ಸುಡುವಬಿಸಿಲಿನಲ್ಲಿ ಮತದಾರರಿಗೆ ದಾಹ ನೀರು – ಮಂಗಲ್ಪಾಡಿ ಯುವಕರ ಸೇವೆ ಮಾದರಿ

ಕಾಸರಗೋಡು ಗಡಿಭಾಗದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಾನವೀಯತೆ ಮೆರೆಯುವ ಕಾರ್ಯ ಗಮನ ಸೆಳೆದಿದೆ. ಸುಡುವ ಬಿಸಿಲಿನ ನಡುವೆಯೂ ಮತದಾನಕ್ಕೆ ಆಗಮಿಸಿದವರಿಗೆ ದಾಹ ನೀರು ಒದಗಿಸುವ ಮೂಲಕ ಯುವಕರ ತಂಡವೊಂದು ಮಾದರಿಯಾಗಿದೆ. ಮಂಗಲ್ಪಾಡಿ ಪ್ರದೇಶದ ಪಾರಕ್ಕಟ್ಟ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು ಮತದಾರರಿಗಾಗಿ ತಂಪಾದ ಕಲ್ಲಂಗಡಿ ಹಣ್ಣಿನ ಜ್ಯೂಸ್ ಸಿದ್ಧಪಡಿಸಿ, ಅಗತ್ಯವಿರುವ ಎಲ್ಲರಿಗೂ ವಿತರಿಸಿದರು. ತೀವ್ರ ಬಿಸಿಲಿನ ನಡುವೆ ಮತದಾನಕ್ಕೆ ಬಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಇದು ಹೆಚ್ಚಿನ ದಾಹ ನೀಗಿಸಲು ಸೂಕ್ತವಾಯಿತು. ಯುವಕರ ಈ ಸೇವಾ ಮನೋಭಾವ…

Read More

ಕಾಸರಗೋಡು: ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವ

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಶೈವಾಂಶವಾದ ವಯನಾಟು ಕುಲವನ್ ಶತ ವರುಷಗಳ ವಿರಾಮದ ನಂತರ ದರ್ಶವನ್ನು ನೀಡಿತ್ತು . ಈ ದೈವ ಆಚರಣೆಯು ಅಪರೂಪದಲ್ಲಿ ಅಪರೂಪವಾಗಿದೆ . ಈ ಸಂದರ್ಭದಲ್ಲಿ ವಯನಾಟು ಕುಲವನ್ ದೈವದ ಐತಿಹ್ಯ ಈ ಪ್ರಕಾರವಾಗಿದೆ . ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿ ಬೇಡರ ವೇಷದಲ್ಲಿ ಕಾಡಿನಲ್ಲಿ ಬೇಟೆಯಾಡುತ್ತ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆಗಳು ನಡೆದವು. ಒಂದು…

Read More

800 ವರ್ಷದ ಸೌಹಾರ್ದದ ಸಂಕೇತ: ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಉತ್ಸವ ದಿನಾಂಕ ನಿಗದಿ

ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ಶ್ರದ್ಧಾಭಕ್ತಿಯಿಂದ ನಡೆಯಿತು. “ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ ಹಾಗೂ ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದೆಡೆ ದೇವಸ್ಥಾನ ಅಥವಾ ಕ್ಷೇತ್ರದ ಉತ್ಸವಕ್ಕೆ ಮುಸಲ್ಮಾನರು ವ್ಯಾಪಾರ ನಡೆಸಬಾರದೆಂಬ ಒತ್ತಡದ ಮಧ್ಯೆ ಮತ ಸೌಹಾರ್ದತೆಗೆ ಇನ್ನಷ್ಟು ಮೆರುಗನ್ನು ನೀಡುವ…

