ವರ್ಕಾಡಿಯಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆದ ಗಣಪತಿ  ಜಲಸ್ತಂಭನ  ಶೋಭಾಯಾತ್ರೆ

ವರ್ಕಾಡಿ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ (ರಿ.), ಸುಂಕದಕಟ್ಟೆ, ವರ್ಕಾಡಿ ವತಿಯಿಂದ ಆಯೋಜಿಸಲಾಗಿದ್ದ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಗಣಪತಿ ಮೂರ್ತಿಯ ಜಲಸ್ತಂಭನ  ಶೋಭಾಯಾತ್ರೆ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು. ಮೂರು ದಿನಗಳ ಕಾಲ ನಡೆದ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸೆಪ್ಟೆಂಬರ್ 14ರಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ವಿಶೇಷ ಪೂಜೆ, ಭಜನೆ, ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನೆರವೇರಿದವು. ಸ್ತಬ್ಧಚಿತ್ರ, ಹುಲಿವೇಷ ಕುಣಿತ ಹಾಗೂ ಕುಣಿತ ಭಜನೆ…

Read More

ಪ್ರೇರಣಾ ಗ್ರಂಥಾಲಯ ಗುವೇದಪಡ್ಪು ನಲ್ಲಿ ಗ್ರಂಥಾಲಯ ದಿನಾಚರಣೆ

ಗುವೇದಪಡ್ಪು:ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೇದಪಡ್ಪು ನಲ್ಲಿ ವಾಚನಾ ವಾರಾಚರಣೆ ಹಾಗೂ ಗ್ರಂಥಾಲಯ ದಿನಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರತೀಶ್ ಕಾನ,ಅಶೋಕ್ ಕೊಡ್ಲಮೊಗರು, ಪ್ರದೀಪ್ ಗುವೇದಪಡ್ಪು,ಅಂಕಿತಾ,ಮಾದವ,ಮೋಕ್ಷಿತ್,ಜಯ ಶ್ರೀ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ದ ಅಂಗವಾಗಿ ದ್ವಜಾರೋಹಣ,ಪುಸ್ತಕ ಪ್ರದರ್ಶನ, ಪುಸ್ತಕ ವಿಮರ್ಶೆ, ಪುಸ್ತಕ ಬಿಕ್ಷಾ ಅಭಿಯಾನ,ಅಕ್ಷರ ದೀಪ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Read More

ತ್ಯಾಜ್ಯ ನಿರ್ವಹಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಯು. ಕೆ. ಸೈಫುಲ್ಲಾ ತಂಘಳ್

ಮಂಜೇಶ್ವರ: ತ್ಯಾಜ್ಯ ನಿರ್ವಹಣೆ ಸರ್ಕಾರದಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು. ಕೆ. ಸೈಫುಲ್ಲಾ ತಂಘಳ್ ಹೇಳಿದರು. ಮಂಜೇಶ್ವರ, ಮಂಗಲ್ಪಾಡಿ ಮತ್ತು ವರ್ಕಾಡಿ ಪಂಚಾಯತ್‌ಗಳ ಜನಪ್ರತಿನಿಧಿಗಳಿಗಾಗಿ ‘ಕಿಲ’ ಆಯೋಜಿಸಿದ್ದ ಘನತ್ಯಾಜ್ಯ ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ​ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಜನಪ್ರತಿನಿಧಿಗಳು ಹಾಗೂ ಕಿಲಾ ಜಿಲ್ಲಾ ಸಂಯೋಜಕ ವಿ. ಕೆ. ರಾಮಚಂದ್ರನ್ ಉಪಸ್ಥಿತರಿದ್ದರು. ​ಬಿಕಿಕವಾಗಿ ನಡೆದ ತರಬೇತಿ…

Read More

ದೃಢ ನಿಶ್ಚಯದೊಂದಿಗೆ ಶ್ರಮ ವಹಿಸಿದರೆ ನಮ್ಮ ಗುರಿಯಡೆಗೆ ಸಾಗುವುದು ಸುಲಭ : ಜಿಲ್ಲಾಧಿಕಾರಿ ಶ್ರೀ ಅರ್ಜುನ್ ಪಾಂಡ್ಯಂನ್ ಐಎಎಸ್

