ಎಕ್ಸೈಸ್ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ಇಫ್ತಾರ್ ಕೂಟ : ಐಕ್ಯತೆಗೆ ಸಂದೇಶ

ಉಪ್ಪಳ: ಹೊಸಂಗಡಿ ಎಕ್ಸೈಸ್ ಚೆಕ್‌ಪೋಸ್ಟ್ ಸಮೀಪ ಗೋಟ್ಸ್ ಎಫ್‌ಸಿ ಸಂಘಟನೆಯ ವತಿಯಿಂದ ಸಾಮೂಹಿಕ ಇಫ್ತಾರ್ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ಹಾಗೂ ಸೌಹಾರ್ದತೆಯ ವಾತಾವರಣದಲ್ಲಿ ಆಯೋಜಿಸಲಾಯಿತು. ಪವಿತ್ರ ರಂಜಾನ್ ತಿಂಗಳ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಿ, ಪರಸ್ಪರ ಸೌಹಾರ್ದತೆಯನ್ನು ಬಲಪಡಿಸಿದರು. ಉಪವಾಸ ಮುರಿಯುವ ಮೊದಲು ಪ್ರಾರ್ಥನೆ ಸಲ್ಲಿಸಲಾಗಿದ್ದು, ನಂತರ ಎಲ್ಲರೂ ಒಂದೇ ಸ್ಥಳದಲ್ಲಿ ಕುಳಿತು ಇಫ್ತಾರ್ ಸ್ವೀಕರಿಸಿದರು. ಸಮಾಜದಲ್ಲಿ ಐಕ್ಯತೆ, ಶಾಂತಿ ಮತ್ತು ಪರಸ್ಪರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಇಂತಹ…

Read More

ಲಾಲ್ಬಾಗ್–ಚಿಪ್ಪಾರ್–ಕುರುಡಪ್ಪದವು ರಸ್ತೆ ಕಾಮಗಾರಿ ವಿಳಂಬ: ಶೀಘ್ರ ಪೂರ್ಣಗೊಳಿಸಲು ಸಾರ್ವಜನಿಕರ ಒತ್ತಾಯ

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್ಬಾಗ್–ಚಿಪ್ಪಾರ್–ಕುರುಡಪ್ಪದವು ರಸ್ತೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂಬ ಬೇಡಿಕೆ ಸಾರ್ವಜನಿಕರಲ್ಲಿ ಹೆಚ್ಚುತ್ತಿದೆ. ಸಂಪೂರ್ಣ ಹಾಳಾಗಿರುವ ರಸ್ತೆಯಿಂದ ಜನರು ವರ್ಷಗಳ ಕಾಲ ತೀವ್ರ ತೊಂದರೆ ಅನುಭವಿಸಿದ್ದರೆ . ಈ ರಸ್ತೆಗೆ ಕೊನೆಗೂ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರೆತಿದ್ದರೂ, ರಸ್ತೆ ಅಗಲಪಡಿಸುವ ಕಾಮಗಾರಿ ಆರಂಭವಾಗಿ ಹಲವು ತಿಂಗಳು ಕಳೆದರೂ ಕಾರ್ಯ ನಿರೀಕ್ಷಿತ ವೇಗದಲ್ಲಿ ಮುಂದುವರಿಯುತ್ತಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದರ ಬಗ್ಗೆ ಸ್ಥಳೀಯರು…

Read More

ಉಪ್ಪಳದಲ್ಲಿ ಮದ್ರಸಾ ಶಿಕ್ಷಕರಿಗೆ ಸಮ್ಮಾನ, ಟಾಪ್ ಪ್ಲಸ್ ವಿದ್ಯಾರ್ಥಿಗಳಿಗೆ ಗೌರವ

ಉಪ್ಪಳ: ಸಮಸ್ತ ಮದ್ರಸಾ ನಿರ್ವಹಣಾ ಸಂಘದ ಉಪ್ಪಳ ರೇಂಜ್ ಸಮಿತಿಯ ವತಿಯಿಂದ ಮದ್ರಸಾ ಶಿಕ್ಷಕರಿಗೆ ಈದ್ ಹಬ್ಬದ ಅಂಗವಾಗಿ ಸ್ನೇಹ ಸಮ್ಮಾನ ವಿತರಣೆ ಹಾಗೂ ಟಾಪ್ ಪ್ಲಸ್ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉಪ್ಪಳ ಪಟ್ಟಣದ ಬದ್ರಿಯಾ ಮದ್ರಸಾದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಶೀದ್ ಮಾಸ್ಟರ್ ಬೆಳಿಂಜಂ ಉದ್ಘಾಟಿಸಿದರು. ಉಪ್ಪಳ ರೇಂಜ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಳ್ಳಂ ಅಧ್ಯಕ್ಷತೆ ವಹಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಉಪ್ಪಳ ರೇಂಜ್ ಮದ್ರಸಾ ನಿರ್ವಹಣಾ ಸಂಘದ…

