“ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುವ ರಂಗೋತ್ಸವ 2026: ರಂಗ ಸ್ವರೂಪದ ಬೇಸಿಗೆ ಶಿಬಿರಕ್ಕೆ ಚೇತನ್ ಕೊಪ್ಪ ಚಾಲನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಸ್ವರೂಪ(ರಿ) ಕುಂಜತ್ತಬೈಲ್,ಮಂಗಳೂರು ಇದರ ವತಿಯಿಂದ ರಂಗ ಸ್ವರೂಪ ‘ರಂಗೋತ್ಸವ’ 2026 ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮ ದ.ಕ ಜಿ.ಪಂ ಮಾ.ಹಿರಿಯ ಪ್ರಾಥಮಿಕ ಶಾಲೆ ಮರಕಡ, ಕುಂಜತ್ತಬೈಲ್ ಇಲ್ಲಿ ರಂಗ ಸ್ವರೂಪ ತಂಡದ ಉಪಾಧ್ಯಕ್ಷರಾದ ಹುಸೈನ್ ರಿಯಾಝ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಖ್ಯಾತ ಕಲಾವಿದ ಪ್ರಶಸ್ತಿ ವಿಜೇತ ಶಿಕ್ಷಕ ಚೇತನ್ ಕೊಪ್ಪ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ,ಇತಿಹಾಸ ಮನುಷ್ಯ ನಿಗೆ ಪಾಠ ಕಲಿಸುತ್ತದೆ. ರಂಗಸ್ವರೂಪ…