ಎಸ್ ಪಿ ಬಿ ತೀಯ ಚಾಂಪಿಯನ್ಶಿಪ್ ಕ್ರಿಕೆಟ್ ಕ್ರಿಡಾ ಕೂಟ ಸಂಪನ್ನ

ಎಸ್ ಪಿ ಬಿ ತೀಯ ಇದರ ಆಶ್ರಯದಲ್ಲಿ ಲೀಗ್ ಮಾದರಿಯ 9s ಕ್ರಿಕೆಟ್ ಕ್ರೀಡಾ ಕೂಟವನ್ನು ಕಳೆದ ಭಾನುವಾರ ಸಂತಡ್ಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.ಲಿಗ್ ಮಾದರಿಯ ಈ ಕ್ರೀಡಾ ಕೂಟದಲ್ಲಿ ತಿಯ ಸಮುದಾಯಕ್ಕೆ ಒಳಪಟ್ಟ ಪ್ರಗತಿ ಮುಟ್ಟಂ,ತಾಂಡವ ಲಾಲ್ಬಾಗ್,ಟೀಮ್ ಎಸ್ ಪಿ ಬಿ,ಜನನಿ ವೀರ ನಗರ ಅಡ್ಕ ,ಬ್ರದರ್ಸ್ ಶಾಸ್ತ ,ತಿಯ ಸ್ಟ್ರೈಕರ್ಸ್ ,ಕೆ ಎಫ್ ಸಿ ಕನಿಲ ,ಫ್ರೆಂಡ್ಸ್ ಕನಿಲ ಈ ರೀತಿ 8 ತಂಡಗಳು ಭಾಗವಹಿಸಿದ್ದು. ಫೈನಲ್ ಸ್ಪರ್ಧೆಯಲ್ಲಿ ಕೆ ಎಫ್ ಸಿ ಕನಿಲ ಹಾಗು…

Read More

ರಂಜಾನ್ ಸಂಭ್ರಮದಲ್ಲಿ ವಿಶೇಷ ‘ಮೆತ್ತೆಗಂಜಿ’ – ಅಬ್ದುಲ್ಲಚ್ಚರ ನಿಷ್ಠೆಯ ಸೇವೆ

ಮಂಜೇಶ್ವರ: ರಂಜಾನ್ ತಿಂಗಳ ಉಪವಾಸದ ನಂತರ ಸವಿಯುವ ಇಫ್ತಾರ್ ಗಂಜಿಗೆ ಅದರದ್ದೇ ಆದ ವಿಶೇಷತೆಯಿದೆ. ಆದರೆ ಮಂಜೇಶ್ವರದ ಉದ್ಯಾವರ ಪರಿಸರದ ಮೈಮೂನ ಮಸೀದಿಯಲ್ಲಿ ತಯಾರಾಗುವ ‘ಮೆತ್ತೆಗಂಜಿ’ಯ (ಮೆಂತ್ಯ ಗಂಜಿ) ರುಚಿಯೇ ಬೇರೆ. ಈ ಅಪರೂಪದ ರುಚಿಯ ಹಿಂದೆ ಒಬ್ಬ ವ್ಯಕ್ತಿಯ 50 ವರ್ಷಗಳ ಅವಿರತ ಶ್ರಮ ಮತ್ತು ನಿಷ್ಠೆಯಿದೆ. ಅವರೇ ಉದ್ಯಾವರ ಹಾಗೂ ಮಂಜೇಶ್ವರ ಪರಿಸರದಲ್ಲಿ ‘ಅಬ್ದುಲ್ಲಚ್ಚ’ ಎಂದೇ ಖ್ಯಾತರಾಗಿರುವ ಅಬ್ದುಲ್ಲ. ​ ಸರಿಯಾಗಿ 1976-77ರ ಕಾಲಘಟ್ಟದಲ್ಲಿ ಮೈಮೂನ ಮಸೀದಿಗೆ ಮೆತ್ತೆಗಂಜಿ ತಯಾರಿಸಲು ಆಹ್ವಾನಿಸಲ್ಪಟ್ಟ ಅಬ್ದುಲ್ಲ ಅವರು,…

Read More

ಕಟಪಾಡಿಯಲ್ಲಿ ಮಗುಚಿ ಬಿದ್ದ ಎಲ್ಪಿಜಿ ಗ್ಯಾಸ್ ಟ್ಯಾಂಕರ್: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತ

ಉಡುಪಿ: ಉಡುಪಿ ಸಮೀಪದ ಕಟಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಪಿಜಿ ಗ್ಯಾಸ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರದೇಶದಲ್ಲಿ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿ ಬಿದ್ದಿರುವುದಾಗಿ ತಿಳಿದುಬಂದಿದೆ. ಘಟನೆ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಟ್ಯಾಂಕರ್‌ನಲ್ಲಿ ಗ್ಯಾಸ್ ಸೋರಿಕೆ ಆಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಿದರು. ಯಾವುದೇ…

