ಕುಂಬಳೆಯಲ್ಲಿ ಯುವಕನ ಹತ್ಯೆ ಯತ್ನ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಕಾಸರಗೋಡು: ಕುಂಬಳೆಯ ಕೃಷ್ಣನಗರ ಸಮೀಪ ಯುವಕನನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಕುಂಬಳೆ ಕುಂಟಾಗಿರಡ್ಕ ಪ್ರದೇಶದ ಮಹಮ್ಮದ್ ಹಾಶಿಂ (ಆಶಿಂ), ಅಬು ಜಾಸಿಂ (ಜಾಸಿ), ರಮೀಸ್ ರೋಷಾಲ್ ಫಿರೋಸ್ (ರಮೀಸ್), ಮಿನ್ಹಾಜ್ ಅಬ್ದುಲ್ಲ (ಮಿನ್ಹಾಜ್), ಫಝಲ್ ರಹ್ಮಾನ್ (ಪಜಿಲು) ಮತ್ತು ಮೊಹಿಯುದ್ದೀನ್ ನಿಹಾಲ್ (ನಿಹಾಲ್) ಇವರು ಕುಂಬಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಂತಕೃಷ್ಣನ್ ಆರ್ ಮೆನನ್ ಅವರ ಮುಂದೆ ಶರಣಾಗಿದ್ದಾರೆ. ಮಾರ್ಚ್ 30ರಂದು ಮಧ್ಯರಾತ್ರಿ ಸುಮಾರು 12 ಗಂಟೆಗೆ ಕುಂಬಳೆ…

Read More

ಚೆರ್ಕಳದಲ್ಲಿ ಅಗ್ನಿ ಅವಘಡ: ಮನೆ ಮುಂಭಾಗ ಹಾಗೂ ಬೈಕ್‌ಗೆ ಬೆಂಕಿ ಹಚ್ಚಿ ಧ್ವಂಸ, ₹1.3 ಲಕ್ಷ ನಷ್ಟ

ಚೆರ್ಕಳ: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ಹಾಗೂ ಮನೆಯ ಮುಂಭಾಗಕ್ಕೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ ಘಟನೆ ಚೆರ್ಕಳದ ಅಳಕ್ಕ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಳಕ್ಕ ನಿವಾಸಿ ಅಬ್ದುಲ್ಲ ಅವರ ಪುತ್ರ ಸಿ.ಎ. ಸೈಫುದ್ದೀನ್ ಅವರಿಗೆ ಸೇರಿದ ಪ್ಯಾಶನ್ ಪ್ರೋ ಬೈಕ್‌ನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗಿದೆ. KL 14 Q 0314 ನೋಂದಣಿ ಸಂಖ್ಯೆಯ ಈ ಬೈಕ್ ಮನೆಯ ಕಾರ್ ಪಾರ್ಕ್ ನಲ್ಲಿ ನಿಲ್ಲಿಸಲಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ,…

Read More

ಭಾರಿ ಮಳೆಗೆ ಆವರಣ ಗೋಡೆ ಕುಸಿತ: ಮಂಗಳೂರಿನಲ್ಲಿ ವಾಹನಗಳಿಗೆ ಹಾನಿ, ಸ್ಥಳೀಯರ ಆಕ್ರೋಶ

ಮಂಗಳೂರು: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಯೆಯ್ಯಾಡಿ ಸಮೀಪದ ಕೈಗಾರಿಕಾ ವಲಯದ ಗುಂಡಳಿಕೆ ಬಳಿ ಖಾಸಗಿ ಜಾಗವೊಂದರ ಸುಮಾರು 60 ವರ್ಷ ಹಳೆಯ ಆವರಣ ಗೋಡೆ ಕುಸಿದು ಹಲವಾರು ದ್ವಿಚಕ್ರ ವಾಹನಗಳಿಗೆ ಹಾನಿಯಾದ ಘಟನೆ ನಡೆದಿದೆ. ಘಟನೆ ಸಂಭವಿಸಿದ ಪ್ರದೇಶದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದೇ ದಾರಿಯಲ್ಲಿ ಸಂಚರಿಸುತ್ತಿರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಪ್ರತೀ ಮಳೆಯಲ್ಲೂ ಗೋಡೆಗಳು ಕುಸಿದು…

