ಮಂಜೇಶ್ವರ: ‘ಭಾರತೀಯ ಗಣರಾಜ್ಯಕ್ಕೆ ಭಾರತದೊಂದಿಗೆ ಹೇಳಲಿಕ್ಕಿರುವುದು’ ವಿಷಯದ ತಾಲೂಕು ಮಟ್ಟದ ವಿಚಾರಗೋಷ್ಠಿ – ಕೆ.ವಿ. ದಿಲೀಪ್ ಕುಮಾರ್ ಉದ್ಘಾಟನೆ

ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ವ್ಯಾಪ್ತಿಯ ವಿವಿಧ ಗ್ರಂಥಾಲಯಗಳು ಮತ್ತು ಶಾಲೆಗಳನ್ನು ಒಳಗೊಂಡ ತಾಲೂಕು ಮಟ್ಟದ ವಿಚಾರಗೋಷ್ಠಿಯು ಇತ್ತೀಚೆಗೆ ಸುಭಾಷ್ ನಗರದ ಬೇಕೂರಿನ ‘ಯುವ ಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರರಿ’ಯಲ್ಲಿ ಜರುಗಿತು. ​’ಭಾರತೀಯ ಗಣರಾಜ್ಯಕ್ಕೆ ಭಾರತದೊಂದಿಗೆ ಹೇಳಲಿಕ್ಕಿರುವುದು’ ಎಂಬ ಗಂಭೀರ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಿ ಟೀಚರ್ ವಹಿಸಿದ್ದರು. ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷರಾದ ಕೆ.ವಿ. ದಿಲೀಪ್ ಕುಮಾರ್ ಅವರು ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು.​ರಾಜಶ್ರೀ ರೈ ಅವರು ವಿಷಯ ಮಂಡನೆ ಮಾಡಿದರು….

Read More

ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ: ಅವಿಸ್ಮರಣೀಯ ಅನುಭವ- ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು:ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿರುವುದು, ಅವರೊಂದಿಗೆ ಸಂವಾದ ನಡೆಸಿರುವುದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು ಎಂದು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಅಭಿಪ್ರಾಯಿಸಿದ್ದಾರೆ.ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯ ಬಂಧುಗಳ ಮನೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡ ಶಾಸಕರು ಆ ಪ್ರದೇಶದ ಜನತೆಯ ಸಮಸ್ಯೆಗಳು ಮತ್ತು ಬುಡಕಟ್ಟು ಜನರು ಎದುರಿಸು ತ್ತಿರುವ ಸಮಸ್ಯೆಗಳ ಸಾಕ್ಷಾತ್ ಮಾಹಿತಿ ಪಡೆದರು. ಸಮಸ್ಯೆ ಅರಿಯಲು ಗಂಟಿಹೊಳೆ ಅವರು ತಮ್ಮ ಗ್ರಾಮದಲ್ಲಿ ವಾಸ್ತವ್ಯದ ಮಾಡಿರುವ ಬಗ್ಗೆ ಮದುಕೊಡ್ಲು ಪರಿಸರದ ಕೊರಗ…

Read More

ಮಂಜೇಶ್ವರ: ರಾ. ಹೆದ್ದಾರಿಯಲ್ಲಿ ಸರಣಿ ಅಪಘಾತ – ಸುಳ್ಯ ಯುವಕ ಮೃತ್ಯು, ಮತ್ತೋರ್ವ ಮಂಗಳೂರು ಆಸ್ಪತ್ರೆಗೆ ದಾಖಲು

