ಕುಟುಂಬ ಕಲಹದ ಕರಾಳ ಅಧ್ಯಾಯ; ಮಂಜೇಶ್ವರದಲ್ಲಿ ಜುಮ್ಲಾ–ಶೇಕುಂಞ ದಫನ

ಮಂಜೇಶ್ವರ: ಮಂಜೇಶ್ವರ ತೊಮಿನಾಡು ಹಿಲ್‌ಟಾಪ್‌ನಲ್ಲಿ ದಾಂಪತ್ಯ ವೈಮನಸ್ಸು ಹಾಗೂ ಸೊತ್ತು ವಿಚಾರದ ಕಲಹದಿಂದ ಮೃತಪಟ್ಟ ಜುಮ್ಲಾ ಮತ್ತು ಆಕೆಯ ಚಿಕ್ಕಪ್ಪ ಶೇಕುಂಞ ಅವರ ಮೃತದೇಹಗಳನ್ನು ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಮಂಜೇಶ್ವರ ಮುಯ್ಯುದ್ದೀನ್ ಜುಮಾ ಮಸೀದಿ ಅಂಗಳದಲ್ಲಿ ದಫನ ಮಾಡಲಾಯಿತು. ಸೋಮವಾರ ಶೇಕುಂಞ ಅವರ ಮನೆಯಲ್ಲಿ ನಡೆದ ಹಲ್ಲೆಯ ವೇಳೆ ತಂದೆಯ ಇರಿತಕ್ಕೆ ಒಳಗಾದ ಜುಮ್ಲಾ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ…

Read More

ಕುಂಬಳೆ ಆರಿಕ್ಕಾಡಿ ಟೋಲ್ ಗೇಟ್ ನಿಲ್ಲಿಸಲು ಕೇಂದ್ರ ಸರಕಾರ ನಿರ್ಧಾರ,ಇದುವರೆಗೆ ಸ್ವೀಕರಿಸಿದ ಟೋಲ್ ಹಿಂತಿರುಗಿಸಬೇಕು: ಸಿಪಿಎಎಂ

ಕುಂಬಳೆ: ಕುಂಬಳೆ ಆರಿಕ್ಕಾಡಿ ಟೋಲ್ ಸಂಗ್ರಹ NH 66 ರಸ್ತೆಯಲ್ಲಿ ಯಾತ್ರೆ ಮಾಡುವವರಿಗೆ ಬಾರಿ ತೊಂದರೆ ಉಂಟು ಮಾಡಿದ್ದು,ಇದಕ್ಕೆದುರಾಗಿ ಸಿಪಿಐಎಂ ಹಾಗೂ ಜನಕೀಯ ಪ್ರತಿಭಟನಾ ಸಮಿತಿ ಹೋರಾಟ ಸಮರ ನಡೆಸಿದ್ದು ಬಿಜೆಪಿ ಸರಕಾರಕ್ಕೆ ಬಿಸಿ ಎಬ್ಬಿಸಿದೆ.ಈಗ ಈ ಟೋಲ್ ನಿಲ್ಲಿಸಲು ಆದೇಶ ಹೊರಡಿಸಿದ ಕೇಂದ್ರ ಬಿಜೆಪಿ ಸರಕಾರವು ಇದುವರೆಗೂ ಹಗಲು ರಾತ್ರಿ ಹೋರಾಟ ನಡೆಸಿದ ನಾಗರಿಕರ ಮೇಲೆ ದಾಖಲಿಸಿದ ಕೇಸು ,ಆರ್ಥಿಕ ನಷ್ಟಗಳನ್ನು ಕೂಡ ಪರಿಹರಿಸಬೇಕಾಗಿದೆ.ಇದುವರೆಗೂ ಸಂಗ್ರಹಿಸಿದ ಟೋಲ್ ಯಾತ್ರಿಕರಿಗೆ ಹಿಂತಿರುಗಿಸಲು ಕೇಂದ್ರ ಸರಕಾರ ತಯಾರಾಗಬೇಕೆಂದು ಸಿಪಿಐಎಂ…

Read More

ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಕೇಂದ್ರ ಸರ್ಕಾರದಿಂದ ರದ್ದು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ ಲಭಿಸಿದ್ದು, ಸಂಬಂಧಿಸಿದ ಆದೇಶ ನಾಳೆ ಲಭ್ಯವಾಗಲಿದೆ ಎಂದು ಬಿಜೆಪಿ ಮುಖಂಡರಾದ ಕೆ. ಸುರೇಂದ್ರನ್ ಹಾಗೂ ಎಂ.ಎಲ್. ಅಶ್ವಿನಿ ಅವರು ತಿಳಿಸಿದ್ದಾರೆ. ಟೋಲ್ ಬೂತ್ ರದ್ದುಪಡಿಸಿರುವ ವಿಷಯ ತಿಳಿದ ಕೂಡಲೇ ಬಿಜೆಪಿ ಕಾರ್ಯಕರ್ತರು ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಕುಂಬಳೆಯಲ್ಲಿ ಸಂಭ್ರಮಾಚರಣೆ ನಡೆಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ, ವಿಜಯೋತ್ಸವದ…

Read More

ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಟೋಲ್ ಕೊನೆಗೂ ರದ್ದು….!

