸಮಯಕ್ಕೆ ಸರಿಯಾಗಿ ರೈಲು ಲಭ್ಯವಿಲ್ಲದ…

Read More

ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ‘ಕಾಪಾ’ ಕಾಯಿದೆಯಡಿ ಬಂಧನ

ಮಂಜೇಶ್ವರ : ​ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪೈವಳಿಕೆ ಮೂಲದ ಅಬೂಬಕ್ಕರ್ ಸಿದ್ದೀಕ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಕಾಪಾ ಕಾಯಿದೆಯಡಿ ಬಂಧಿಸಿದ್ದಾರೆ. ​ಸ್ಥಳೀಯವಾಗಿ ನಿರಂತರವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಹಾಗೂ ಹಲವು ಹಿಂಸಾತ್ಮಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ಮುನ್ನೆಚ್ಚರಿಕೆ ಬಂಧನ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ​ಬಂಧನದ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಆರೋಪಿಯನ್ನು ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಕ್ಷೇತ್ರದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯುವ ಭಾಗವಾಗಿ ಪೊಲೀಸರು ಈ ಕಠಿಣ ಕ್ರಮವನ್ನು…

Read More

ಕುಂಬಳೆ ರೈಲ್ವೆ ನಿಲ್ದಾಣದ ಬಳಿ ಚರಂಡಿಗೆ ಬಿದ್ದು ಯುವಕನಿಗೆ ಗಂಭೀರ ಗಾಯ

ಮಂಜೇಶ್ವರ : ಕುಂಬಳೆ ರೈಲ್ವೆ ನಿಲ್ದಾಣದ ಬಳಿ ಸ್ಲ್ಯಾಬ್ ತೆಗೆದುಹಾಕಲಾಗಿದ್ದ ಚರಂಡಿಗೆ ಬಿದ್ದು ಗಲ್ಫ್‌ಗೆ ಮರಳಬೇಕಿದ್ದ ಶಿರಿಯಾ ಮೂಲದ ಯುವಕನೊಬ್ಬ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ​ಅಪಘಾತದಲ್ಲಿ ಯುವಕನ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ​ಈ ಮಧ್ಯೆ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿನ ಚರಂಡಿಗಳ ಸ್ಲ್ಯಾಬ್‌ಗಳನ್ನು ತೆರೆದಿಟ್ಟಿರುವುದು ತೀವ್ರ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಾದಚಾರಿ…

Read More
error: Content is protected !!