ಮಂಗಳೂರಿನಲ್ಲಿ ಕಾರ್ ಮಾಡಿಫಿಕೇಷನ್ ಸೆಂಟರ್‌ನಲ್ಲಿ ಬೆಂಕಿ ಅವಘಡ – 2 ಬಿಎಂಡಬ್ಲ್ಯು ಕಾರುಗಳಿಗೆ ಹಾನಿ

ಮಂಗಳೂರು: ನಗರದ ಫಳ್ನೀರ್ ಸಮೀಪದ ಟೋಪಾಜ್ ಕಾರ್ ಸೆಂಟರ್‌ನಲ್ಲಿ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಎರಡು ಬಿಎಂಡಬ್ಲ್ಯು ಕಾರುಗಳು ಹಾನಿಗೊಳಗಾಗಿ ಅಪಾರ ಸ್ವತ್ತು ನಾಶವಾಗಿದೆ. ಇಂದು ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬೆಂಕಿ ತೀವ್ರತೆಯಿಂದ ಸೆಂಟರ್‌ನಲ್ಲಿ ಇದ್ದ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.ಈ ಸಂಸ್ಥೆ ಮಾಜಿ ಶಾಸಕ ಮೊಯ್ದೀನ್ ಬಾವ ಅವರ ತಂಗಿಯ ಮಗ ಸಿಯಾಜ್ ಅವರಿಗೆ ಸೇರಿದ್ದಾಗಿದೆ.ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಶ್ರಮಿಸಿದ್ದು, ಹೆಚ್ಚಿನ ಹಾನಿಯನ್ನು…

Read More

ಮಂಗಲ್ಪಾಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ಹಾಗೂ 29ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

ಡಾ. ಬಿ ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾವೇದಿಕೆ ಮಂಗಲ್ಪಾಡಿ ಇದರ 29ನೇ ವಾರ್ಷಿಕೋತ್ಸವ ಮತ್ತು ಸಂವಿದಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಇತ್ತೀಚಿಗೆ ಮಂಗಲ್ಪಾಡಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಸಭಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಶ್ರೀ ವಸಂತಕುಮಾರ್ ಮಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಸ್ಥಾಪಕ ಸದಸ್ಯರಾದ ಶ್ರೀ ನಾರಾಯಣ ಬಾರಡ್ಕ ಇವರು ಅಂಬೇಡ್ಕರ್ ತತ್ವ ಮತ್ತು ವಿಚಾರಗಳ ಬಗ್ಗೆ ಮಾತನಾಡಿದರು….

Read More

ಮೂಡಬಿದ್ರಿಯಲ್ಲಿ ಅಕ್ರಮ ಗೋಸಾಗಾಟ ಬಯಲು: 9 ದನಗಳ ರಕ್ಷಣೆ

ಮಂಗಳೂರು : ಪೊಲೀಸ್ ಕಾರ್ಯಾಚರಣೆ, ಬಂಧನದಂತಹ ಬಿಗು ಕಾನೂನು ಕ್ರಮಗಳ ನಡುವೆಯೂ ಅಮಾನವೀಯವಾಗಿ ದನಗಳನ್ನು ಸಾಗಿಸುವ ಪ್ರಕರಣಗಳು ನಡೆಯುತ್ತಿವೆ.ಮೂಡಬಿದ್ರೆಯ ತೋಡಾರ್ ಪಡೋಡ್ಡಿ ಬಳಿ ಪೊಲೀಸ್ ಕಾರ್ಯಾಚರಣೆ ಇಂತಹ ಇನ್ನೊಂದು ಅಕ್ರಮ‌ ಗೋಸಾಗಾಟವನ್ನು ಬಯಲಿಗೆ ಎಳೆದಿದೆ. ಖಚಿತ ಮಾಹಿತಿಯ ಮೇರೆಗೆ ಮೂಡಬಿದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, 9 ದನಗಳ್ಳನ್ನು ರಕ್ಷಿಸಿದ್ದಾರೆ.ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು.

