ಮಂಜೇಶ್ವರ: ರಾ. ಹೆದ್ದಾರಿಯಲ್ಲಿ ಸರಣಿ ಅಪಘಾತ – ಸುಳ್ಯ ಯುವಕ ಮೃತ್ಯು, ಮತ್ತೋರ್ವ ಮಂಗಳೂರು ಆಸ್ಪತ್ರೆಗೆ ದಾಖಲು
ಮಂಜೇಶ್ವರ: ರಾ. ಹೆದ್ದಾರಿಯ ಬಂದ್ಯೋಡು ಸಮೀಪ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವ ಸಾವನ್ನಪ್ಪಿ ಜೊತೆಗಿದ್ದವನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದ. ಕ. ಜಿಲ್ಲೆಯ ಸುಳ್ಯ ಬಳಿಯ ಪಡ್ನಡ್ಕ ಏನೆಕಲ್ಲು ನಿವಾಸಿ ಸುರೇಶ್ ರೈ ಎಂಬವರ ಪುತ್ರ ನಿರಂಜನ್ ಕೆ. (24) ಸಾವನ್ನಪ್ಪಿದ ದುರ್ದೈವಿ. ಮಂಗಳೂರು ಶಕ್ತಿನಗರ ನೀತಿನಗರದ ಬೆನ್ನಿ ಎಂ.ಜೆ. ಎಂಬವರ ಪುತ್ರ ಕೃತಿಕ್ ಬೆನ್ನಿ (23) ಗಂಭೀರ ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬುಧವಾರ ಮುಂಜಾನೆ 12.40ರ ವೇಳೆ…