Read More

ಮಂಗಳೂರುನಲ್ಲಿ ಹೊಸ ಕಾಸ್ಟಿಂಗ್ ಹೌಸ್ ಆರಂಭ: ಪ್ರತಿಭಾವಂತರಿಗೆ ಅವಕಾಶ

ಮಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಭಾವಂತರಿಗೆ ಸಂತಸದ ಸುದ್ದಿ. ರಂಗ ಬಹಿರಂಗ ಸಂಸ್ಥೆಯ ವತಿಯಿಂದ “ಬಹಿರಂಗ ಸಿನಿ ಕೂಟ” ಕಾಸ್ಟಿಂಗ್ ಹೌಸ್ ಮಂಗಳೂರಿನಲ್ಲಿ ಪ್ರಾರಂಭವಾಗಿದೆ. ಈ ಕಾಸ್ಟಿಂಗ್ ಹೌಸ್‌ನ್ನು ನಂತೂರು ಪದವಿನ ಕೊರಗಜ್ಜ ದೈವಸ್ಥಾನದಲ್ಲಿ ವಿಜೃಂಭಣೆಯಿಂದ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ “ದಸ್ಕತ್” ಸಿನಿಮಾದ ನಿರ್ದೇಶಕರಾದ ಅನೀಶ್ ಪೂಜಾರಿ, ನಟಿ ಶೈಲಶ್ರೀ ಮುಲ್ಕಿ, “ಕಾಂತಾರ” ಖ್ಯಾತಿಯ ನವೀನ್ ಬೋಂದೆಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಜೊತೆಗೆ ರಾಜೇಶ್ ವಿಲ್ಮ, ರೋಹನ್, ಖ್ಯಾತ ಸಂಕಲಾಕಾರ ಗಣೇಶ್ ನಿರ್ಚಲ್, ಕಾರ್ತಿಕ್ ರೈ,…

Read More

ಆನೆಕಲ್ಲು ಶಾಲೆಯಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರ ಆರಂಭ

ಆನೆಕಲ್ಲು: ಎಸ್. ಎಸ್. ಕೆ ಕಾಸರಗೋಡು ಹಾಗೂ ಬಿ. ಆರ್. ಸಿ ಮಂಜೇಶ್ವರ ಆಶ್ರಯದಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರವು ಆನೆಕಲ್ಲು ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷಾದ್ ವರ್ಕಾಡಿ ನೆರವೇರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಯರಾದ ರವಿಶಂಕರ್ , ಸಿತಾರ ಟೀಚರ್ ಶುಭ ಹಾರೈಸಿದರು. ಬಿ .ಪಿ. ಸಿ ರಾಜ ಗೋಪಾಲನ್ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು….

Read More

ಕಾಸರಗೋಡಿನ ಕೇರಳ ಕೆ. ಎಸ್.ಆರ್. ಟಿ.ಸಿ.ಫಾಸ್ಟ್ ಪ್ಯಾಸೆಂಜರ್ ಬಸ್ಸು ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಗೆ ಒತ್ತಾಯಿಸಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಿಗೆ ಮನವಿ

ಕಾಸರಗೋಡು ಮಂಗಳೂರು ಅಂತರ ರಾಜ್ಯ ಮಾರ್ಗದಲ್ಲಿ ವೇಗವಾಗಿ ಸಂಚರಿಸುವ ಕೇರಳ ಕೆ.ಎಸ್.ಆರ್. ಟಿ.ಸಿ ಫಾಸ್ಟ್ ಪ್ಯಾಸೆಂಜರ್ ಬಸ್, ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಯಾಗಬೇಕೆಂದು ಕಾಸರಗೋಡು ಕಡೆಗೆ ದಿನನಿತ್ಯ ಹೋಗಿ ಬರುವ ಬಸ್ಸು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.ಈ ಫಾಸ್ಟ್ ಪ್ಯಾಸೆಂಜರ್ ಕೆ. ಎಸ್.ಆರ್. ಟಿ. ಸಿ ಬಸ್ಸು ತಲಪಾಡಿ ಮತ್ತು ತೊಕ್ಕೋಟು ಬಸ್ ಸ್ಟಾಪ್ ನಲ್ಲಿ ಮಾತ್ರ ನಿಲುಗಡೆಯಿದೆ. ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಕಾಸರಗೋಡು ಬೀರಿ ಮಾರ್ಗವಾಗಿ ಉದ್ಯೋಗ ವ್ಯವಹಾರ ಹಾಗೂ ಇನ್ನಿತರ ಕೌಟುಂಬಿಕ ಅಗತ್ಯಗಳಿಗಾಗಿ ಪ್ರಯಾಣಿಸುವ ದಿನನಿತ್ಯದ…

Read More

ವಿಟ್ಲ: ಕೊಳ್ನಾಡು ಅಭಿವೃದ್ಧಿಗೆ ಮತ್ತೊಂದು ಕೊಡುಗೆ, ರೈತರಿಗೆ ನೆರವಾಗುವ ಯೋಜನೆ: 36 ಲಕ್ಷ ರೂ ವೆಚ್ಚದಲ್ಲಿ ಕಾಡುಮಠ ಬಸ್ತಿಗುಂಡಿ ಆಣೆಕಟ್ಟು ನವೀಕರಣ; ಶಾಸಕ ಮಂಜುನಾಥ ಭಂಡಾರಿ ಶಿಪಾರಸ್ಸು