Read More

ನಂದ್ಯದ ಪವಿತ್ರ ಮಣ್ಣಿನಿಂದ ಪೊಳಲಿ ಜಾತ್ರೆಗೆ ಭವ್ಯ ಚಾಲನೆ

ಬಂಟ್ವಾಳ: ತುಳುನಾಡಿನ ಕಾರಣಿಕ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಜಾತ್ರೆಯ ಧ್ವಜಾರೋಹಣ ಹಿನ್ನೆಲೆಯಲ್ಲಿ ನಂದ್ಯದ ಪವಿತ್ರ ಮಣ್ಣಿನಿಂದ ತಾಯಿ ಭಗವತಿಯ ನಂದಾದೀಪ, ಭದ್ರಕಾಳಿಯ ಬಿಂಬ ಹಾಗೂ ಅರಸು ದೈವಗಳ ಆಯುಧಗಳೊಂದಿಗೆ ಫಲ್ಗುಣಿ ನದಿಯನ್ನು ದಾಟಿ ರಾಜಗಾಂಭೀರ್ಯದಲ್ಲಿ ಆಗಮಿಸಿದ ಮನಮೋಹಕ ಕ್ಷಣ ಭಕ್ತರನ್ನು ಆಕರ್ಷಿಸಿತು. ತುಳುನಾಡಿನಲ್ಲಿ ದೈವದ ಮೂಲಕ ಜಾತ್ರೆಯ ಆರಾಟದ ದಿನಾಂಕವನ್ನು ನಿಗದಿಪಡಿಸುವ ವಿಶಿಷ್ಟ ಸಂಪ್ರದಾಯ ಪೊಳಲಿ ಕ್ಷೇತ್ರದಲ್ಲಿ ಮಾತ್ರ ಕಂಡುಬರುವ ಅಪರೂಪದ ಆಚರಣೆ ಆಗಿದೆ. ಪೊಳಲಿ ಕ್ಷೇತ್ರಕ್ಕೂ ನಂದ್ಯ ಮಣ್ಣಿಗೂ ವಿಶೇಷ ಸಂಬಂಧವಿದೆ ಎಂಬುದು ಭಕ್ತರ…

Read More

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ‘ಇಂಡಸ್ಟ್ರಿ ಎಂಬೆಡೆಡ್ ಪ್ರೋಗ್ರಾಂ’ ಪದವಿ ಕೋರ್ಸ್ ಆರಂಭ

ಮಂಗಳೂರು: ಇಂದಿನ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿ ಶಿಕ್ಷಣ ಮಾತ್ರವಲ್ಲದೆ ಪ್ರಾಯೋಗಿಕ ಜ್ಞಾನವೂ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸಿಯೆರಾ ಲರ್ನಿಂಗ್ ಅಕಾಡೆಮಿ ಸಹಯೋಗದೊಂದಿಗೆ ‘ಇಂಡಸ್ಟ್ರಿ ಎಂಬೆಡೆಡ್ ಪ್ರೋಗ್ರಾಂ’ (IEP) ಮಾದರಿಯ ನೂತನ ಪದವಿ ಕೋರ್ಸ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈ ಕೋರ್ಸ್‌ಗಳು ಜೂನ್ ತಿಂಗಳಿಂದ ಆರಂಭವಾಗಲಿವೆ ಎಂದು ಸಿಯೆರಾ ಲರ್ನಿಂಗ್ ಅಕಾಡೆಮಿ ಮುಖ್ಯಸ್ಥ ದೀಪಿತ್ ಕುಂದರ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

ಸಂತ ಪಿಲೋಮಿನಾ ಪ.ಪೂ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ‘ಫಿಲೋ ಮಿಲನ’ ಕಾರ್ಯಕ್ರಮ

ಪುತ್ತೂರು: ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾಗಮ ‘ಫಿಲೋ ಮಿಲನ – 2026’ ಕಾರ್ಯಕ್ರಮವು ಮಾರ್ಚ್ 14 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ರೈ ಜಿ ಮಾತನಾಡಿ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಕೊಟ್ಟದ್ದು ಮಾತ್ರವಲ್ಲ, ನನ್ನ ಜೀವನದ ಕನಸುಗಳಿಗೆ ರೂಪ ಕೊಟ್ಟ ಸಂಸ್ಥೆಯಾಗಿದೆ. ಕಾಲೇಜು ಶಿಕ್ಷಣ ಕೇವಲ ಸರ್ಟಿಫಿಕೇಟ್ ನೀಡುವ ಸಂಸ್ಥೆಯಲ್ಲ. ವ್ಯಕ್ತಿತ್ವ ನಿರ್ಮಾಣದಲ್ಲೂ ಮಹತ್ತರ…