ಮಂಜೇಶ್ವರ: ವಿದ್ಯಾರ್ಥಿಗಳೇ ಮುಂದಿನ ಭವಿಷ್ಯ ಅವರೇ ದೇಶವನ್ನು ಕಟ್ಟುವವರು ಹಾಗೂ ಸುದೃಢಗೊಳಿಸುವವರು ಎಂಬ ಆಶಯದಂತೆ ಕಾಸರಗೋಡು ಜಿಲ್ಲಾಧಿಕಾರಿ ಶ್ರೀ ಅರ್ಜುನ್ ಪಾಂಡ್ಯಂನ್ IAS ಅವರು ಹಮ್ಮಿಕೊಂಡಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ನಮಸ್ತೆ ಕಲೆಕ್ಟರ್ ಎಂಬ ಯಶಸ್ವಿ ಕಾರ್ಯಕ್ರಮದ ಅಂಗವಾಗಿ ಸರಕಾರಿ ಪ್ರೌಢಶಾಲೆ ಮೂಡಂಬೈಲು ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಶ್ರೀಯುತ ಜಿಲ್ಲಾಧಿಕಾರಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಂಡು ದೃಢ ನಿಶ್ಚಯದಿಂದ ಮುಂದೆ ಸಾಗಿದರೆ ನಮ್ಮ ಗುರಿಯನ್ನು ಸುಲಭವಾಗಿ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಹಾಗೂ ತಮ್ಮ ಜೀವನದ…

Read More

ಗ್ರಾಮ ಪಂ. ಹೆಡ್ ಕ್ಲರ್ಕ್ ಮದ್ಯಪಾನ ಮಾಡಿ ವಾಹನ ಚಾಲನೆ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಬಳಿ ಪೊಲೀಸ್ ತಪಾಸಣೆ ವೇಳೆ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ​ಮಂಜೇಶ್ವರ ಗ್ರಾಮ ಪಂಚಾಯತ್ ಹೆಡ್ ಕ್ಲರ್ಕ್, ಕಾಂಜಿರಂಕುಲಂ ಮೂಲದ ಅನೀಶ್ ಕುಮಾರ್ ಕೆ.ಎ (39) ಮತ್ತು ತಯ್ಯನ್ನೂರ್ ಮೂಲದ ರವೀಂದ್ರನ್ ಎ (50) ಆರೋಪಿಗಳು. ​ ಮಂಗಳವಾರ ಸಂಜೆ ಮಂಗ್ಳೂರಿನಿಂದ ಕಾಸರಗೋಡು ಕಡೆಗೆ ಬೈಕ್‌ನಲ್ಲಿ (KL 20 E 0690) ಬರುತ್ತಿದ್ದಾಗ ಪೊಲೀಸರು ತಡೆದರೂ ನಿಲ್ಲಿಸದೆ ತೆರಳಿದ್ದರು. ಬೈಕ್…

Read More

ಮಂಜೇಶ್ವರ :ಸೋಮವಾರದಿಂದ ನಾಪತ್ತೆಯಾಗಿದ್ದ ಬಾಬು ಶೆಟ್ಟಿ ಮೃತದೇಹವಾಗಿ ಪತ್ತೆ

ಮಂಜೇಶ್ವರ : ಕುಂಜತ್ತೂರು ಗೋಳಿಯಡಿಯ ನಿವಾಸಿ ಬಾಬು ಶೆಟ್ಟಿ (77) ಎಂಬುವರು ನೇಣು ಬಿಗಿದುಕೊಂಡು ಶವವಾಗಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇವರು, ಸೋಮವಾರದಿಂದ ಕಾಣೆಯಾಗಿದ್ದರು. ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದಾಗ, ಮನೆ ಸಮೀಪದ ದನದ ಕೊಟ್ಟಿಗೆಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ​ತಕ್ಷಣವೇ ಅವರನ್ನು ಮಂಗಲ್ಪಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರೆಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read More

ಮಂಜೇಶ್ವರ: ಬೀದಿ ನಾಯಿಗಳ ಹಾವಳಿಗೆ ಬೆದರಿದ ಜನತೆ : ವಿದ್ಯಾರ್ಥಿನಿಗೆ ಗಂಭೀರ ಗಾಯ, ತ್ಯಾಜ್ಯ ಮುಕ್ತಿಗೆ ಆಗ್ರಹ

​ಮಂಜೇಶ್ವರ: ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಭೀತಿಪಡುವ ವಾತಾವರಣ ನಿರ್ಮಾಣವಾಗಿದೆ. ​ ಇದೀಗ ಉದ್ಯಾವರ ಬಿ.ಎಸ್. ನಗರದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಸ್ಥಳೀಯ ನಿವಾಸಿ ಹನೀಫ್ ಎಂಬುವರ ಪುತ್ರಿ, ವಿದ್ಯಾರ್ಥಿನಿ ಹನಾ ಎಂಬಾಕೆಯನ್ನು ಬೀದಿ ನಾಯಿಯೊಂದು ಹಿಂಬಾಲಿಸಿ ದಾಳಿಗೆತ್ನಿಸಿದೆ. ಈ ವೇಳೆ ಭಯದಿಂದ ಕಿರುಚುತ್ತಾ ಓಡಿದ ಆಕೆ ಆಕಸ್ಮಿಕವಾಗಿ ಬಿದ್ದು, ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ವಿದ್ಯಾರ್ಥಿನಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ…