ಕುಂಬಳೆ: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಟೋಲ್ ಕೊನೆಗೂ ರದ್ದುಗೊಂಡಿದ್ದು, ಟೋಲ್ ವಿರೋಧಿ ಕ್ರಿಯಾ ಸಮಿತಿ ಮತ್ತು ಬಿಜೆಪಿ ಮುಖಂಡರು ಮಂಗಳವಾರ(ಫೆ.3) ಸಂಜೆ ಕುಂಬಳೆಯಲ್ಲಿ ಪ್ರತ್ಯೇಕ ವಿಜಯೋತ್ಸವ ನಡೆಸಿದರು. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದು, ಲಿಖಿತ ಆದೇಶಕ್ಕೆ ಸಹಿ ಹಾಕಿದ್ದಾರೆ. ಇಂದು(ಫೆ.4) ಅಧಿಕೃತ ಪ್ರಕಟನೆ ಹೊರಬೀಳಲಿದೆ. ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷರನ್ನು ದೂರವಾಣಿ ಮೂಲಕ…

Read More

ಮಂಗಲ್ಪಾಡಿ: ಕುಕ್ಕರ್ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗೆ ರ‍್ಯಾಗಿಂಗ್

ಮಂಗಲ್ಪಾಡಿ: ಮಂಗಲ್ಪಾಡಿಯ ಕುಕ್ಕರ್ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ರ್ಯಾಗಿಂಗ್ ನಡೆಸಿ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.ಮಧ್ಯಾಹ್ನದ ಊಟ ಸೇವಿಸುವ ವೇಳೆ ವಿದ್ಯಾರ್ಥಿ ಮಹಮ್ಮದ್ ಬಿಷ್ರಾನ್ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಕಣ್ಣಿಗೆ ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Read More

ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಮಂಜೇಶ್ವರ …! : ಮಗಳ ಹತ್ಯೆ ತಡೆಯಲು ಹೋದ ಚಿಕ್ಕಪ್ಪನ ಪ್ರಾಣ ಹಾರಿತು ….?

ಕಾಸರಗೋಡು:ಮಂಜೇಶ್ವರ ತಾಲೂಕಿನ ತೂಮಿನಾಡು ಪ್ರದೇಶದಲ್ಲಿ ನಡೆದ ಭೀಕರ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹದಿಹರೆಯದ ಮಗಳನ್ನು ಚಾಕುವಿನಿಂದ ಕೊಂದಿದ್ದು, ಆ ದಾಳಿಯನ್ನು ತಡೆಯಲು ಯತ್ನಿಸಿದ ಚಿಕ್ಕಪ್ಪನೂ ಗಂಭೀರ ಗಾಯಗಳಿಂದ ಇದೀಗ ಮೃತಪಟ್ಟಿದ್ದಾರೆ. ಇದರಿಂದ ಪ್ರಕರಣ ಜೋಡಿ ಕೊಲೆಯಾಗಿ ಮಾರ್ಪಟ್ಟಿದೆ. ಸೋಮವಾರ ಸಂಜೆ ನಡೆದ ಈ ಘಟನೆಯಲ್ಲಿ, ಉಮ್ಮರ್ ಫಾರೂಕ್ ಎಂಬವರು ತಮ್ಮ ಪುತ್ರಿ ಕೆ.ಯು. ಮರಿಯಮತ್ ಜುಮೈಲಾ (18) ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ವೇಳೆ ದಾಳಿಯನ್ನು ತಡೆಯಲು ಮುಂದಾದ ಷೇಕುಂಞ (50) ಎಂಬವರು…

Read More

ಎಸ್.ಆರ್. ಎಫ್.ಸಿ ಪಲ್ಲೇದಪಡ್ಪು ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಕೂಟ.

ಪಲ್ಲೇದಪಡ್ಪು: ಗ್ರಾಮೀಣ ಪ್ರದೇಶದ ಯುವಕರನ್ನು ಒಟ್ಟುಸೇರಿಕೊಂಡು ಕ್ರೀಡಾಸಕ್ತರ ಅಂಡರ್ ಆರ್ಮ್ ಪಿ ಪಿ ಎಲ್ ಕ್ರಿಕೆಟ್ ಪಂದ್ಯಕೂಟ ವರ್ಕಾಡಿ ಪಂಚಾಯತ್ ಮೈದಾನ ಸುಂಕದಕಟ್ಟೆಯಲ್ಲಿ ಜರಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಯುವ ಉದ್ಯಮಿ ಕಾರ್ತಿಕ್ ಎಂಟರ್ಪ್ರೈಸಸ್ ಮಾಲಕ ಪ್ರಕಾಶ್ ಪೊಯ್ಯತ್ತಬೈಲ್ ನೆರವೇರಿಸಿದರು. ಕ್ಲಬ್ ನ ಅಧ್ಯಕ್ಷರಾದ ವಜ್ರೇಶ್ ಕಣಿಯೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ಭಜನಾ ಮಂಡಳಿ ಪಲ್ಲೇದಪಡ್ಪು ಇದರ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ,ಗೋಪಾಲ ಶೆಟ್ಟಿ ಬಗಂಬಿಲ,ರಮೇಶ್ ಆಚಾರ್ಯ,ರಾಜೇಶ್ ಪರಂದಳ,ಸುರೇಶ್,ಮನೋಜ್ ಶೆಟ್ಟಿ,ಚಂದ್ರ ಶೇಖರ ಪಜ್ವ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ಜರಗಿದ…

