ಬಂದಿಯೊಡ್–ಇಚ್ಚಿಲಂಗೋಡ್ ರಸ್ತೆ ದುಸ್ಥಿತಿ: ಸ್ಥಳೀಯರು ಸಂಕಷ್ಟದಲ್ಲಿ
ಮಂಜೇಶ್ವರ: ಬಂದಿಯೊಡ್–ಇಚ್ಚಿಲಂಗೋಡ್ ಸಂಪರ್ಕ ರಸ್ತೆ ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.ರಸ್ತೆ ಹಾಳಾಗಿರುವುದರಿಂದ ಆಟೋ ರಿಕ್ಷಾಗಳು ಈ ಭಾಗಕ್ಕೆ ಬರುವುದಕ್ಕೂ ಹಿಂದೇಟು ಹಾಕುತ್ತಿವೆ. ಆಟೋ ಬಾಡಿಗೆಗೆ ಕರೆ ಮಾಡಿದರೂ ಚಾಲಕರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಚಾಲಕರ ತಪ್ಪಲ್ಲ, ರಸ್ತೆ ದುಸ್ಥಿತಿಯೇ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ದೇವಸ್ಥಾನ ಹಾಗೂ ಮಸೀದಿ ಇರುವುದರಿಂದ ಜನರ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ಇಚ್ಚಿಲಂಗೋಡ್ ಜುಮಾ ಮಸೀದಿಗೆ ಪ್ರತಿದಿನ…
