ಕಾಸರಗೋಡಿನ ಕೇರಳ ಕೆ. ಎಸ್.ಆರ್. ಟಿ.ಸಿ.ಫಾಸ್ಟ್ ಪ್ಯಾಸೆಂಜರ್ ಬಸ್ಸು ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಗೆ ಒತ್ತಾಯಿಸಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಿಗೆ ಮನವಿ
ಕಾಸರಗೋಡು ಮಂಗಳೂರು ಅಂತರ ರಾಜ್ಯ ಮಾರ್ಗದಲ್ಲಿ ವೇಗವಾಗಿ ಸಂಚರಿಸುವ ಕೇರಳ ಕೆ.ಎಸ್.ಆರ್. ಟಿ.ಸಿ ಫಾಸ್ಟ್ ಪ್ಯಾಸೆಂಜರ್ ಬಸ್, ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಯಾಗಬೇಕೆಂದು ಕಾಸರಗೋಡು ಕಡೆಗೆ ದಿನನಿತ್ಯ ಹೋಗಿ ಬರುವ ಬಸ್ಸು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.ಈ ಫಾಸ್ಟ್ ಪ್ಯಾಸೆಂಜರ್ ಕೆ. ಎಸ್.ಆರ್. ಟಿ. ಸಿ ಬಸ್ಸು ತಲಪಾಡಿ ಮತ್ತು ತೊಕ್ಕೋಟು ಬಸ್ ಸ್ಟಾಪ್ ನಲ್ಲಿ ಮಾತ್ರ ನಿಲುಗಡೆಯಿದೆ. ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಕಾಸರಗೋಡು ಬೀರಿ ಮಾರ್ಗವಾಗಿ ಉದ್ಯೋಗ ವ್ಯವಹಾರ ಹಾಗೂ ಇನ್ನಿತರ ಕೌಟುಂಬಿಕ ಅಗತ್ಯಗಳಿಗಾಗಿ ಪ್ರಯಾಣಿಸುವ ದಿನನಿತ್ಯದ…