ಮಂಜೇಶ್ವರ: ರಾ. ಹೆದ್ದಾರಿಯ ಬಂದ್ಯೋಡು ಸಮೀಪ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವ ಸಾವನ್ನಪ್ಪಿ ಜೊತೆಗಿದ್ದವನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದ. ಕ. ಜಿಲ್ಲೆಯ ಸುಳ್ಯ ಬಳಿಯ ಪಡ್ನಡ್ಕ ಏನೆಕಲ್ಲು ನಿವಾಸಿ ಸುರೇಶ್ ರೈ ಎಂಬವರ ಪುತ್ರ ನಿರಂಜನ್ ಕೆ. (24) ಸಾವನ್ನಪ್ಪಿದ ದುರ್ದೈವಿ. ಮಂಗಳೂರು ಶಕ್ತಿನಗರ ನೀತಿನಗರದ ಬೆನ್ನಿ ಎಂ.ಜೆ. ಎಂಬವರ ಪುತ್ರ ಕೃತಿಕ್ ಬೆನ್ನಿ (23) ಗಂಭೀರ ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬುಧವಾರ ಮುಂಜಾನೆ 12.40ರ ವೇಳೆ…

Read More

ಧರ್ಮಸ್ಥಳ ಸೇರಿದಂತೆ ಮಹಿಳೆಯರ ಮೇಲೆ ನಡೆದಿರುವ ಎಲ್ಲಾ ಪ್ರಕರಣಗಳನ್ನು ರಾಜಕೀಯ ಮುಕ್ತ SIT ತನಿಖೆಗೆ ಒತ್ತಾಯಿಸಿ ಬೆಂಗಳೂರು ಚಲೋ- ಜೆಎಂಎಸ್

ಕೂಲಿಕಾರ ,ಮಹಿಳಾ ವಿರೋಧಿ ವಿ ಬಿ ರಾಮ್ ಜಿ ಮಸೂದೆ ವಿರೋಧಿಸಿ, ಮನರೇಗಾ ಉಳಿಸಲು ಒತ್ತಾಯಿಸಿ, ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿ 5000 ರೂ.ಗೆ ಹೆಚ್ಚಿಸಲು ಹಾಗೂ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಮತ್ತು ದೌರ್ಜನ್ಯ ಮುಕ್ತ ಬದುಕನ್ನು ಖಾತ್ರಿಗೊಳಿಸಲು, ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ರಾಜಕೀಯ ಮುಕ್ತ SIT ತನಿಖೆಗೆ ಒತ್ತಾಯಿಸಿ,ಮಾರ್ಚ್.5. ರಂದು ಬೆಂಗಳೂರು ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ…

Read More

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸಫ್ವಾನ್ ಹುಸೈನ್ ಬಂಧನ

ಮಂಗಳೂರು :ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ 21 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಶೀಟರ್ ಸಫ್ವಾನ್ ಹುಸೈನ್ (42) ನನ್ನು ಮಂಗಳೂರು ಸಿ.ಸಿ.ಬಿ.ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕೊಲೆ, ‌4 ಕೊಲೆಯತ್ನ, ಗ್ಯಾಂಗ್ ರೇಪ್, 5 ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ,…

Read More

ಬಂಟ್ವಾಳ ಕೈಕಂಬದಲ್ಲಿ ಕಾಮಗಾರಿ ಅಸ್ತವ್ಯಸ್ತ – ಜನರ ಆಕ್ರೋಶ

ಬಂಟ್ವಾಳ: ಖಾಸಗಿ ಕಂಪೆನಿಯೊಂದರ ಕಾಮಗಾರಿಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಆಕ್ರೋಶ ವ್ಯಕ್ತವಾಗಿದ್ದಲ್ಲದೆ ಕಾರ್ಮಿಕರ ಜೊತೆ ವಾಗ್ವಾದ ನಡೆದಿರುವ ಘಟನೆ ಕೈಕಂಬದಲ್ಲಿ ನಡೆದಿದೆ. ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಪೋಲೀಸ್ ಪಾಯಿಂಟ್ ನ ಪಕ್ಕ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಗೇಲ್ ಗ್ಯಾಸ್ ಕಂಪೆನಿಯವರಿಂದ ಕಾಮಗಾರಿ ನಡೆಯುತಿದ್ದು, ರಸ್ತೆಬದಿ ಹಾಗೂ ರಸ್ತೆಗೂ ಕೆಸರು ಮಿಶ್ರಿತ ನೀರು ಹರಿದುಹೋಗಿದೆ.ಇದರಿಂದ ವಾಹನಗಳು ಕೆಸರುಮಯವಾದರೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳು ಎದ್ದು ಬಿದ್ದು ಹೋಗುವಂತಾಗಿದೆ.ಬಿಸಿಲು ಮಳೆಗೆ ಸ್ವಲ್ಪ ಮಟ್ಟಿಗೆ ರಕ್ಷಣೆಗೆ ಮಾಡಿರುವ…