Read More

ಓವರ್‌ಟೇಕ್ ದುರಂತ: ಬೈಕ್ ಸವಾರ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು

ಮಂಗಳೂರು:ಓವರ್ ಟೇಕ್ ಮಾಡುವ ಭರದಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮೈನ್ಸ್ ಒಯ್ಯುತ್ತಿದ್ದ ಭಾರೀ ಗಾತ್ರದ ಟಿಪ್ಪರ್ ಗೆ ಬಡಿದು ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂತೂರು ಬಳಿ ನಡೆದಿದೆ. ತಾರಾಯಿತೋಟ ಎಂಬಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಮಧ್ಯ ವಯಸ್ಕ ಛಾಯಾಗ್ರಾಹಕರಾಗಿದ್ದ ವ್ಯಕ್ತಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ. ಭೀಕರ ಘಟನೆಯ ದೃಶ್ಯವು ಟೆಂಪೋವೊಂದರ ಡ್ಯಾಷ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧರ್ಮಸ್ಥಳ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ (27) ಮೃತ…

Read More

ಕಾನಿಪ ಸಂಘದ 40ನೇ ರಾಜ್ಯ ಸಮ್ಮೇಳನಕ್ಕೆ ತೆರೆ

ಪತ್ರಕರ್ತರು ಸತ್ಯದ ಪರವಾಗಿರಬೇಕು: ಸಭಾಧ್ಯಕ್ಷ ಯು ಟಿ ಖಾದರ್ ಸಲಹೆ ಬೀದರ :ಪತ್ರಿಕೋದ್ಯಮವು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಹೇಳಿದರು.ಬೀದರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ ನಗರದ ಝೀರಾ ಕನ್ವೆನ್ಶನ್ ಹಾಲನಲ್ಲಿಏಪ್ರಿಲ್ 12ರಂದು ನಡೆದ 40ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜ, ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಪತ್ರಕರ್ತರ ಪೆನ್ನು ಸದಾಕಾಲ ಸತ್ಯದ ಪರವಾಗಿರಬೇಕು ಎಂದು…

Read More

ಕನ್ನಡ ಭವನದ ರೂವಾರಿ ಸಂಧ್ಯಾರಾಣಿ ಟೀಚರಿಗೆ “ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ. 2026

ಕಾಸರಗೋಡು :ಕಥಾಬಿಂದು ಪ್ರಕಾಶನ, ಉಡುಪಿ ಶಿರೂರು ಶ್ರೀ ಮಠ, ಉಡುಪಿ ಶ್ರೀ ಕೃಷ್ಣ ಮಠ ಸಹಯೋಗದಲ್ಲಿ ನಡೆದ “ಕಥಾಬಿಂದು ಸಾಹಿತ್ಯ ಸಮ್ಮೇಳನ “ಉಡುಪಿ ಶ್ರೀ ಮಠದ ರಾಜಾ0ಗಣದಲ್ಲಿ 12.4.2026 ರಂದು ಉಡುಪಿ ಶ್ರೀ ಮಠದ ಶ್ರೀ ರಮಣ ಆಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ, ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ, ಡಾ. ಹರಿಕೃಷ್ಣ ಪುನಃರೂರು, ಕ. ಸಾ. ಪ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷ, ಕಲ್ಕೂರ ಪ್ರತಿಷ್ಠಾನ ರೂವಾರಿ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ…

Read More

ಬೆಜ್ಜ ಶ್ರೀ ಧೂಮಾವತಿ ಬಂಟ ದೈವಗಳ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ಸಂಪನ್ನ

ಮಂಜೇಶ್ವರ : ಬೆಜ್ಜ ಶ್ರೀ ಧೂಮಾವತಿ ಬಂಟ ದೈವಗಳ ಕ್ಷೇತ್ರದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವ ಭಕ್ತಿಭಾವದ ನಡುವೆ ಭವ್ಯವಾಗಿ ಸಂಪನ್ನಗೊಂಡಿತು .ಏಪ್ರಿಲ್ 1ರಂದು ಉತ್ಸವದ ಗೊನೆ ಮುಹೂರ್ತ, ಕೋಳಿಗೂಟ ಹಾಗೂ ಉತ್ಸವದ ಚೆಂಡು ಕಾರ್ಯಕ್ರಮಗಳೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಏಪ್ರಿಲ್ 6ರಿಂದ 9ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಏಪ್ರಿಲ್ 6ರಂದು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆದಿದ್ದು, ಶಾರದಾ ಆರ್ಟ್ಸ್ ತಂಡದಿಂದ ತುಳು ಹಾಸ್ಯಮಯ ನಾಟಕ “ಒಂತೆ ಲೇಟಾ0ಡ್…