Read More

ಇತಿಹಾಸ ನಿರ್ಮಿಸಿದ ಮಂಜೇಶ್ವರ ಮತದಾನ – 13.5 ಗಂಟೆಗಳ ಹೊಸ ದಾಖಲೆ

​ಮಂಜೇಶ್ವರ: ಕೇರಳದ ಒಂದನೇ ವಿಧಾನಸಭಾ ಕ್ಷೇತ್ರವಾದ ಮಂಜೇಶ್ವರದಲ್ಲಿ ಈ ಬಾರಿ ನಡೆದ ಚುನಾವಣೆ ಕೇವಲ ಮತದಾನವಾಗಿ ಉಳಿಯದೆ, ಒಂದು ಚಾರಿತ್ರಿಕ ದಾಖಲೆಯಾಗಿ ಹೊರಹೊಮ್ಮಿದೆ. ಎಂದೂ ಕಾಣದ ಆವೇಶ, ಮತದಾರರ ಅದಮ್ಯ ಉತ್ಸಾಹ ಮತ್ತು ತಾಂತ್ರಿಕ ಸವಾಲುಗಳ ನಡುವೆ ನಡೆದ ಈ ಬಾರಿಯ ಮತಸಮರದಲ್ಲಿ ಬರೋಬ್ಬರಿ ಶೇ. 81.04 ಮತದಾನವಾಗುವ ಮೂಲಕ ಫಲಿತಾಂಶದ ಕುತೂಹಲವನ್ನು ಶಿಖರಕ್ಕೇರಿಸಿದೆ. ಮಂಜೇಶ್ವರದಲ್ಲಿ 2011ರ ವಿಧಾನಸಭಾ ಚುನಾವಣೆಯಲ್ಲಿ 75.21 ಶೇ ಮತದಾನವಾಗಿತ್ತು. ತದನಂತರ ಬಿಜೆಪಿ ಕೇವಲ 89 ಮತಗಳ ಅಂತರದಲ್ಲಿ ಸೋಲುಂಡ 2016 ರ…

Read More

ಗಲ್ಫ್ ರಾಷ್ಟ್ರಗಳಲ್ಲಿರುವ ಭಕ್ತರ ಕಲ್ಯಾಣಕ್ಕಾಗಿ ಬಲ್ಲಂಗುಡೆಲು ಭಂಡಾರ ನಿಲಯದಲ್ಲಿ ವಿಶೇಷ ದೀಪಾರಾಧನೆಯೊಂದಿಗೆ ಪ್ರಾರ್ಥನೆ

ಮಂಜೇಶ್ವರ: ಗಲ್ಫ್ ರಾಷ್ಟ್ರಗಳಲ್ಲಿ ಇರುವ ಭಕ್ತರ ಕಲ್ಯಾಣಕ್ಕಾಗಿ ಬಲ್ಲಂಗುಡೆಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ಭಂಡಾರ ನಿಲಯದಲ್ಲಿ ವಿಶೇಷ ದೀಪಾರಾಧನೆ ಹಾಗೂ ಪ್ರಾರ್ಥನೆ ಕಾರ್ಯಕ್ರಮವು ಏಪ್ರಿಲ್ 10ರಂದು ಭಕ್ತಿಭಾವದಿಂದ ನೆರವೇರಿತು. ಈ ಕಾರ್ಯಕ್ರಮವನ್ನು ಶ್ರೀ ಪಾಡಂಗರೆ ಭಗವತಿ ಭಕ್ತವೃಂದ ಗಲ್ಫ್ ವತಿಯಿಂದ ಆಯೋಜಿಸಲಾಗಿತ್ತು. ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾದ ಭಕ್ತರ ಸುಖಶಾಂತಿ ಮತ್ತು ಉದ್ಯೋಗ ಭದ್ರತೆಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಉದ್ಯೋಗ ಕಳೆದುಕೊಳ್ಳದಂತೆ, ಈಗಾಗಲೇ ಕಳೆದುಕೊಂಡವರಿಗೆ ಮರು ಉದ್ಯೋಗ ದೊರಕಲೆಂದು ಹಾಗೂ ಯುದ್ಧ…