Read More

ಒಂದೇ ನೋಂದಣಿ ಸಂಖ್ಯೆಯೊಂದಿಗೆ ಸಂಚರಿಸುತ್ತಿದ್ದ ಟಾರ್ ವಾಹನಗಳು: ಕಳ್ಳಾಟ ಬಯಲು ಮಾಡಿದ ಮಂಜೇಶ್ವರ ಪೊಲೀಸರು

​ಮಂಜೇಶ್ವರ:ಉಪ್ಪಳದಲ್ಲಿ ಒಂದೇ ರೀತಿಯ ನೋಂದಣಿ ಸಂಖ್ಯೆ ಯನ್ನು ಅಳವಡಿಸಿಕೊಂಡು ರಸ್ತೆಯಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದ ಎರಡು ಟಾರ್ ವಾಹನಗಳನ್ನು ಮಂಜೇಶ್ವರ ಪೊಲೀಸರು ಇಂದಿನ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ​ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ವಿಷ್ಣು ಹಾಗೂ ಎಸ್‌ಐ ಶಬರಿ ಅವರ ನೇತೃತ್ವದ ಪೊಲೀಸ್ ತಂಡವು ಇಂದು ಬೆಳಿಗ್ಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ರೋಚಕ ನಕಲಿ ಜಾಲದ ಕಳ್ಳಾಟ ಬೆಳಕಿಗೆ ಬಂದಿದೆ. ಎರಡು ವಾಹನಗಳಿಗೂ ಒಂದೇ ನೋಂದಾವಣೆ ಸಂಖ್ಯೆ ಇರುವುದನ್ನು ಕಂಡು ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಎರಡೂ ಟಾರ್…

Read More

ಹೊಸಂಗಡಿ: ಬಸ್ ಇಳಿಯುವಾಗ ವೃದ್ಧೆಯ ಚಿನ್ನದ ಸರ ಕದಿಯಲು ಯತ್ನಿಸಿದ ತಮಿಳುನಾಡು ಮೂಲದ ಮಹಿಳೆ ಸೆರೆ

​ಕಾಸರಗೋಡು:ನಿಲ್ದಾಣದಲ್ಲಿ ಬಸ್ ಇಳಿಯುತ್ತಿದ್ದ ವೃದ್ಧೆಯೊಬ್ಬರ ಮೂರು ಪವನ್ ಚಿನ್ನದ ಸರವನ್ನು ಕದಿಯಲು ಯತ್ನಿಸಿದ ತಮಿಳುನಾಡು ಮೂಲದ ಮಹಿಳೆಯೊಬ್ಬಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾಳೆ.ತಮಿಳುನಾಡಿನ ಮಧುರೈ ಮೂಲದ ಮುತ್ತಾತ್ತ (40) ಎಂಬಾಕೆಯನ್ನು ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ​ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಂಗ್ರಮಂಜೇಶ್ವರ ಮೂಲದ 77 ವರ್ಷದ ಪ್ರೇಮಾ ಎಂಬವರ ಸರವನ್ನು ಈಕೆ ಎಗರಿಸಲು ಯತ್ನಿಸಿದ್ದಳು.ಪ್ರೇಮಾ ಅವರು ಮಂಗಳೂರಿನಲ್ಲಿ ಸಂಬಂಧಿಕರೊಬ್ಬರ ವಿವಾಹ ಆರತಕ್ಷತೆ ಮುಗಿಸಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊಸಂಗಡಿಗೆ ಹಿಂತಿರುಗುತ್ತಿದ್ದರು.​ಹೊಸಂಗಡಿಯಲ್ಲಿ ಬಸ್…

Read More

ಮಂಜೇಶ್ವರಾದ್ಯಂತ ವೈಭವದ ಗಣೇಶೋತ್ಸವ: ಹೊಸಂಗಡಿಯಲ್ಲಿ 46ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ

​ಮಂಜೇಶ್ವರ: ಮಂಜೇಶ್ವರ ತಾಲೂಕಿನಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿ, ಶ್ರದ್ಧೆ ಮತ್ತು ಭಾರೀ ಸಂಭ್ರಮ-ಸಡಗರಗಳೊಂದಿಗೆ ಆಚರಿಸಲಾಗುತ್ತಿದೆ. ​ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾದ 46ನೇ ವರ್ಷದ ಗಣೇಶೋತ್ಸವಕ್ಕೆ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ನಡಿಬೈಲು ಶ್ರೀ ಶಂಕರನಾರಾಯಣ ಭಟ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಗಣೇಶ ಚತುರ್ಥಿಯ ಶುಭ ದಿನದಂದು ವಿವಿಧ ಧಾರ್ಮಿಕ ವೈದಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವವು ವಿಜೃಂಭಣೆಯಿಂದ ಆರಂಭಗೊಂಡಿದೆ. ​ಇನ್ನು ಮಂಜೇಶ್ವರದ ಕೆದಂಬಾಡಿ…

Read More
error: Content is protected !!