ವಿಟ್ಲ: ಕೊಳ್ನಾಡು ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಕೊಡುಗೆಯಾಗಿ ಕಾಡುಮಠ ಬಸ್ತಿಗುಂಡಿಯ ಹಳೆಯ ಕಿಂಡಿ ಆಣೆಕಟ್ಟನ್ನು 36 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿ ಸ್ಥಳೀಯ ಜನರ ದೀರ್ಘಕಾಲದ ಬೇಡಿಕೆಯಾಗಿದ್ದು, ಇದೀಗ ಅನುಷ್ಠಾನದ ಹಂತಕ್ಕೆ ಬಂದಿರುವುದು ಸಂತಸದ ಸಂಗತಿಯಾಗಿದೆ. ಕಾಡುಮಠ–ಕುಡ್ತಮುಗೇರು–ಕುದ್ರಿಯಾ ಭಾಗದ ರೈತರಿಗೆ ಅನುಕೂಲವಾಗುವಂತೆ ಹಳೆಯ ಮರದ ಹಲಗೆಯನ್ನು ಬದಲಾಯಿಸಿ, ಆಧುನಿಕ ತಂತ್ರಜ್ಞಾನದೊಂದಿಗೆ ಕಬ್ಬಿಣ ಹಾಗೂ ಪೈಬರ್ ಹಲಗೆಯನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ನೀರಿನ ನಿಯಂತ್ರಣ ಸುಧಾರಿಸಿ, ಕೃಷಿಗೆ ಅಗತ್ಯವಾದ…

Read More

ಮಂಗಳೂರು: ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಿ ನಾರಿ ಹಕ್ಕು ಹೋರಾಟ ಸಮಿತಿಯಿಂದ ಪ್ರತಿಭಟನೆ

ನಾರಿ ಶಕ್ತಿ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸಿ ಹಾಗೂ ಮಹಿಳೆಯರಿಗೆ ಮತ್ತೆ ಮೀಸಲಾತಿ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ ಮಂಗಳೂರಿನ ಪುರಭವನದ ಎದುರುಗಡೆಯ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಾರಿ ಹಕ್ಕು ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ , ನಾರಿ ಶಕ್ತಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ವಿಶೇಷ ಅಧಿವೇಶನ ನಡೆಸಿ ಎಲ್ಲ ಪಕ್ಷಗಳ ಬೆಂಬಲ ಕೋರಲಾಗಿದ್ದರೂ, ವಿರೋಧ ಪಕ್ಷಗಳ ಸಹಕಾರದ ಕೊರತೆಯಿಂದ ಮಸೂದೆ ಅಂಗೀಕಾರವಾಗಲಿಲ್ಲ…

Read More

ಸೌಹಾರ್ದತೆ ಬೆಳೆಸುವುದು ಕಾಲದ ಅಗತ್ಯ: ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ ಕರೆ

ನೆರೆಯವರು, ಸಹೋದ್ಯೋಗಿಗಳು ಹಾಗೂ ತಮ್ಮ ಅಧೀನದಲ್ಲಿ ಕೆಲಸ ಮಾಡುವವರನ್ನು ನಿಸ್ವಾರ್ಥ ಭಾವನೆಯಿಂದ ಕಾಣಬೇಕು. ಎಲ್ಲಡೆ ಪ್ರೀತಿಯನ್ನು ಹಂಚುವ ಮೂಲಕ ದ್ವೇಷವನ್ನು ದೂರ ಮಾಡಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೊಸದಿಲ್ಲಿಯ ಮರ್ಕಝಿ ಜಮೀಯತೇ ಅಹ್ಲೆ ಹದೀಸ್ ಹಿಂದ್ ಅಧ್ಯಕ್ಷ ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ ಹೇಳಿದರು. ಜಮೀಯತೇ ಅಹ್ಲೆ ಹದೀಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ‘ಕೆಡುಕು ಅಳಿಯಲಿ, ಒಳಿತು ಹರಡಲಿ’ ಎಂಬ ಆಶಯದೊಂದಿಗೆ ನಗರದ ಪುರಭವನದಲ್ಲಿ ರವಿವಾರ ನಡೆದ…

Read More

ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಿ ದಕ್ಷಿಣ ಕನ್ನಡ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ವತಿಯಿಂದ ಜಿಲ್ಲಾಧ್ಯಕ್ಷರಾದ ಅಪ್ಪಿ ಎಸ್ ರವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೊಳಿಸುವಂತೆ ಹಾಗೂ ಕ್ಷೇತ್ರ ಮರುವಿಂಗಡಣೆಯ ವಿಚಾರವನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ ಮಾತನಾಡಿ , ಪ್ರಧಾನಿ ಮೋದಿ ಅವರಿಗೆ ಮಹಿಳೆಯರ ಮೇಲೆ ಗೌರವ ಇದ್ರೆ ಅವರು 2023 ರಲ್ಲಿ ಅಂಗೀಕಾರವಾದ ಮಹಿಳಾ ಮಸೂದೆಯನ್ನು ಕೂಡಲೇ ಜಾರಿ ಮಾಡಬೇಕು. ಬಿಜೆಪಿ ಮಹಿಳೆಯರು ಇವತ್ತು…

Read More
error: Content is protected !!