Read More

ಮಂಜೇಶ್ವರದಲ್ಲಿ ದಾಖಲೆ 81.04% ಮತದಾನ!ಕಾಸರಗೋಡು ಜಿಲ್ಲೆಯಲ್ಲೇ ಅತ್ಯಧಿಕ ಮತದಾನ

ಕಾಸರಗೋಡು: ನಿನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಔದ್ಯೋಗಿಕ ಮಾಹಿತಿಯಂತೆ ಕಾಸರಗೋಡು ಜಿಲ್ಲೆಯಲ್ಲಿ 79. 11ಶೇ. ಮತದಾನವಾಗಿದೆ.ಐದು ವಿಧಾನಸಭಾ ಕ್ಷೇತ್ರಗಳ ಪೖಕಿ ಅತೀ ಹೆಚ್ಚು ಮತದಾನ ( 81.04 ಶೇ.) ಮಂಜೇಶ್ವರದಲ್ಲಿ ನಡೆದಿದ್ದು ಕುತೂಹಲ ಮೂಡಿಸಿದೆ. ಮಂಜೇಶ್ವರದ ಮತದಾನದ ಶೇಕಡಾವಾರು ಹೆಚ್ಚಳ ಯಾವ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬುದು ಕೌತುಕ ಮೂಡಿಸಿದೆ. ಮಂಜೇಶ್ವರದಲ್ಲಿ 2011ರ ವಿಧಾನಸಭಾ ಚುನಾವಣೆಯಲ್ಲಿ 75.21 ಶೇ ಮತದಾನವಾಗಿತ್ತು. ತದನಂತರ ಬಿಜೆಪಿ ಕೇವಲ 89 ಮತಗಳ ಅಂತರದಲ್ಲಿ ಸೋಲುಂಡ 2016 ರ ಚುನಾವಣೆಯಲ್ಲಿ 76.33 ಶೇ. ಮತದಾನ…

Read More

ಮೂಡಂಬೈಲ್ ನಲ್ಲಿ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ , ಬ್ರಹ್ಮಕಲಶ ಪ್ರತಿಷ್ಠೆ ಹಾಗು ನೇಮೋತ್ಸವ

ಮಂಜೇಶ್ವರ: ಮೂಡಂಬೈಲ್ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ, ಬ್ರಹ್ಮಕಲಶ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಏಪ್ರಿಲ್ 12 ಆದಿತ್ಯವಾರದಂದು ಭಕ್ತಿಭಾವದಿಂದ ನಡೆಯಲಿವೆ. ಇದರ ಪೂರ್ವಭಾವಿಯಾಗಿ ಏಪ್ರಿಲ್ 11ರಂದು ತಂತ್ರಿಗಳ ಉಪಸ್ಥಿತಿಯಲ್ಲಿ ಸ್ಥಳ ಶುದ್ಧಿ, ಪುಣ್ಯವಚನ, ಕಲಶಶುದ್ಧಿ, ವಾಸ್ತು ಹೋಮ ಮತ್ತು ವಾಸ್ತು ಬಲಿ ವಿಧಿವಿಧಾನಗಳು ನೆರವೇರಲಿವೆ. ಏಪ್ರಿಲ್ 12ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲ ಕೃಷ್ಣ ತಂತ್ರಿಯವರ ಸಾನ್ನಿಧ್ಯದಲ್ಲಿ ಬೆಳಗ್ಗೆ 8:45ಕ್ಕೆ ಗ್ರಹಪ್ರವೇಶ ನಡೆಯಲಿದೆ. ಬಳಿಕ 9:10ರಿಂದ 10:19ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶ, ಮುಡಿಪು ಸೇವೆ ಹಾಗೂ…