Read More

ಬಂಧಗಳ ಸಂವಹನ ಮತ್ತು ಮೌಲ್ಯಗಳ ವಿಘಟನೆ

🙁 ಒಂದು ಅಂತರಂಗದ ಅವಲೋಕನ) ​ಮಾನವ ಸಂಕುಲದ ವಿಕಾಸವು ಕೇವಲ ಭೌತಿಕ ಬೆಳವಣಿಗೆಯಲ್ಲ; ಅದು ಸಹಬಾಳ್ವೆಯ ಒಂದು ಅದ್ಭುತ ಪಯಣ. ನಿಸರ್ಗದ ಮಡಿಲಲ್ಲಿ ಮನುಷ್ಯ ಒಬ್ಬ ಒಂಟಿ ಜೀವಿಯಾಗಿ ಉಳಿಯದೆ, ಸಂಘಜೀವಿಯಾಗಿ ರೂಪುಗೊಂಡ ಕ್ಷಣವೇ ಮೌಲ್ಯಗಳ ಉದಯವಾಯಿತು. ಆದರೆ ಇಂದು ನಾವು ತಾಂತ್ರಿಕವಾಗಿ ಮುಗಿಲೆತ್ತರಕ್ಕೆ ಬೆಳೆದಿದ್ದರೂ, ಭಾವನಾತ್ಮಕವಾಗಿ ಪಾತಾಳಕ್ಕೆ ಕುಸಿಯುತ್ತಿದ್ದೇವೆಯೇ ಎಂಬ ಸಂಶಯ ಕಾಡುತ್ತಿದೆ. ಜೀವಕೋಶಗಳ ಸಮೂಹವೊಂದು ‘ಚೇತನ’ವಾಗಿ ಮಾರ್ಪಡಲು ಸಂಬಂಧಗಳೆಂಬ ನರತಂತುಗಳು ಬೇಕು. ಇಂದಿನ ಜಗತ್ತಿನಲ್ಲಿ ಈ ತಂತುಗಳು ಸಡಿಲಗೊಳ್ಳುತ್ತಿರುವುದು ಕೇವಲ ಸಾಮಾಜಿಕ ಬಿಕ್ಕಟ್ಟಲ್ಲ, ಅದು…

Read More

ಎಸ್‌ಎಸ್‌ವಿಪಿ ಮಂಗಳೂರು ಸೆಂಟ್ರಲ್ ಕೌನ್ಸಿಲ್‌ನ ಅಧ್ಯಕ್ಷೆಯಾಗಿ ಮೊದಲ ಮಹಿಳೆ ಪ್ರಮಾಣ ವಚನ ಸ್ವೀಕಾರ

ಸೇಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಮಂಗಳೂರು ಸೆಂಟ್ರಲ್ ಕೌನ್ಸಿಲ್ (SSVP), ತನ್ನ 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದೊಂದಿಗೆ ಐತಿಹಾಸಿಕ ಮೈಲಿಗಲ್ಲನ್ನು ಆಚರಿಸಿತು. ಬೆಂದೂರು ಕಾನ್ಫರೆನ್ಸ್‌ಗೆ ಸೇರಿದ ಪ್ರೀತಾ ಲೋಬೊ ಅವರಿಗೆ ಆಧ್ಯಾತ್ಮಿಕ ಸಲಹೆಗಾರರಾದ ರೆ. ಫ್ಲೇವಿಯನ್ ಲೋಬೊ ಅವರು ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾಜಿ ಆಧ್ಯಾತ್ಮಿಕ ಸಲಹೆಗಾರ ರೆ. ಫ್ರಾನ್ಸಿಸ್ ಡಿಸೋಜಾ ಮತ್ತು ಬೆಂದೂರು ಚರ್ಚ್‌ನ ಧರ್ಮಗುರು ರೆ. ವಾಲ್ಟರ್ ಡಿಸೋಜಾ…

Read More

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ — ಸಂಗೀತ ಲೋಕ ಶೋಕದಲ್ಲಿ

ಭಾರತೀಯ ಚಿತ್ರರಂಗದ ದಂತಕಥೆ, ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕಿ ಆಶಾ ಭೋಂಸ್ಲೆ (92) ಅವರು ನಿನ್ನೆಯ ದಿನ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ . ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲ ತಿಳಿಸಿದೆ . ಸುಮಾರು ಎಂಟು ದಶಕಗಳ ಕಾಲ ಭಾರತೀಯ ಸಂಗೀತ ಲೋಕವನ್ನು ಆಳಿದ್ದ ಆಶಾ ಅವರು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 12,000ಕ್ಕೂ…

Read More
error: Content is protected !!