Read More

ವಿಧಾನಸಭೆಯಲ್ಲಿ ಸಚಿವರ ಉತ್ತರದ ಕೊರತೆ: ಸ್ಪೀಕರ್ ಯು.ಟಿ. ಖಾದರ್ ಕಲಾಪ ಮುಂದೂಡಿಕೆ

ಬೆಂಗಳೂರು: ವಿಧಾನಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕವಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿ, ಸಮಯ ಸೂಚನೆ ನೀಡದೇ ಕಲಾಪವನ್ನು ಮುಂದೂಡಿದ ಘಟನೆ ನಡೆದಿದೆ. ಲಿಖಿತ ರೂಪದಲ್ಲಿ ಸಲ್ಲಿಸಲಾಗಿದ್ದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆಯ ವೇಳೆ ಈ ಘಟನೆ ನಡೆಯಿತು. ಸಚಿವ ಪರಮೇಶ್ವರ್ ಸದನದಲ್ಲಿ ಉತ್ತರಗಳನ್ನು ಮಂಡಿಸುತ್ತಿದ್ದಾಗಲೇ ವಿಪಕ್ಷ ಸದಸ್ಯರು ತೀವ್ರ ಟೀಕೆ ವ್ಯಕ್ತಪಡಿಸಿದರು. ಅಧಿವೇಶನ ಆರಂಭದಿಂದಲೇ ಸಚಿವರಿಂದ ನಿರೀಕ್ಷಿತ ಉತ್ತರಗಳು ಸಿಗುತ್ತಿಲ್ಲ ಎಂದು ವಿಪಕ್ಷಗಳು…

Read More

ಮಾರ್ಚ್ 20ರಂದು ತುಳು ಭವನದಲ್ಲಿ ‘ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ’

ಮಂಗಳೂರು: ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಉದ್ದೇಶದಿಂದ ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಮಾರ್ಚ್ 20ರಂದು ನಗರದ ತುಳು ಭವನದಲ್ಲಿ ‘ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ’ವನ್ನು ಆಯೋಜಿಸಿವೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಳು ಪರಿಷತ್ ಅಧ್ಯಕ್ಷ ಶುಭೋದಯ್ ಆಳ್ವ, ಈ ಸಮ್ಮೇಳನ ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡಿದ್ದು, ಕಾರ್ಯಕ್ರಮದ ವಿವಿಧ ಭಾಗಗಳನ್ನು ವಿದ್ಯಾರ್ಥಿಗಳೇ ಮುನ್ನಡೆಸಲಿದ್ದಾರೆ ಎಂದು ಹೇಳಿದರು. ಈ ಬಾರಿ ಪ್ರತಿಭಾವಂತ ವಿದ್ಯಾರ್ಥಿಗಳೇ ಉದ್ಘಾಟಕರಾಗಿ…

Read More

ಬಜೆಟ್‌ನಲ್ಲಿ ಉಡುಪಿ ಜಿಲ್ಲೆಯ ನಿರ್ಲಕ್ಷ್ಯ ಆರೋಪ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಉಡುಪಿ: ಈ ಬಾರಿಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಅನುದಾನ ಒದಗಿಸದೇ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು, ರಾಜ್ಯ ಸರಕಾರ 1.32ಲಕ್ಷ ಕೋಟಿ ಸಾಲ ಮಾಡಿ, ಗ್ಯಾರಂಟಿಯೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತಿದೆ. ಜಿಲ್ಲೆಯ ಐದು ಮಂದಿ ಶಾಸಕರು, ಇಲ್ಲಿನ ಬೇಡಿಕೆಗಳು,…

Read More

ರಾಮಕೃಷ್ಣ ಮಿಷನ್‌ನಿಂದ ಧಾರ್ಮಿಕ ವಸ್ತುಗಳ ಗೌರವಯುತ ವಿಲೇವಾರಿಗೆ ‘ವಿಸರ್ಜನೆ’ ಅಭಿಯಾನಕ್ಕೆ ಚಾಲನೆ

ಮಂಗಳೂರು ನಗರದ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿರುವ ರಾಮಕೃಷ್ಣ ಮಿಷನ್ ‘ಸ್ವಚ್ಛ ಮಂಗಳೂರು’ ಅಭಿಯಾನದ ಅಡಿಯಲ್ಲಿ ಧಾರ್ಮಿಕ ತ್ಯಾಜ್ಯಗಳ ಸಮರ್ಪಕ ಹಾಗೂ ಗೌರವಯುತ ವಿಲೇವಾರಿಗಾಗಿ ‘ವಿಸರ್ಜನೆ’ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು ಈ ಅಭಿಯಾನವು ಮಾರ್ಚ್ 16 ರಿಂದ 26 ರವರೆಗೆ ಮಂಗಳೂರಿನ ಆಯ್ದ ಆರು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ತಿಳಿಸಿದರು . ನಗರದ ರಾಮಕೃಷ್ಣ ಮಠದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು ‘ವಿಸರ್ಜನೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,…

Read More
error: Content is protected !!