Read More

ನಕಲಿ ಮತದಾನಕ್ಕೆ ಯತ್ನ ಯುವಕನನ್ನು ತಡೆದ ಬಿ ಜೆ ಪಿ ಕಾರ್ಯಕರ್ತರು

ಮಂಜೇಶ್ವರ: ಮತದಾನ ಪ್ರಕ್ರಿಯೆಯಲ್ಲಿ ನಕಲಿ ಮತದಾನದ ಆರೋಪದ ಹಿನ್ನೆಲೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮಂಜೇಶ್ವರ ಮಂಡಲದಲ್ಲಿ ನಡೆದಿದೆ.ಕಯ್ಯಾರಿನ 128ನೇ ಸಂಖ್ಯೆಯ ಮತಗಟ್ಟೆಯಲ್ಲಿ ನಡೆದ ಘಟನೆ ವ್ಯಾಪಕ ಚರ್ಚೆ ಆಗಿದೆ ಪ್ರಶಾಂತ್ ಎನ್ನುವ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಬಂದಿದ್ದಾನೆ ಎಂದು ಬಿ ಜೆ ಪಿ ಕಾರ್ಯಕರ್ತರು ಆರೋಪಿಸಿದ್ದರುಪೂರ್ವದಲ್ಲಿ ಪ್ರಶಾಂತ್ ಎನ್ನುವ ಯುವಕ ಮುಸ್ಲಿಂ ಮತಕ್ಕೆ ಮತಾಂತರವಾಗಿ ಮೊಹಮ್ಮದ್ ಅಶ್ರಫ್ ಎಂದು ಮರು ನಾಮಕರಣ ಮಾಡಿದಿದ್ದನು ಆದರೆ ಅವನು ತಂದಿದ್ದ ಆಧಾರ್ ಕಾರ್ಡ್ ಮೊಹಮ್ಮದ್ ಅಶ್ರಫ್…

Read More

ಸಹಸ್ರ ಕಣ್ಣುಗಳ ಸಾಕ್ಷಿಯಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ವೈಭವ

ದೈವ ಮರಕಲ ಅಂಗಳವು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಾವಿರಾರು ಭಕ್ತರು ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ಪಡೆದು ಭಕ್ತಿಭಾವದಲ್ಲಿ ತೇಲಿದರು. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಮಂಗಲದಾಯಕ ಮೂರ್ತಿಯ ದಿವ್ಯ ದರ್ಶನ ನಿನ್ನೆಯ ದಿನವಾಯಿತ್ತು . ಸುಮಾರು ನೂರು ವರ್ಷಗಳ ಬಳಿಕ ಕೀಕಾನ ಗ್ರಾಮದಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ನೀಡಿದ್ದು, ಸಾಕ್ಷಾತ್ ಶಿವಾಂಶ ಹೊಂದಿದ ದೈವದ ಅವತಾರ ಭಕ್ತರಲ್ಲಿ ಮೈ ರೋಮಾಂಚನ ಮೂಡಿಸಿತು….

Read More

33 ಬೂತ್‌ಗಳಲ್ಲಿ ಕಳ್ಳಮತದಾನ ಯತ್ನ ಆರೋಪ: ಕೆ. ಸುರೇಂದ್ರನ್

ಮಂಜೇಶ್ವರ: ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಯುಡಿಎಫ್ ಹಾಗೂ ಮುಸ್ಲಿಂ ಲೀಗ್ ವ್ಯಾಪಕವಾಗಿ ಕಳ್ಳಮತದಾನಕ್ಕೆ ಯತ್ನಿಸುತ್ತಿವೆ ಎಂದು ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಮಂಜೇಶ್ವರದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿರುವ ಮತದಾರರ ಸ್ಲಿಪ್‌ಗಳನ್ನು ಸಂಗ್ರಹಿಸಿ ಕಳ್ಳಮತದಾನ ಮಾಡಲು ಯತ್ನ ನಡೆಯುತ್ತಿದೆ ಎಂದು ದೂರಿದರು. ಲೀಗ್‌ನ ಬಿಎಲ್‌ಒಗಳ ಮೂಲಕ ಈ ಸ್ಲಿಪ್‌ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಮುಸ್ಲಿಂ ಲೀಗ್ ಪ್ರಭಾವವಿರುವ ಸುಮಾರು 33 ಬೂತ್‌ಗಳಲ್ಲಿ ಇಂತಹ ಯತ್ನ ನಡೆಯುತ್ತಿದ್ದು, ಮಹಿಳೆಯರನ್ನು ಬಳಸಿಕೊಂಡು ಕಳ್ಳಮತದಾನ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು….

Read More
error: Content is protected !!