Read More

ವಾಟ್ಸಪ್‌ನಲ್ಲಿ ‘ಇದು ನನ್ನ ಕೊನೆಯ ಸ್ಟೇಟಸ್’ – ಯುವಕನ ಆತ್ಮಹತ್ಯೆ ಪ್ರಕರಣ

ಕಾಸರಗೋಡು : ಯುವಕನೊಬ್ಬ ತನ್ನ ಕೈ ಕೊಯ್ದುಕೊಂಡು , ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕದ್ರಿ ಶಿವಭಾಗ್ ಬಳಿಯ ಅಪಾರ್ಟೆಂಟ್ ಒಂದರಲ್ಲಿ ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಪೆರುವಾಡ್ ನಿವಾಸಿ ರೋಶನ್ (22) ಮೃತಪಟ್ಟ ಯುವಕ. ಕದ್ರಿ ಪಾರ್ಕ್ ಬಳಿಯ ಐಸ್ ಕ್ರೀಂ ಅಂಗಡಿ ಒಂದರಲ್ಲಿ ಕೆಲಸಕ್ಕಿದ್ದ ರೋಶನ್ ನಾಲ್ಕು ತಿಂಗಳಿನಿಂದ ಅಪಾರ್ಟೆಂಟಿನಲ್ಲಿ ಇತರೇ ಯುವಕರೊಂದಿಗೆ ಬಾಡಿಗೆಗೆ ನೆಲೆಸಿದ್ದ. ತನ್ನ ಕೈಯನ್ನು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದು ಕೊಠಡಿಯಲ್ಲಿ ರಕ್ತದ ಕೋಡಿಯೇ ಹರಿದಿದೆ….

Read More

ಕಾಸರಗೋಡು ಕನ್ನಡ ಗ್ರಾಮದ ಕಾಸರಗೋಡು ಗೋ-ಕುಟೀರದ ಲಾಂಛನ (ಲೋಗೋ) ಆಹ್ವಾನ

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗೋ-ಕುಟೀರವನ್ನು ಸದಾ ನೆನಪಿಸುವ ಲಾಂಛನ (ಲೋಗೋ)ವನ್ನು ಆಹ್ವಾನಿಸಲಾಗಿದೆ.ನಾಡಿನ ಕಲಾವಿದರು, ಕಲಾಸಕ್ತರು,ಕೃಷಿಕರು ಲಾಂಛನವನ್ನು ರಚಿಸಿ, ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ), ಕನ್ನಡ ಗ್ರಾಮ, ಕನ್ನಡ ಗ್ರಾಮರಸ್ತೆ,ಕಾಸರಗೋಡು -671121ಮೊಬೈಲ್ -9448572016ಇಮೇಲ್ -shivaramakasaragod@gmail.com ಈ ವಿಳಾಸಕ್ಕೆ ತಲುಪಿಸಬಹುದು.ಕಾಸರಗೋಡು ಗೋ – ಕುಟೀರದ ಲಾಂಛನವನ್ನು ರಚಿಸಿದವರು ತಮ್ಮ ಹೆಸರು, ವಿಳಾಸ,ಮೊಬೈಲ್ ಸಂಖ್ಯೆ, ಒಂದು ಭಾವಚಿತ್ರವನ್ನು ಜೊತೆಗೆ ಕಳುಹಿಸಬೇಕು.ಕಾಸರಗೋಡು ಗೋ – ಕುಟೀರದ…