Read More

ಮಂಜೇಶ್ವರದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ -ಕೆ ಸುರೇಂದ್ರನ್

ಕುಂಜತ್ತೂರು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ K. Surendran ಅವರಿಗೆ ತೂಮಿನಾಡು ಪ್ರದೇಶದಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಭರ್ಜರಿ ಸ್ವಾಗತ ನೀಡಲಾಯಿತು. ಕಾರ್ಯಕ್ರಮಕ್ಕೆ ಹುಲಿ ವೇಷ ಮತ್ತು ತಾಸೆ ಮೇಳದೊಂದಿಗೆ ಸಂಭ್ರಮದ ಚಾಲನೆ ನೀಡಲಾಯಿತು. ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುರೇಂದ್ರನ್, ಮಂಜೇಶ್ವರದ ಸಮಗ್ರ ಅಭಿವೃದ್ಧಿ ಬಿಜೆಪಿ ಮೂಲಕ ಮಾತ್ರ ಸಾಧ್ಯವೆಂದು ಹೇಳಿದರು. ಕಳೆದ 40 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದವರು ಮಂಜೇಶ್ವರವನ್ನು ಅಭಿವೃದ್ಧಿಯಿಂದ ಹಿಂದೆ ಉಳಿಸಿದ್ದಾರೆ ಎಂದು ಆರೋಪಿಸಿದ…

Read More

“ಕಾಸರಗೋಡು ಗೋ- ಕುಟೀರ”ದ ನಿರ್ಮಾಣಕ್ಕೆ ಗೋ- ಭಕ್ತರು,ಗೋ- ಪೋಷಕರು ದಾನಿಗಳಿಂದ ಸಹಕಾರದ ನಿರೀಕ್ಷೆಯಲ್ಲಿ.

ಕಾಸರಗೋಡು :- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ-ಕುಟೀರ”ದ ಕಾಮಗಾರಿಗೆ ಗೋ- ಭಕ್ತರು, ಗೋ -ಪೋಷಕರು, ದಾನಿಗಳಿಂದ ಆರ್ಥಿಕ ಸಹಾಯ,ಸಹಕಾರ ಪ್ರೋತ್ಸಾಹವನ್ನು ನೀಡುವಂತೆ ಮನವಿ ಮಾಡಲಾಗಿದೆ.ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರವನ್ನು ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಉದ್ದೇಶದಿಂದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ದೈವಾರ್ಷಿಕ ಕಾರ್ಯ ಯೋಜನೆಯನ್ನು…

Read More

ಎಸ್ ಪಿ ಬಿ ತೀಯ ಚಾಂಪಿಯನ್ಶಿಪ್ ಕ್ರಿಕೆಟ್ ಕ್ರಿಡಾ ಕೂಟ ಸಂಪನ್ನ

ಎಸ್ ಪಿ ಬಿ ತೀಯ ಇದರ ಆಶ್ರಯದಲ್ಲಿ ಲೀಗ್ ಮಾದರಿಯ 9s ಕ್ರಿಕೆಟ್ ಕ್ರೀಡಾ ಕೂಟವನ್ನು ಕಳೆದ ಭಾನುವಾರ ಸಂತಡ್ಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.ಲಿಗ್ ಮಾದರಿಯ ಈ ಕ್ರೀಡಾ ಕೂಟದಲ್ಲಿ ತಿಯ ಸಮುದಾಯಕ್ಕೆ ಒಳಪಟ್ಟ ಪ್ರಗತಿ ಮುಟ್ಟಂ,ತಾಂಡವ ಲಾಲ್ಬಾಗ್,ಟೀಮ್ ಎಸ್ ಪಿ ಬಿ,ಜನನಿ ವೀರ ನಗರ ಅಡ್ಕ ,ಬ್ರದರ್ಸ್ ಶಾಸ್ತ ,ತಿಯ ಸ್ಟ್ರೈಕರ್ಸ್ ,ಕೆ ಎಫ್ ಸಿ ಕನಿಲ ,ಫ್ರೆಂಡ್ಸ್ ಕನಿಲ ಈ ರೀತಿ 8 ತಂಡಗಳು ಭಾಗವಹಿಸಿದ್ದು. ಫೈನಲ್ ಸ್ಪರ್ಧೆಯಲ್ಲಿ ಕೆ ಎಫ್ ಸಿ ಕನಿಲ ಹಾಗು…