Read More

ಮಧೂರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಶ್ಯಾನುಭೋಗ ಅವರಿಗೆ ಸನ್ಮಾನ

ಮಧೂರು: ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಶ್ಯಾನುಭೋಗ್ ಅವರಿಗೆ ಮಧೂರು ಸಮೀಪದ ಬೈನಡ್ಕದ ಯುವ ಶಕ್ತಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬೈನಡ್ಕದಲ್ಲಿರುವ ಯುವ ಶಕ್ತಿ ಕ್ಲಬ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಶಕ್ತಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಚಂದ್ರ ಪಾಟಾಳಿ, ಗೌರವ ಅಧ್ಯಕ್ಷರಾದ ಶ್ರೀ ರಾಜೇಶ್ ಹೊಳ್ಳ, ಸಂಯೋಜಕರಾದ ಶ್ರೀ ಅಖಿಲೇಶ್,…

Read More

ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ಸ್ವಾಗತ ಸಮಿತಿ ರೂಪೀಕರಣಕನ್ನಡ ತಾಯಿಯ ನಿಸ್ವಾರ್ಥ ಸೇವೆಗೆ ಸಂಪೂರ್ಣವಾಗಿ ಸಹಕರಿಸಿ -ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ

ನುಳ್ಳಿಪ್ಪಾಡಿ: ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಿಂದ ಸ್ಥಾಪಿತವಾಗಿ ಕಾಸರಗೋಡು ಜಿಲ್ಲೆಯಲ್ಲದೆ ಕರ್ನಾಟಕದ ದ.ಕ ಜಿಲ್ಲೆ, ಕೊಡಗು, ಮೈಸೂರು, ಕೋಲಾರ, ಗದಗ, ಚಿತ್ರದುರ್ಗ, ಕೊಪ್ಪಳ, ಉಡುಪಿ, ಬೆಂಗಳೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಮಿತಿ ಕಾಸರಗೋಡು ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ಇದೇ ಬರುವ 22.02.2026 ಭಾನುವಾರದಂದು ಕನ್ನಡ ಭವನದ “ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ ನಡೆಯುವ “ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ರ ಸ್ವಾಗತ…

Read More

ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಲಾರಿ–ಬಸ್‌ನಿಂದ ಬ್ಯಾಟರಿ, ಡೀಸೆಲ್ ಕಳವು

ಮಂಜೇಶ್ವರ: ರಿಪೇರಿ ಉದ್ದೇಶಕ್ಕಾಗಿ ವರ್ಕ್‌ಶಾಪ್‌ನಲ್ಲಿ ನಿಲ್ಲಿಸಿದ್ದ ಭಾರತ್ ಬೆನ್ಸ್ ಲಾರಿಗಳಿಂದ ನಾಲ್ಕು ಬ್ಯಾಟರಿಗಳು ಹಾಗೂ ಮಹಾಲಕ್ಷ್ಮಿ ಬಸ್‌ನಿಂದ ಡೀಸೆಲ್ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕುಂಬಳೆ ಪೆರ್ವಾಡ್‌ನಲ್ಲಿರುವ ಎಸ್‌ಜಿ ಆಟೋ ವರ್ಕ್‌ಶಾಪ್‌ನ ಹಿಂಭಾಗದಲ್ಲಿ ಲಾರಿಗಳು ಮತ್ತು ಬಸ್ ಅನ್ನು ನಿಲ್ಲಿಸಲಾಗಿತ್ತು. ಮೊನ್ನೆ ರಾತ್ರಿ ಕಳ್ಳರು ಈ ವಾಹನಗಳನ್ನು ಗುರಿಯಾಗಿಸಿಕೊಂಡು ಕಳವು ನಡೆಸಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಿಗ್ಗೆ ವಾಹನಗಳನ್ನು ಪರಿಶೀಲಿಸಿದ ವೇಳೆ ಬ್ಯಾಟರಿಗಳು ಹಾಗೂ ಡೀಸೆಲ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬ್ಯಾಟರಿ ಕಳವಿನಿಂದ ಸುಮಾರು ಒಂದು…

Read More
error: Content is protected !!