Read More

ಇಟಲಿಯ ಎಂಐಆರ್ ಗ್ರೂಪ್ ಮಂಗಳೂರಿನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಿದೆ : ಎಂಐಆರ್ ಗ್ರೂಪ್ ಎಸ್‌ಆರ್‌ಎಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಫೆಲ್ ಮರ್ರಾಜ್ಜೊ

ಮಂಗಳೂರು:ಇಟಲಿ ಮೂಲದ ಎಂಐಆರ್ ಗ್ರೂಪ್ ಮಂಗಳೂರಿನಲ್ಲಿ ಬಿಲ್ಡಿಂಗ್ ಇಂಟಿಗ್ರೇಟೆಡ್ ಫೋಟೊವೋಲ್ಟಾಯಿಕ್ (ಬಿಐಪಿವಿ) ಪ್ಯಾನೆಲ್‌ಗಳು, ಉಷ್ಣ ನಿರೋಧನ ವಸ್ತುಗಳು ಮತ್ತು ಸೋಡಿಯಂ-ಐಯಾನ್ ಬ್ಯಾಟರಿಗಳಂತಹ ಇಂಧನ-ಸಮರ್ಥ ಕಟ್ಟಡ ಸಾಮಗ್ರಿಗಳ ಉತ್ಪಾದನೆಗಾಗಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸುಮಾರು 20 ಮಿಲಿಯನ್ ಹೂಡಿಕೆ ಮಾಡಲು ಯೋಜಿಸುತ್ತಿದೆ . ಎಂಐಆರ್ ಗ್ರೂಪ್ ಎಸ್‌ಆರ್‌ಎಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಫೆಲ್ ಮರ್ರಾಜ್ಜೊ ಮಾತನಾಡಿ, ಎಂಐಆರ್ ಗ್ರೂಪ್ ಫೆಬ್ರವರಿ 20 ರಂದು ಮಂಗಳೂರಿನಲ್ಲಿ ‘ಎಂಐಆರ್ ನೆಟ್‌ಝೀರೋ ವಿಷನ್ 2047 ಶೃಂಗಸಭೆ’ ಆಯೋಜಿಸಲಿದೆ. ಈ ಕಾರ್ಯಕ್ರಮವನ್ನು ಭಾರತದ…

Read More

ವಿಶ್ವ ಮಹಿಳಾ ದಿನಾಚರಣೆ: ಮಾರ್ಚ್ 1 ರಿಂದ 8 ರವರೆಗೆ ಕೊಂಚಾಡಿಯಲ್ಲಿ ಯಕ್ಷ ಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ

ಕೊಂಚಾಡಿ, ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ ಇದರ ಆಶ್ರಯದಲ್ಲಿ ಹಾಗೂ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ) ಇವರ ಆಯೋಜನೆಯಲ್ಲಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಮಾರ್ಚ್ 1ರಿಂದ 8, 2026ರವರೆಗೆ ನಡೆಯಲಿದೆ. ಕಾರ್ಯಕ್ರಮವು ಶ್ರೀಮತಿ ಲೀಲಾವತಿ ಬೈಪಡಿತ್ತಾಯ ವೇದಿಕೆ, ದೇವಸ್ಥಾನ ಆವರಣ, ಕೊಂಚಾಡಿಯಲ್ಲಿ ಪ್ರತಿದಿನ ಸಂಜೆ ಆಯೋಜಿಸಲಾಗಿದೆ. ಕರಾವಳಿಯ ಗಂಡುಕಲೆ ಎಂದೇ ಖ್ಯಾತಿಯನ್ನ ಪಡೆದ ಯಕ್ಷಗಾನದಲ್ಲಿ ಮಹಿಳೆಯರ ಸಾಧನೆ, ಸಮರ್ಪಣೆ ಹಾಗೂ ಕಲಾ ಸಾಮರ್ಥ್ಯವನ್ನು ಸಮಾಜದ ಮುಂದಿಡುವ…

Read More
error: Content is protected !!