Read More

ರಂಜಾನ್ ಸಂಭ್ರಮದಲ್ಲಿ ವಿಶೇಷ ‘ಮೆತ್ತೆಗಂಜಿ’ – ಅಬ್ದುಲ್ಲಚ್ಚರ ನಿಷ್ಠೆಯ ಸೇವೆ

ಮಂಜೇಶ್ವರ: ರಂಜಾನ್ ತಿಂಗಳ ಉಪವಾಸದ ನಂತರ ಸವಿಯುವ ಇಫ್ತಾರ್ ಗಂಜಿಗೆ ಅದರದ್ದೇ ಆದ ವಿಶೇಷತೆಯಿದೆ. ಆದರೆ ಮಂಜೇಶ್ವರದ ಉದ್ಯಾವರ ಪರಿಸರದ ಮೈಮೂನ ಮಸೀದಿಯಲ್ಲಿ ತಯಾರಾಗುವ ‘ಮೆತ್ತೆಗಂಜಿ’ಯ (ಮೆಂತ್ಯ ಗಂಜಿ) ರುಚಿಯೇ ಬೇರೆ. ಈ ಅಪರೂಪದ ರುಚಿಯ ಹಿಂದೆ ಒಬ್ಬ ವ್ಯಕ್ತಿಯ 50 ವರ್ಷಗಳ ಅವಿರತ ಶ್ರಮ ಮತ್ತು ನಿಷ್ಠೆಯಿದೆ. ಅವರೇ ಉದ್ಯಾವರ ಹಾಗೂ ಮಂಜೇಶ್ವರ ಪರಿಸರದಲ್ಲಿ ‘ಅಬ್ದುಲ್ಲಚ್ಚ’ ಎಂದೇ ಖ್ಯಾತರಾಗಿರುವ ಅಬ್ದುಲ್ಲ. ​ ಸರಿಯಾಗಿ 1976-77ರ ಕಾಲಘಟ್ಟದಲ್ಲಿ ಮೈಮೂನ ಮಸೀದಿಗೆ ಮೆತ್ತೆಗಂಜಿ ತಯಾರಿಸಲು ಆಹ್ವಾನಿಸಲ್ಪಟ್ಟ ಅಬ್ದುಲ್ಲ ಅವರು,…

Read More

ಆರಿಕ್ಕಾಡಿ ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಕಾಲಾವಧಿ ವಾರ್ಷಿಕ ನೇಮೋತ್ಸವ

ಕಾಸರಗೋಡು ಜಿಲ್ಲೆಯ ಆರಿಕ್ಕಾಡಿ ಗ್ರಾಮದ ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಕಾಲಾವಧಿ ವಾರ್ಷಿಕ ನೇಮೋತ್ಸವವು ಮಾರ್ಚ್ 26 ಮತ್ತು 27, 2026 ರಂದು ಭಕ್ತಿಭಾವದಿಂದ ನಡೆಯಲಿದೆ. ದೇವಸ್ಥಾನದ ಪ್ರಕಟಣೆಯ ಪ್ರಕಾರ, ಮಾರ್ಚ್ 26ರಂದು ಗುರುವಾರ ಬೆಳಗ್ಗೆ ಗಣಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ ವೇಳೆಯಲ್ಲಿ ಅಲಂಕಾರ ಪೂಜೆ, ಭಜನೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಬಳಿಕ ಬಂಡಾರ ಏರುವುದು , ರಾತ್ರಿ 8: 30ಕ್ಕೆ ಉಳ್ಳಲ್ತಿ ದೈವದ ನೇಮ ಬಳಿಕ ರಾತ್ರಿ 10:00ಗೆ ಮೈಸಂದಾಯ…

Read More

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆರಿಂದ ಮಂಜೇಶ್ವರ ಎನ್‌ಡಿಎ ಚುನಾವಣಾ ಕಚೇರಿ ಉದ್ಘಾಟನೆ

ಮಂಜೇಶ್ವರ: ಮಂಜೇಶ್ವರ ಮಂಡಲದ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಮಂಗಲ್ಪಾಡಿ ಪಂಚಾಯತಿನ ಸೊಂಕಲ್ ನಲ್ಲಿ ಕೇಂದ್ರ ಸಚಿವೆ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ಸಹ ಪ್ರಭಾರಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್‌ಡಿಎ (NDA) ಚುನಾವಣಾ ಸಮಿತಿ ಕಚೇರಿಯನ್ನು, ವಿಧಾನಸಭಾ ಚುನಾವಣೆಯ ರಾಜ್ಯ ಸಹ-ಪ್ರಭಾರಿಯೂ ಆಗಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು ಕೇರಳ ಬಿಜೆಪಿ ರಾಜ್ಯ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಕೆ ಸುರೇಂದ್ರನ್, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪ್ರಭಾರಿ…

Read More

ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ: ನಿರ್ಗತಿಕರಿಗೆ ಆಹಾರ ಕಿಟ್, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಹೊಸಂಗಡಿ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಹೊಸಂಗಡಿ ಅಯ್ಯಪ್ಪ ಭಜನಾ ಮಂದಿರದಲ್ಲಿ ಸಮಾಜ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ 100 ನಿರ್ಗತಿಕ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಹಾಗೂ 100 ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಸೇವೆಯ ಮೂಲಕ ಬಡವರ ಜೀವನದಲ್ಲಿ ಬೆಳಕು ತರಲು ಸಂಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ದಶಮಾನೋತ್ಸವದ ಅಂಗವಾಗಿ…

Read More
error: Content is protected !!